ಆ್ಯಪ್ನಗರ

ಆರಂಭದಲ್ಲೇ ಜಗ್ಗೇಶ್ 'ರಂಗನಾಯಕ'ನಿಗೆ ಟೈಟಲ್ ಕಿರಿಕ್!! ಏನಿದು ಹೊಸ ವಿವಾದ?

ಟೀಸರ್‌ನಿಂದಲೇ ಗಮನಸೆಳೆದಿದ್ದ ಜಗ್ಗೇಶ್ ಅಭಿನಯದ, ಗುರುಪ್ರಸಾದ್ ನಿರ್ದೇಶನದ 'ರಂಗನಾಯಕ' ಚಿತ್ರವೀಗ ವಿವಾದಕ್ಕೆ ಸಿಲುಕಿಕೊಂಡಿದೆ. ಶೀರ್ಷಿಕೆ ವಿಚಾರದಲ್ಲಿ ಈ ಕಾಂಟ್ರವರ್ಸಿ ಹುಟ್ಟಿಕೊಂಡಿದೆ.

Vijaya Karnataka Web 10 Oct 2019, 5:40 pm
'ನವರಸ ನಾಯಕ' ಜಗ್ಗೇಶ್-'ಮಠ' ಗುರುಪ್ರಸಾದ್ ಹತ್ತು ವರ್ಷಗಳ ನಂತರ 'ರಂಗನಾಯಕ' ಚಿತ್ರಕ್ಕಾಗಿ ಒಂದಾಗಿದ್ದು, ಇತ್ತೀಚೆಗಷ್ಟೇ ಅದರ ಟೀಸರ್ ರಿಲೀಸ್ ಆಗಿತ್ತು. ನೋಡಿದವರಿಂದ ಉತ್ತಮ ಮೆಚ್ಚುಗೆಯೂ ದಕ್ಕಿತ್ತು. ಆದರೆ, ಶೀರ್ಷಿಕೆಯಿಂದಲೇ ವಿವಾದವೊಂದು ಹುಟ್ಟಿಕೊಂಡಿದೆ.
Vijaya Karnataka Web Ranganayaka

ದೂರ ದೂರ ಆಗಿದ್ದ ಜಗ್ಗೇಶ್ ಮತ್ತು 'ಮಠ' ಖ್ಯಾತಿಯ ಗುರುಪ್ರಸಾದ್ ಈಗ ಒಂದಾಗಿದ್ದೇಕೆ? ಜಗ್ಗೇಶ್ ಹೇಳಿದ್ದೇನು?
'ರಂಗನಾಯಕ' ಶೀರ್ಷಿಕೆ ನಮ್ಮದು, ಬಹಳ ಹಿಂದೆಯೇ ಆ ಶೀರ್ಷಿಕೆಯಡಿಯಲ್ಲಿ ಸಿನಿಮಾ ಮಾಡಲಿದ್ದೇವೆ ಎಂದು ಘೋಷಣೆ ಮಾಡಿಕೊಂಡಿದ್ದೇವೆ ಎಂದು ನಿರ್ದೇಶಕರೊಬ್ಬರು ಈಗ ಅಳಲು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ಏನಿದು ಕಥೆ? ಇಲ್ಲಿದೆ ಫುಲ್‌ ಡಿಟೈಲ್ಸ್. ಈಚೆಗೆ ನಡೆದ 'ರಂಗನಾಯಕ' ಪ್ರೆಸ್‌ಮೀಟ್‌ನಲ್ಲಿ ಜಗ್ಗೇಶ್ ಮಾತನಾಡುವಾಗ, 'ಈ ಟೈಟಲ್ ಬೇರೆಯವರ ಬಳಿ ಇತ್ತು. ಅವರು ಪ್ರೀತಿಯಿಂದ ಬಿಟ್ಟುಕೊಟ್ಟಿದ್ದಾರೆ' ಎಂದು ಹೇಳಿದ್ದರು. ಆದರೆ, ನಿರ್ದೇಶಕ ರಾಧ ಅದು ನನ್ನದೇ ಶೀರ್ಷಿಕೆ ನನ್ನದೇ ಎನ್ನುತ್ತಿದ್ದಾರೆ.

ಯಾರು ಈ ರಾಧ?
ಕೆಲ ತಿಂಗಳ ಹಿಂದೆ 'ಖನನ' ಸಿನಿಮಾವನ್ನು ತೆರೆಗೆ ತಂದಿದದ್ದರು ನಿರ್ದೇಶಕ ರಾಧ. ಆ ಸಿನಿಮಾ ತೆರೆಕಾಣುವುದಕ್ಕೂ ಮೊದಲೇ ನನ್ನ ಮುಂದಿನ ಸಿನಿಮಾ 'ರಂಗನಾಯಕ' ಎಂದು ಘೋಷಣೆ ಮಾಡಿಕೊಂಡಿದ್ದರು. ಅದಕ್ಕಾಗಿ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಶೀರ್ಷಿಕೆಯನ್ನೂ ನೋಂದಾಯಿಸಿದ್ದರು. ಅದಕ್ಕೆ ಕೃಷ್ಣೇಗೌಡ ಸಾರಥ್ಯದ 'ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ' ಶೀರ್ಷಿಕೆಯನ್ನು 2018ರ ಫೆಬ್ರವರಿಯಲ್ಲೇ ನೀಡಿತ್ತು. ಅಲ್ಲದೆ, ಬಹಳ ಹಿಂದೆಯೇ ರಾಧ ಸಾಕಷ್ಟು ಸಂದರ್ಶನಗಳಲ್ಲಿ, ನನ್ನ ಮುಂದಿನ ಸಿನಿಮಾದ ಶೀರ್ಷಿಕೆ 'ರಂಗನಾಯಕ' ಎಂದು ಹೇಳಿಕೊಂಡಿದ್ದರಂತೆ! ಆದರೆ, ಗುರುಪ್ರಸಾದ್ ಅದೇ ಟೈಟಲ್ ಇಟ್ಟುಕೊಂಡು ಸಿನಿಮಾ ಮಾಡುತ್ತಿರುವುದು ನಿರ್ದೇಶಕ ರಾಧಗೆ ಬೇಸರ ತಂದಿದೆ.
ರಂಗನಾಯಕಿ ಒಬ್ಬಳೇ ಅಲ್ಲ, ರಂಗನಾಯಕನೂ ಬಂದ!!! ಮುಂದೇನು?
ಗೊಂದಲಕ್ಕೆ ಕಾರಣವೇನು? ಚಂದನವನದಲ್ಲಿ ಎರಡು ವಾಣಿಜ್ಯ ಮಂಡಳಿಗಳು ಕಾರ್ಯನಿರ್ವಹಿಸುತ್ತಿವೆ. ಒಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಮತ್ತೊಂದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ. ಇವೆರಡಲ್ಲೂ ಸಿನಿಮಾಗಳನ್ನು ನೋಂದಾಯಿಸಿಕೊಂಡು, ತೆರೆಗೆ ತರಬಹುದಾಗಿದೆ. ಒಂದೇ ಟೈಟಲನ್ನು ಎರಡು ಕಡೆ ಪಡೆಯುವ ಅವಕಾಶ ಇದೆ. ಇದಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಬಹುಶಃ ಇದೇ ಈ ಗೊಂದಲಕ್ಕೆ ಕಾರಣವಾಗಿರಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌