ಆ್ಯಪ್ನಗರ

ಚಿತ್ರಗಳಲ್ಲಿ ನೋಡಿ: ದಾಂಪತ್ಯ ಜೀವನಕ್ಕೆ ಅಡಿಯಿಟ್ಟ ನಟ ರಿಷಿ

ಕವಲುದಾರಿ ಹಾಗೂ ಆಪರೇಷನ ಅಲಮೇಲಮ್ಮ ಚಿತ್ರಗಳಲ್ಲಿ ನಟಿಸಿರುವ ನಟ ರಿಷಿ ಭಾನುವಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟರು. ಬರಹಗಾರ್ತಿಯಾಗಿರುವ ಸ್ವಾತಿ ಅವರ ಕೈಹಿಡಿದಿದ್ದಾರೆ ರಿಷಿ. ಇವರ ಮದುವೆ ಚೆನ್ನೈನಲ್ಲಿ ನೆರವೇರಿತು. ಇಲ್ಲಿದೆ ನೋಡಿ ಮದುವೆ ಫೋಟೋಗಳು.

Vijaya Karnataka Web 10 Nov 2019, 12:31 pm
'ಆಪರೇಷನ್‌ ಅಲಮೇಲಮ್ಮ', 'ಕವಲುದಾರಿ' ಸಿನಿಮಾಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಗಮನಸೆಳೆದ ನಟ ರಿಷಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಬರಹಗಾರ್ತಿ ಸ್ವಾತಿ ಅವರನ್ನು ವರಿಸಿದ್ದಾರೆ ರಿಷಿ. ಚೆನ್ನೈನಲ್ಲಿ ಭಾನುವಾರ (ನವೆಂಬರ್ 10) ಇವರ ಮದುವೆ ನೆರವೇರಿತು.
ಈ ಮೂಲಕ ರಿಷಿ ಮತ್ತು ಸ್ವಾತಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ನವೆಂಬರ್ 8ರಂದು ಅರಿಶಿನ ಶಾಸ್ತ್ರ ರಿಷಿ ಮನೆಯಲ್ಲಿ ನಡೆಯಿತು. ಕೆಲ ತಿಂಗಳ ಹಿಂದೆ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ ಈಗ ಚೆನ್ನೈನಲ್ಲಿ ಹಸೆಮಣೆ ಏರಿದೆ.
Vijaya Karnataka Web ರಿಷಿ ಮತ್ತು ಸ್ವಾತಿ


ರಿಷಿ ಅಭಿನಯದ ಕವಲುದಾರಿ ಸಿನಿಮಾದ ವಿಮರ್ಶೆ

ಇನ್ನು, ಬೆಂಗಳೂರಿನಲ್ಲಿ ಆರತಕ್ಷತೆ ಮಾಡಲು ಪ್ಲಾನ್ ಮಾಡಿಕೊಳ್ಳಲಾಗಿದೆ. ನ.20ರಂದು ಆರತಕ್ಷತೆ ಸಮಾರಂಭ ಬೆಂಗಳೂರಿನಲ್ಲಿ ನಡೆಯಲಿದೆ. ಯಶಸ್ವಿ ನಟ ಎನಿಸಿಕೊಂಡಿರುವ ರಿಷಿ ಕೈಯಲ್ಲಿ ಈಗ ಸಾಕಷ್ಟು ಸಿನಿಮಾಗಳಿವೆ. 'ಸಾರ್ವಜನಿಕರಿಗೆ ಸುವರ್ಣಾವಕಾಶ' ಚಿತ್ರವು ರಿಲೀಸ್‌ಗೆ ರೆಡಿ ಆಗಿದ್ದು, 'ರಾಮನ ಅವತಾರ', 'ಸಕಲಕಲಾವಲ್ಲಭ' ಸೇರಿದಂತೆ ಒಂದಷ್ಟು ಹೊಸ ಸಿನಿಮಾಗಳ ಶೂಟಿಂಗ್ ನಡೆಯುತ್ತಿದೆ.
ರಿಷಿ ಅಭಿನಯದ ಸಾರ್ವಜನಿಕರಿಗೆ ಸುವರ್ಣಾವಕಾಶ ಸಿನಿಮಾ ಬಗ್ಗೆ ಹೇಳಬೇಕು ಎಂದರೆ, ಈ ಸಿನಿಮಾವನ್ನು ಗುಳ್ಟು ಸಿನಿಮಾ ನಿರ್ಮಿಸಿದ್ದ ಆರ್ ಪ್ರಶಾಂತ್ ರೆಡ್ಡಿ, ಜನಾರ್ಧನ್ ಚಿಕ್ಕಣ್ಣ ನಿರ್ಮಿಸುತ್ತಿದ್ದಾರೆ. ಈಗಾಗಲೆ ಶೂಟಿಂಗ್ ಮುಗಿದಿದ್ದು ನಿರ್ಮಾಣ ನಂತರದ ಕೆಲಸಗಳಲ್ಲಿ ಬಿಝಿಯಾಗಿದೆ ಚಿತ್ರತಂಡ. ರಿಷಿಗೆ ಧನ್ಯಾ ನಾಯಕಿ.

ನಾಟಕ ರಿಹರ್ಸಲ್‌ನಲ್ಲಿ ಭೇಟಿ, ಆಮೇಲೆ ಪ್ರೀತಿ ಬಳಿ ಎಂಗೇಜ್‌

ಪಾತ್ರವರ್ಗದಲ್ಲಿ ದತ್ತಣ್ಣ, ರಂಗಾಯಣ ರಘು, ಸಿದ್ದು ಮೂಲಿಮನಿ, ಸೀನು, ಮಿತ್ರ ಸೇರಿ ಹಲವರು ತಾರೆಗಳಿದ್ದಾರೆ. ಇದೇ ಡಿಸೆಂಬರ್‌ಗೆ ‘ಸಾರ್ವಜನಿಕರಿಗೆ ಸುವರ್ಣಾವಕಾಶ’ ಸಿನಿಮಾ ರಿಲೀಸ್ ಆಗು ಸಾಧ್ಯತೆಗಳಿವೆ. ಅನೂಪ್ ರಾಮಸ್ವಾಮಿ ಕಶ್ಯಪ್ ನಿರ್ದೇಶಿಸುತ್ತಿರುವ ಸಿನಿಮಾ ಇದಾಗಿದೆ.

ಕಾಮಿಡಿ ಥ್ರಿಲ್ಲರ್ ಆಗಿರುವ ಈ ಸಿನಿಮಾದಲ್ಲಿ ರಿಷಿ ಎಂಬಿಎ ವಿದ್ಯಾರ್ಥಿಯಾಗಿ ಕಾಣಿಸಲಿದ್ದಾರೆ. ತನ್ನ ಸಹಪಾಠಿ ಧನ್ಯಾ ಜೊತೆಗೆ ಪ್ರೀತಿಯಲ್ಲಿ ಬೀಳುವ ಇವರು, ಒಮ್ಮೆ ಟ್ರಿಪ್ ಹೋಗಿದ್ದಾರೆ ಅತ್ಯಂತ ಬೆಲೆ ಬಾಳುವ ಒಡವೆಯೊಂದನ್ನು ಕಳೆದುಕೊಳ್ಳುತ್ತಾಳೆ. ಅದಿಲ್ಲದೆ ಮನೆಗೆ ಹೋಗಲು ಸಾಧ್ಯವಿಲ್ಲ. ಹುಟ್ಟುಹಬ್ಬಕ್ಕೆ ಅವರ ಅಮ್ಮ ಕೊಡಿಸಿದ ಒಡವೆ ಅದಾಗಿರುತ್ತದೆ. ಕಡೆಗೆ ರಿಷಿ ಈ ಒಡವೆಯನ್ನು ಹುಡುಕಿ ಕೊಡುತ್ತಾನಾ? ಇಲ್ಲವೇ ಎಂಬುದೇ ಕಥೆಯ ತಿರುಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌