'ಹ್ಯಾಟ್ರಿಕ್ ಹೀರೋ' ಶಿವರಾಜ್ಕುಮಾರ್ ಅವರು ಸ್ಯಾಂಡಲ್ವುಡ್ನಲ್ಲಿ ತಮ್ಮ ಸಿನಿಮಾ ಕರಿಯರ್ ಆರಂಭಿಸಿದ ದಿನದಿಂದಲೂ ಈವರೆಗೂ ಕೈತುಂಬಾ ಸಿನಿಮಾಗಳನ್ನು ಇಟ್ಟುಕೊಂಡೇ ಬಂದವರು. 2-3 ತಿಂಗಳು ಕಳೆದರೆ, ಅವರಿಗೆ ಭರ್ತಿ 60 ವರ್ಷ ತುಂಬುತ್ತದೆ. ಆದರೂ ಅವರ ಕಾಲ್ಶೀಟ್ಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಅವರನ್ನು ಸಂಪರ್ಕಿಸುತ್ತಲೇ ಇರುತ್ತಾರೆ. ಆಗಾಗ ಹೊಸ ಸಿನಿಮಾಗಳನ್ನು ಶಿವಣ್ಣ ಅನೌನ್ಸ್ ಮಾಡುತ್ತಲೇ ಇರುತ್ತಾರೆ. ಈಚೆಗಷ್ಟೇ ಸಂದೇಶ್ ಪ್ರೊಡಕ್ಷನ್ಸ್ ಜೊತೆಗೆ ಹೊಸ ಸಿನಿಮಾ ಮಾಡುವುದಾಗಿ ಶಿವಣ್ಣ ಹೇಳಿದ್ದರು. ಇದೀಗ ಆ ಬ್ಯಾನರ್ನಿಂದಲೇ ಮತ್ತೊಂದು ಸಿನಿಮಾ ಘೋಷಣೆ ಆಗಿದೆ. ಈ ಬಾರಿ ಶಿವರಾಜ್ಕುಮಾರ್ಗೆ ನಿರ್ದೇಶನ ಮಾಡುತ್ತಿರುವುದು ನಟ/ನಿರ್ದೇಶಕ ಶ್ರೀನಿ! ಗುರುದತ್ ಜೊತೆಗೆ ಅನೌನ್ಸ್ ಆಗಿತ್ತು ಹೊಸ ಸಿನಿಮಾ
ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಎನ್. ನಿರ್ಮಾಣ ಮಾಡಲಿರುವ ಶಿವರಾಜ್ಕುಮಾರ್ ಅವರ ಸಿನಿಮಾಗೆ ಚಿ. ಗುರುದತ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಅಧಿಕೃತವಾಗಿ ಕೇಳಿಬಂದಿತ್ತು. ಆದರೆ ಆ ಬಗ್ಗೆ ಯಾವುದೇ ಸದ್ಯ ಮಾಹಿತಿ ಇಲ್ಲ. ಇದೀಗ ಅದೇ ಬ್ಯಾನರ್ನಲ್ಲಿ ಶಿವರಾಜ್ಕುಮಾರ್ ಮತ್ತೊಂದು ಸಿನಿಮಾ ಓಕೆ ಎಂದಿದ್ದು, ಶ್ರೀನಿ ನಿರ್ದೇಶಕರಾಗಿದ್ದಾರೆ. ಈ ವಿಚಾರವನ್ನು ಶುಕ್ರವಾರ (ಏ.8) ನಿರ್ಮಾಪಕರೇ ಅಧಿಕೃತವಾಗಿ ತಿಳಿಸಿದ್ದಾರೆ. ಈ ಸಿನಿಮಾಕ್ಕೆ 'ಗೋಸ್ಟ್' ಎಂದು ಟೈಟಲ್ ಇಡಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಟೋಪಿವಾಲಾ ಟು ಗೋಸ್ಟ್
ಶ್ರೀನಿ ಈ ಹಿಂದೆ ಆರ್ಜೆ ಆಗಿದ್ದವರು. ಆನಂತರ ಉಪೇಂದ್ರ ನಟನೆಯ 'ಟೋಪಿವಾಲಾ' ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆದರು. ಮೊದಲ ಸಿನಿಮಾದಿಂದಲೇ ಗಮನಸೆಳೆದ ಶ್ರೀನಿ, ನಂತರ ತಾವೇ ಹೀರೋ ಆಗಿ ನಟಿಸಿದ್ದ 'ಶ್ರೀನಿವಾಸ ಕಲ್ಯಾಣ', 'ಬೀರ್ಬಲ್', 'ಓಲ್ಡ್ ಮಾಂಕ್' ಸಿನಿಮಾಗಳಿಗೆ ನಿರ್ದೇಶನ ಮಾಡಿದರು. ಒಂದೊಂದು ಸಿನಿಮಾವು ಒಂದೊಂದು ಮಾದರಿಯಲ್ಲಿದ್ದವು ಅನ್ನೋದು ವಿಶೇಷ. ಅದರಲ್ಲೂ 'ಬೀರ್ಬಲ್' ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಜಾಸ್ತಿಯೇ ಒಳಗೊಂಡಿತ್ತು. ಇದೀಗ ಅವರು ಶಿವರಾಜ್ಕುಮಾರ್ಗೆ ನಿರ್ದೇಶನ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಸಿನಿಮಾಗೆ ಅವರೇ ಕಥೆ ಕೂಡ ಬರೆದಿದ್ದಾರೆ. ಟೈಟಲ್ನಲ್ಲೇ 'ಗೋಸ್ಟ್' ಅಂತ ಇರುವುದರಿಂದ, ಇದು ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾ ಇರುಬಹುದೇ ಎಂಬ ಅನುಮಾನ ಹಲವರದ್ದು.
ಶಿವಣ್ಣ ಕೈಯಲ್ಲಿರುವ ಸಿನಿಮಾಗಳೆಷ್ಟು?ಕಳೆದ ವರ್ಷ ಶಿವರಾಜ್ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ತೆರೆಕಂಡಿತ್ತು. 'ಬೈರಾಗಿ' ರಿಲೀಸ್ಗೆ ಸಿದ್ಧವಿದ್ದರೆ, 'ನೀ ಸಿಗೋವರೆಗೂ' ಸಿನಿಮಾದ ಒಂದು ಹಂತದ ಶೂಟಿಂಗ್ ನಡೆದಿದೆ. ಸದ್ಯ 'ವೇದ' ಸಿನಿಮಾದ ಕೆಲಸಗಳಲ್ಲಿ ಶಿವಣ್ಣ ಸಖತ್ ಬ್ಯುಸಿ ಇದ್ದಾರೆ. ಅದಾದ ಮೇಲೆ ರಿಷಬ್ ಶೆಟ್ಟಿ ಜೊತೆಗೆ ಒಂದು ಸಿನಿಮಾ, 'ಮಮ್ಮಿ' ಲೋಹಿತ್ ಜೊತೆಗೆ 'ಸತ್ಯಮಂಗಳ', ಈಚೆಗಷ್ಟೇ ಒಪ್ಪಿಕೊಂಡ ಆರ್. ಜೈ ನಿರ್ದೇಶನದ ಹೊಸ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಪ್ರಭುದೇವ ಜೊತೆಗೊಂದು ಸಿನಿಮಾ.. ಹೀಗೆ ಹಲವು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ. ಜತೆಗೆ ಹಲವು ಕಥೆಗಳನ್ನು ಶಿವಣ್ಣ ಕೇಳುತ್ತಲೇ ಇದ್ದಾರೆ. ಹೀಗೆ ಸಾಲು ಸಾಲು ಅವಕಾಶಗಳು ಬರುವುದರ ಬಗ್ಗೆ ಶಿವಣ್ಣ ಹಿಂದೊಮ್ಮೆ ಹೀಗೆ ಹೇಳಿದ್ದರು. 'ಸಿನಿಮಾ ಮತ್ತು ಅಭಿಮಾನಿಗಳು ಸೇರಿದಂತೆ ಎಲ್ಲಾ ವಿಚಾರದಲ್ಲಿ ನಾನು ಅದೃಷ್ಟವಂತನೇ ಇರಬೇಕು. ಹಾಗಾಗಿಯೇ ಇಷ್ಟು ವರ್ಷಗಳಾದರೂ ವಿಭಿನ್ನ ಪಾತ್ರಗಳಿರುವ ಸಿನಿಮಾಗಳು ನನ್ನನ್ನು ಹುಡುಕಿ ಬರುತ್ತಿವೆ. ಎಲ್ಲರಿಗೂ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ. ನನ್ನ ನಿರ್ದೇಶಕರು, ನಿರ್ಮಾಪಕರು ಅಭಿಮಾನಿಗಳು ಮತ್ತು ನನ್ನ ಕುಟುಂಬ ಎಲ್ಲರಿಗೂ ಋುಣಿಯಾಗಿರುತ್ತೇನೆ' ಎಂದಿದ್ದರು ಶಿವಣ್ಣ.
ಸಂದೇಶ್ ನಾಗರಾಜ್ ಪುತ್ರ ಸಂದೇಶ್ ಎನ್. ನಿರ್ಮಾಣ ಮಾಡಲಿರುವ ಶಿವರಾಜ್ಕುಮಾರ್ ಅವರ ಸಿನಿಮಾಗೆ ಚಿ. ಗುರುದತ್ ನಿರ್ದೇಶನ ಮಾಡುತ್ತಾರೆ ಎಂಬ ಸುದ್ದಿ ಅಧಿಕೃತವಾಗಿ ಕೇಳಿಬಂದಿತ್ತು. ಆದರೆ ಆ ಬಗ್ಗೆ ಯಾವುದೇ ಸದ್ಯ ಮಾಹಿತಿ ಇಲ್ಲ. ಇದೀಗ ಅದೇ ಬ್ಯಾನರ್ನಲ್ಲಿ ಶಿವರಾಜ್ಕುಮಾರ್ ಮತ್ತೊಂದು ಸಿನಿಮಾ ಓಕೆ ಎಂದಿದ್ದು, ಶ್ರೀನಿ ನಿರ್ದೇಶಕರಾಗಿದ್ದಾರೆ. ಈ ವಿಚಾರವನ್ನು ಶುಕ್ರವಾರ (ಏ.8) ನಿರ್ಮಾಪಕರೇ ಅಧಿಕೃತವಾಗಿ ತಿಳಿಸಿದ್ದಾರೆ. ಈ ಸಿನಿಮಾಕ್ಕೆ 'ಗೋಸ್ಟ್' ಎಂದು ಟೈಟಲ್ ಇಡಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎಂಬುದು ಇನ್ನಷ್ಟೇ ಬಹಿರಂಗವಾಗಬೇಕಿದೆ. ಸದ್ಯಕ್ಕೆ ಅರ್ಜುನ್ ಜನ್ಯ ಸಂಗೀತ ನೀಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಟೋಪಿವಾಲಾ ಟು ಗೋಸ್ಟ್
ಶ್ರೀನಿ ಈ ಹಿಂದೆ ಆರ್ಜೆ ಆಗಿದ್ದವರು. ಆನಂತರ ಉಪೇಂದ್ರ ನಟನೆಯ 'ಟೋಪಿವಾಲಾ' ಸಿನಿಮಾಗೆ ನಿರ್ದೇಶನ ಮಾಡುವ ಮೂಲಕ ಡೈರೆಕ್ಟರ್ ಆದರು. ಮೊದಲ ಸಿನಿಮಾದಿಂದಲೇ ಗಮನಸೆಳೆದ ಶ್ರೀನಿ, ನಂತರ ತಾವೇ ಹೀರೋ ಆಗಿ ನಟಿಸಿದ್ದ 'ಶ್ರೀನಿವಾಸ ಕಲ್ಯಾಣ', 'ಬೀರ್ಬಲ್', 'ಓಲ್ಡ್ ಮಾಂಕ್' ಸಿನಿಮಾಗಳಿಗೆ ನಿರ್ದೇಶನ ಮಾಡಿದರು. ಒಂದೊಂದು ಸಿನಿಮಾವು ಒಂದೊಂದು ಮಾದರಿಯಲ್ಲಿದ್ದವು ಅನ್ನೋದು ವಿಶೇಷ. ಅದರಲ್ಲೂ 'ಬೀರ್ಬಲ್' ಕಾಮಿಡಿ ಜೊತೆಗೆ ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳನ್ನು ಜಾಸ್ತಿಯೇ ಒಳಗೊಂಡಿತ್ತು. ಇದೀಗ ಅವರು ಶಿವರಾಜ್ಕುಮಾರ್ಗೆ ನಿರ್ದೇಶನ ಮಾಡುವ ಅವಕಾಶ ಪಡೆದುಕೊಂಡಿದ್ದಾರೆ. ಈ ಸಿನಿಮಾಗೆ ಅವರೇ ಕಥೆ ಕೂಡ ಬರೆದಿದ್ದಾರೆ. ಟೈಟಲ್ನಲ್ಲೇ 'ಗೋಸ್ಟ್' ಅಂತ ಇರುವುದರಿಂದ, ಇದು ಹಾರರ್ ಥ್ರಿಲ್ಲರ್ ಮಾದರಿಯ ಸಿನಿಮಾ ಇರುಬಹುದೇ ಎಂಬ ಅನುಮಾನ ಹಲವರದ್ದು.
ಶಿವಣ್ಣ ಕೈಯಲ್ಲಿರುವ ಸಿನಿಮಾಗಳೆಷ್ಟು?ಕಳೆದ ವರ್ಷ ಶಿವರಾಜ್ಕುಮಾರ್ ಅಭಿನಯದ 'ಭಜರಂಗಿ 2' ಸಿನಿಮಾ ತೆರೆಕಂಡಿತ್ತು. 'ಬೈರಾಗಿ' ರಿಲೀಸ್ಗೆ ಸಿದ್ಧವಿದ್ದರೆ, 'ನೀ ಸಿಗೋವರೆಗೂ' ಸಿನಿಮಾದ ಒಂದು ಹಂತದ ಶೂಟಿಂಗ್ ನಡೆದಿದೆ. ಸದ್ಯ 'ವೇದ' ಸಿನಿಮಾದ ಕೆಲಸಗಳಲ್ಲಿ ಶಿವಣ್ಣ ಸಖತ್ ಬ್ಯುಸಿ ಇದ್ದಾರೆ. ಅದಾದ ಮೇಲೆ ರಿಷಬ್ ಶೆಟ್ಟಿ ಜೊತೆಗೆ ಒಂದು ಸಿನಿಮಾ, 'ಮಮ್ಮಿ' ಲೋಹಿತ್ ಜೊತೆಗೆ 'ಸತ್ಯಮಂಗಳ', ಈಚೆಗಷ್ಟೇ ಒಪ್ಪಿಕೊಂಡ ಆರ್. ಜೈ ನಿರ್ದೇಶನದ ಹೊಸ ಸಿನಿಮಾ. ಯೋಗರಾಜ್ ಭಟ್ ನಿರ್ದೇಶನದಲ್ಲಿ ಪ್ರಭುದೇವ ಜೊತೆಗೊಂದು ಸಿನಿಮಾ.. ಹೀಗೆ ಹಲವು ಸಿನಿಮಾಗಳನ್ನು ಶಿವಣ್ಣ ಒಪ್ಪಿಕೊಂಡಿದ್ದಾರೆ. ಜತೆಗೆ ಹಲವು ಕಥೆಗಳನ್ನು ಶಿವಣ್ಣ ಕೇಳುತ್ತಲೇ ಇದ್ದಾರೆ. ಹೀಗೆ ಸಾಲು ಸಾಲು ಅವಕಾಶಗಳು ಬರುವುದರ ಬಗ್ಗೆ ಶಿವಣ್ಣ ಹಿಂದೊಮ್ಮೆ ಹೀಗೆ ಹೇಳಿದ್ದರು. 'ಸಿನಿಮಾ ಮತ್ತು ಅಭಿಮಾನಿಗಳು ಸೇರಿದಂತೆ ಎಲ್ಲಾ ವಿಚಾರದಲ್ಲಿ ನಾನು ಅದೃಷ್ಟವಂತನೇ ಇರಬೇಕು. ಹಾಗಾಗಿಯೇ ಇಷ್ಟು ವರ್ಷಗಳಾದರೂ ವಿಭಿನ್ನ ಪಾತ್ರಗಳಿರುವ ಸಿನಿಮಾಗಳು ನನ್ನನ್ನು ಹುಡುಕಿ ಬರುತ್ತಿವೆ. ಎಲ್ಲರಿಗೂ ನಾನು ಕೃತಜ್ಞತೆಗಳನ್ನು ತಿಳಿಸುತ್ತೇನೆ. ನನ್ನ ನಿರ್ದೇಶಕರು, ನಿರ್ಮಾಪಕರು ಅಭಿಮಾನಿಗಳು ಮತ್ತು ನನ್ನ ಕುಟುಂಬ ಎಲ್ಲರಿಗೂ ಋುಣಿಯಾಗಿರುತ್ತೇನೆ' ಎಂದಿದ್ದರು ಶಿವಣ್ಣ.