ಆ್ಯಪ್ನಗರ

ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ: ನಟ ಶ್ರೀಮುರಳಿ

ಪ್ರಸ್ತುರ ರೈತರ ಸಮಸ್ಯೆಗಳ ಬಗ್ಗೆ ಕರ್ನಾಟಕದಲ್ಲಿ ಚರ್ಚೆಯಾಗುತ್ತಿದೆ. ಸೆಪ್ಟೆಂಬರ್ 28ರಂದು ಕರ್ನಾಟಕ ಬಂದ್ ಎಂದು ಹೇಳಲಾಗುತ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ರೈತ ಸಂಘಟನೆಗಳು ಧರಣಿ ನಡೆಸುತ್ತಿವೆ. ಈ ನಿಟ್ಟಿನಲ್ಲಿ ನಟ ಶ್ರೀಮುರಳಿ, ರಕ್ಷ್, ರಕ್ಷತ್ ಗೌಡ ದನಿಯೆತ್ತಿದ್ದಾರೆ.

Vijaya Karnataka Web 24 Sep 2020, 12:37 pm
'ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ಒಟ್ಟು ಮೂರು ಕಾಯ್ದೆಗಳನ್ನು ಸರ್ಕಾರ ವಾಪಸ್ ಪಡೆಯಲೇಬೇಕು' ಎಂಬ ಉದ್ದೇಶದ ಮೇರೆಗೆ ರೈತಸಂಘಗಳು ಧರಣಿ ನಡೆಸುತ್ತಿವೆ. ದೇಶದಲ್ಲಿ ರೈತರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇವರಿಗೆಲ್ಲ ಪರಿಹಾರದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಟ ಶ್ರೀಮುರಳಿ, ಧಾರಾವಾಹಿ ಕಲಾವಿದರಾದ ರಕ್ಷ್, ರಕ್ಷತ್ ಗೌಡ ದನಿಯೆತ್ತಿದ್ದಾರೆ.
Vijaya Karnataka Web kannada actor srimurali gattimela serial actor raksh speaks about farmer
ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ: ನಟ ಶ್ರೀಮುರಳಿ


'ಕರ್ನಾಟಕ ಬಂದ್'
ಬೆಂಗಳೂರಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯಲ್ಲಿ ಈಗಾಗಲೇ ಸಾವಿರಾರು ಸಂಖ್ಯೆಯಲ್ಲಿ ರೈತರು ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದಾರೆ. ಸೆಪ್ಟೆಂಬರ್‌ 28ನೇ ತಾರೀಖಿನಂದು 'ಕರ್ನಾಟಕ ಬಂದ್' ಮಾಡಲಾಗುವುದು ಎಂದು ಹೇಳಲಾಗುತ್ತಿದೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ಈ ಧರಣಿ ನಡೆಯುತ್ತಿದೆ.

ನಟ ಶ್ರೀಮುರಳಿ
'ಒಂದಲ್ಲೊಂದು ರೂಪದಲ್ಲಿ ನಾವೆಲ್ಲ ಕೃಷಿ ಹಿನ್ನೆಲೆಯಿಂದಲೇ ಬಂದವರು‌. ರಾಜಕಾರಣಿಯೋ, ಕಲಾವಿದರೋ ಅಥವಾ ಉದ್ಯಮಿಯೋ, ಅದು ಯಾರೇ ಆದರೂ ಸರಿ, ರೈತರು ತಮ್ಮ ಜಮೀನುಗಳಲ್ಲಿ ಕಷ್ಟಪಟ್ಟು ಬೆವರು ಹರಿಸಿ ಬೆಳೆ ಬೆಳೆದರೆ ಮಾತ್ರ ನಾವೆಲ್ಲ ಅಚ್ಚುಕಟ್ಟಾಗಿ ಕುಳಿತು ಭೋಜನ ಸವಿಯುವುದು. ಹಾಗಾಗಿ ಯಾರೇ ಆದರೂ ಸರಿ, ರೈತರ ಬಗ್ಗೆ ಅಗೌರವ ತೋರುವುದು ಸರಿಯಲ್ಲ' ಎಂದು ನಟ ಶ್ರೀಮುರಳಿ ಟ್ವೀಟ್ ಮಾಡಿದ್ದಾರೆ.

'ಗಟ್ಟಿಮೇಳ' ಧಾರಾವಾಹಿ ನಟ ರಕ್ಷ್
'ಸರ್ಕಾರಕ್ಕೆ ಸಣ್ಣ ಮನವಿ. ಒಬ್ಬ ರೈತನ ಮಗನಾಗಿ ಕೇಳಿಕೊಳ್ಳುತ್ತೇನೆ. ರೈತನಿಗೆ ಅನ್ಯಾಯ ಮಾಡಬೇಡಿ' ಎಂದು 'ಗಟ್ಟಿಮೇಳ' ಧಾರಾವಾಹಿ ನಟ ರಕ್ಷ್ ಹೇಳಿದ್ದಾರೆ.

Also Read-ವಿಧಾನಸೌಧ ಮುತ್ತಿಗೆಗೆ ಹೊರಟ ಕೋಡಿಹಳ್ಳಿ ಚಂದ್ರಶೇಖರ್‌ ಬಂಧನ, ಬಿಡುಗಡೆ

ನಟ ರಕ್ಷತ್ ಗೌಡ
'ಮಧ್ಯವರ್ತಿಗಳು ಲಾಭ ಮಾಡಿಕೊಳ್ಳುತ್ತಿರುವಾಗ ರೈತರ ಸರ್ಕಾರ ಭಾವನೆಗಳ ಜೊತೆ ಆಟವಾಡುತ್ತಿದೆ. ನಮಗೆ ಯಾರ ಅಗತ್ಯವಿಲ್ಲ. ಎಪಿಎಂಸಿಗಳಿಗೆ ಬೆಂಬಲ ಸೂಚಿಸೋಣ. ನಾವು ನೇರವಾಗಿ ವ್ಯವಹರಿಸೋಣ, ದಯವಿಟ್ಟು ಅಂಬಾನಿ ಯೋಜನೆಗಾಗಿ ಅಂಟಿಕೊಳ್ಳಬೇಡಿ' ಎಂದು 'ಅಮೃತವರ್ಷಿಣಿ', 'ಯಜಮಾನಿ' ಧಾರಾವಾಹಿ ನಟ ರಕ್ಷತ್ ಗೌಡ ಹೇಳಿದ್ದಾರೆ.

ALso Read-'ಅನ್ನದಾತರಿಗೆ ಅನ್ಯಾಯ' ಬರಹದ ಮಾಸ್ಕ್ ಧರಿಸಿ ಸದನದ ಗಮನಸೆಳೆದ ಡಿಕೆಶಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌