ಆ್ಯಪ್ನಗರ

ನಾನು ತಾಯಿಯಾಗಲಾರೆ ಎಂದ ಪ್ರಖ್ಯಾತ ಕನ್ನಡ ನಟಿ ಪಾರುಲ್ ಯಾದವ್!

ತಾಯಿಯಾಗುವುದು ನಿಜಕ್ಕೂ ಹೆಣ್ಣಿನ ಜೀವನದಲ್ಲಿ ಅತ್ಯಮೂಲ್ಯವಾದ ವಿಚಾರ. ಪ್ರತಿಯೊಂದು ಹೆಣ್ಣು ಕೂಡ ತಾಯ್ತನವನ್ನು ಎಂಜಾಯ್ ಮಾಡುತ್ತಾಳೆ. ಆದರೆ ಕನ್ನಡ ನಟಿಯೋರ್ವರು ತಾನು ತಾಯ್ತವನ್ನು ತ್ಯಾಗ ಮಾಡುತ್ತಿರುವುದಾಗಿ ಹೇಳಿದ್ದಾರೆ. ಕಾರಣ ಏನು?

THE TIMES OF INDIA NEWS SERVICE 1 Oct 2020, 7:49 pm
ದೆಹಲಿಯಿಂದ 200 ಕಿಮೀ ದೂರದಲ್ಲಿರುವ ಹತ್ರಾಸ್ ಎಂಬ ಹಳ್ಳಿಯಲ್ಲಿ 19 ವರ್ಷದ ಹುಡುಗಿ ಮೇಲೆ 4 ಜನ ಕಾಮುಕರು ಗ್ಯಾಂಗ್‌ರೇಪ್ ಮಾಡಿದ್ದಾರೆ. ಅತ್ಯಾಚಾರ ಮಾಡುವುದರ ಜೊತೆಗೆ ಆ ಹುಡುಗಿಯ ಬೆನ್ನುಮೂಳೆ ಮುರಿದು, ನಾಲಿಗೆ ಕತ್ತರಿಸಿ, ಅನೇಕ ಗಾಯಗಳಾಗುವಂತೆ ಮಾಡಿದ್ದಾರೆ. ಈ ಬಗ್ಗೆ ಪಾರುಲ್ ಯಾದವ್ ಮೌನ ಮುರಿದಿದ್ದಾರೆ, ಅದರ ಜೊತೆಗೆ ಅವರ ತಾಯ್ತನವನ್ನು ತ್ಯಾಗ ಮಾಡಲಿದ್ದಾರಂತೆ.
Vijaya Karnataka Web kannada actress parul yadav dont want child because of uttar pradesh incident
ನಾನು ತಾಯಿಯಾಗಲಾರೆ ಎಂದ ಪ್ರಖ್ಯಾತ ಕನ್ನಡ ನಟಿ ಪಾರುಲ್ ಯಾದವ್!


ಪಾರುಲ್ ಯಾದವ್ ಯಾಕೆ ತಾಯ್ತನ ತ್ಯಾಗ ಮಾಡಲಿದ್ದಾರೆ?

'ಹೆಣ್ತನದ ಸಾರವೇ ತಾಯ್ತನ. ಆದರೆ ಇಂದು ನಾನು ತಾಯಿಯಾಗಲು ಬಯಸುವುದಿಲ್ಲ. ಹುಡುಗಿಯಾಗಿ ಈ ಮಾತು ಹೇಳುವುದು ತುಂಬ ಕಷ್ಟ. ಆದರೆ ನಿಜಕ್ಕೂ ನಾನು ತಾಯ್ತನವನ್ನು ತ್ಯಾಗ ಮಾಡುತ್ತಿದ್ದೇನೆ. ನನ್ನ ಮಗು ಹೆಣ್ಣಾದರೆ ಏನು ಗತಿ? ಈ ದೇಶ ಮಹಿಳೆಯರಿಗೆ ಕ್ರೂರಿಯಾಗಿದೆ. ಹತ್ರಾಸ್‌ನಲ್ಲಿ ನಡೆದ ಭಯಂಕರ ಘಟನೆ ಇತ್ತೀಚೆಗಿನ ಉದಾಹರಣೆ' ಎಂದು ಪಾರುಲ್ ಯಾದವ್ ಟ್ವೀಟ್ ಮಾಡಿದ್ದಾರೆ.

ಏನಿದು ಘಟನೆ?

ಮೇಲ್ವರ್ಗದ 4 ಜನರು ಹೊಲದಲ್ಲಿ ಕೆಲಸ ಮಾಡುತ್ತಿದ್ದ 19 ವರ್ಷದ ದಲಿತ ಹುಡುಗಿಯನ್ನು ಹೊತ್ತೊಯ್ದು ಹಲ್ಲೆ ಮಾಡಿ ರೇಪ್ ಮಾಡಿದ್ದರು. ಆಮೇಲೆ ಹೊಲದ ಬಳಿಯೇ ರಕ್ತಸಿಕ್ತವಾಗಿ ಆ ಹುಡುಗಿಯನ್ನು ಅವಳ ತಾಯಿ, ಸಹೋದರರಿಗೆ ಸಿಕ್ಕಿದ್ದಳು. ಈ ಘಟನೆ ನಡೆದ 4 ದಿನದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದಾಗಿ ಆ ಹುಡುಗಿಯ ಸಹೋದರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಆರೋಗ್ಯ ತಪಾಸಣೆಯಿಂದ ಅತ್ಯಾಚಾರಕ್ಕೆ ಸಂಬಂಧಪಟ್ಟಂತೆ ಯಾವ ವಿಷಯವೂ ಹೊರಗೆ ಬಂದಿಲ್ಲ. ಈಗಾಗಲೇ ಅತ್ಯಾಚಾರ ಮಾಡಿದ 4 ಅಪರಾಧಿಗಳನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಅದರ ಜೊತೆಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ ಆ ಮಹಿಳೆಯನ್ನು ಮಧ್ಯರಾತ್ರಿ ಪೊಲೀಸರು ಮನೆಯವರಿಗೂ ಹೇಳದೆ ಅಂತ್ಯಕ್ರಿಯೆ ಮಾಡಿದ್ದಾರೆ.

Also Read-ಕಬ್ಬನ್ ಪಾರ್ಕ್‌ನಲ್ಲಿ ನಟಿ ಪಾರುಲ್ ಯಾದವ್ ಸೈಕಲ್ ಸವಾರಿ

ಡ್ರಗ್ ಮಾಫಿಯಾ ಬಗ್ಗೆ ಪ್ರಶ್ನೆ ಮಾಡಿದ್ದ ಪಾರುಲ್ ಯಾದವ್!

ಡ್ರಗ್ ಮಾಫಿಯಾ ವಿಚಾರವಾಗಿ ಪಾರುಲ್ ಒಂದಾದ ಮೇಲೆ ಒಂದರಂತೆ ಟ್ವೀಟ್ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆರಂಭವಾಗಿ ಹಲವು ದಿನಗಳೇ ಕಳೆದಿದೆ. ಆದರೆ ಈವರೆಗೂ ಯಾವುದೇ ದೊಡ್ಡ ಸ್ಟಾರ್‌ ನಟನ ಹೆಸರು ಹೊರಬಂದಿಲ್ಲ. ನಟರ ಬಗ್ಗೆ ಕೆಲವು ಮಾಹಿತಿ ಹರಿದಾಡುತ್ತಿದ್ದರೂ ಅವರನ್ನು ಪೊಲೀಸರು ಬಂಧಿಸಿಲ್ಲ. ಅದನ್ನೇ ಪಾರುಲ್‌ ಯಾದವ್ ಪ್ರಶ್ನೆ ಮಾಡಿದ್ದರು.

Also Read-ಗಂಡಸರು ಡ್ರಗ್ಸ್‌ ತೆಗೆದುಕೊಳ್ಳುವುದಿಲ್ಲ: ಸಿಟ್ಟಿನಿಂದ ಯಾಕೆ ಹೀಗೆ ಹೇಳಿದ್ರು ನಟಿ ಪಾರುಲ್‌ ಯಾದವ್‌?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌