ಆ್ಯಪ್ನಗರ

ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ನಟಿ ರಮ್ಯಾ-ರಾಧಿಕಾ ಪಂಡಿತ್ ನಡುವಿನ ಈ ಸಂಭಾಷಣೆ!

ನಟಿ ರಾಧಿಕಾ ಪಂಡಿತ್ ಹಾಗೂ ರಮ್ಯಾ ಕನ್ನಡ ಚಿತ್ರರಂಗದ ಯಶಸ್ವಿ ನಟಿಯರು. ಈಗ ಇವರು ಸೋಶಿಯಲ್ ಮೀಡಿಯಾದಲ್ಲಿ ಸಂಭಾಷಣೆ ನಡೆಸಿದ್ದು, ಇದೀಗ ವೈರಲ್ ಆಗುತ್ತಿದೆ. ಹಾಗಾದರೆ ಅವರು ಏನು ಮಾತನಾಡಿಕೊಂಡಿದ್ದಾರೆ?

Vijaya Karnataka Web 9 Aug 2020, 4:48 pm
ನಟಿ ರಮ್ಯಾ ಕೆಲದಿನಗಳಿಂದ ಸೋಶಿಯಲ್ ಮೀಡಿಯಾಕ್ಕೆ ಮರಳಿ ಬಂದು ಒಂದಾದ ಮೇಲೆ ಒಂದರಂತೆ ಪೋಸ್ಟ್ ಹಾಕುತ್ತ ಗಮನಸೆಳೆಯುತ್ತಿದ್ದಾರೆ. ಈಗ ಅವರು ರಾಧಿಕಾ ಪಂಡಿತ್ ಅವರ ಫೋಟೋವೊಂದಕ್ಕೆ ಕಮೆಂಟ್ ಮಾಡಿದ್ದಾರೆ. ಅದಕ್ಕೆ ರಾಧಿಕಾ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.
Vijaya Karnataka Web kannada actress ramya comments on radhika pandit social media post
ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ನಟಿ ರಮ್ಯಾ-ರಾಧಿಕಾ ಪಂಡಿತ್ ನಡುವಿನ ಈ ಸಂಭಾಷಣೆ!


ರಮ್ಯಾ-ರಾಧಿಕಾ ನಡುವೆ ನಡೆದ ಸಂಭಾಷಣೆ ಏನು?

ರಾಧಿಕಾ ಪಂಡಿತ್ ಅವರು ಫೋಟೋವೊಂದನ್ನು ಹಂಚಿಕೊಂಡು, 'ನೀವು ನೀವಾಗಿರಿ' ಎಂದು ಕ್ಯಾಪ್ಶನ್ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ನಟಿ ರಮ್ಯಾ, 'ತುಂಬ ಮುದ್ದಾಗಿದ್ದೀರಾ' ಎಂದಿದ್ದಾರೆ. ಈ ಕಾಮೆಂಟ್‌ಗೆ ಉತ್ತರ ನೀಡಿರುವ ರಾಧಿಕಾ, 'ನಿಮ್ಮಷ್ಟು ಮುದ್ದಾಗಿ ನಾನಿಲ್ಲ. ನೀವು ಯಾವತ್ತೂ ಸುಂದರ' ಎಂದು ಹೇಳಿದ್ದಾರೆ. ನಟಿಯರು ಸಾರ್ವಜನಿಕವಾಗಿ ಬೇರೆಯವರನ್ನು ಹೊಗಳುವುದು ಕಡಿಮೆ. ಅಂತಹದರಲ್ಲಿ ಈ ಸಂಭಾಷಣೆ ಈಗ ಸೋಶಿಯಲ್ ಮೀಡಿಯಾದಲ್ಲಿ ತುಂಬ ವೈರಲ್ ಆಗುತ್ತಿದೆ. ರಮ್ಯಾ ಮತ್ತು ರಾಧಿಕಾ ನಡುವೆ ಉತ್ತಮ ಬಾಂಧವ್ಯವಿದೆ. ಯಶ್ ನಟನೆಯ 'ಲಕ್ಕಿ' ಸಿನಿಮಾದಲ್ಲಿ ರಮ್ಯಾ ಹೀರೋಯಿನ್ ಆಗಿದ್ದರು.

ಮತ್ತೆ ಸೋಶಿಯಲ್ ಮೀಡಿಯಾಕ್ಕೆ ಮರಳಿದ ರಮ್ಯಾ!
ನಟಿ ರಮ್ಯಾ ಅವರು ಪ್ರಸ್ತುತ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. 2016ರಲ್ಲಿ ಅವರು 'ನಾಗರಹಾವು' ಸಿನಿಮಾದಲ್ಲಿ ನಟಿಸಿದ್ದೇ ಕೊನೆ, ಆಮೇಲೆ ಅವರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲೇ ಇಲ್ಲ. ಕಳೆದ ಒಂದು ವರ್ಷದ ಹಿಂದೆ ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬ ಸುಳಿವು ಕೂಡ ಸಿಕ್ಕಿರಲಿಲ್ಲ. ಏಕಾಏಕಿ ಟ್ವಿಟರ್‌, ಫೇಸ್‌ಬುಕ್ ಮುಂತಾದವುಗಳಿಂದ ಹೊರನಡೆದಿದ್ದ ರಮ್ಯಾ ಕೆಲ ತಿಂಗಳುಗಳ ಹಿಂದೆ ಮತ್ತೆ ವಾಪಸ್ ಆಗಿದ್ದರು. ಕೇರಳದ ಗರ್ಭಿಣಿ ಆನೆಯನ್ನು ಕೊಂದಿರುವುದು, ರಾಮಮಂದಿರದ ಬಗ್ಗೆ ರಮ್ಯಾ ಅಭಿಪ್ರಾಯ ಹೊರಹಾಕಿ ಒಮ್ಮೆ ಎಲ್ಲರ ಗಮಸೆಳೆದಿದ್ದರು.
Also Read-ದೇವರನ್ನು ಕಾಣಲು ಮಂದಿರ ಅಥವಾ ಮಸೀದಿಯೇ ಮುಖ್ಯವಲ್ಲ ಎಂದ ನಟಿ ರಮ್ಯಾ

ಮಕ್ಕಳ ಪಾಲನೆಯಲ್ಲಿ ರಾಧಿಕಾ!
ನಟಿ ರಮ್ಯಾ ಚಿತ್ರರಂಗದಲ್ಲಿ ಇದ್ದಷ್ಟು ದಿನ ನಂಬರ್ 1 ನಟಿಯಾಗಿ ಮೆರೆದರು. ಮತ್ತೆ ಅವರನ್ನು ಸಿನಿಮಾಗಳಲ್ಲಿ ನೋಡಲು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. 10 ವರ್ಷಗಳಿಗೂ ಅಧಿಕ ಕಾಲ ನಾಯಕಿಯಾಗಿ ಕಾಣಿಸಿಕೊಂಡ ರಾಧಿಕಾ ಪಂಡಿತ್ ಈಗ ಮದುವೆ ಜೀವನ ಸವೆಯುತ್ತಿದ್ದಾರೆ. ಮುದ್ದಾದ ಎರಡು ಮಕ್ಕಳ ಜೊತೆ ಅವರ ಬದುಕಿನ ಅಮೂಲ್ಯ ಸಮಯವನ್ನು ವ್ಯಯಿಸುತ್ತಿದ್ದಾರೆ.

Also Read-ಹಿಟ್ ಸಿನಿಮಾ ನೀಡಿದ್ದ 'ಅಮೃತಧಾರೆ' ಚಿತ್ರದ ನಟ ಧ್ಯಾನ್ ಚಿತ್ರರಂಗಕ್ಕೆ ಯಾಕೆ ಗುಡ್‌ಬೈ ಹೇಳಿದ್ರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌