ಮೋದಿಜೀ....ಅತ್ಯಾಚಾರ, ಪ್ರಾಣ ಬೆದರಿಕೆ ಹಾಕುವವರನ್ನು ಯಾಕೆ ಫಾಲೋ ಮಾಡ್ತೀರಿ? ; ನಟಿ ರಮ್ಯಾ!
ಉತ್ತರ ಪ್ರದೇಶದಲ್ಲಿ ನಡೆದ ಅತ್ಯಾಚಾರದ ಬಗ್ಗೆ ಇಡೀ ಭಾರತ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದರ ಬಗ್ಗೆ ಅನೇಕ ಸೆಲೆಬ್ರಿಟಿಗಳು ಅವರವರ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದೇ ವಿಚಾವಾಗಿ ನಟ ಅಕ್ಷಯ್ ಕುಮಾರ್ ಹಾಗೂ ಮೋದಿ ಅವರನ್ನು ರಮ್ಯಾ ಪ್ರಶ್ನೆ ಮಾಡಿದ್ದಾರೆ.
THE TIMES OF INDIA NEWS SERVICE 30 Sep 2020, 1:05 pm
20 ವರ್ಷದ ಹುಡುಗಿಯನ್ನು ಉತ್ತರ ಪ್ರದೇಶದ ಹತ್ರಾಸ್ನಲ್ಲಿ ಗ್ಯಾಂಗ್ ರೇಪ್ ಮಾಡಲಾಗಿದೆ. ಸಾವು-ಬದುಕಿನ ವಿರುದ್ಧ ಹೋರಾಡಿ ಆ ಹುಡುಗಿ ಪ್ರಾಣ ಬಿಟ್ಟಿದ್ದಾಳೆ. ಇದರ ಬಗ್ಗೆ ಅನೇಕರು ಮಾತನಾಡುತ್ತಾರೆ. ಈ ಅಪರಾಧದ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ನಟ ಅಕ್ಷಯ್ ಕುಮಾರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟ್ನ್ನು ನಟಿ ರಮ್ಯಾ ಪ್ರಶ್ನೆ ಮಾಡಿದ್ದಾರೆ.
ರೇಪ್ನಿಂದ ಸತ್ತ ಮಹಿಳೆ ಗತಿಯೇನು?: ರಮ್ಯಾ
ಕುವೈತ್ ರಾಜ ಶೇಖ್ ಸಭಾ ಅಲ್ ಅಹ್ಮದ್ ಅಲ್ ಸಭಾ ನಿಧನಕ್ಕೆ ನರೇಂದ್ರ ಮೋದಿ ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದರು. ರಾಜರ ನಿಧನಕ್ಕೆ ಟ್ವೀಟ್ ಮಾಡುವ ನೀವು ಮಹಿಳೆ ತೀರಿಕೊಂಡ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದಿದ್ದಾರೆ. 'ಇವತ್ತು ತೀರಿಕೊಂಡ ಮಹಿಳೆ ಗತಿಯೇನು? ಆ ಮಹಿಳೆಯನ್ನು ರೇಪ್ ಮಾಡಲಾಗಿದೆ. ನಿಮ್ಮ ಸಂತಾಪಗಳು, ಸಮಾಧಾನವನ್ನು ನಾವು ನಿರೀಕ್ಷಿಸುವುದಿಲ್ಲ. ನಿಮ್ಮ ಹ್ಯಾಂಡಲ್ನಿಂದ ನೀವು ಫಾಲೋ ಮಾಡುವವರು ಪ್ರತಿನಿತ್ಯ ಅತ್ಯಾಚಾರ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಮಹಿಳೆಯರ ಮೇಲೆ ನಿಮಗಿರುವ ಗೌರವ, ಕಾಳಜಿ, ಅನುಕಂಪ ಎಂಥದ್ದು ಎಂಬುದಕ್ಕೆ ಇದೇ ಸಾಕ್ಷಿ' ಎಂದು ರಮ್ಯಾ ಖಾರವಾಗಿ ಪ್ರಧಾನಿ ಮೋದಿ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅತ್ಯಾಚಾರಿಗಳನ್ನು ನೇಣಿಗೆ ಹಾಕಿ ಎಂದ ಅಕ್ಷಯ್ ಕುಮಾರ್
'ಹತ್ರಾಸ್ ಗ್ಯಾಂಗ್ರೇಪ್ ನೋಡಿ ಕೋಪದ ಜೊತೆಗೆ ಹತಾಶೆ ಕಾಡುತ್ತಿದೆ. ಇದೆಲ್ಲ ಯಾವಾಗ ನಿಲ್ಲುತ್ತದೆ? ನಮ್ಮ ಕಾನೂನು, ಅದನ್ನು ಅನುಷ್ಠಾನಕ್ಕೆ ತರುವುದು ಕಠಿಣ ಆಗಬೇಕು. ಶಿಕ್ಷೆಯನ್ನು ಕಂಡು ಅತ್ಯಾಚಾರಿಗಳು ಭಯ ಬೀಳಬೇಕು. ಅಪರಾಧಿಗಳನ್ನು ನೇಣಿಗೆ ಮಗಳು, ಸಹೋದರಿಯರ ಭದ್ರತೆಗಾಗಿ ದನಿಯೆತ್ತಿ, ಇದನ್ನು ನಾವು ಮಾಡಬಹುದು' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.
ಅಕ್ಷಯ್ ಕುಮಾರ್ಗೆ ಪ್ರಶ್ನಿಸಿದ ರಮ್ಯಾ
'ನಿಮ್ಮ ಹತಾಶೆ ಮುಂದುವರೆಯುತ್ತದೆ. ಇದಕ್ಕೆಲ್ಲ ಕೊನೆಯೆಂಬುದಿಲ್ಲ. ಯಾಗೆ ಗೊತ್ತಾ? ಇದು ಕಾನೂನಿಗೆ ಸಂಬಂಧಪಟ್ಟಿದ್ದಲ್ಲ, ದೋಷಪೂರಿತ ಮನಸ್ಥಿತಿಗಳಿಗೆ ಸಂಬಂಧಪಟ್ಟದ್ದು. ಈ ಮನಸ್ಥಿತಿಗೆ ಯಾರು ಇಂಧನ ನೀಡುತ್ತಾರೆ? ಮೊದಲಿಗೆ, ಪಿಎಂ ಮೋದಿ ಪ್ರತಿದಿನ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುವ ರಾಕ್ಷಸರನ್ನು ಅನುಸರಿಸುತ್ತಾರೆ. ಬದಲಾವಣೆ ಎನ್ನುವುದು ಮೊದಲು ಮೇಲ್ಭಾಗದಲ್ಲಿ ಪ್ರಾರಂಭವಾಗುತ್ತದೆ ಎಂದು ನೀವು ಯೋಚಿಸುವುದಿಲ್ಲವೇ' ಎಂದು ರಮ್ಯಾ ಅವರು ಅಕ್ಷಯ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
Also Read-ನಟಿ ಮೇಲೆ ಹಲ್ಲೆ ಪ್ರಕರಣ: ಆಪ್ತ ಸ್ನೇಹಿತರಿಂದಲೇ ಆಗುತ್ತಿದೆಯೇ ನಂಬಿಕೆ ದ್ರೋಹ?
ಡ್ರಗ್ ಮಾಫಿಯಾ ಬಗ್ಗೆ ರಮ್ಯಾ ಪ್ರಶ್ನೆ
ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಡ್ರಗ್ ಮಾಫಿಯಾದಲ್ಲಿ ನಟಿಯರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಆದರೆ ಸ್ಟಾರ್ ನಟರ ಹೆಸರು ಯಾಕೆ ಹೊರಗಡೆ ಬರುತ್ತಿಲ್ಲ ಎಂದು ರಮ್ಯಾ ಪ್ರಶ್ನಿಸಿದ್ದರು.
Also Read-ಗಂಡಸರು ಸೇದಿದರೆ ಶಿವ ಶಂಭೋ, ಹೆಂಗಸರಾದರೆ ದಂ ಮಾರೋ ದಂ? : ನಟಿ ರಮ್ಯಾ
ರೇಪ್ನಿಂದ ಸತ್ತ ಮಹಿಳೆ ಗತಿಯೇನು?: ರಮ್ಯಾ
ಕುವೈತ್ ರಾಜ ಶೇಖ್ ಸಭಾ ಅಲ್ ಅಹ್ಮದ್ ಅಲ್ ಸಭಾ ನಿಧನಕ್ಕೆ ನರೇಂದ್ರ ಮೋದಿ ಟ್ವಿಟರ್ನಲ್ಲಿ ಸಂತಾಪ ಸೂಚಿಸಿದ್ದರು. ರಾಜರ ನಿಧನಕ್ಕೆ ಟ್ವೀಟ್ ಮಾಡುವ ನೀವು ಮಹಿಳೆ ತೀರಿಕೊಂಡ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದಿದ್ದಾರೆ. 'ಇವತ್ತು ತೀರಿಕೊಂಡ ಮಹಿಳೆ ಗತಿಯೇನು? ಆ ಮಹಿಳೆಯನ್ನು ರೇಪ್ ಮಾಡಲಾಗಿದೆ. ನಿಮ್ಮ ಸಂತಾಪಗಳು, ಸಮಾಧಾನವನ್ನು ನಾವು ನಿರೀಕ್ಷಿಸುವುದಿಲ್ಲ. ನಿಮ್ಮ ಹ್ಯಾಂಡಲ್ನಿಂದ ನೀವು ಫಾಲೋ ಮಾಡುವವರು ಪ್ರತಿನಿತ್ಯ ಅತ್ಯಾಚಾರ, ಪ್ರಾಣ ಬೆದರಿಕೆ ಹಾಕುತ್ತಿದ್ದಾರೆ. ಮಹಿಳೆಯರ ಮೇಲೆ ನಿಮಗಿರುವ ಗೌರವ, ಕಾಳಜಿ, ಅನುಕಂಪ ಎಂಥದ್ದು ಎಂಬುದಕ್ಕೆ ಇದೇ ಸಾಕ್ಷಿ' ಎಂದು ರಮ್ಯಾ ಖಾರವಾಗಿ ಪ್ರಧಾನಿ ಮೋದಿ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಅತ್ಯಾಚಾರಿಗಳನ್ನು ನೇಣಿಗೆ ಹಾಕಿ ಎಂದ ಅಕ್ಷಯ್ ಕುಮಾರ್
'ಹತ್ರಾಸ್ ಗ್ಯಾಂಗ್ರೇಪ್ ನೋಡಿ ಕೋಪದ ಜೊತೆಗೆ ಹತಾಶೆ ಕಾಡುತ್ತಿದೆ. ಇದೆಲ್ಲ ಯಾವಾಗ ನಿಲ್ಲುತ್ತದೆ? ನಮ್ಮ ಕಾನೂನು, ಅದನ್ನು ಅನುಷ್ಠಾನಕ್ಕೆ ತರುವುದು ಕಠಿಣ ಆಗಬೇಕು. ಶಿಕ್ಷೆಯನ್ನು ಕಂಡು ಅತ್ಯಾಚಾರಿಗಳು ಭಯ ಬೀಳಬೇಕು. ಅಪರಾಧಿಗಳನ್ನು ನೇಣಿಗೆ ಮಗಳು, ಸಹೋದರಿಯರ ಭದ್ರತೆಗಾಗಿ ದನಿಯೆತ್ತಿ, ಇದನ್ನು ನಾವು ಮಾಡಬಹುದು' ಎಂದು ಅಕ್ಷಯ್ ಕುಮಾರ್ ಟ್ವೀಟ್ ಮಾಡಿದ್ದರು.
ಅಕ್ಷಯ್ ಕುಮಾರ್ಗೆ ಪ್ರಶ್ನಿಸಿದ ರಮ್ಯಾ
'ನಿಮ್ಮ ಹತಾಶೆ ಮುಂದುವರೆಯುತ್ತದೆ. ಇದಕ್ಕೆಲ್ಲ ಕೊನೆಯೆಂಬುದಿಲ್ಲ. ಯಾಗೆ ಗೊತ್ತಾ? ಇದು ಕಾನೂನಿಗೆ ಸಂಬಂಧಪಟ್ಟಿದ್ದಲ್ಲ, ದೋಷಪೂರಿತ ಮನಸ್ಥಿತಿಗಳಿಗೆ ಸಂಬಂಧಪಟ್ಟದ್ದು. ಈ ಮನಸ್ಥಿತಿಗೆ ಯಾರು ಇಂಧನ ನೀಡುತ್ತಾರೆ? ಮೊದಲಿಗೆ, ಪಿಎಂ ಮೋದಿ ಪ್ರತಿದಿನ ಮಹಿಳೆಯರಿಗೆ ಅತ್ಯಾಚಾರದ ಬೆದರಿಕೆ ಹಾಕುವ ರಾಕ್ಷಸರನ್ನು ಅನುಸರಿಸುತ್ತಾರೆ. ಬದಲಾವಣೆ ಎನ್ನುವುದು ಮೊದಲು ಮೇಲ್ಭಾಗದಲ್ಲಿ ಪ್ರಾರಂಭವಾಗುತ್ತದೆ ಎಂದು ನೀವು ಯೋಚಿಸುವುದಿಲ್ಲವೇ' ಎಂದು ರಮ್ಯಾ ಅವರು ಅಕ್ಷಯ್ ಕುಮಾರ್ ಅವರನ್ನು ಪ್ರಶ್ನೆ ಮಾಡಿದ್ದಾರೆ.
Also Read-ನಟಿ ಮೇಲೆ ಹಲ್ಲೆ ಪ್ರಕರಣ: ಆಪ್ತ ಸ್ನೇಹಿತರಿಂದಲೇ ಆಗುತ್ತಿದೆಯೇ ನಂಬಿಕೆ ದ್ರೋಹ?
ಡ್ರಗ್ ಮಾಫಿಯಾ ಬಗ್ಗೆ ರಮ್ಯಾ ಪ್ರಶ್ನೆ
ನಟಿ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಈಗ ಸಿಕ್ಕಾಪಟ್ಟೆ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಅವರು ಪ್ರತಿಕ್ರಿಯೆ ನೀಡುತ್ತಿರುತ್ತಾರೆ. ಡ್ರಗ್ ಮಾಫಿಯಾದಲ್ಲಿ ನಟಿಯರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಾರೆ. ಆದರೆ ಸ್ಟಾರ್ ನಟರ ಹೆಸರು ಯಾಕೆ ಹೊರಗಡೆ ಬರುತ್ತಿಲ್ಲ ಎಂದು ರಮ್ಯಾ ಪ್ರಶ್ನಿಸಿದ್ದರು.
Also Read-ಗಂಡಸರು ಸೇದಿದರೆ ಶಿವ ಶಂಭೋ, ಹೆಂಗಸರಾದರೆ ದಂ ಮಾರೋ ದಂ? : ನಟಿ ರಮ್ಯಾ