ಆ್ಯಪ್ನಗರ

ಕಾಲೆಳೆಯುವುದು, ಕಿಂಡಲ್ ಮಾಡುವ ಅವಶ್ಯಕತೆ ಇಲ್ಲ: 'ಪುಡಂಗು' ಎಂದ ದರ್ಶನ್ ಬಗ್ಗೆ ಪ್ರೇಮ್ ಬೇಸರ!

ತಮ್ಮ ಬಗ್ಗೆ ದರ್ಶನ್ ಮಾತನಾಡಿದ್ದು, ಪುಡಂಗು ಅಂತ ಹೇಳಿದ್ದು, ಎರಡು ಕೊಂಬೈತಾ ಅಂತ ಕೇಳಿದ್ದು ನಿರ್ದೇಶಕ 'ಜೋಗಿ' ಪ್ರೇಮ್‌ಗೆ ನೋವು ತಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದರು. ಇಂದು ಮಾಧ್ಯಮಗಳ ಮುಂದೆಯೂ ತಮ್ಮ ನೋವನ್ನು ಪ್ರೇಮ್ ಹೊರಹಾಕಿದರು.

Vijaya Karnataka Web 18 Jul 2021, 2:25 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಲೇ ಇದ್ದಾರೆ. 25 ಕೋಟಿ ರೂಪಾಯಿ ಫೇಕ್ ಲೋನ್ ಪ್ರಕರಣದಿಂದ ಶುರುವಾದ ದರ್ಶನ್ ವಿವಾದ ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ನಲ್ಲಿ ಸಪ್ಲೈಯರ್‌ಗೆ ಹೊಡೆದ ಆರೋಪದವರೆಗೂ ಬಂತು ನಿಲ್ತು. ಈ ಬಗ್ಗೆ ತಮ್ಮ ಫಾರ್ಮ್ ಹೌಸ್‌ನಲ್ಲಿ ಪ್ರತಿಕ್ರಿಯೆ ಕೊಡುವಾಗ ನಿರ್ದೇಶಕ 'ಜೋಗಿ' ಪ್ರೇಮ್ ಬಗ್ಗೆ ದರ್ಶನ್ ಉಲ್ಲೇಖಿಸಿದರು.
Vijaya Karnataka Web kannada director prem expresses his displeasure about challenging star darshan
ಕಾಲೆಳೆಯುವುದು, ಕಿಂಡಲ್ ಮಾಡುವ ಅವಶ್ಯಕತೆ ಇಲ್ಲ: 'ಪುಡಂಗು' ಎಂದ ದರ್ಶನ್ ಬಗ್ಗೆ ಪ್ರೇಮ್ ಬೇಸರ!


ಮಾಧ್ಯಮಗಳ ಮುಂದೆ ಮಾತನಾಡುವಾಗ, ''ಉಮಾಪತಿ ನನಗೆ ಪರಿಚಯ ಆಗಿದ್ದು ಮಿಸ್ಟರ್ ಜೋಗಿ ಪ್ರೇಮ್‌ರಿಂದ. ಉಮಾಪತಿ ಹಾಗೂ ಮಿಸ್ಟರ್ ಪ್ರೇಮ್ ನನ್ನ ಮನೆಗೆ ಬಂದರು. ಸಿನಿಮಾ ಬಗ್ಗೆ ನಾವು ಮೂರು ಜನ ಮಾತನಾಡಿದ್ವಿ. ಹೊರಗೆ ಬಂದ ತಕ್ಷಣ ಒಂದು ಮ್ಯಾಟರ್ ಬಂತು.. 'ತಾರಕ್' ಪ್ರೆಸ್‌ಮೀಟ್‌ನಲ್ಲಿ ನಾನು ಹೇಳಿದ್ದೆ 70 ದಿನದ ಮೇಲೆ ನಾನು ಯಾರಿಗೂ ಕಾಲ್‌ಶೀಟ್ ಕೊಡಲ್ಲ ಅಂತ. ಆದರೆ, ಪ್ರೇಮ್‌ಗಾಗಿ ದರ್ಶನ್ ನೂರು ದಿನ ಡೇಟ್ಸ್ ಕೊಡ್ತಿದ್ದಾರೆ ಅಂತ ಸುದ್ದಿ ಆಯ್ತು. ಪ್ರೇಮ್ ಏನು ಪುಡಂಗಾ, ಎರಡು ಕೊಂಬೈತಾ? 'ಕರಿಯ'ದಲ್ಲೂ ನಾವು ನೋಡಿದ್ದೇವೆ ಪ್ರೇಮ್‌ದು ಏನು ಅಂತ.. ಆಮೇಲೆ ಇದನ್ನ ನಾನು ಮಾಡಲ್ಲ ಅಂತ ಹೇಳಿದೆ. ತರುಣ್ ಬಂದರು ಸಿನಿಮಾ ಆಯ್ತು'' ಎಂದು 'ದಾಸ' ದರ್ಶನ್ ಹೇಳಿದ್ದರು.

ತಮ್ಮ ಬಗ್ಗೆ ದರ್ಶನ್ ಮಾತನಾಡಿದ್ದು, ಪುಡಂಗು ಅಂತ ಹೇಳಿದ್ದು, ಎರಡು ಕೊಂಬೈತಾ ಅಂತ ಕೇಳಿದ್ದು ಪ್ರೇಮ್‌ಗೆ ನೋವು ತಂದಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರೇಮ್ ಬೇಸರ ವ್ಯಕ್ತಪಡಿಸಿದ್ದರು. ಇಂದು ಮಾಧ್ಯಮಗಳ ಮುಂದೆಯೂ ತಮ್ಮ ನೋವನ್ನು ಪ್ರೇಮ್ ಹೊರಹಾಕಿದರು. ಮಾಧ್ಯಮಗಳ ಮುಂದೆ ನಿರ್ದೇಶಕ 'ಜೋಗಿ' ಪ್ರೇಮ್ ಹೇಳಿರುವುದಿಷ್ಟು -

ನನಗೆ ತುಂಬಾ ಹರ್ಟ್ ಆಯ್ತು

''ನಾನೂ ಒಬ್ಬ ನಿರ್ದೇಶಕ. ನಿರ್ದೇಶಕರ ಬಗ್ಗೆ ದರ್ಶನ್ ಪುಡಂಗು ಅಂತ ಹೇಳಿದ್ದಾರೆ. ಹೀಗಾಗಿ ನಾನು ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದೇನೆ. ಅಷ್ಟುಬಿಟ್ಟರೆ ಮಿಕ್ಕಿದ್ದು ಯಾವುದಕ್ಕೂ ನನಗೂ ಸಂಬಂಧ ಇಲ್ಲ. ದರ್ಶನ್ ನನಗೆ ಫ್ರೆಂಡ್. 'ಕರಿಯ' ಸಿನಿಮಾ ಮಾಡುವಾಗ, ನಾನು ಅವರ ಮನೆಗೆ ಹೋಗಿದ್ದಾಗ ದರ್ಶನ್ ತಾಯಿ ನನ್ನ ತಾಯಿ ತರಹ ನನಗೆ ಊಟ ಹಾಕಿದ್ದಾರೆ. ನನಗೆ ಕೈತುತ್ತು ಕೊಟ್ಟಿದ್ದಾರೆ. ರಕ್ಷಿತಾಗೂ ದರ್ಶನ್ ಕ್ಲೋಸ್ ಫ್ರೆಂಡ್. ನಾವೆಲ್ಲ ಫ್ಯಾಮಿಲಿ ಇದ್ದ ಹಾಗೆ. ನಿರ್ದೇಶಕರಿಗೆ ಅವರು ಹಾಗೆ ಹೇಳಬಾರದು. ಇದು ನನಗೆ ತುಂಬಾ ಹರ್ಟ್ ಆಯ್ತು. ಹೀಗಾಗಿ ನನ್ನ ನೋವನ್ನು ನಾನು ತೋಡಿಕೊಂಡೆ'' - ಪ್ರೇಮ್, ನಿರ್ದೇಶಕ

ದರ್ಶನ್ ಅವ್ರೆ.. ನಿರ್ದೇಶಕರು ಯಾವ್ ಪುಡಂಗಿಗಳು ಅಲ್ಲಾ, ಅವ್ರಿಗೆ ಕೊಂಬು ಇರಲ್ಲ: ಜೋಗಿ ಪ್ರೇಮ್ ತಿರುಗೇಟು

ದರ್ಶನ್ ಯಾವತ್ತೂ ನನಗೆ ಕ್ಲೋಸ್ ಫ್ರೆಂಡ್

''ಕರಿಯ' ಸಿನಿಮಾ ಮಾಡುವಾಗ ನಾನು ಎಷ್ಟು ಕಷ್ಟ ಪಟ್ಟೆ, ವರ್ಷಾನುಗಟ್ಟಲೆ ಕೆಲಸ ಮಾಡಿದೆ ಅನ್ನೋದು ಇಡೀ ಕರ್ನಾಟಕ ಜನಕ್ಕೆ ಗೊತ್ತು. ಆ ಸಿನಿಮಾ ಗೆಲ್ತು. ಅದರಿಂದ ದರ್ಶನ್, ನನಗೆ, ನಿರ್ಮಾಪಕರಿಗೆ ಒಳ್ಳೆಯದಾಯ್ತು. ಈಗ ''ನಾನು ನೋಡಿದ್ದೇನೆ'' ಅಂತ ಫ್ಲೋನಲ್ಲಿ ದರ್ಶನ್ ಹೇಳಿರಬಹುದು. ಅದೇನು ದೊಡ್ಡ ಇಶ್ಯೂ ಅಲ್ಲ. ದರ್ಶನ್ ಯಾವತ್ತೂ ನನಗೆ ಕ್ಲೋಸ್ ಫ್ರೆಂಡ್. ನಿರ್ದೇಶಕರು ಅಂದಾಗ ನಾನೂ ಬರ್ತೀನಿ. ಹೀಗಾಗಿ, ಪುಡಂಗು ಅಂದಾಗ ನನಗೆ ಬೇಜಾರಾಯ್ತು'' - ಪ್ರೇಮ್, ನಿರ್ದೇಶಕ

ನಿರ್ದೇಶಕ ಜೋಗಿ ಪ್ರೇಮ್‌ ಬಗ್ಗೆ ನಟ ದರ್ಶನ್ ಹೇಳಿಕೆ : ಪ್ರತಿಕ್ರಿಯೆ ನೀಡಿದ ನಟಿ ರಕ್ಷಿತಾ ಪ್ರೇಮ್

ದರ್ಶನ್-ಉಮಾಪತಿ ಪರಿಚಯ

''ಕರಿಯ' ಸಿನಿಮಾ ಆದ್ಮೇಲೆ ದರ್ಶನ್-ಪ್ರೇಮ್ ಕಾಂಬಿನೇಶನ್‌ನಲ್ಲಿ ಸಿನಿಮಾ ಮಾಡಿ ಅಂತ ಸುಮಾರು ಜನ ಕೇಳಿದರು. ನಾಲ್ಕೈದು ಜನ ನಿರ್ಮಾಪಕರು ಕೂಡ ತುಂಬಾ ಟ್ರೈ ಮಾಡಿದರು. ಆ ನಿಟ್ಟಿನಲ್ಲಿ ನಾವೂ ಚರ್ಚೆ ಮಾಡಿದ್ವಿ. ಆಮೇಲೆ ಉಮಾಪತಿ ಬಂದು ಕೇಳಿದರು. ಉಮಾಪತಿ ನನಗೆ ಹಳೇ ಫ್ರೆಂಡ್. ನಮಗೂ ಒಳ್ಳೆ ಸಂಭಾವನೆ ಕೊಡ್ತಾರೆ ಅಂದಾಗ ನಾನೇ ಉಮಾಪತಿ ಅವರನ್ನು ದರ್ಶನ್ ಬಳಿ ಖುದ್ದಾಗಿ ಕರ್ಕೊಂಡು ಹೋಗಿ ಮಾತನಾಡಿಸಿದ್ದೆ. ಎಲ್ಲಾ ಆಯ್ತು ಅನ್ನೋಷ್ಟರಲ್ಲಿ ನನ್ನ 'ದಿ ವಿಲನ್' ಸಿನಿಮಾ ಲೇಟ್ ಆಯ್ತು. ಉಮಾಪತಿ ಬಳಿ ದರ್ಶನ್ ಡೇಟ್ಸ್ ಇತ್ತು. ಆ ಡೇಟ್‌ಗೆ ಅವರು ಸಿನಿಮಾ ಮಾಡಲೇಬೇಕಾಯ್ತು. ಆಗ ಬೇರೆ ನಿರ್ದೇಶಕರ ಜೊತೆಗೆ ಸಿನಿಮಾ ಮಾಡಿದರು. ಒಳ್ಳೆ ಸಿನಿಮಾ ಆಯ್ತು. ಹಿಟ್ ಆಯ್ತು. 'ರಾಬರ್ಟ್' ಟೀಮ್‌ಗೆ ಒಳ್ಳೆಯದಾಗಲಿ ಅಂತ ಮೊದಲು ರಿಯಾಕ್ಟ್ ಮಾಡಿದ್ದೇ ರಕ್ಷಿತಾ. ದರ್ಶನ್ ಯಾವುದೇ ಸಿನಿಮಾ ಮಾಡಿದರೂ, ಮೊದಲು ಟ್ವೀಟ್ ಮಾಡಿ ನಾನಾಗಲಿ, ರಕ್ಷಿತಾ ಆಗಲಿ ಶುಭ ಹಾರೈಸುತ್ತೇವೆ'' - ಪ್ರೇಮ್, ನಿರ್ದೇಶಕ

ಉಮಾಪತಿ ಶ್ರೀನಿವಾಸ್ ದೊಡ್ಮನೆ ಆಸ್ತಿ ವಿಷಯ ತೆಗೆಯದೆ ಇದ್ದಿದ್ದರೆ ಇನ್ನೂ ಕೂಲ್ ಆಗಿರ್ತಿದ್ದೆ: ದರ್ಶನ್!

ರಕ್ಷಿತಾಗೂ ಹರ್ಟ್ ಆಗಿದೆ

''ಒಂದುಕಡೆ ಗಂಡ, ಇನ್ನೊಂದು ಕಡೆ ಕ್ಲೋಸ್ ಫ್ರೆಂಡ್. ಹೀಗಿರುವಾಗ ಪುಡಂಗು ಅಂದಾಗ ರಕ್ಷಿತಾಗೆ ಹರ್ಟ್ ಆಗಿದೆ. ಅಷ್ಟುಬಿಟ್ಟರೆ ಇನ್ನೇನೂ ಇಲ್ಲ. ಇದನ್ನ ಇನ್ನಷ್ಟು ಎಳೆಯುವ ಅವಶ್ಯಕತೆ ಇಲ್ಲ''

''ಒಂದು ಪ್ರಯೋಗ ಮಾಡೋಣ ಅಂತ ಒಂದು ಕಂಟೆಂಟ್ ಹೇಳಿದ್ದೆ ದರ್ಶನ್‌ಗೆ. ನನ್ನ ಅವರ ಫ್ರೆಂಡ್‌ಶಿಪ್ ಬೇರೆ, ಸಿನಿಮಾನೇ ಬೇರೆ. ನನಗೆ ಹರ್ಟ್ ಆಗಿದ್ದಕ್ಕೆ, ನನ್ನ ನೋವನ್ನು ಪತ್ರದ ಮೂಲಕ ವ್ಯಕ್ತಪಡಿಸಿದ್ದೇನೆ ಅಷ್ಟೆ. ನಿರ್ದೇಶಕರಿಗೆ ಯಾವತ್ತೂ ಯಾರೂ ಹೀಗೆ ಮಾತನಾಡಬಾರದು ಅನ್ನೋದು ಕಳಕಳಿಯ ಮನವಿ''

''ನನಗೆ ಕೊಂಬು ಬರಲಿಲ್ಲ. ರಾಜ್‌ಕುಮಾರ್ ಬೆನ್ನು ತಟ್ಟಿದರು. ದರ್ಶನ್ ಯಾಕೆ ಹಾಗೆ ಮಾತನಾಡಿದರು ಅನ್ನೋದು ನನಗೆ ಗೊತ್ತಿಲ್ಲ. ಫ್ಲೋನಲ್ಲಿ ಏನೋ ಮಾತಾಡಿರಬೇಕು ಅಂತ ಸುಮಾರು ಜನ ಹೇಳಿದರು. ಫ್ಯಾನ್ಸ್ ಕೂಡ ತಪ್ಪು ತಿಳಿದುಕೊಳ್ಳಬೇಡಿ ಎಂದರು. ಯಾರೂ ಏನೂ ಕ್ಷಮೆ ಕೇಳುವುದು ಬೇಡ ನನಗೆ'' - ಪ್ರೇಮ್, ನಿರ್ದೇಶಕ

ದರ್ಶನ್ ಹಾರ್ಟ್ ಮಗು ತರಹ!

''ದರ್ಶನ್ ಅವರ ಇನ್ನೊಂದು ಮುಖ ಇದೆ. ದರ್ಶನ್‌ನ ಎಷ್ಟು ರೂಡ್ ಆಗಿ ಕಂಡರೂ, ಅಷ್ಟೇ ಮೃದು ಅವರು. ಅವರ ಹಾರ್ಟ್ ಮಗು ತರಹ. ನನಗೆ ಅವರು ತುಂಬಾ ಒಳ್ಳೆಯ ಫ್ರೆಂಡ್. ಈ ಸಂದರ್ಭದಲ್ಲಿ ನನ್ನ ಹೆಸರು ಯಾಕೆ ಬಂತು? ನನ್ನ ಹೆಸರು ಬರಬಾರದಿತ್ತು. ಉಮಾಪತಿಯನ್ನು ಪರಿಚಯ ಮಾಡಿಕೊಟ್ಟಿದ್ದು ನಾನೇ. ಅದು ಸಿನಿಮಾಗಾಗಿ ಅಷ್ಟೇ'' - ಪ್ರೇಮ್, ನಿರ್ದೇಶಕ

ಕಾಲ್‌ಶೀಟ್‌ ಬಗ್ಗೆ ಮಾತು

''ಪ್ರೇಮ್ ಮೇಲಿನ ಪ್ರೀತಿಯಿಂದ ದರ್ಶನ್ ನೂರು ದಿನ ಕಾಲ್‌ಶೀಟ್ ಕೊಡ್ತಿದ್ದಾರೆ ಅಂತ ಮೀಡಿಯಾದಲ್ಲಿ ಬಂತು. ನೂರು ದಿನ ಅನ್ನೋದು ನನಗೆ ಗೊತ್ತಿಲ್ಲ. ನಾನು ನನ್ನದೇ ಆದ ಸ್ಟೈಲ್‌ನಲ್ಲಿ ಸಿನಿಮಾ ಮಾಡೋನು. ಅದು ನೂರು ದಿನ ಆಗುತ್ತೋ, ನೂರೈವತ್ತು ದಿನ ಆಗುತ್ತೋ, ಅದು ಗೊತ್ತಿಲ್ಲ ನನಗೆ. 70 ದಿನದಲ್ಲಿ ಸಿನಿಮಾ ಮಾಡಬೇಕು ಎಂಬ ಟಾರ್ಗೆಟ್ ಅವರಿಗಿದೆ. ಅಂಥವರು ಯಾರಾದರೂ ಇದ್ದರೆ ದರ್ಶನ್ ಜೊತೆ ಸಿನಿಮಾ ಮಾಡ್ತಾರೆ. ಅದರಲ್ಲಿ ತಪ್ಪೇನಿಲ್ಲ. ಆದರೆ ನಾನು ಹಾಗೆ ಮಾಡೋಕೆ ಆಗಲ್ಲ. ನನ್ನ ಸ್ಟೈಲೇ ಬೇರೆ. ಅವರ ಬಿಸಿನೆಸ್ ಅವರದ್ದು, ನನ್ನ ಬಿಸಿನೆಸ್ ನನ್ನದು''

ನನಗೂ ಸ್ವಾಭಿಮಾನ ಇದೆ

''ಕಲಾವಿದ ಬೆಳೆಯಬೇಕು ಅಂದ್ರೆ ನಿರ್ದೇಶಕ ಇರಲೇಬೇಕು. ಹೀಗಾಗಿ, ನಿರ್ದೇಶಕನೇ ಕ್ರಿಯೇಟರ್. ನಿರ್ದೇಶಕರನ್ನು ಹೀಯಾಳಿಸಬೇಡಿ. ದರ್ಶನ್ ಹಾಗೆ ಪುಡಂಗು ಅಂತ ಹೇಳಿದ್ದು ನನಗೆ ಹರ್ಟ್ ಆಯ್ತು. ನನಗೂ ಸ್ವಾಭಿಮಾನ ಅನ್ನೋದು ಇದೆ ಅಲ್ವಾ? ರಾಜ್‌ಕುಮಾರ್, ರಜಿನಿಕಾಂತ್ ನನಗೆ ಬೆನ್ನು ತಟ್ಟಿದ್ದಾರೆ. ಸಾವಿರ ಅಲ್ಲದೇ ಹೋದರೂ ನನಗೆ 10 ಜನ ಆದರೂ ಅಭಿಮಾನಿಗಳು ಇದ್ದಾರೆ. ನನಗೆ ನೋವಾಗಿದನ್ನು ಹೇಳಿದ್ದೇನೆ ಅಷ್ಟೇ''

''ಮನುಷ್ಯ ಯಾವತ್ತೂ ಏನನ್ನೂ ಹೊತ್ತುಕೊಂಡು ಹೋಗಲ್ಲ. ಇನ್ನೊಬ್ಬರ ಕಾಲೆಳೆಯುವುದು, ಇನ್ನೊಬ್ಬರನ್ನು ಕಿಂಡಲ್ ಮಾಡುವುದು, ಹರ್ಟ್ ಮಾಡುವ ಅವಶ್ಯಕತೆ ಇರುವುದಿಲ್ಲ. ಕೊರೊನಾ ಬಂದ್ಮೇಲೆ ಯಾವಾಗ ಹೇಗೆ ಅಂತಲೇ ಗೊತ್ತಿಲ್ಲ. ಅಂಥದ್ರಲ್ಲಿ ಕುಸ್ತಿ ಮಾಡೋದಕ್ಕಿಂತ ಅದೇ ಎನರ್ಜಿಯನ್ನ ಸಿನಿಮಾಗೆ ಹಾಕೋದು ಒಳ್ಳೆಯದು'' ಎಂದು ನಿರ್ದೇಶಕ ಪ್ರೇಮ್ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌