ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ತಿಪಟೂರು ರಘು ನಿಧನರಾಗಿದ್ದಾರೆ. ಶ್ವಾಸಕೋಶ ಸೋಂಕು ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ತಿಪಟೂರು ರಘು ಶಂಕರಮಠದಲ್ಲಿನ ತಮ್ಮ ನಿವಾಸದಲ್ಲಿ ವಿಧಿವಶರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. 80ರ ದಶಕದಲ್ಲಿ ಕನ್ನಡ ಚಿತ್ರರಂಗಕ್ಕೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿದ್ದವರು ತಿಪಟೂರು ರಘು. ಸಾಹಸ ಸಿಂಹ ಡಾ.ವಿಷ್ಣುವರ್ಧನ್ಗೆ 'ಕಲ್ಲುವೀಣೆ ನುಡಿಯಿತು', 'ನಾಗ ಕಾಳ ಭೈರವ', 'ಬೆಂಕಿ ಬಿರುಗಾಳಿ' ಅಂತಹ ಹಿಟ್ ಚಿತ್ರಗಳನ್ನು ತಿಪಟೂರು ರಘು ನಿರ್ದೇಶನ ಮಾಡಿದ್ದರು.
'ಹಳ್ಳಿಯ ಸುರಾಸುರರು', 'ಲೇಡೀಸ್ ಹಾಸ್ಟೆಲ್', 'ಆಕ್ರೋಶ', 'ಗಜೇಂದ್ರ' ಮುಂತಾದ ಚಿತ್ರಗಳಿಗೆ ತಿಪಟೂರು ರಘು ಆಕ್ಷನ್ ಕಟ್ ಹೇಳಿದ್ದರು. ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಡೈನಾಮಿಕ್ ಹೀರೋ ದೇವರಾಜ್ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಖ್ಯಾತಿ ತಿಪಟೂರು ರಘುರವರದ್ದು.
ಸುಮಾರು 16 ಚಿತ್ರಗಳನ್ನು ನಿರ್ದೇಶಕ ಮಾಡಿದ್ದ ತಿಪಟೂರು ರಘು, ಡೈರೆಕ್ಟರ್ ಆದ್ಮೇಲೂ ಸಹಾಯಕ ನಿರ್ದೇಶಕ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. ಅನೇಕ ಚಿತ್ರಗಳಲ್ಲಿ ತಿಪಟೂರು ರಘು ಅಭಿನಯವನ್ನೂ ಮಾಡಿದ್ದರು. ತಿಪಟೂರು ರಘು ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.
'ಹಳ್ಳಿಯ ಸುರಾಸುರರು', 'ಲೇಡೀಸ್ ಹಾಸ್ಟೆಲ್', 'ಆಕ್ರೋಶ', 'ಗಜೇಂದ್ರ' ಮುಂತಾದ ಚಿತ್ರಗಳಿಗೆ ತಿಪಟೂರು ರಘು ಆಕ್ಷನ್ ಕಟ್ ಹೇಳಿದ್ದರು. ಡಾ.ವಿಷ್ಣುವರ್ಧನ್, ರೆಬೆಲ್ ಸ್ಟಾರ್ ಅಂಬರೀಶ್, ಕರಾಟೆ ಕಿಂಗ್ ಶಂಕರ್ ನಾಗ್, ಡೈನಾಮಿಕ್ ಹೀರೋ ದೇವರಾಜ್ ಚಿತ್ರಗಳಿಗೆ ನಿರ್ದೇಶನ ಮಾಡಿರುವ ಖ್ಯಾತಿ ತಿಪಟೂರು ರಘುರವರದ್ದು.
ಸುಮಾರು 16 ಚಿತ್ರಗಳನ್ನು ನಿರ್ದೇಶಕ ಮಾಡಿದ್ದ ತಿಪಟೂರು ರಘು, ಡೈರೆಕ್ಟರ್ ಆದ್ಮೇಲೂ ಸಹಾಯಕ ನಿರ್ದೇಶಕ, ಪ್ರೊಡಕ್ಷನ್ ಮ್ಯಾನೇಜರ್ ಆಗಿ ಕೆಲವು ಚಿತ್ರಗಳಿಗೆ ಕೆಲಸ ಮಾಡಿದ್ದರು. ಅನೇಕ ಚಿತ್ರಗಳಲ್ಲಿ ತಿಪಟೂರು ರಘು ಅಭಿನಯವನ್ನೂ ಮಾಡಿದ್ದರು. ತಿಪಟೂರು ರಘು ನಿಧನಕ್ಕೆ ಕನ್ನಡ ಚಿತ್ರರಂಗ ಕಂಬನಿ ಮಿಡಿದಿದೆ.