ಲವಲವಿಕೆ ಸುದ್ದಿಲೋಕ ಸ್ಯಾಂಡಲ್ವುಡ್ನ ಚಿತ್ರ ನಿರ್ದೇಶಕರ ಸಂಘಕ್ಕೆ ದೃಢೀಕರಣ ಅಧಿಕಾರಿಯನ್ನು ನೇಮಕ ಮಾಡಿರುವುದು ಕಾನೂನು ಬಾಹಿರ, ಈ ಅಧಿಕಾರಿಯನ್ನು ನೇಮಕ ಮಾಡಲು ಸರ್ಕಾರಕ್ಕೆ ಸುಳ್ಳು ಪತ್ರವನ್ನು ಬರೆದ ನಿರ್ದೇಶಕಿ ರೂಪಾ ಅಯ್ಯರ್ ಶ್ರೀವತ್ಸ ಅವರ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ ಎಂದು ನಿರ್ದೇಶಕರ ಸಂಘದ ಅಧ್ಯಕ್ಷ ಟೇಶಿ ವೆಂಕಟೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಬೆಂಗಳೂರಿನ ಜಯನಗರದಲ್ಲಿರುವ ನಿರ್ದೇಶಕರ ಸಂಘದ ಕಚೇರಿಯಲ್ಲಿ ಬುಧವಾರ ಸಂಘದ ಪದಾಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದರು. 'ನಾನು ನಿರ್ದೇಶಕರ ಸಂಘದ ಸಾಮಾನ್ಯ ಸಭೆಯಲ್ಲಿಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ. ಹಿಂದಿನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ನನಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಬ್ಯಾಂಕಿಗೂ ಪತ್ರ ಬರೆದಿದ್ದಾರೆ. ಜತೆಗೆ ಸಂಘದ ನಡಾವಳಿಗೂ ಸಹಿ ಹಾಕಿದ್ದಾರೆ. ಇವೆಲ್ಲವೂ ಇದ್ದರೂ ನಿರ್ದೇಶಕಿ ರೂಪಾ ಅಯ್ಯರ್ ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದೃಢೀಕರಣ ಅಧಿಕಾರಿಯನ್ನು ನೇಮಕ ಮಾಡುವಂತೆ ಮಾಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿಸಂಘಕ್ಕೆ ಆಡಳಿತಾತ್ಮಕ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ' ಎಂದು ಟೇಶಿ ವೆಂಕಟೇಶ್ ಹೇಳಿದರು.
'ಹಿಂದಿನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಕೂಡ ಅಧಿಕಾರ ಹಸ್ತಾಂತರ ಮಾಡಿದ 45 ದಿನದ ನಂತರ ನೊಂದಣಿ ಅಧಿಕಾರಿಗೆ ನಾನು ಅನಧಿಕೃತವಾಗಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದೇನೆ ಎಂದು ದೂರು ನೀಡಿದ್ದರು. ಇದು ಸಹ ತಪ್ಪು. ನಿರ್ದೇಶಕರಾದ ಎಂ. ಡಿ. ಕೌಶಿಕ್, ರೂಪಾ ಅಯ್ಯರ್, ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಸೇರಿದಂತೆ ಒಂದಷ್ಟು ಮಂದಿ ಸೇರಿಕೊಂಡು ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ವೆಂಕಟೇಶ್ ಹೇಳಿದರು.
ಚಿತ್ರೋದ್ಯಮದ ಕಾರ್ಮಿಕರಿಗೆ ಉಚಿತ ಅಕ್ಕಿ ನೀಡಿ: ಸರ್ಕಾರಕ್ಕೆ ಸುನೀಲ್ ಪುರಾಣಿಕ್ ಮನವಿ
'ನಿರ್ದೇಶಕರ ಸಂಘ ಕಳೆದ ಲಾಕ್ಡೌನ್ನಲ್ಲೂ ಸಂಘದ ಸದಸ್ಯರಿಗೆ ಫುಡ್ ಕಿಟ್ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡಿದೆ. ಈಗಲೂ ಸದಸ್ಯರಿಗಾಗಿ ಊಟದ ಕೂಪನ್ಗಳನ್ನು ವಿತರಿಸುತ್ತಿದ್ದೇವೆ. ಸದಸ್ಯರಿಗಾಗಿ ಕೆಲಸ ಮಾಡುತ್ತಿರುವ ಸಂಘದ ಅಸ್ತಿತ್ವವನ್ನೇ ಇಲ್ಲದಂತೆ ಮಾಡಲು ಹೊರಟಿರುವ ಇವರಾರಯರಿಗೂ ನೈತಿಕತೆ ಇಲ್ಲ. ಇದರಲ್ಲಿ ಸುನೀಲ್ ಪುರಾಣಿಕ್ ಸಹ ಸೇರಿರುವುದು ಬೇಸರದ ಸಂಗತಿ. ಎಲ್ಲರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ' ಎಂದು ವೆಂಕಟೇಶ್ ಹೇಳಿದರು.
ನಿರ್ದೇಶಕಿ ರೂಪಾ ಅಯ್ಯರ್ ಸೂಚಿಸಿರುವ ಈ 'ಐದು' ಸಿನಿಮಾಗಳನ್ನು ನೋಡಿ
ಅವರು ಬೆಂಗಳೂರಿನ ಜಯನಗರದಲ್ಲಿರುವ ನಿರ್ದೇಶಕರ ಸಂಘದ ಕಚೇರಿಯಲ್ಲಿ ಬುಧವಾರ ಸಂಘದ ಪದಾಧಿಕಾರಿಗಳ ಜತೆ ಸುದ್ದಿಗೋಷ್ಠಿ ನಡೆಸಿದರು. 'ನಾನು ನಿರ್ದೇಶಕರ ಸಂಘದ ಸಾಮಾನ್ಯ ಸಭೆಯಲ್ಲಿಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ. ಹಿಂದಿನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಅವರು ನನಗೆ ಅಧಿಕೃತವಾಗಿ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಬ್ಯಾಂಕಿಗೂ ಪತ್ರ ಬರೆದಿದ್ದಾರೆ. ಜತೆಗೆ ಸಂಘದ ನಡಾವಳಿಗೂ ಸಹಿ ಹಾಕಿದ್ದಾರೆ. ಇವೆಲ್ಲವೂ ಇದ್ದರೂ ನಿರ್ದೇಶಕಿ ರೂಪಾ ಅಯ್ಯರ್ ಸರ್ಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ದೃಢೀಕರಣ ಅಧಿಕಾರಿಯನ್ನು ನೇಮಕ ಮಾಡುವಂತೆ ಮಾಡಿದ್ದಾರೆ ಮತ್ತು ಮುಂದಿನ ದಿನಗಳಲ್ಲಿಸಂಘಕ್ಕೆ ಆಡಳಿತಾತ್ಮಕ ಅಧಿಕಾರಿಯನ್ನು ನೇಮಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಇದು ಕಾನೂನು ಬಾಹಿರವಾಗಿದ್ದು, ಇದರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ' ಎಂದು ಟೇಶಿ ವೆಂಕಟೇಶ್ ಹೇಳಿದರು.
'ಹಿಂದಿನ ಅಧ್ಯಕ್ಷರಾದ ನಾಗೇಂದ್ರ ಪ್ರಸಾದ್ ಕೂಡ ಅಧಿಕಾರ ಹಸ್ತಾಂತರ ಮಾಡಿದ 45 ದಿನದ ನಂತರ ನೊಂದಣಿ ಅಧಿಕಾರಿಗೆ ನಾನು ಅನಧಿಕೃತವಾಗಿ ಅಧ್ಯಕ್ಷ ಸ್ಥಾನದಲ್ಲಿ ಕುಳಿತಿದ್ದೇನೆ ಎಂದು ದೂರು ನೀಡಿದ್ದರು. ಇದು ಸಹ ತಪ್ಪು. ನಿರ್ದೇಶಕರಾದ ಎಂ. ಡಿ. ಕೌಶಿಕ್, ರೂಪಾ ಅಯ್ಯರ್, ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಸೇರಿದಂತೆ ಒಂದಷ್ಟು ಮಂದಿ ಸೇರಿಕೊಂಡು ನನ್ನ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ' ಎಂದು ವೆಂಕಟೇಶ್ ಹೇಳಿದರು.
ಚಿತ್ರೋದ್ಯಮದ ಕಾರ್ಮಿಕರಿಗೆ ಉಚಿತ ಅಕ್ಕಿ ನೀಡಿ: ಸರ್ಕಾರಕ್ಕೆ ಸುನೀಲ್ ಪುರಾಣಿಕ್ ಮನವಿ
'ನಿರ್ದೇಶಕರ ಸಂಘ ಕಳೆದ ಲಾಕ್ಡೌನ್ನಲ್ಲೂ ಸಂಘದ ಸದಸ್ಯರಿಗೆ ಫುಡ್ ಕಿಟ್ ಸೇರಿದಂತೆ ವಿವಿಧ ರೀತಿಯ ಸಹಾಯ ಮಾಡಿದೆ. ಈಗಲೂ ಸದಸ್ಯರಿಗಾಗಿ ಊಟದ ಕೂಪನ್ಗಳನ್ನು ವಿತರಿಸುತ್ತಿದ್ದೇವೆ. ಸದಸ್ಯರಿಗಾಗಿ ಕೆಲಸ ಮಾಡುತ್ತಿರುವ ಸಂಘದ ಅಸ್ತಿತ್ವವನ್ನೇ ಇಲ್ಲದಂತೆ ಮಾಡಲು ಹೊರಟಿರುವ ಇವರಾರಯರಿಗೂ ನೈತಿಕತೆ ಇಲ್ಲ. ಇದರಲ್ಲಿ ಸುನೀಲ್ ಪುರಾಣಿಕ್ ಸಹ ಸೇರಿರುವುದು ಬೇಸರದ ಸಂಗತಿ. ಎಲ್ಲರ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ' ಎಂದು ವೆಂಕಟೇಶ್ ಹೇಳಿದರು.
ನಿರ್ದೇಶಕಿ ರೂಪಾ ಅಯ್ಯರ್ ಸೂಚಿಸಿರುವ ಈ 'ಐದು' ಸಿನಿಮಾಗಳನ್ನು ನೋಡಿ