ಆ್ಯಪ್ನಗರ

ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಸಭೆ ನಡೆಸಿದ್ದೇಕೆ ಕನ್ನಡದ ಸ್ಟಾರ್ ನಟರು?

ನಟ ಶಿವರಾಜ್‌ಕುಮಾರ್ ಅವರು ಪ್ರಸ್ತುತ ಚಂದನವನದ ಸಾರಥಿಯಾಗಿದ್ದಾರೆ. ಈಗ ಇವರ ನಿವಾಸದಲ್ಲಿ ಕನ್ನಡ ಚಿತ್ರರಂಗದ ಸ್ಟಾರ್ ನಟರು ಸೇರಿ ಮಾತುಕತೆ ನಡೆಸಿದ್ದಾರೆ. ಇದಕ್ಕೆ ಕಾರಣ ಏನು? ಸಭೆಯಲ್ಲಿ ಏನು ತೀರ್ಮಾನ ತೆಗೆದುಕೊಳ್ಳಲಾಯಿತು?

Vijaya Karnataka Web 29 Jul 2020, 3:09 pm
ಚಿತ್ರರಂಗದ ಸ್ಥಿತಿ ಗತಿ ಬಗ್ಗೆ ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಸಭೆ ನಡೆಸಲಾಗಿದೆ. ಶಿವರಾಜ್‌ಕುಮಾರ್ ಮನೆಯಲ್ಲಿ ಶಿವರಾಜ್ ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದೆ. ಚಿತ್ರರಂಗದ ನಾಯಕರ ಜೊತೆ ಶಿವರಾಜ್‌ಕುಮಾರ್ ಸಭೆ ಮಾಡಿದ್ದಾರೆ. ಈ ಸಭೆಯಲ್ಲಿ ನಟ ಪುನೀತ್ ರಾಜ್ ಕುಮಾರ್, ರವಿಚಂದ್ರನ್, ಯಶ್, ಉಪೇಂದ್ರ, ಗಣೇಶ್, ದುನಿಯಾ ವಿಜಯ್, ರಮೇಶ್ ಅರವಿಂದ್ , ರಕ್ಷಿತ್ ಶೆಟ್ಟಿ, ಶ್ರೀಮುರಳಿ, ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ, ಕಾರ್ತಿಕ್ ಗೌಡ, ಸೂರಪ್ಪ ಬಾಬು ಇನ್ನೂ ಅನೇಕರು ಭಾಗಿಯಾಗಿದ್ದರು.
Vijaya Karnataka Web kannada film stars meeting in shivarajkumar house
ನಟ ಶಿವರಾಜ್‌ಕುಮಾರ್ ಮನೆಯಲ್ಲಿ ಸಭೆ ನಡೆಸಿದ್ದೇಕೆ ಕನ್ನಡದ ಸ್ಟಾರ್ ನಟರು?


ಯಾವುದರ ಬಗ್ಗೆ ಚರ್ಚೆ ಮಾಡಲಾಗಿದೆ?
ಕಲಾವಿದರಿಂದ ಕಾರ್ಮಿಕರಿಗೆ ಏನೆಲ್ಲಾ ಸಹಾಯ ಮಾಡಬಹುದು ಎಂಬ ಬಗ್ಗೆ ಸುಮಾರು 3ಗಂಟೆಗಳ ಕಾಲ ಚರ್ಚೆ ನಡೆದಿದೆ. ನಟ ದರ್ಶನ್ ಮತ್ತು ಸುದೀಪ್ ಈ ಸಭೆಯಲ್ಲಿ ಭಾಗಿಯಾಗಿಲ್ಲ. ಇದಕ್ಕೆ ಕಾರಣ ಏನು ಎಂಬುದು ಕೂಡ ಬಹಿರಂಗವಾಗಿಲ್ಲ. ಸಭೆಯಲ್ಲಿ ಯಾವ ನಿರ್ಧಾರ ಕೈಗೊಳ್ಳಲಾಗಿ ಎಂಬುದು ಬಹಿರಂಗವಾಗಬೇಕಾಗಿದೆ. ಸಿಟಿ ರವಿ ಅವರು ಕೂಡ ಈ ಸಭೆಯಲ್ಲಿ ಪಾಲ್ಗೊಂಡಿದ್ದು, ಅವರಿಗೆ ಚಿತ್ರರಂಗ ವಿಶೇಷ ಮನವಿ ಮಾಡಿರುವ ಸಾಧ್ಯತೆ ಕೂಡ ಇದೆ.

ಸಿಟಿ ರವಿ ಹೇಳಿದ್ದೇನು?
'ಕಿರುತೆರೆ ಕಲಾವಿದರು, ಸಹಕಲಾವಿದರು, ಉದ್ಯಮದ ಅವಲಂಭಿಸಿರುವವರಿಗೆ ಪ್ಯಾಕೇಜ್ ನೀಡುವಂತೆ ಮನವಿ ಮಾಡಿದ್ದಾರೆ. ನಮ್ಮನ್ನೂ ಎಂಎಸ್‌ಎಂಇ ಅಡಿಯಲ್ಲಿ ಸೇರಿಸಬೇಕು ಎಂದು ಕೇಳ್ಕೊಂಡಿದ್ದಾರೆ. ತೆರಿಗೆ ವಿನಾಯ್ತಿ ಸೇರಿದಂತೆ ಹಲವು ಬೇಡಿಕೆ ಸಲ್ಲಿಸಿದ್ದಾರೆ. ಸಿಎಂ ಜೊತೆ ಸೇರಿ ಸಭೆ ಮಾಡುತ್ತೇವೆ. ಥಿಯೇಟರ್ ಆರಂಭ ಮಾಡುವ ವಿಚಾರ ಕೇಂದ್ರ ಸರ್ಕಾರ ತೀರ್ಮಾನ ಮಾಡುತ್ತದೆ. ರಾಜ್ಯಗಳು ತೀರ್ಮಾನ ಮಾಡೋಕೆ ಆಗಲ್ಲ. ಜಿಮ್ ಆರಂಭ ಮಾಡುವ ಬಗ್ಗೆ ಕೇಂದ್ರ ತೀರ್ಮಾನ ಮಾಡುತ್ತದೆ. ಯಕ್ಷಗಾನ ಕಲಾವಿದರು, ಡ್ರಾಮಾ ಕಲಾವಿದರು ಭೇಟಿ ಮನವಿ ಮಾಡಿದ್ದಾರೆ. ನಾನು ಏಕಾಂಗಿಯಾಗಿ ಏನು ತೀರ್ಮಾನ ಮಾಡೋಕೆ ಆಗಲ್ಲ' ಎಂದು ಸಿಟಿ ರವಿ ಹೇಳಿದ್ದಾರೆ.

ಚಂದನವನದ ನೂತನ ಸಾರಥಿ ಶಿವಣ್ಣ
ಡಾ. ರಾಜ್‌ಕುಮಾರ್, ಅಂಬರೀಷ್ ಕಾಲವಾದಮೇಲೆ ಕನ್ನಡ ಚಿತ್ರರಂಗವನ್ನು ಮುನ್ನೆಡೆಸುವವರು ಯಾರು? ಎಂಬ ಪ್ರಶ್ನೆ ಎದ್ದಿತ್ತು. ಚಂದನವನದ ನೂತನ ಸಾರಥಿ ಶಿವರಾಜ್‌ಕುಮಾರ್ ಎಂಬುದು ಕೆಲದಿನಗಳ ಹಿಂದೆ ಬಹಿರಂಗವಾಗಿದೆ. ಜುಲೈ 24ರ ಶುಕ್ರವಾರ ಶಿವರಾಜ್‌ಕುಮಾರ್ ಅವರ ನಾಗವಾರದಲ್ಲಿರುವ ನಿವಾಸದಲ್ಲಿ ಚಿತ್ರರಂಗದ ಪ್ರಮುಖರೆಲ್ಲ ಸೇರಿ ಸಭೆ ಮಾಡಿದ್ದರು. 'ನಮ್ಮ ಮುಂದಿರುವ ಸಮಸ್ಯೆಗಳನ್ನು ಹೇಗೆ ಬಗೆಹರಿಸಿಕೊಳ್ಳಬೇಕು. ಸರ್ಕಾರದ ಮುಂದೆ ಹೋಗುವುದಕ್ಕೂ ಮೊದಲು ನಾವು ಏನು ಮಾಡಬೇಕು ಎಂಬುದರ ಬಗ್ಗೆ ಚರ್ಚೆ ಮಾಡಿದ್ದೇವೆ. ಶೂಟಿಂಗ್‌ ಶುರು ಮಾಡಬೇಕು ಎಂದರೆ ಏನು ಮಾಡಬೇಕು? ಐದು ತಿಂಗಳಿಂದ ಅನೇಕರು ಕೆಲಸವಿಲ್ಲದೇ ಇದ್ದಾರೆ. ಅವರಿಗೆ ಮೊದಲು ಏನು ಮಾಡಬೇಕು ಎಂಬ ಬಗ್ಗೆ ಆಲೋಚಿಸಬೇಕು' ಎಂದು ಮಾಧ್ಯಮಗಳ ಮುಂದೆ ಶಿವಣ್ಣ ಹೇಳಿದ್ದರು.

ALso Read-'ಎಲ್ಲರನ್ನು ಸರಿಸಮನಾಗಿ ಕಾಣುವವನೇ ನಿಜವಾದ ಲೀಡರ್'- ನಟ ಶಿವರಾಜ್‌ಕುಮಾರ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌