ಆ್ಯಪ್ನಗರ

Puneeth: 'ಯುವರತ್ನ' ಚಿತ್ರದ ಈ ಕಲರ್‌ಫುಲ್‌ ಸಾಂಗ್‌ನಲ್ಲಿ ಅಪ್ಪು ಜೊತೆ ಕಾವ್ಯಾ ಶೆಟ್ಟಿ ಡ್ಯಾನ್ಸ್!

'ಪವರ್ ಸ್ಟಾರ್‌' ಪುನೀತ್ ರಾಜ್‌ಕುಮಾರ್-ನಿರ್ದೇಶಕ ಸಂತೋಷ್ ಆನಂದ್‌ರಾಮ್‌ ಕಾಂಬಿನೇಷನ್‌ನ 'ಯುವರತ್ನ' ಸಿನಿಮಾಗೆ ಶೂಟಿಂಗ್ ಪುನಃ ಆರಂಭಗೊಂಡಿದೆ. ನಟಿ ಕಾವ್ಯಾ ಶೆಟ್ಟಿ ಒಂದು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Vijaya Karnataka Web 26 Sep 2020, 9:13 pm
'ಪವರ್ ಸ್ಟಾರ್‌' ಪುನೀತ್ ರಾಜ್‌ಕುಮಾರ್ ಅಭಿನಯದ ಬಹುನಿರೀಕ್ಷಿತ 'ಯುವರತ್ನ' ಸಿನಿಮಾದ ಶೂಟಿಂಗ್ ಕೊರೊನಾ ವೈರಸ್‌, ಲಾಕ್‌ಡೌನ್ ಕಾರಣದಿಂದ ನಿಂತುಹೋಗಿತ್ತು. ಇದೀಗ ಹೊಸ ಎನರ್ಜಿಯೊಂದಿಗೆ ಇಡೀ ತಂಡ ಮತ್ತೆ ಶೂಟಿಂಗ್ ಶುರು ಮಾಡಿದೆ. 'ಯುವರತ್ನ' ಚಿತ್ರಕ್ಕೆ ಬಹುತೇಕ ಶೂಟಿಂಗ್ ಮುಕ್ತಾಯವಾಗಿತ್ತು. ಹಾಡುಗಳ ಚಿತ್ರೀಕರಣ ಬಾಕಿ ಉಳಿದಿತ್ತು. ಇದೀಗ ಅದು ಕೂಡ ಆರಂಭಗೊಂಡಿದೆ.
Vijaya Karnataka Web Kavya Shetty


ಅಪ್ಪು ಜೊತೆ ಕಾವ್ಯಾ ಶೆಟ್ಟಿ ಡ್ಯಾನ್ಸ್
'ಯುವರತ್ನ' ಚಿತ್ರದ ಇಂಟ್ರೋಡಕ್ಷನ್ ಸಾಂಗ್‌ನಲ್ಲಿ ಪುನೀತ್ ರಾಜ್‌ಕುಮಾರ್ ಜೊತೆ ಕಾವ್ಯಾ ಶೆಟ್ಟಿ ನಟಿಸಲಿದ್ದಾರೆ. ಈ ಬಗ್ಗೆ ಖುಷಿಯಿಂದಲೇ ಮಾಹಿತಿ ಹಂಚಿಕೊಳ್ಳುವ ಅವರು, 'ಇದೊಂದು ಹೈ ಎನರ್ಜಿಟಿಕ್ ಸಾಂಗ್ ಆಗಿದೆ. ವಿವಿಧ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಲಾಗುತ್ತದೆ. ಒಂದು ದಿನ ಗೋವಾದಲ್ಲೂ ಶೂಟಿಂಗ್ ಇರಲಿದೆ' ಎಂದು ಮಾಹಿತಿ ನೀಡಿದ್ದಾರೆ. ಈ ಹಾಡಿಗಾಗಿ ವಾರಕ್ಕೂ ಮೊದಲೇ ರಿಹರ್ಸಲ್ ಮಾಡಲಾಗಿದೆ. ಸಖತ್ ಸ್ಟೈಲಿಶ್ ಆಗಿ ಅವರು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

'ಬುಟ್ಟ ಬೊಮ್ಮ..' ಕೊರಿಯೋಗ್ರಫರ್!
ಈ ವರ್ಷ ತೆರೆಕಂಡ ತೆಲುಗಿನ ಅಲ್ಲು ಅರ್ಜುನ್ ಅಭಿನಯದ 'ಅಲಾ ವೈಕುಂಠಪುರಮುಲೋ' ಸಿನಿಮಾದ 'ಬುಟ್ಟ ಬೊಮ್ಮ..' ಹಾಡು ದೊಡ್ಡ ಹಿಟ್ ಆಗಿತ್ತು. ಅದರ ನೃತ್ಯ ಸಂಯೋಜನೆ ಮಾಡಿದ್ದ ಜಾನಿ ಮಾಸ್ಟರ್, 'ಯುವರತ್ನ' ಸಿನಿಮಾದ ಈ ಹಾಡಿಗೂ ಸ್ಟೆಪ್ ಹೇಳಿಕೊಡಲಿದ್ದಾರೆ. 'ಅಲಾ ವೈಕುಂಠಪುರಮುಲೋ' ಖ್ಯಾತಿಯ ಎಸ್ ಎಸ್ ಥಮನ್‌ ಇದಕ್ಕ ರಾಗ ಸಂಯೋಜನೆ ಮಾಡುತ್ತಿದ್ದಾರೆ. 'ಪವರ್ ***', 'ಚಕ್ರವ್ಯೂಹ' ನಂತರ ಮೂರನೇ ಬಾರಿಗೆ ಅವರು ಅಪ್ಪು ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

ಸೈಕಲ್‌ನಲ್ಲಿ ಬೆಂಗಳೂರು ರೌಂಡ್ ಹೊಡೆದ 'ಪವರ್‌ ಸ್ಟಾರ್' ಪುನೀತ್ ರಾಜ್‌ಕುಮಾರ್‌

ಇಂದಿನಿಂದ ಸಾಂಗ್ ಶೂಟ್ ಶುರು!
ಈ ಭರ್ಜರಿ ಸಾಂಗ್‌ನ ಚಿತ್ರೀಕರಣ ಇಂದಿನಿಂದ (ಸೆ.26) ಆರಂಭಗೊಂಡಿದೆ. ಅಗತ್ಯ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ಅದ್ದೂರಿ ಸೆಟ್‌ನಲ್ಲಿ ಶೂಟಿಂಗ್‌ ಸಾಗುತ್ತಿದೆ. ಅದರ ಒಂದು ಝಲಕ್‌ ಅನ್ನು ಹೊಂಬಾಳೆ ಸಂಸ್ಥೆ ಹಂಚಿಕೊಂಡಿದೆ. 'ರಾಜಕುಮಾರ' ನಂತರ ಸಂತೋಷ್ ಆನಂದ್‌ರಾಮ್‌ ಮತ್ತೊಮ್ಮೆ ಈ ಸಿನಿಮಾ ಮೂಲಕ ಪುನೀತ್‌ಗೆ ನಿರ್ದೇಶನ ಮಾಡುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ ನಾಯಕಿಯಾಗಿ ಸಾಯೇಶಾ ನಟಿಸುತ್ತಿದ್ದಾರೆ. ದಿಗಂತ್, ಧನಂಜಯ್, ಸೋನು ಗೌಡ, ಪ್ರಕಾಶ್ ರೈ ಸೇರಿದಂತೆ ಅನೇಕ ಅನುಭವಿ ಕಲಾವಿದರು ಇದರಲ್ಲಿ ಬಣ್ಣ ಹಚ್ಚಿದ್ದಾರೆ.

'ಪುನೀತ್ ರಾಜ್‌ಕುಮಾರ್ ನನಗೆ ಕನ್ನಡ ಕಲಿಸಿದ ಗುರು'- 'ಕೆಜಿಎಫ್‌' ನಟ ಜಾನ್ ಕೊಕ್ಕೆನ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌