ನಟ ಪ್ರಕಾಶ್ ರೈ ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ಫೇಮಸ್ ಆದ ನಟ. ತಮಿಳು, ತೆಲುಗಿನಲ್ಲಂತೂ ಅವರಿಗೆ ದೊಡ್ಡ ಫ್ಯಾನ್ ಫಾಲೋಯಿಂಗ್ ಇದೆ. ಸದ್ಯ ಅವರೊಂದು ಚಾಲೆಂಜ್ ಅನ್ನು ಕನ್ನಡದ ನಟ ರಕ್ಷಿತ್ ಶೆಟ್ಟಿಗೆ ನೀಡಿದ್ದಾರೆ. ಬರೀ ರಕ್ಷಿತ್ ಶೆಟ್ಟಿಗೆ ಮಾತ್ರವಲ್ಲ, ಮಲಯಾಳಂ ನಟ ಮೋಹನ್ ಲಾಲ್, ತಮಿಳು ತಾರೆಯರಾದ ಸೂರ್ಯ, ತ್ರಿಷಾ, ರಮ್ಯಾ ಕೃಷ್ಣ ಅವರಿಗೂ ಸೇರಿ ಒಂದು ಸವಾಲು ಹಾಕಿದ್ದಾರೆ! ಏನದು? ಗ್ರೀನ್ ಇಂಡಿಯಾ ಚಾಲೆಂಜ್!
ಟಿಆರ್ಎಸ್ ಸಂಸದ ಸಂತೋಷ್ ಕುಮಾರ್ ಆರಂಭಿಸಿರುವ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಈಚೆಗೆ ನಟ/ನಿರ್ದೇಶಕ ತನಿಕೆಳ್ಳ ಭರಣಿ ಸ್ವೀಕರಿಸಿದ್ದರು. ಅವರು ಸಸಿ ನೆಟ್ಟು, ಪ್ರಕಾಶ್ ರೈಗೆ ಆ ಚಾಲೆಂಜ್ ಅನ್ನು ದಾಟಿಸಿದ್ದರು. ಇದೀಗ ಅದನ್ನು ಸ್ವೀಕರಿಸಿರುವ ಪ್ರಕಾಶ್ ರೈ, ಪುತ್ರನೊಂದಿಗೆ ತಮ್ಮ ತೋಟದಲ್ಲಿ ಒಂದಷ್ಟು ಸಸಿಗಳನ್ನು ನೆಟ್ಟಿದ್ದಾರೆ. ಜೊತೆಗೆ ರಕ್ಷಿತ್ ಶೆಟ್ಟಿ, ಮೋಹನ್ ಲಾಲ್, ಸೂರ್ಯ, ತ್ರಿಷಾ, ರಮ್ಯಾ ಕೃಷ್ಣ ಅವರಿಗೆ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ದಾಟಿಸಿದ್ದಾರೆ. ಜೊತೆಗೆ ಇಂಥದ್ದೊಂದು ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದ ಸಂತೋಷ್ ಕುಮಾರ್ಗೆ ಪ್ರಕಾಶ್ ಧನ್ಯವಾದ ತಿಳಿಸಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ಈ ಚಾಲೆಂಜ್ ಸ್ವೀಕರಿಸಿ, ಯಾರನ್ನೆಲ್ಲ ನಾಮಿನೇಟ್ ಮಾಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರದ್ದು.
ಇನ್ನು, ಪ್ರಕೃತಿಯನ್ನು ನಾವೆಲ್ಲ ಕಾಪಾಡಬೇಕು ಎಂಬ ಸಂದೇಶವನ್ನು ಪ್ರಕಾಶ್ ರೈ ನೀಡಿದ್ದಾರೆ. ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ್ದಕ್ಕಾಗಿ ಪ್ರಕಾಶ್ಗೆ ಸಂಸದ ಸಂತೋಷ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಚಾಲೆಂಜ್ ಸ್ವೀಕರಿಸಿ, ಸಸಿಗಳನ್ನು ನೆಟ್ಟಿದ್ದಕ್ಕಾಗಿ ಪ್ರಕಾಶ್ ಅವರೇ ನಿಮಗೆ ಧನ್ಯವಾದಗಳು. ನೀವೆಂಥ ಅದ್ಭುತ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕೊಂಡರೆಡ್ಡಿಪಲ್ಲಿ ಗ್ರಾಮವನ್ನು ದತ್ತು ಪಡೆದು ನಿಮ್ಮ ಸುತ್ತಮುತ್ತ ಜನರಿಗೆ ನೀವು ಆಸರೆ ಆಗಿದ್ದೀರಿ' ಎಂದು ಹೊಗಳಿದ್ದಾರೆ.
ಹಲವು ಭಾಷೆ ಗೊತ್ತು, ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ, ಆದರೆ ನನ್ನ ಶಕ್ತಿ ಕನ್ನಡ: ಪ್ರಕಾಶ್ ರಾಜ್!
ಪ್ರಸ್ತುತ ಅವರು ಕನ್ನಡದ 'ಕೆಜಿಎಫ್ ಚಾಪ್ಟರ್ 2' ಹಾಗೂ 'ಯುವರತ್ನ' ಚಿತ್ರಗಳಲ್ಲಿ ಒಂದು ಮಹತ್ವದ ಪಾತ್ರಗಳನ್ನು ಮಾಡುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲಿ 'ನಾರಪ್ಪ', 'ಅಲ್ಲುಡು ಅಧುರ್ಸ್', 'ಪುಷ್ಪ', 'ವಕೀಲ್ ಸಾಬ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಜನಿಕಾಂತ್ ನಟಿಸುತ್ತಿರುವ 'ಅಣ್ಣಾಥೆ' ಸಿನಿಮಾದಲ್ಲೂ ಪ್ರಕಾಶ್ ಒಂದು ಇಂಪಾರ್ಟೆಂಟ್ ರೋಲ್ಗೆ ಜೀವ ತುಂಬಲಿದ್ದಾರೆ.
ಟಿಆರ್ಎಸ್ ಸಂಸದ ಸಂತೋಷ್ ಕುಮಾರ್ ಆರಂಭಿಸಿರುವ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ಈಚೆಗೆ ನಟ/ನಿರ್ದೇಶಕ ತನಿಕೆಳ್ಳ ಭರಣಿ ಸ್ವೀಕರಿಸಿದ್ದರು. ಅವರು ಸಸಿ ನೆಟ್ಟು, ಪ್ರಕಾಶ್ ರೈಗೆ ಆ ಚಾಲೆಂಜ್ ಅನ್ನು ದಾಟಿಸಿದ್ದರು. ಇದೀಗ ಅದನ್ನು ಸ್ವೀಕರಿಸಿರುವ ಪ್ರಕಾಶ್ ರೈ, ಪುತ್ರನೊಂದಿಗೆ ತಮ್ಮ ತೋಟದಲ್ಲಿ ಒಂದಷ್ಟು ಸಸಿಗಳನ್ನು ನೆಟ್ಟಿದ್ದಾರೆ. ಜೊತೆಗೆ ರಕ್ಷಿತ್ ಶೆಟ್ಟಿ, ಮೋಹನ್ ಲಾಲ್, ಸೂರ್ಯ, ತ್ರಿಷಾ, ರಮ್ಯಾ ಕೃಷ್ಣ ಅವರಿಗೆ ಗ್ರೀನ್ ಇಂಡಿಯಾ ಚಾಲೆಂಜ್ ಅನ್ನು ದಾಟಿಸಿದ್ದಾರೆ. ಜೊತೆಗೆ ಇಂಥದ್ದೊಂದು ಮಹತ್ಕಾರ್ಯಕ್ಕೆ ಚಾಲನೆ ನೀಡಿದ್ದ ಸಂತೋಷ್ ಕುಮಾರ್ಗೆ ಪ್ರಕಾಶ್ ಧನ್ಯವಾದ ತಿಳಿಸಿದ್ದಾರೆ. ಸದ್ಯ ರಕ್ಷಿತ್ ಶೆಟ್ಟಿ ಈ ಚಾಲೆಂಜ್ ಸ್ವೀಕರಿಸಿ, ಯಾರನ್ನೆಲ್ಲ ನಾಮಿನೇಟ್ ಮಾಡಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರದ್ದು.
ಇನ್ನು, ಪ್ರಕೃತಿಯನ್ನು ನಾವೆಲ್ಲ ಕಾಪಾಡಬೇಕು ಎಂಬ ಸಂದೇಶವನ್ನು ಪ್ರಕಾಶ್ ರೈ ನೀಡಿದ್ದಾರೆ. ಗ್ರೀನ್ ಇಂಡಿಯಾ ಚಾಲೆಂಜ್ ಸ್ವೀಕರಿಸಿದ್ದಕ್ಕಾಗಿ ಪ್ರಕಾಶ್ಗೆ ಸಂಸದ ಸಂತೋಷ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಚಾಲೆಂಜ್ ಸ್ವೀಕರಿಸಿ, ಸಸಿಗಳನ್ನು ನೆಟ್ಟಿದ್ದಕ್ಕಾಗಿ ಪ್ರಕಾಶ್ ಅವರೇ ನಿಮಗೆ ಧನ್ಯವಾದಗಳು. ನೀವೆಂಥ ಅದ್ಭುತ ನಟ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಕೊಂಡರೆಡ್ಡಿಪಲ್ಲಿ ಗ್ರಾಮವನ್ನು ದತ್ತು ಪಡೆದು ನಿಮ್ಮ ಸುತ್ತಮುತ್ತ ಜನರಿಗೆ ನೀವು ಆಸರೆ ಆಗಿದ್ದೀರಿ' ಎಂದು ಹೊಗಳಿದ್ದಾರೆ.
ಹಲವು ಭಾಷೆ ಗೊತ್ತು, ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ, ಆದರೆ ನನ್ನ ಶಕ್ತಿ ಕನ್ನಡ: ಪ್ರಕಾಶ್ ರಾಜ್!
ಪ್ರಸ್ತುತ ಅವರು ಕನ್ನಡದ 'ಕೆಜಿಎಫ್ ಚಾಪ್ಟರ್ 2' ಹಾಗೂ 'ಯುವರತ್ನ' ಚಿತ್ರಗಳಲ್ಲಿ ಒಂದು ಮಹತ್ವದ ಪಾತ್ರಗಳನ್ನು ಮಾಡುತ್ತಿದ್ದಾರೆ. ಜೊತೆಗೆ ತೆಲುಗಿನಲ್ಲಿ 'ನಾರಪ್ಪ', 'ಅಲ್ಲುಡು ಅಧುರ್ಸ್', 'ಪುಷ್ಪ', 'ವಕೀಲ್ ಸಾಬ್' ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ರಜನಿಕಾಂತ್ ನಟಿಸುತ್ತಿರುವ 'ಅಣ್ಣಾಥೆ' ಸಿನಿಮಾದಲ್ಲೂ ಪ್ರಕಾಶ್ ಒಂದು ಇಂಪಾರ್ಟೆಂಟ್ ರೋಲ್ಗೆ ಜೀವ ತುಂಬಲಿದ್ದಾರೆ.