'ರಾಕಿಂಗ್ ಸ್ಟಾರ್' ಯಶ್ ಈಗ ಬರೀ ಸ್ಯಾಂಡಲ್ವುಡ್ಗೆ ಮಾತ್ರವಲ್ಲ, ಪ್ಯಾನ್ ಇಂಡಿಯಾ ರೇಂಜ್ನಲ್ಲಿ ಜನಪ್ರಿಯರಾದ್ದಾರೆ. ಅವರ ಮುಂದಿನ ಸಿನಿಮಾ 'ಕೆಜಿಎಫ್: ಚಾಪ್ಟರ್ 2' ನೋಡುವುದಕ್ಕಾಗಿ ಇಡೀ ದೇಶದ ಸಿನಿಪ್ರಿಯರು ಕಾದುಕುಳಿತಿದ್ದಾರೆ. ಆ ಸಿನಿಮಾದ ಕೆಲಸಗಳನ್ನು ಮುಗಿಸಿರುವ ರಾಕಿ ಭಾಯ್, ಈಗ ಏನು ಮಾಡುತ್ತಿದ್ದಾರೆ? ಅದಕ್ಕುತ್ತರ ಈ ಫೋಟೋಗಳು! ಹೌದು, ಯಶ್ ಈಗ ಕೃಷಿ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಹಾಸನದಲ್ಲಿ ಬೀಡುಬಿಟ್ಟ ಯಶ್!
ಎಲ್ಲರಿಗೂ ಗೊತ್ತಿರುವಂತೆ, ಹಾಸನದ ತಿಮ್ಲಾಪುರ ಗ್ರಾಮದಲ್ಲಿ ಎರಡು ವರ್ಷದ ಹಿಂದೆ 80 ಎಕರೆ ಜಮೀನನ್ನು ಯಶ್ ಖರೀದಿಸಿದ್ದರು. ಅಲ್ಲಿ ಫಾರ್ಮ್ ಹೌಸ್ ಮಾಡಿ, ಅಲ್ಲಿಯೇ ಕೃಷಿ ಚಟುವಟಿಕೆ ಮಾಡಲು ರಾಕಿ ಭಾಯ್ ಮುಂದಾಗಿದ್ದಾರೆ. ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕೆಂದು ಉದ್ದೇಶ ಇಟ್ಟುಕೊಂಡಿದ್ದಾರೆ ಅವರು. ಅದಕ್ಕಾಗಿ ತಾವೇ ಖುದ್ದು ನಿಂತು ಜೆಸಿಬಿ ಮೂಲಕ ನೆಲವನ್ನು ಸಮತಟ್ಟು ಮಾಡಿಸುತ್ತಿದ್ದಾರೆ. ತೋಟದಲ್ಲಿ ನಿಂತು ಕೆಲಸ ಮಾಡಿಸುತ್ತಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಕೃಷಿ ಬಗ್ಗೆ ಯಶ್ಗೆ ಇರುವ ಆಸಕ್ತಿ ಕಂಡು ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಮುಂಗಾರಿಗೆ ಜಮೀನನ್ನು ಸಜ್ಜು ಮಾಡುತ್ತಿರುವ ರಾಕಿ ಭಾಯ್
ಏಪ್ರಿಲ್, ಮೇ ಕಳೆದರೆ ಮುಂಗಾರು ಶುರುವಾಗಲಿದೆ. ಅದು ಕೃಷಿ ಚಟುವಟಿಕೆ ಮಾಡಲು ಸಕಾಲ. ಅದಕ್ಕಾಗಿ ಈಗಿನಿಂದಲೇ ಎಲ್ಲ ರೀತಿಯಲ್ಲೂ ಜಮೀನನ್ನು ಸಜ್ಜು ಮಾಡುವುದಕ್ಕೆ ಯಶ್ ಮುಂದಾಗಿದ್ದಾರೆ. ಈ ಫಾರ್ಮ್ಹೌಸ್ನಲ್ಲಿ ಅವರು ಏನೆಲ್ಲ ಬೆಳೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಕೆಲ ದಿನಗಳ ಹಿಂದಷ್ಟೇ ಈ ಜಮೀನಿಗೆ ಸಂಬಂಧಿಸಿದಂತೆ ಒಂದು ಗಲಾಟೆ ಆಗಿತ್ತು. ಜಮೀನಿಗೆ ಹೋಗುವ ರಸ್ತೆ ಕುರಿತು ಹಳ್ಳಿಗರ ಜೊತೆ ಜಗಳವಾಗಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಸ್ವತಃ ಯಶ್ ಸ್ಥಳಕ್ಕೆ ಆಗಮಿಸಿ, ಮಾತನಾಡಿದ್ದರು.
ಪ್ರಭಾಸ್ ನಟನೆಯ 'ಸಲಾರ್' ಚಿತ್ರ ಮುಹೂರ್ತದಲ್ಲಿ ನಟ ಯಶ್, ಡಿಸಿಎಂ ಅಶ್ವತ್ಥ್ನಾರಾಯಣ ಭಾಗಿ!
ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ, 'ಕೆಜಿಎಫ್: ಚಾಪ್ಟರ್ 2' ಶೂಟಿಂಗ್ ಮಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಜುಲೈ 16ರಂದು ಅದ್ದೂರಿಯಾಗಿ ಸಿನಿಮಾವನ್ನು ಐದು ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ತಂಡ ರೆಡಿ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ಜೊತೆ ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಕಾಣಿಸಿಕೊಂಡಿದ್ದಾರೆ.
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಕಿರಿಕ್! ಹಾಸನಕ್ಕೆ ಭೇಟಿ ನೀಡಿ ನಟ ಯಶ್ ಹೇಳಿದ್ದೇನು?
ಎಲ್ಲರಿಗೂ ಗೊತ್ತಿರುವಂತೆ, ಹಾಸನದ ತಿಮ್ಲಾಪುರ ಗ್ರಾಮದಲ್ಲಿ ಎರಡು ವರ್ಷದ ಹಿಂದೆ 80 ಎಕರೆ ಜಮೀನನ್ನು ಯಶ್ ಖರೀದಿಸಿದ್ದರು. ಅಲ್ಲಿ ಫಾರ್ಮ್ ಹೌಸ್ ಮಾಡಿ, ಅಲ್ಲಿಯೇ ಕೃಷಿ ಚಟುವಟಿಕೆ ಮಾಡಲು ರಾಕಿ ಭಾಯ್ ಮುಂದಾಗಿದ್ದಾರೆ. ಮಾದರಿ ರೀತಿಯಲ್ಲಿ ಕೃಷಿ ಮಾಡಬೇಕೆಂದು ಉದ್ದೇಶ ಇಟ್ಟುಕೊಂಡಿದ್ದಾರೆ ಅವರು. ಅದಕ್ಕಾಗಿ ತಾವೇ ಖುದ್ದು ನಿಂತು ಜೆಸಿಬಿ ಮೂಲಕ ನೆಲವನ್ನು ಸಮತಟ್ಟು ಮಾಡಿಸುತ್ತಿದ್ದಾರೆ. ತೋಟದಲ್ಲಿ ನಿಂತು ಕೆಲಸ ಮಾಡಿಸುತ್ತಿರುವ ಫೋಟೋಗಳು ಸಖತ್ ವೈರಲ್ ಆಗುತ್ತಿವೆ. ಕೃಷಿ ಬಗ್ಗೆ ಯಶ್ಗೆ ಇರುವ ಆಸಕ್ತಿ ಕಂಡು ನೆಟ್ಟಿಗರು ಭೇಷ್ ಎನ್ನುತ್ತಿದ್ದಾರೆ.
ಮುಂಗಾರಿಗೆ ಜಮೀನನ್ನು ಸಜ್ಜು ಮಾಡುತ್ತಿರುವ ರಾಕಿ ಭಾಯ್
ಏಪ್ರಿಲ್, ಮೇ ಕಳೆದರೆ ಮುಂಗಾರು ಶುರುವಾಗಲಿದೆ. ಅದು ಕೃಷಿ ಚಟುವಟಿಕೆ ಮಾಡಲು ಸಕಾಲ. ಅದಕ್ಕಾಗಿ ಈಗಿನಿಂದಲೇ ಎಲ್ಲ ರೀತಿಯಲ್ಲೂ ಜಮೀನನ್ನು ಸಜ್ಜು ಮಾಡುವುದಕ್ಕೆ ಯಶ್ ಮುಂದಾಗಿದ್ದಾರೆ. ಈ ಫಾರ್ಮ್ಹೌಸ್ನಲ್ಲಿ ಅವರು ಏನೆಲ್ಲ ಬೆಳೆಯಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಇನ್ನು ಕೆಲ ದಿನಗಳ ಹಿಂದಷ್ಟೇ ಈ ಜಮೀನಿಗೆ ಸಂಬಂಧಿಸಿದಂತೆ ಒಂದು ಗಲಾಟೆ ಆಗಿತ್ತು. ಜಮೀನಿಗೆ ಹೋಗುವ ರಸ್ತೆ ಕುರಿತು ಹಳ್ಳಿಗರ ಜೊತೆ ಜಗಳವಾಗಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ ಮೇಲೆ ಸ್ವತಃ ಯಶ್ ಸ್ಥಳಕ್ಕೆ ಆಗಮಿಸಿ, ಮಾತನಾಡಿದ್ದರು.
ಪ್ರಭಾಸ್ ನಟನೆಯ 'ಸಲಾರ್' ಚಿತ್ರ ಮುಹೂರ್ತದಲ್ಲಿ ನಟ ಯಶ್, ಡಿಸಿಎಂ ಅಶ್ವತ್ಥ್ನಾರಾಯಣ ಭಾಗಿ!
ಇನ್ನು, ಸಿನಿಮಾ ವಿಚಾರಕ್ಕೆ ಬರುವುದಾದರೆ, 'ಕೆಜಿಎಫ್: ಚಾಪ್ಟರ್ 2' ಶೂಟಿಂಗ್ ಮಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಜುಲೈ 16ರಂದು ಅದ್ದೂರಿಯಾಗಿ ಸಿನಿಮಾವನ್ನು ಐದು ಭಾಷೆಗಳಲ್ಲಿ ರಿಲೀಸ್ ಮಾಡುವುದಕ್ಕೆ ಹೊಂಬಾಳೆ ಫಿಲ್ಮ್ಸ್ ತಂಡ ರೆಡಿ ಆಗಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾದಲ್ಲಿ ಯಶ್ ಜೊತೆ ಪ್ರಕಾಶ್ ರೈ, ಶ್ರೀನಿಧಿ ಶೆಟ್ಟಿ, ಸಂಜಯ್ ದತ್, ರವೀನಾ ಟಂಡನ್ ಕಾಣಿಸಿಕೊಂಡಿದ್ದಾರೆ.
ಜಮೀನಿಗೆ ರಸ್ತೆ ನಿರ್ಮಿಸುವ ವಿಚಾರಕ್ಕೆ ಕಿರಿಕ್! ಹಾಸನಕ್ಕೆ ಭೇಟಿ ನೀಡಿ ನಟ ಯಶ್ ಹೇಳಿದ್ದೇನು?