ಆ್ಯಪ್ನಗರ

ನಟ ಯಶ್ ನಂತರ ಪ್ರಶಾಂತ್ ನೀಲ್ ನಿರ್ದೇಶನ ಯಾರಿಗೆ? ಪ್ರಭಾಸ್‌ Or ಜೂ. ಎನ್‌ಟಿಆರ್?

'ಕೆಜಿಎಫ್' ನಂತರ ಪ್ರಶಾಂತ್ ನೀಲ್‌ ಅವರ ಮುಂದಿನ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. 'ಕೆಜಿಎಫ್' ನಂತರ ಅವರು ಯಾರಿಗೆ ನಿರ್ದೇಶನ ಮಾಡುತ್ತಾರೆ ಅನ್ನೋ ಕುತೂಹಲ ಸಿನಿಪ್ರಿಯರದ್ದು. ಸದ್ಯ ಆ ಬಗ್ಗೆ ನಿರ್ದೇಶಕರಿಂದಲೇ ಸ್ಪಷ್ಟನೆ ಸಿಕ್ಕಿದೆ.

Vijaya Karnataka Web 13 Oct 2020, 7:45 pm
'ಕೆಜಿಎಫ್: ಚಾಪ್ಟರ್ 1' ನಂತರ ಅದರ ಪಾರ್ಟ್ 2 ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟು ಹಾಕಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್. ಯಶ್‌ ನಾಯಕತ್ವದ 'ಕೆಜಿಎಫ್: ಚಾಪ್ಟರ್ 2' ನೋಡಲು ದೇಶ-ವಿದೇಶದ ಸಿನಿಪ್ರಿಯರು ಕಾದು ಕುಳಿತಿದ್ದಾರೆ. ಈಗಾಗಲೇ ಆ ಸಿನಿಮಾದ ಕೆಲಸಗಳು ಕೊನೇ ಹಂತದಲ್ಲಿವೆ. ಅಂದಹಾಗೆ, ಈ ಸಿನಿಮಾದ ನಂತರ ಪ್ರಶಾಂತ್‌ಗೆ ತೆಲುಗಿನ ದೊಡ್ಡ ದೊಡ್ಡ ಬ್ಯಾನರ್‌ಗಳು ಆಫರ್ ನೀಡಿವೆ. ವದಂತಿಗಳ ಪ್ರಕಾರ, ಜೂ. ಎನ್‌ಟಿಆರ್ ಅಥವಾ ಪ್ರಭಾಸ್‌ ಜೊತೆಗೆ ಪ್ರಶಾಂತ್ ಪ್ಯಾನ್ ಇಂಡಿಯಾ ಸಿನಿಮಾ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೆ, ಇವರಿಬ್ಬರಲ್ಲಿ ಯಾರೊಂದಿಗೆ ಪ್ರಶಾಂತ್ ಮುಂದಿನ ಸಿನಿಮಾ?
Vijaya Karnataka Web Jr NTR Prabhas


ಈ ಕುರಿತು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ ಪ್ರಶಾಂತ್. ಈಚೆಗೆ ನೆಟ್ಟಿಗರೊಬ್ಬರು, 'ಮುಂದಿನ ಸಿನಿಮಾ ಯಾರೊಂದಿಗೆ? ಪ್ರಭಾಸ್ ಅಥವಾ ಜೂ. ಎನ್‌ಟಿಆರ್‌? ನೀವಿನ್ನೂ ಅದನ್ನು ಹೇಳಿಲ್ಲ' ಎಂದು ಟ್ವೀಟ್ ಮಾಡಿದ್ದರು. ಅದಕ್ಕೆ ಉತ್ತರಿಸಿರುವ ಪ್ರಶಾಂತ್‌, 'ಕೆಜಿಎಫ್‌ 2' ಮೇಲಿರುವ ನನ್ನ ಜವಾಬ್ದಾರಿಗಳು ಮುಗಿದ ಮೇಲಷ್ಟೇ ನನ್ನ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಘೋಷಣೆ. ಧನ್ಯವಾದಗಳು...' ಎಂದಿದ್ದಾರೆ. ಅಲ್ಲಿಗೆ 'ಕೆಜಿಎಫ್‌ 2' ತೆರೆಕಾಣವವರೆಗೂ ಪ್ರಶಾಂತ್ ಮುಂದೆ ಯಾರೊಂದಿಗೆ ಸಿನಿಮಾ ಮಾಡಲಿದ್ದಾರೆ ಅನ್ನೋದು ಬಹಿರಂಗಗೊಳ್ಳುವುದಿಲ್ಲ ಅನ್ನೋದಂತು ನಿಜ.

ಅತ್ತ ಎನ್‌ಟಿಆರ್ ಮತ್ತು ಪ್ರಭಾಸ್ ಸಿಕ್ಕಾಪಟ್ಟೆ ಬ್ಯುಸಿ ಆಗಿದ್ದಾರೆ. ರಾಜಮೌಳಿಯ ಬಿಗ್‌ ಬಜೆಟ್ ಸಿನಿಮಾ 'ಆರ್‌ಆರ್‌ಆರ್'ನಲ್ಲಿ ಎನ್‌ಟಿಆರ್ ಬ್ಯುಸಿ ಆಗಿದ್ದಾರೆ. ಅದು ಮುಗಿಯೋಕೆ ಇನ್ನೂ ಸಮಯ ಬೇಕಿದೆ. ಈ ಮಧ್ಯೆ ನಿರ್ದೇಶಕ ತ್ರಿವಿಕ್ರಮ್‌ ಶ್ರೀನಿವಾಸ್ ಜೊತೆ ಹೊಸ ಸಿನಿಮಾವನ್ನು ಅವರು ಒಪ್ಪಿಕೊಂಡಿದ್ದಾರೆ. 'ಆರ್‌ಆರ್‌ಆರ್' ನಂತರ ಅವರು ಆ ಸಿನಿಮಾವನ್ನು ತಕ್ಷಣವೇ ಆರಂಭಿಸಲಿದ್ದಾರೆ. ಇನ್ನು, ಪ್ರಭಾಸ್‌ ಅವರಂತೂ ಒಂದಾದ ಮೇಲೊಂದು ಚಿತ್ರಗಳನ್ನು ಒಪ್ಪಿಕೊಳ್ಳುತ್ತಲೇ ಇದ್ದಾರೆ. ಸದ್ಯ ಅವರ ನಟನೆಯ 'ರಾಧೆ ಶ್ಯಾಮ್' ಶೂಟಿಂಗ್ ಕೊನೇ ಹಂತದಲ್ಲಿದೆ. ಆನಂತರ ದೀಪಿಕಾ ಪಡುಕೋಣೆ ಅವರೊಂದಿಗೆ ಸಿನಿಮಾ ಮಾಡಲಿದ್ದಾರೆ. ಅದಕ್ಕೆ ನಾಗ್‌ ಅಶ್ವಿನ್‌ ನಿರ್ದೇಶನ ಮಾಡಲಿದ್ದಾರೆ. 'ತಾನಾಜೀ' ನಿರ್ದೇಶಕ ಓಂ ರಾವುತ್ ಜೊತೆ 'ಆದಿಪುರುಷ್‌' ಸಿನಿಮಾವನ್ನು ಪ್ರಭಾಸ್ ಮಾಡಬೇಕಿದೆ.

Yash: 'ಕೆಜಿಎಫ್‌ 2' ಸೆಟ್‌ಗೆ ಸಂಜಯ್ ದತ್‌ ಎಂಟ್ರಿ ಯಾವಾಗ? ಸಿನಿಮಾಗೆ ಹೊಸ ರಿಲೀಸ್ ಡೇಟ್ ಫಿಕ್ಸ್!

ಸದ್ಯ 'ಕೆಜಿಎಫ್‌ 2' ಚಿತ್ರದ ಕೊನೇ ಹಂತದ ಕೆಲಸಗಳು ಪ್ರಗತಿಯಲ್ಲಿವೆ. ಕೆಲ ದಿನಗಳ ಹಿಂದಷ್ಟೇ ಮಂಗಳೂರಿನಲ್ಲಿ ಚಿತ್ರೀಕರಣ ನಡೆಸಿರುವ ಚಿತ್ರತಂಡ, ಈಗ ಬೆಂಗಳೂರು, ಹೈದರಬಾದ್‌ನಲ್ಲಿ ಶೂಟಿಂಗ್ ಮಾಡಲಿದೆ. ಅಕ್ಟೋಬರ್ ತಿಂಗಳಿನಲ್ಲೇ ಸಂಪೂರ್ಣ ಚಿತ್ರೀಕರಣ ಮಾಡುವ ಗುರಿಯನ್ನು ಇಟ್ಟುಕೊಂಡಿದೆ. ಮೂಲಗಳ ಪ್ರಕಾರ, 2021ರ ಜನವರಿಯಲ್ಲಿ ಸಂಕ್ರಾಂತಿಯಂದು ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌