ಆ್ಯಪ್ನಗರ

'ಕೋಬ್ರಾ' ನಿಶ್ಚಿತಾರ್ಥದ ಆಹ್ವಾನ ಪತ್ರಿಕೆ ಹಂಚಿಕೊಂಡ 'ಕೆಜಿಎಫ್' ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ!

ಯಶ್ ನಟನೆಯ 'ಕೆಜಿಎಫ್' ಸಿನಿಮಾದ ಹೀರೋಯಿನ್ ಶ್ರೀನಿಧಿ ಶೆಟ್ಟಿ ಅವರು ಟ್ವಿಟ್ಟರ್‌ನಲ್ಲಿ ನಿಶ್ಚಿತಾರ್ಥದ ಕುರಿತು ಇರುವ ವಿಡಿಯೋ ರಿಲೀಸ್ ಮಾಡುವ ಬಗ್ಗೆ ಬರೆದುಕೊಂಡಿದ್ದಾರೆ. ಇದು ಆಹ್ವಾನ ಪತ್ರಿಕೆ ರೀತಿಯೇ ತುಂಬ ವಿಶೇಷವಾಗಿ ಡಿಸೈನ್ ಆಗಿದ್ದು, ಒಮ್ಮೆಲೆ ಹಲವರಿಗೆ ಗೊಂದಲ ಮೂಡಿಸದೆ ಇರದು! ಹಾಗಾದರೆ ವಾಸ್ತವ ಏನು?

Vijaya Karnataka Web 26 Jun 2020, 9:54 pm
'ಕೆಜಿಎಫ್' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ 'ಮಿಸ್ ಸೂಪರ್‌ನ್ಯಾಶನಲ್' ಶ್ರೀನಿಧಿ ಶೆಟ್ಟಿ ಮೊದಲ ಸಿನಿಮಾದಲ್ಲಿಯೇ ಯಶ್‌ಗೆ ನಾಯಕಿಯಾದರು. ಅಷ್ಟೇ ಅಲ್ಲದೆ ಅವರ ಚೊಚ್ಚಲ ಸಿನಿಮಾ 'ಕೆಜಿಎಫ್' ಐದು ಭಾಷೆಗಳಲ್ಲಿ ತೆರೆ ಕಂಡು ಬಾಕ್ಸ್‌ ಆಫೀಸ್‌ನಲ್ಲಿ ಕಮಾಲ್ ಮಾಡಿತು. ಇದೇ ಖುಷಿಯೊಂದಿಗೆ 'ಕೆಜಿಎಫ್ 2' ಕೂಡ ಸಿದ್ಧವಾಗ್ತಿದೆ. ಈ ವೇಳೆ ಈ ನಟಿ ನಿಶ್ಚಿತಾರ್ಥದ ಆಹ್ವಾನ ಪತ್ರಿಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
Vijaya Karnataka Web kgf movie actress srinidhi shetty and chiyaan vikram starrer cobra film song will release
'ಕೋಬ್ರಾ' ನಿಶ್ಚಿತಾರ್ಥದ ಆಹ್ವಾನ ಪತ್ರಿಕೆ ಹಂಚಿಕೊಂಡ 'ಕೆಜಿಎಫ್' ಸಿನಿಮಾ ನಾಯಕಿ ಶ್ರೀನಿಧಿ ಶೆಟ್ಟಿ!


'ಕೋಬ್ರಾ'ದ ಹೀರೋ ಮತ್ತು ಹೀರೋಯಿನ್ ನಿಶ್ಚಿತಾರ್ಥದ ಹಾಡಿದು
ಅಯ್ಯೋ, ಶ್ರೀನಿಧಿ ಶೆಟ್ಟಿ ಮದುವೆಯಾಗುತ್ತಿದ್ದಾರಾ? ಎಂದು ಅಚ್ಚರಿ ಪಡಬೇಡಿ. ಶ್ರೀನಿಧಿ ರೀಲ್ ಲೈಫ್‌ನಲ್ಲಿ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದಾರೆ. ಕಾಲಿವುಡ್ ನಟ ಚಿಯಾನ್ ವಿಕ್ರಂ ನಟನೆಯ 'ಕೋಬ್ರಾ' ಸಿನಿಮಾದಲ್ಲಿ ಇವರೇ ನಾಯಕಿ. ಈ ಸಿನಿಮಾದ ಹಾಡೊಂದನ್ನು ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದ್ದು, ದಿನಾಂಕ ಕೂಡ ತಿಳಿಸಿದೆ. ಈ ಹಾಡು ಈ ಸಿನಿಮಾದ ಹೀರೋ ಮತ್ತು ಹೀರೋಯಿನ್‌ಗೆ ಸಂಬಂಧಪಟ್ಟಿರೋದರಿಂದ ವಿಶೇಷವಾದ ಆಹ್ವಾನ ಪತ್ರಿಕೆಯನ್ನು ಚಿತ್ರತಂಡ ರೆಡಿ ಮಾಡಿದೆ. ಇದನ್ನು ಒಮ್ಮೆಲೆ ನೋಡಿದವರಿಗೆ ಶ್ರೀನಿಧಿ ಶೆಟ್ಟಿ ನಿಜ ಜೀವನದ ಆಹ್ವಾನ ಪತ್ರಿಕೆ ಎಂದು ಅನಿಸದೇ ಇರದು.

ಜೂನ್ 29ಕ್ಕೆ ಹಾಡು ರಿಲೀಸ್
'ಕೋಬ್ರಾ' ಸಿನಿಮಾಕ್ಕೆ ಅಜಯ್ ನಿರ್ದೇಶನವಿದೆ. 'ತುಂಬಿ ತುಳ್ಳಾಲ್..' ಎಂಬ ಹಾಡು ಜೂನ್ 29ರ ಸೋಮವಾರ ಸಂಜೆ 5 ಗಂಟೆಗೆ ಸೋನಿ ಮ್ಯೂಸಿಕ್‌ನಲ್ಲಿ ಬಿಡುಗಡೆಯಾಗಲಿದೆ. ಎಆರ್‌ ರೆಹಮಾನ್ ಸಂಗೀತ ನಿರ್ದೇಶನವಿದೆ. ವಿವೇಕ್ ಅವರ ಸಾಹಿತ್ಯ ಈ ಹಾಡಿಗಿದೆ. 'ಕೋಬ್ರಾ' ಸಿನಿಮಾದ 70% ಶೂಟಿಂಗ್ ಕಂಪ್ಲೀಟ್ ಆಗಿದೆಯಂತೆ. ಲಾಕ್‌ಡೌನ್ ಮುಗಿಯುತ್ತಿದ್ದಂತೆ ಈ ಚಿತ್ರದ ಶೂಟಿಂಗ್ ಮುಗಿಯಲಿದೆ.

Also read-ರಾಕಿ ಭಾಯ್ ಚೆಲುವೆಗೆ ಖುಲಾಯಿಸಿದ ಅದೃಷ್ಟ! ಶ್ರೀನಿಧಿ ಶೆಟ್ಟಿ ಈಗೇನು ಮಾಡ್ತಿದ್ದಾರೆ ಗೊತ್ತಾ?

ಇರ್ಫಾನ್ ಪಠಾಣ್ ಅಭಿನಯದ 'ಕೋಬ್ರಾ' ಸಿನಿಮಾ
'ಕೋಬ್ರಾ'ದ ಫಸ್ಟ್‌ಲುಕ್ ರಿಲೀಸ್ ಆದಾಗಿನಿಂದ ಅಭಿಮಾನಿಗಳು ಈ ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದರು. 'ಕೋಬ್ರಾ'ದ ಶೂಟಿಂಗ್‌ ರಷ್ಯಾದಲ್ಲಿ ನಡೆಯುತ್ತಿರುವಾಗ ಕೊರೊನಾ ವೈರಸ್‌ನಿಂದಾಗಿ ಶೂಟಿಂಗ್ ಸ್ಥಗಿತವಾಗಿತ್ತು. ಸೆವೆನ್ ಸ್ಕ್ರೀನ್ ಸ್ಟುಡಿಯೋ ಬ್ಯಾನರ್‌ನಡಿಯಲ್ಲಿ ಲಲಿತ್ ಕುಮಾರ್ ಈ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಭಾರತೀಯ ಕ್ರಿಕೆಟಿಗ ಇರ್ಫಾನ್ ಪಠಾಣ್, ಮಿಯಾ ಜಾರ್ಜ್, ಕೆಎಸ್ ರವಿಕುಮಾರ್
ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

Also read-ರೆಟ್ರೋ ಲುಕ್‌ನಲ್ಲಿ ಶ್ರೀನಿಧಿ ಶೆಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌