ಆ್ಯಪ್ನಗರ

ಸಾಹಸ ಕಲಾವಿದರ ಸಂಘಕ್ಕೆ ಧನಸಹಾಯ ಮಾಡಿದ 'ಕಿಚ್ಚ' ಸುದೀಪ್‌

ಕಷ್ಟದಲ್ಲಿರುವ ಅನೇಕರಿಗೆ ನಟ 'ಕಿಚ್ಚ' ಸುದೀಪ್‌ ಅನೇಕ ಬಾರಿ ಸಹಾಯಹಸ್ತ ಚಾಚಿದ್ದಾರೆ. ಈ ಬಾರಿ ಅವರು ಕರ್ನಾಟಕ ಸಾಹಸ ಕಲಾವಿದರ ಸಂಘದ ಕಟ್ಟಡ ನಿರ್ಮಾಣಕ್ಕೆ ಅನುಕೂಲವಾಗುವಂತೆ ಧನಸಹಾಯ ಮಾಡಿದ್ದಾರೆ.

Vijaya Karnataka Web 5 Nov 2019, 8:16 pm
ಕನ್ನಡ ಚಿತ್ರರಂಗದಲ್ಲಿ ಹಲವಾರು ವಿಭಾಗಗಳಿವೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕರ್ನಾಟಕ ಚಲನಚಿತ್ರ ಕಲಾವಿದರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘ.. ಹೀಗೆ ಬೇರೆ ಬೇರೆ ಸಂಘಗಳಿವೆ. ಅದೇ ರೀತಿ ಸಾಹಸ ಕಲಾವಿದರು ಸೇರಿಕೊಂಡು ಕರ್ನಾಟಕ ಸಾಹಸ ಕಲಾವಿದರ ಸಂಘ ಮಾಡಿಕೊಂಡಿದ್ದಾರೆ. ಅದರ ಕೆಲಸಗಳಿಗ ಅನುಕೂಲವಾಗುವಂತೆ ಭವನವೊಂದನ್ನು ನಿರ್ಮಿಸಲಾಗುತ್ತಿದೆ. ಅದರ ಖಚ್ಚುವೆಚ್ಚಗಳಿಗೆ ನಟ 'ಕಿಚ್ಚ' ಸುದೀಪ್‌ ಸಹಾಯಹಸ್ತ ಚಾಚಿದ್ದಾರೆ.
Vijaya Karnataka Web ಸುದೀಪ್


View this post on Instagram Hi everyone..... today my friend and Super Star KICCHA SUDEEP sir gave 10 lacs rupees building fund to our Karnataka stunt union....Thank you so much sir...you are great... very thankful to you....from... Thriller Manju A post shared by Thriller Manju (@thriller.manju) on Nov 5, 2019 at 2:03am PST

ಹೌದು, ಕಟ್ಟಡ ನಿರ್ಮಾಣಕ್ಕೆ ಸಹಾಯವಾಗಲಿ ಎಂಬ ಉದ್ದೇಶದಿಂದ ಸುದೀಪ್‌ 10 ಲಕ್ಷ ರೂ.ಗಳನ್ನು ನೀಡಿದ್ದಾರೆ. ಸ್ವತಃ ಸಾಹಸ ನಿರ್ದೇಶಕರಾದ ಥ್ರಿಲ್ಲರ್ ಮಂಜು ಮತ್ತು ರವಿ ವರ್ಮ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. 'ನನ್ನ ಸ್ನೇಹಿತ/ಸೂಪರ್ ಸ್ಟಾರ್ 'ಕಿಚ್ಚ' ಸುದೀಪ್‌ ಅವರು ನಮ್ಮ ಕರ್ನಾಟಕ ಸಾಹಸ ಕಲಾವಿದರ ಸಂಘದ ಭವನಕ್ಕೆ ಅನುಕೂಲವಾಗಲೆಂದು 10 ಲಕ್ಷ ರೂ. ನೀಡಿದ್ದಾರೆ.' ಎಂದು ಅವರ ಧನ್ಯವಾದಗಳನ್ನು ತಿಳಿಸಿದ್ದಾರೆ. ಜತೆಗೆ ಸುದೀಪ್ ಜತೆಗಿನ ಹಳೆಯ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.


ಮತ್ತೋರ್ವ ಸಾಹಸ ನಿರ್ದೇಶಕ ರವಿವರ್ಮ ಕೂಡ ಪ್ರತಿಕ್ರಿಯೆ ಹಂಚಿಕೊಂಡಿದ್ದು, 'ಕರ್ನಾಟಕ ಸಾಹಸ ಕಲಾವಿದರ ಸಂಘಕ್ಕೆ 10 ಲಕ್ಷ ರೂ. ಧನಸಹಾಯ ನೀಡಿರುವ ಪ್ರೀತಿಯ ಸುದೀಪ್‌ ಅವರಿಗೆ ನಮ್ಮ ಕರ್ನಾಟಕ ಸಾಹಸ ಕಲಾವಿದರ ಸಂಘದ ಪರವಾಗಿ ತುಂಬು ಹೃದಯದ ಧನ್ಯವಾದಗಳು. ದೇವರು ನಿಮಗೆ ಆರೋಗ್ಯ, ಆಯುಷ್ಯ, ಐಶ್ವರ್ಯ,ಯಶಸ್ಸು ಕೊಡಲಿ ಎಂದು ಹಾರೈಸುತ್ತೇವೆ' ಎಂದು ಹೇಳಿಕೊಂಡಿದ್ದಾರೆ. ಸದ್ಯ ಕಟ್ಟಡ ನಿರ್ಮಾಣದ ಕೆಲಸಗಳು ಚಾಲ್ತಿಯಲ್ಲಿದ್ದು, ಮುಂದಿನ ವರ್ಷ ಪೂರ್ಣಗೊಳ್ಳಲಿದೆಯಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌