ಆ್ಯಪ್ನಗರ

ತಮ್ಮ ಸಿಬ್ಬಂದಿಯ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಿದ 'ಕಿಚ್ಚ' ಸುದೀಪ್‌! ಆ ಸ್ಪೆಷಲ್‌ ಗಿಫ್ಟ್ ಏನು?

ತಮ್ಮ ಸುತ್ತಮುತ್ತ ಇರುವವರನ್ನು ಬಹಳ ಪ್ರೀತಿಯಿಂದ ಕಾಣುವುದು 'ಕಿಚ್ಚ' ಸುದೀಪ್ ಅವರ ಗುಣ. ಇದೀಗ ಅವರು ತಮ್ಮ ಬಳಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಜನ್ಮದಿನವನ್ನು ಸ್ಮರಣೀಯವಾಗಿಸಿದ್ದಾರೆ. ಅದು ಹೇಗೆ ಅನ್ನೋದರ ಮಾಹಿತಿ ಇಲ್ಲಿದೆ.

Vijaya Karnataka Web 1 Jun 2020, 2:56 pm
ನಟ 'ಕಿಚ್ಚ' ಸುದೀಪ್‌ ಕೆಲ ದಿನಗಳ ಹಿಂದಷ್ಟೇ ತಮ್ಮ ಪುತ್ರಿ ಸಾನ್ವಿ ಬರ್ತ್‌ಡೇಯನ್ನು ಆಚರಿಸಿದ್ದಾರೆ. ಮಗಳಿಗೆ 16 ವರ್ಷ ತುಂಬಿದ್ದರಿಂದ ಈ ಬಾರಿ ಕೊಂಚ ವಿಶೇಷವಾಗಿಯೇ ಆಚರಣೆ ಮಾಡಿದ್ದರು. ಮಗಳಿಗಾಗಿ ಒಂದು ಹಾಡನ್ನು ಹಾಡಿದ್ದರು. ಮಗಳ ಹಳೆಯ ಫೋಟೋ, ವಿಡಿಯೋಗಳನ್ನು ಕೊಲಾಜ್ ಮಾಡಿ, ವಿಡಿಯೋ ಮಾಡಿದ್ದರು. ಸುದೀಪ್‌ ಮತ್ತು ಅವರ ಪತ್ನಿ ಪ್ರಿಯಾ ಅವರು ನೀಡಿದ ಈ ವಿಶೇಷ ಉಡುಗೊರೆ ಎಲ್ಲರ ಗಮನಸೆಳೆದಿತ್ತು. ನೆಟ್ಟಿಗರು ಅದಕ್ಕೆ ಸಿಕ್ಕಾಪಟ್ಟೆ ಮಚ್ಚುಗೆ ಸೂಚಿಸಿದ್ದರು. ಇದೀಗ ಸುದೀಪ್‌ ಮತ್ತೊಬ್ಬರ ಜನ್ಮದಿನವನ್ನು ಇದೇ ರೀತಿ ನೆನಪಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ತಮ್ಮ ಸಿಬ್ಬಂದಿಯೊಬ್ಬರ ಜನ್ಮದಿನಕ್ಕೆ ವಿಶೇಷವಾಗಿಯೇ ಶುಭ ಹಾರೈಸಿದ್ದಾರೆ.
Vijaya Karnataka Web ತಮ್ಮ ಸಿಬ್ಬಂದಿಯ ಜನ್ಮದಿನಕ್ಕೆ ವಿಶೇಷ ಉಡುಗೊರೆ ನೀಡಿದ ಕಿಚ್ಚ ಸುದೀಪ್‌! ಆ ಸ್ಪೆಷಲ್‌ ಗಿಫ್ಟ್ ಏನು?


ಹೌದು, ಅವರ ಬಳಿ ಕೆಲ ಮಾಡುತ್ತಿರುವ ಮಹದೇವ್‌ ಎಂಬುವವರ ಜನ್ಮದಿನ (ಜೂ 01) ಇಂದು. ಅದಕ್ಕಾಗಿ ಸುದೀಪ್‌ ಒಂದು ಬರ್ತ್‌ಡೇ ಸಾಂಗ್ ಅನ್ನು ತಮ್ಮ ಪಿಯಾನೋದಲ್ಲಿ ನುಡಿಸಿ, ಮಹದೇವ್‌ಗೆ ವಿಶ್‌ ಮಾಡಿದ್ದಾರೆ. ಆ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು, ಇಂದು ಯಾರೆಲ್ಲ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಿರೋ, ಅವರಿಗೂ ಶುಭಾಶಯಗಳು ಎಂದಿದ್ದಾರೆ.

ಇನ್ನು, ವಿಡಿಯೋದಲ್ಲಿ ಮಾತನಾಡಿರುವ ಸುದೀಪ್, 'ನನಗೆ ಬಹಳ ಬೇಕಾದ, ನನ್ನೊಟ್ಟಿಗೆ ಇರುವಂತಹ ನಮ್ಮ ಮಹದೇವ್‌ ಅವರ ಹುಟ್ಟುಹಬ್ಬ. ಅವರಿಗೋಸ್ಕರ ಈ ಹಾಡು.. ಜನ್ಮದಿನದ ಶುಭಾಶಯಗಳ ಮಹದೇವ್‌' ಎಂದು ಹಾರೈಸಿದ್ದಾರೆ. ಜೊತೆಗೆ ಪಿಯಾನೋದಲ್ಲಿ ಹಾಡನ್ನು ನುಡಿಸಿದ್ದಾರೆ. ಸದ್ಯ ಈ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ. ಸುದೀಪ್‌ ಗಿಟಾರ್ ನುಡಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿದೆ. ಈಗ ಅವರು ಪಿಯಾನೋವನ್ನು ಕೂಡ ಅಮೋಘವಾಗಿ ನುಡಿಸಬಲ್ಲರು ಎಂಬುದನ್ನು ತಿಳಿದು, ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.

ಸುದೀಪ್‌ ಪುತ್ರಿಗೆ ಈಗ ಎಷ್ಟು ವರ್ಷ? ಎದೆಯೆತ್ತರ ಬೆಳೆದಿರೋ ಕಿಚ್ಚನ ಕನಸಿಗೆ ಇಂದು ಜನ್ಮದಿನ!

ಇನ್ನು, ಸಿನಿಮಾ ವಿಷಯಕ್ಕೆ ಬರುವುದಾದರೆ, ಅವರ ನಟನೆಯ 'ಕೋಟಿಗೊಬ್ಬ 3' ಚಿತ್ರವು ಇಷ್ಟೊತ್ತಿಗೆ ತೆರೆಕಾಣಬೇಕಿತ್ತು. ಆದರೆ, ಕೊರೊನಾದಿಂದಾಗಿ ಅದು ತಡವಾಗಿದೆ. ಕೊರೊನಾ ಲಾಕ್‌ಡೌನ್ ಮುಗಿಯುತ್ತಿದ್ದಂತೆಯೇ ಆ ಸಿನಿಮಾ ತೆರೆಗೆ ಬರಲಿದೆ. ಸದ್ಯ ಅನೂಪ್‌ ಭಂಡಾರಿ ನಿರ್ದೇಶನದ 'ಫ್ಯಾಂಟಮ್‌' ಸಿನಿಮಾದ ಚಿತ್ರೀಕರಣದಲ್ಲಿ ಸುದೀಪ್ ತೊಡಗಿಕೊಂಡಿದ್ದರು. ಆದರೆ, ಲಾಕ್‌ಡೌನ್‌ನಿಂದಾಗಿ ಅದು ಕೂಡ ಸದ್ಯಕ್ಕೆ ನಿಂತಿದೆ.

ಮಗಳ ಜನ್ಮದಿನಕ್ಕೆ ಅದ್ಭುತ ಗಿಫ್ಟ್ ನೀಡಿದ 'ಕಿಚ್ಚ' ಸುದೀಪ್‌ ದಂಪತಿ! ಇದರ ಹಿಂದಿದೆ ವಾಸುಕಿ ವೈಭವ್ ಕೈಚಳಕ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌