ಆ್ಯಪ್ನಗರ

ಲೈನ್‌ ಮ್ಯಾನ್ ಬದುಕಿನ ಕುರಿತ ಸಿನಿಮಾಕ್ಕೆ ಚಾಮರಾಜನಗರದಲ್ಲಿ ಚಾಲನೆ‌

ಪರ್ಪಲ್ ರಾಕ್ ಸಂಸ್ಥೆ ಅಡಿಯಲ್ಲಿ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ 'ಲೈನ್‌ ಮ್ಯಾನ್' ಸಿನಿಮಾಗೆ ಹಣ ಹಾಕುತ್ತಿದ್ದು, ಈಚೆಗೆ ಈ ಸಿನಿಮಾಗೆ ಚಾಮರಾಜನಗರದಲ್ಲಿ ಚಾಲನೆ‌ ಸಿಕ್ಕಿದೆ.

Authored byಅವಿನಾಶ್ ಜಿ. ರಾಮ್ | Vijaya Karnataka Web 10 Aug 2022, 6:17 pm

ಹೈಲೈಟ್ಸ್‌:

  • ರಘು ಶಾಸ್ತ್ರೀ ನಿರ್ದೇಶನದ 'ಲೈನ್‌ ಮ್ಯಾನ್' ಸಿನಿಮಾ
  • 'ಲೈನ್‌ ಮ್ಯಾನ್' ಸಿನಿಮಾಕ್ಕೆ ಚಾಮರಾಜನಗರದಲ್ಲಿ ಮುಹೂರ್ತ
  • ಲೈನ್‌ ಮ್ಯಾನ್ ಬದುಕಿನ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web LINEMAN
ಲೈನ್‌ ಮ್ಯಾನ್ ಬದುಕಿನ ಕುರಿತ ಸಿನಿಮಾಕ್ಕೆ ಚಾಮರಾಜನಗರದಲ್ಲಿ ಚಾಲನೆ‌
ವಿದ್ಯುತ್ ಇಲಾಖೆಗಳಲ್ಲಿ ಕೆಲಸ ಮಾಡುವ ಲೈನ್ ಮ್ಯಾನ್‌ಗಳದ್ದು ಯಾವಾಗಲೂ ಕಷ್ಟ ಕೆಲಸ. ಅದರಲ್ಲೂ ಮಳೆಗಾಲದ ಸಮಯದಲ್ಲಂತೂ ಜೀವವನ್ನು ಪಣಕ್ಕಿಟ್ಟು ಅವರು ಕೆಲಸ ಮಾಡುತ್ತಾರೆ. ಇದೀಗ ಇಂತಹ ಲೈನ್ ಮ್ಯಾನ್‌ಗಳ ಕುರಿತ ಕಥೆಯನ್ನೇ ಸಿನಿಮಾ ಮಾಡೋದಕ್ಕೆ ಹೊರಟಿದ್ದಾರೆ ನಿರ್ದೇಶಕ ರಘು ಶಾಸ್ತ್ರೀ. ಇದೊಂದು ವಿಭಿನ್ನ ಕಥಾಹಂದರ ಇರುವಂತಹ ಸಿನಿಮಾ. ಈ ಚಿತ್ರಕ್ಕೆ 'ಲೈನ್‌ ಮ್ಯಾನ್‌' ಅಂತಲೇ ಶೀರ್ಷಿಕೆ ಇಡಲಾಗಿದೆ. ಈಚೆಗೆ ಚಾಮರಾಜನಗರದಲ್ಲಿ 'ಲೈನ್‌ ಮ್ಯಾನ್‌' ಚಿತ್ರಕ್ಕೆ ಮುಹೂರ್ತ ನೆರವೇರಿದೆ.
ಪೊಲೀಸ್ ಅಧಿಕಾರಿಯಿಂದ ಲೈನ್‌ ಮ್ಯಾನ್‌ಗೆ ಚಾಲನೆ
ಈ ಹಿಂದೆ ಆದರ್ಶ್ ಈಶ್ವರಪ್ಪ ನಿರ್ದೇಶನ ಮಾಡಿದ್ದ 'ಭಿನ್ನ' ಸಿನಿಮಾಕ್ಕೆ ಹಣ ಹಾಕಿದ್ದ ಪರ್ಪಲ್ ರಾಕ್ ಸಂಸ್ಥೆಯು ಆನಂತರ 'ಡಿಯರ್ ಸತ್ಯ' ಎಂಬ ಸಿನಿಮಾವನ್ನು ಸಹ ನಿರ್ಮಾಣವಾಗಿತ್ತು. ಈಗ ಸಂಸ್ಥೆಯ ಮೂರನೇ ಕಾಣಿಕೆಯಾಗಿ 'ಲೈನ್ ಮ್ಯಾನ್' ಚಿತ್ರ ಆರಂಭವಾಗಿದೆ. ಚಾಮರಾಜನಗರದ ಚಂದಕವಾಡಿಯಲ್ಲಿರುವ ಶ್ರೀಲಕ್ಷ್ಮೀ ದೇವಿ ದೇವಸ್ಥಾನದಲ್ಲಿ ಲೈನ್‌ ಮ್ಯಾನ್ ಚಿತ್ರಕ್ಕೆ ಮುಹೂರ್ತ ಸಮಾರಂಭ ನಡೆಯಿತು. ಚಾಮರಾಜನಗರ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶಿವಕುಮಾರ್ ಅವರು ಲೈನ್‌ ಮ್ಯಾನ್ ಚಿತ್ರಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು.

'ಮನೋಜ್ ನಮ್ಮ ಕುಟುಂಬದ ಹುಡುಗ..' ಎಂದು 'ಟಕ್ಕರ್' ಚಿತ್ರಕ್ಕೆ ಹಾರೈಸಿದ ಮೀನಾ ತೂಗುದೀಪ ಶ್ರೀನಿವಾಸ್
'ಟಕ್ಕರ್' ಖ್ಯಾತಿಯ ರಘು ಶಾಸ್ತ್ರೀ ನಿರ್ದೇಶನ
ಪರ್ಪಲ್ ರಾಕ್ ಸಂಸ್ಥೆ ಅಡಿಯಲ್ಲಿ ನಿರ್ಮಾಣವಾಗುತ್ತಿರುವ 'ಲೈನ್‌ ಮ್ಯಾನ್' ಸಿನಿಮಾಗೆ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಬಿಂಡಿಗನವಿಲೆ ಹಾಗೂ ಅಜಯ್ ಅಪರೂಪ್ ಹಣ ಹಾಕುತ್ತಿದ್ದಾರೆ. ವಿನಯ್‌ ರಾಜ್‌ಕುಮಾರ್ ಅಭಿನಯದ 'ರನ್ ಆಂಟೊನಿ' ಹಾಗೂ ಮನೋಜ್ ಮತ್ತು ರಂಜನಿ ರಾಘವನ್‌ ನಟನೆಯ 'ಟಕ್ಕರ್' ಚಿತ್ರಗಳಿಗೆ ನಿರ್ದೇಶನ ಮಾಡಿದ್ದ ರಘು ಶಾಸ್ತ್ರೀ ಅವರು 'ಲೈನ್‌ ಮ್ಯಾನ್‌'ಗೆ ಡೈರೆಕ್ಷನ್ ಮಾಡುತ್ತಿದ್ದಾರೆ.

ಹೊಸಬರ ಸಿನಿಮಾಕ್ಕೆ 'ಮೈಸೂರು' ಶೀರ್ಷಿಕೆ; ಟ್ರೈಲರ್ ಲಾಂಚ್ ಮಾಡಿ ಸಂಭ್ರಮಿಸಿದ ಚಿತ್ರತಂಡ
ಲೈನ್ ಮ್ಯಾನ್ ಬದುಕಿನ ಕಥೆ
'ಹಳ್ಳಿ ಕಡೆ ಪ್ರತಿ ದಿನವು ಬೀದಿ ದೀಪಗಳನ್ನು ಹಾಕುವ, ಆರಿಸುವ ಮತ್ತು ವಿದ್ಯುತ್‌ನಿಂದಾಗುವ ತೊಂದರೆಯನ್ನು ಸರಿಮಾಡುವಂತಹ ಒಬ್ಬ 'ಲೈನ್ ಮ್ಯಾನ್‌' ಸುತ್ತವೇ ಈ ಇಡೀ ಕಥೆ ಸಾಗಲಿದೆ. ಇದೊಂದು ವಿಭಿನ್ನ ಬಗೆಯ ಸ್ಕ್ರಿಪ್ಟ್‌ ಆಗಿದೆ. ಲೈನ್ ಮ್ಯಾನ್ ಪಾತ್ರದಲ್ಲಿ ತ್ರಿಗುಣ್ ಕಾಣಿಸಿಕೊಳ್ಳುತ್ತಿದ್ದಾರೆ' ಎಂದು ನಿರ್ದೇಶಕರು ಮಾಹಿತಿ ಹಂಚಿಕೊಳ್ಳುತ್ತಾರೆ.

ಶಾಸಕ ಜಮೀರ್ ಅಹ್ಮದ್ ಪುತ್ರನ ಮೊದಲ ಸಿನಿಮಾದ ಶೂಟಿಂಗ್ ಮುಕ್ತಾಯ! ಇಲ್ಲಿದೆ ಹೆಚ್ಚಿನ ಮಾಹಿತಿ
ರಾಮ್ ಗೋಪಾಲ್ ವರ್ಮ ಟೀಮ್‌ನ ಪ್ರತಿಭೆ ತ್ರಿಗುಣ್‌
ಅಂದಹಾಗೆ, ರಾಮ್ ಗೋಪಾಲ್ ವರ್ಮ ನಿರ್ದೇಶನದ 'ಕೊಂಡ' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿರುವ ತ್ರಿಗುಣ್ ಅವರಿಗೆ ಕನ್ನಡದಲ್ಲಿ ಇದು ಮೊದಲ ಸಿನಿಮಾ. ಹಿರಿಯ ನಟಿ ಬಿ. ಜಯಶ್ರೀ, ಮೈಕೋ ನಾಗರಾಜ್, ಹರಿಣಿ ಹಾಗೂ 'ತರ್ಲೆ ನನ್ಮಗ' ಖ್ಯಾತಿಯ ಅಂಜಲಿ‌ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಮಣಿಕಾಂತ್ ಕದ್ರಿ ಸಂಗೀತ ನೀಡುತ್ತಿದ್ದಾರೆ. ಶಾಂತಿ ಸಾಗರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಪ್ರಚುರ ಪಿ.ಪಿ., ಜ್ಯೋತಿ ರಘು ಶಾಸ್ತ್ರೀ ಹಾಗೂ ಮಣಿಕಾಂತ್ ಕದ್ರಿ ಅವರ ಸಹ ನಿರ್ಮಾಣವಿದೆ.
ಲೇಖಕರ ಬಗ್ಗೆ
ಅವಿನಾಶ್ ಜಿ. ರಾಮ್
'ವಿಜಯ ಕರ್ನಾಟಕ' ಡಿಜಿಟಲ್ ವಿಭಾಗದಲ್ಲಿ 2019ರ ಸೆಪ್ಟೆಂಬರ್‌ನಿಂದ ಪತ್ರಕರ್ತನಾಗಿ ಅವಿನಾಶ್ ಜಿ. ರಾಮ್ ಕೆಲಸ ಮಾಡುತ್ತಿದ್ದಾರೆ. ಚಿನ್ನದ ಪದಕದೊಂದಿಗೆ ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ ಕಳೆದ 10 ವರ್ಷಗಳಿಂದ ಸಿನಿಮಾ ವರದಿಗಾರರಾಗಿ ಕೆಲಸ ಮಾಡಿದ ಅನುಭವವಿದೆ. ರಾಜ್ಯಮಟ್ಟದ ಪತ್ರಿಕೆಯೊಂದರಲ್ಲಿ ನಾಲ್ಕು ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥರಾಗಿ ಅವಿನಾಶ್‌ ಕಾರ್ಯನಿರ್ವಹಿಸಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ಪ್ರವಾಸ, ಓದು, ಸಂಗೀತ ಕೇಳುವುದು ಇವರ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌