ಆ್ಯಪ್ನಗರ

ಪೊಲ್ಯಾಂಡ್‌ನಲ್ಲಿ 'ಕೋಟಿಗೊಬ್ಬ 3' ಚಿತ್ರತಂಡಕ್ಕೆ ಕಿರಿಕ್‌ ಮಾಡಿದ ಮುಂಬೈವಾಲಾ!

ಸುದೀಪ್‌ ನಟನೆಯ 'ಪೈಲ್ವಾನ್' ಚಿತ್ರಕ್ಕೆ ಪೈರಸಿ ಸಮಸ್ಯೆ ಎದುರಾಗಿತ್ತು. ಆದರೆ, ಇದೀಗ 'ಕೋಟಿಗೊಬ್ಬ 3' ಚಿತ್ರಕ್ಕೂ ಸಮಸ್ಯೆ ಎದುರಾಗಿದೆ. ಮುಂಬೈ ಮೂಲದ ಸಂಜಯ್ ಎಂಬುವವರು ಪೊಲ್ಯಾಂಡ್‌ನಲ್ಲಿ ಚಿತ್ರತಂಡಕ್ಕೆ ಕಿರಿಕ್‌ ಮಾಡಿದ್ದಾರೆ.

Vijaya Karnataka Web 15 Oct 2019, 11:34 am
'ಕಿಚ್ಚ' ಸುದೀಪ್‌ ಅಭಿನಯದ 'ಪೈಲ್ವಾನ್' ಚಿತ್ರ ಕೆಲ ದಿನಗಳ ಹಿಂದಷ್ಟೇ ತೆರೆಕಂಡಿತ್ತು. ಆದರೆ, ಬಿಡುಗಡೆಯಾದ ದಿನವೇ ಪೈರಸಿ ಭೂತ ಸಿನಿಮಾ ತಂಡಕ್ಕೆ ಭಾರಿ ಸಮಸ್ಯೆ ಉಂಟು ಮಾಡಿತ್ತು. ಅದರಿಂದ ಸಿನಿಮಾದ ಗಳಿಕೆಗೂ ಸಮಸ್ಯೆ ಉಂಟಾಗಿತ್ತು. ಇದೀಗ ಸುದೀಪ್‌ ನಟನೆಯ 'ಕೋಟಿಗೊಬ್ಬ 3' ಚಿತ್ರತಂಡಕ್ಕೆ ಸಮಸ್ಯೆ ಎದುರಾಗಿದೆ!
Vijaya Karnataka Web Sudeep

ಪೈಲ್ವಾನ್‌ಗೆ ಪ್ಯಾಕಪ್ ಹೇಳಿ 'ಕೋಟಿಗೊಬ್ಬ 3' ಸೆಟ್‌ನಲ್ಲಿ ಕಿಚ್ಚ
ಕಳೆದ ತಿಂಗಳು ಪ್ರಮುಖ ದೃಶ್ಯಗಳ ಚಿತ್ರೀಕರಣದ ಸಲುವಾಗಿ 'ಕೋಟಿಗೊಬ್ಬ 3' ಚಿತ್ರತಂಡ ಪೊಲ್ಯಾಂಡ್‌ಗೆ ಪ್ರಯಾಣಿಸಿತ್ತು. ಸೆ.25ರಿಂದ 10 ದಿನಗಳ ಕಾಲ ಶೂಟಿಂಗ್ ಇದ್ದಿದ್ದರಿಂದ ಮುಂಬೈನ ಸಂಜಯ್ ಪಾಲ್‌ ಎಂಬ ವ್ಯಕ್ತಿಗೆ ಅಲ್ಲಿ ಎಲ್ಲ ವ್ಯವಸ್ಥೆ ಮಾಡುವಂತೆ ಉಸ್ತುವಾರಿ ನೀಡಲಾಗಿತ್ತು. ಅದಕ್ಕಾಗಿ ಹಣವನ್ನು ಫಿಕ್ಸ್ ಮಾಡಿ, ಅಗ್ರಿಮೆಂಟ್ ಕೂಡ ಮಾಡಲಾಗಿತ್ತು. ಆದರೆ, ಇನ್ನೇನು ಶೂಟಿಂಗ್ ಮುಗಿಯುತ್ತಿದೆ ಎಂದಾಗ ಸಂಜಯ್ ಬ್ಲಾಕ್‌ಮೇಲ್ ಮಾಡೋಕೆ ಶುರು ಮಾಡಿದ್ದಾರಂತೆ. ಇನ್ನೂ ಹೆಚ್ಚಿನ ಹಣಕ್ಕೆ ಡಿಮಾಂಡ್ ಮಾಡಿ, ನಮಗೆ ನಷ್ಟ ಆಗಿದೆ. ಇನ್ನೂ 96 ಲಕ್ಷ ರೂ. ನೀಡಿ ಎಂದು ಸಂಜಯ್‌ ಕಿರಿಕ್ ಆರಂಭಿಸಿದ್ದಾರಂತೆ.
ಕಿಚ್ಚ ಸುದೀಪ್‌ಗೆ ಭಾರೀ ಬೆನ್ನು ನೋವು: ವಿಶ್ರಾಂತಿಗೆ ವೈದ್ಯರ ಸೂಚನೆ
'ಒಪ್ಪಂದದಂತೆ ಎಲ್ಲ ಹಣವನ್ನು ನೀಡಿದ್ದೇನೆ. ಕೊನೆಗೆ ಅವರು ಹೇಳುತ್ತಿರುವ ಲೆಕ್ಕ ಸರಿ ಎನಿಸಲಿಲ್ಲ. ಅದನ್ನು ಅವರಿಗೂ ನಾನು ಹೇಳಿದ್ದೆ. ಆದರೆ, ಲೆಕ್ಕಾಚಾರ ಮುಗಿಯುವರೆಗೂ ನಮ್ಮವರನ್ನು ಅಲ್ಲಿಯೇ ಇಟ್ಟುಕೊಂಡಿದ್ದಾರೆ. ಅವರ ಪಾಸ್‌ ಪೋರ್ಟ್‌ ತೆಗೆದುಕೊಂಡಿದ್ದಾರೆ. ಇದರಿಂದ ನಮ್ಮ ಕ್ಯಾಷಿಯರ್ ಬಾಲು ಸ್ವಲ್ಪ ಟೆನ್ಷನ್ ಆಗಿದ್ದರು. ಅವರಿಗೆ ಏನು ತೊಂದರೆ ಆಗಿಲ್ಲ, ಸುರಕ್ಷಿತವಾಗಿದ್ದಾರೆ. ಈಗ ಅವರನ್ನು ಕರೆಸಿಕೊಳ್ಳಲು ವ್ಯವಸ್ಥೆ ಮಾಡುತ್ತಿದ್ದೇವೆ' ಎಂದು ಮಾಹಿತಿ ನೀಡುತ್ತಾರೆ ನಿರ್ಮಾಪಕ ಸೂರಪ್ಪ ಬಾಬು.
ಕಿಚ್ಚ ಸುದೀಪ್ ಜತೆ ನಟಿಸಬೇಕೆ? ಇಲ್ಲಿದೆ ನೋಡಿ ಚಾನ್ಸ್
ಈ ಸಂಬಂಧ ಚಿತ್ರತಂಡ ಈಗಾಗಲೇ ಪೊಲೀಸ್ ಕಮಿಷನರ್‌ಗೆ ದೂರು ನೀಡಿದೆ. 'ನಮಗೆ ಚಿತ್ರೀಕರಣದ ಸಮಯದಲ್ಲೂ ಅಂಥ ಹೇಳಿಕೊಳ್ಳುವಂತಹ ವ್ಯವಸ್ಥೆ ಮಾಡಿರಲಿಲ್ಲ. ನಮಗಾಗಿ ಬುಕ್ ಮಾಡಿದ್ದ ಹೋಟೆಲ್ ಚೆನ್ನಾಗಿರಲಿಲ್ಲ. ದುಡ್ಡು ಪಡೆಯೋ ತನಕ ಒಂದು ಥರ ಇದ್ರು. ಪಡೆದುಕೊಂಡ ಮೇಲೆ ಇನ್ನೊಂದು ಥರ ಮಾಡಿದ್ರು. ಇದರಿಂದ ನಮ್ಮ ತಂಡಕ್ಕೆ ಮುಜುಗರ ತಂದಿದ್ದಾರೆ' ಎಂದು ಬೇಸರ ತೋಡಿಕೊಂಡಿದ್ದಾರೆ ಸೂರಪ್ಪ ಬಾಬು.

ಸದ್ಯದ ಮಾಹಿತಿ ಪ್ರಕಾರ, ಬೆಂಗಳೂರಿನಲ್ಲಿ ದೂರು ದಾಖಲಾಗುತ್ತಿದ್ದಂತೆಯೇ ಪೊಲ್ಯಾಂಡ್‌ನಲ್ಲಿರುವ 'ಕೋಟಿಗೊಬ್ಬ 3' ಚಿತ್ರತಂಡದ ಸದಸ್ಯರನ್ನು ಬಿಡಲಾಗಿದೆಯಂತೆ. ಶೀಘ್ರದಲ್ಲೇ ಅವರನ್ನು ಬೆಂಗಳೂರಿಗೆ ಕರೆಸಿಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌