ಆ್ಯಪ್ನಗರ

ತಲೆಕೆಳಗಾದ ಕಟೌಟ್‌ ಹಾಗೂ ಫ್ಲವರ್ ಡೆಕೊರೇಟ್ ಕಲಾವಿದರ ಬದುಕು

ಸಿನಿಮಾ ನಟರ ಕಟೌಟ್‌ಗಳನ್ನು ಮಾಡುವ ಕಲಾವಿದರು ಮತ್ತು ಚಿತ್ರಮಂದಿರಗಳನ್ನು ಹೂವಿನಿಂದ ಅಲಂಕಾರ ಮಾಡುವವರು ಈಗ ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿದ್ದಾರೆ. ನಮಗೆ ಕಟೌಟ್‌ ಮಾಡುವುದು ಬಿಟ್ಟರೆ ಬೇರೆ ಉದ್ಯೋಗ ಗೊತ್ತಿಲ್ಲ. ಈಗ ಸಿನಿಮಾಗಳು ಬಿಡುಗಡೆಯಾಗದೇ ಸಂಕಷ್ಟದಲ್ಲಿದ್ದೇವೆ. ನಮ್ಮತ್ತ ಯಾರಾದರೂ ಗಮನ ಹರಿಸಿದರೆ ನಮಗೂ ಸಹಾಯವಾಗುತ್ತದೆ ಎನ್ನುತ್ತಾರೆ ಕಟೌಟ್‌ ಕಲಾವಿದ ಕೃಷ್ಣ.

Harish Basavarajaiah | Vijaya Karnataka Web 4 Apr 2020, 4:41 pm

ಇದೀಗ ಸಿನಿಮಾಗಳ ಬಿಡುಗಡೆ ಸ್ಥಗಿತಗೊಂಡಿದೆ. ಇದರಿಂದಾಗಿಯೇ ಚಿತ್ರಮಂದಿರಗಳ ಎದುರಿನಲ್ಲಿ ರಾರಾಜಿಸುತ್ತಿದ್ದ ಕಟೌಟ್‌ಗಳೂ ಈಗ ಕಾಣಿಸುತ್ತಿಲ್ಲ. ಅವುಗಳ ಮೇಲಿನ ಹೂವಿನ ಅಲಂಕಾರವೂ ಈಗಿಲ್ಲ. ಪರಿಣಾಮ, ಕಟೌಟ್‌ ಮಾಡುವ ಕಲಾವಿದರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ನೆರವಿನ ನಿರೀಕ್ಷೆಯಲ್ಲಿ ಅವರಿದ್ದಾರೆ.
Vijaya Karnataka Web ತಲೆಕೆಳಗಾದ ಕಟೌಟ್ ಕಲಾವಿದರ ಬದುಕು


ಬೆಂಗಳೂರಿನ ಸಾಕಷ್ಟು ಸಿಂಗಲ್‌ ಸ್ಕ್ರೀನ್‌ ಚಿತ್ರಮಂದಿರಗಳ ಎದುರು ನಿಲ್ಲುವ ಎಲ್ಲ ಕಟೌಟ್‌ಗಳನ್ನು ನಿರ್ಮಾಣ ಮಾಡುವುದು ರಾಜ್‌ಕಮಲ್‌ ಆರ್ಟ್ಸ್. ಈ ಸಂಸ್ಥೆಯ ಚಿನ್ನಪ್ಪ ಅವರು ರಾಜ್‌ಕುಮಾರ್‌ರಿಂದ ತೊಡಗಿ ಇತ್ತೀಚೆಗೆ ಚಿತ್ರರಂಗಕ್ಕೆ ಎಂಟ್ರಿಕೊಟ್ಟವರವರೆಗೆ ಎಲ್ಲರ ಕಟೌಟ್‌ಗಳನ್ನೂ ಮಾಡಿದ್ದಾರೆ. ಈಗ ಅವರ ಪುತ್ರ ಕೃಷ್ಣ ಸಹ ಇದೇ ಉದ್ಯೋಗ ಮಾಡುತ್ತಿದ್ದಾರೆ. ಸದ್ಯ ಲಾಕ್‌ಡೌನ್‌ನಿಂದಾಗಿ ಸಿನಿಮಾಗಳು ಬಿಡುಗಡೆಯಾಗದೇ ಇವರು ಸಂಕಷ್ಟದಲ್ಲಿದ್ದಾರೆ.

'ಸಾಕಷ್ಟು ವರ್ಷಗಳಿಂದ ನಮ್ಮ ತಂದೆ ಕಟೌಟ್‌ ಕಲಾವಿದರಾಗಿ ಕೆಲಸ ಮಾಡುತ್ತಿದ್ದಾರೆ. ನಾನು ಸಹ ಅದೇ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಪ್ರತಿವಾರ ಸಿನಿಮಾ ರಿಲೀಸ್‌ ಆದರೆ ಮಾತ್ರ ನಮಗೆ ಕೆಲಸ. ಸದ್ಯ ಯಾವುದೇ ಸಿನಿಮಾ ಬಿಡುಗಡೆಯಾಗದೇ ಇರುವುದರಿಂದ ನಮಗೆ ಆರ್ಥಿಕವಾಗಿ ಸಂಕಷ್ಟ ಶುರುವಾಗಿದೆ. ನಮ್ಮ ಜತೆ 11 ಜನ ಕೆಲಸಗಾರರಿದ್ದು, ಅವರಿಗೆ ಮುಂದಿನ ತಿಂಗಳಿನಿಂದ ಸಂಬಳ ನೀಡುವುದು ಹೇಗೆ ಎಂಬ ಯೋಚನೆ ಶುರುವಾಗಿದೆ' ಎನ್ನುತ್ತಾರೆ ಕೃಷ್ಣ.

ಕೊರೊನಾ ವೈರಸ್ ನಿರ್ಮೂಲನೆ ಮಾಡಲು ಸೆಲೆಬ್ರಿಟಿಗಳನ್ನು ಬಳಸಿಕೊಳ್ಳಿ: ಗೋದ್ರಾ ಸಿನಿಮಾ ತಂಡ

'ಈ ಬಗ್ಗೆ ನಾನು ಒಂದು ಮನವಿ ಪತ್ರವನ್ನು ಸಿದ್ಧಪಡಿಸಿಕೊಂಡು ವಾಣಿಜ್ಯ ಮಂಡಳಿಗೆ ಕೆಲ ನಿರ್ಮಾಪಕರಿಗೆ ಮನವಿ ಮಾಡಿದೆ. ಆದರೆ ಎಲ್ಲಿಂದಲೂ ನಮಗೆ ಸಹಾಯ ಸಿಗಲಿಲ್ಲ. ಇದು ಪುನೀತ್ ರಾಜ್‍ಕುಮಾರ್‌ ಅವರಿಗೆ ಗೊತ್ತಾಗಿ ಅವರು ಮೊನ್ನೆ ಕೊಂಚ ಧನ ಸಹಾಯ ಮಾಡಿದ್ದಾರೆ. ಇದರಿಂದ ಒಂಚೂರು ಉಸಿರಾಡುತ್ತಿದ್ದೇವೆ. ಆದರೆ ಈ ಲಾಕ್‌ಡೌನ್‌ ಏನಾದರೂ ಹೀಗೆ ಮುಂದುವರೆದರೆ ತುಂಬಾ ಕಷ್ಟವಾಗುತ್ತದೆ. ಹಾಗಾಗಿ ಚಿತ್ರರಂಗದ ದೊಡ್ಡವರು ನಮ್ಮತ್ತ ಗಮನ ಹರಿಸಿದರೆ ನಮಗೂ ಕೊಂಚ ಸಹಾಯವಾಗುತ್ತದೆ' ಎಂದು ಹೇಳುತ್ತಾರೆ ಕೃಷ್ಣ.

ಲಾಕ್‌ಡೌನ್‌ ಸಮಯವನ್ನು ಹೇಗೆ ಕಳೆಯಬೇಕು? ಅಭಿಮಾನಿಗಳಿಗೆ ನಟಿ ಸುಧಾರಾಣಿ ನೀಡಿದ್ರು ಟಿಪ್ಸ್!

ಫ್ಲವರ್‌ ಡೆಕೊರೇಟರ್ಸ್ ಗೂ ಕಷ್ಟಕಟೌಟ್‌ ಕಲಾವಿದರಂತೆ, ಚಿತ್ರಮಂದಿರವನ್ನು ಹೂವಿನಿಂದ ಅಲಂಕಾರ ಮಾಡುವವರಿಗೂ ಲಾಕ್‌ಡೌನ್‌ನಿಂದ ತೊಂದರೆಯಾಗಿದೆ. ಬೆಂಗಳೂರಿನಲ್ಲಿ ಚಿತ್ರಮಂದಿರಗಳನ್ನು ಅಲಂಕರಿಸುವ ಗೋಪಿ ತಮ್ಮ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ. 'ನಮಗೂ ಸಿನಿಮಾಗಳು ರಿಲೀಸ್‌ ಆದರೆ ಮಾತ್ರ ಕೆಲಸ. 40 ವರ್ಷಗಳಿಂದೇ ಇದೇ ವೃತ್ತಿಯಲ್ಲಿ ಇದ್ದೇವೆ. ಸದ್ಯ ನಮ್ಮ ಬಳಿ 10 ಜನ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಆದಾಗಿನಿಂದಲೂ ನಾವೇ ಅವರಿಗೆ ಊಟ, ತಿಂಡಿಯ ವ್ಯವಸ್ಥೆ ಮಾಡುತ್ತಿದ್ದೇವೆ. ಲಾಕ್‌ಡೌನ್‌ ಆದಾಗಿನಿಂದಲೂ ಯಾರೂ ನಮ್ಮ ಕಷ್ಟ ಕೇಳಲು ಒಂದು ಕರೆ ಮಾಡಿಲ್ಲ. ಏಪ್ರಿಲ್‌ 14ರ ಹೊತ್ತಿಗೆ ಎಲ್ಲವೂ ಸರಿಹೋಗಿ ಸಿನಿಮಾಗಳು ರಿಲೀಸ್‌ ಆಗಲು ಆರಂಭಿಸಿದರೆ ನಮ್ಮ ಬದುಕು ಹಳಿಗೆ ಬರುತ್ತದೆ. ಇಲ್ಲದೇ ಹೋದಲ್ಲಿ ನಾವು ನಿರ್ಮಾಪಕರು ಮತ್ತು ವಿತರಕರ ಮನೆ ಮುಂದೆ ಸಹಾಯಕ್ಕಾಗಿ ಹೋಗಲೇಬೇಕಿದೆ' ಎನ್ನುತ್ತಾರೆ ಗೋಪಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌