ಹಬ್ಬಗಳ ಸಂದರ್ಭದಲ್ಲಿ ಬಹುನಿರೀಕ್ಷಿತ ಸಿನಿಮಾಗಳು ತೆರೆ ಕಾಣುವುದು ವಾಡಿಕೆ. ಆದರೆ ಈ ವರ್ಷ ಕೋವಿಡ್-19 ಕಾಟದಿಂದಾಗಿ ಅದು ಸಾಧ್ಯವಾಗಲಿಲ್ಲ. ಈಗ ದಸರಾ ಹಬ್ಬದ ಪ್ರಯುಕ್ತ ಮತ್ತೆ ಹಳೆ ಮೆರುಗು ಮರುಕಳಿಸಲಿದೆ. ಈ ವರ್ಷ ಆರಂಭದಲ್ಲಿ ಬಿಡುಗಡೆಯಾಗಿ ಧೂಳೆಬ್ಬಿಸಿದ ಕೆಲವು ಸಿನಿಮಾಗಳು ಈಗ ಮತ್ತೆ ಚಿತ್ರಮಂದಿರದಲ್ಲಿ ಪ್ರದರ್ಶನ ಕಾಣಲು ಸಿದ್ಧತೆ ನಡೆಸಿವೆ.
2020ರ ಆರಂಭದಲ್ಲಿ ತೆರೆಕಂಡ 'ಲವ್ ಮಾಕ್ಟೇಲ್' ಸಿನಿಮಾ ಜನರ ಮನಗೆಲ್ಲುವಲ್ಲಿ ಯಶಸ್ವಿ ಆಗಿತ್ತು. ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದೂ ಅಲ್ಲದೆ, ನಂತರ ಓಟಿಟಿಯಲ್ಲಿ ಬಿಡುಗಡೆಯಾಗಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈಗ ಅದೇ ಚಿತ್ರವನ್ನು ಇನ್ನೊಮ್ಮೆ ಬಿಡುಗಡೆ ಮಾಡಲು ತಂಡ ತೀರ್ಮಾನಿಸಿದೆ. ಮಿಲನಾ ನಾಗರಾಜ್ ಮತ್ತು 'ಡಾರ್ಲಿಂಗ್' ಕೃಷ್ಣ ಜೋಡಿಯ ಈ ಸಿನಿಮಾ ಅ.16ರಿಂದ ಥಿಯೇಟರ್ಗಳಲ್ಲಿ ಸದ್ದು ಮಾಡಲಿದೆ.
ಅದೇ ರೀತಿ, ವಿಮರ್ಶಕರ ಮೆಚ್ಚುಗೆ ಗಳಿಸಿದ ಮತ್ತೊಂದು ಸಿನಿಮಾ 'ಜಂಟಲ್ಮನ್'. ಪ್ರಜ್ವಲ್ ದೇವರಾಜ್ ನಾಯಕತ್ವದ ಈ ಈ ಚಿತ್ರಕ್ಕೆ ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದರು. ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದು, ನಿಶ್ವಿಕಾ ನಾಯ್ಡು ನಾಯಕಿ. ಈ ಸಿನಿಮಾ ಕೂಡ ದಸರಾ ಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. ಪಕ್ಕಾ ದಿನಾಂಕದ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
also read: 'ಡಾರ್ಲಿಂಗ್' ಕೃಷ್ಣಗೆ 'ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು' ಅಂತ ಹೇಳುತ್ತಿರೋದು ಯಾರು?
ಕೊರೊನಾ ವೈರಸ್ ಹರಡುವ ಭೀತಿಯಿಂದ ಜನರು ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇದೆ. ಹಾಗಾಗಿ ಹೊಸ ಸಿನಿಮಾಗಳು ಬಿಡುಗಡೆಯಾಗಲು ಕೊಂಚ ಹಿಂದೇಟು ಹಾಕುತ್ತಿವೆ. ಆದ್ದರಿಂದ, ಈಗಾಗಲೇ ತೆರೆಕಂಡು ಗಮನ ಸೆಳೆದಿರುವ ಹಳೇ ಚಿತ್ರಗಳನ್ನೇ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾಗಳಿಗೆ ಜನರು ತೋರುವ ಪ್ರತಿಕ್ರಿಯೆ ಆಧಾರದ ಮೇಲೆ ಹೊಸ ಸಿನಿಮಾಗಳ ನಿರ್ಮಾಪಕರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
also read: ಅಯ್ಯಯ್ಯೋ... ಪ್ರಜ್ವಲ್ ದೇವರಾಜ್ ಸಿನಿಮಾಗೆ ಇಂಥ ಅನ್ಯಾಯ! ಕಾನೂನು ಹೋರಾಟಕ್ಕೆ ಮುಂದಾದ ನಿರ್ಮಾಪಕರು
2020ರ ಆರಂಭದಲ್ಲಿ ತೆರೆಕಂಡ 'ಲವ್ ಮಾಕ್ಟೇಲ್' ಸಿನಿಮಾ ಜನರ ಮನಗೆಲ್ಲುವಲ್ಲಿ ಯಶಸ್ವಿ ಆಗಿತ್ತು. ಚಿತ್ರಮಂದಿರದಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿದ್ದೂ ಅಲ್ಲದೆ, ನಂತರ ಓಟಿಟಿಯಲ್ಲಿ ಬಿಡುಗಡೆಯಾಗಿಯೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈಗ ಅದೇ ಚಿತ್ರವನ್ನು ಇನ್ನೊಮ್ಮೆ ಬಿಡುಗಡೆ ಮಾಡಲು ತಂಡ ತೀರ್ಮಾನಿಸಿದೆ. ಮಿಲನಾ ನಾಗರಾಜ್ ಮತ್ತು 'ಡಾರ್ಲಿಂಗ್' ಕೃಷ್ಣ ಜೋಡಿಯ ಈ ಸಿನಿಮಾ ಅ.16ರಿಂದ ಥಿಯೇಟರ್ಗಳಲ್ಲಿ ಸದ್ದು ಮಾಡಲಿದೆ.
ಅದೇ ರೀತಿ, ವಿಮರ್ಶಕರ ಮೆಚ್ಚುಗೆ ಗಳಿಸಿದ ಮತ್ತೊಂದು ಸಿನಿಮಾ 'ಜಂಟಲ್ಮನ್'. ಪ್ರಜ್ವಲ್ ದೇವರಾಜ್ ನಾಯಕತ್ವದ ಈ ಈ ಚಿತ್ರಕ್ಕೆ ಜಡೇಶ್ ಕುಮಾರ್ ಹಂಪಿ ನಿರ್ದೇಶನ ಮಾಡಿದ್ದರು. ಗುರು ದೇಶಪಾಂಡೆ ನಿರ್ಮಾಣ ಮಾಡಿದ್ದು, ನಿಶ್ವಿಕಾ ನಾಯ್ಡು ನಾಯಕಿ. ಈ ಸಿನಿಮಾ ಕೂಡ ದಸರಾ ಹಬ್ಬದ ಪ್ರಯುಕ್ತ ಮರು ಬಿಡುಗಡೆ ಆಗುತ್ತಿದೆ. ಪಕ್ಕಾ ದಿನಾಂಕದ ಬಗ್ಗೆ ಚಿತ್ರತಂಡ ಇನ್ನಷ್ಟೇ ಮಾಹಿತಿ ನೀಡಬೇಕಿದೆ.
also read: 'ಡಾರ್ಲಿಂಗ್' ಕೃಷ್ಣಗೆ 'ಶೀಘ್ರ ಮೇವ ಕಲ್ಯಾಣ ಪ್ರಾಪ್ತಿ ರಸ್ತು' ಅಂತ ಹೇಳುತ್ತಿರೋದು ಯಾರು?
ಕೊರೊನಾ ವೈರಸ್ ಹರಡುವ ಭೀತಿಯಿಂದ ಜನರು ಚಿತ್ರಮಂದಿರಕ್ಕೆ ಬರುತ್ತಾರೋ ಇಲ್ಲವೋ ಎಂಬ ಅನುಮಾನ ಇದೆ. ಹಾಗಾಗಿ ಹೊಸ ಸಿನಿಮಾಗಳು ಬಿಡುಗಡೆಯಾಗಲು ಕೊಂಚ ಹಿಂದೇಟು ಹಾಕುತ್ತಿವೆ. ಆದ್ದರಿಂದ, ಈಗಾಗಲೇ ತೆರೆಕಂಡು ಗಮನ ಸೆಳೆದಿರುವ ಹಳೇ ಚಿತ್ರಗಳನ್ನೇ ಮತ್ತೆ ರಿಲೀಸ್ ಮಾಡಲಾಗುತ್ತಿದೆ. ಈ ಸಿನಿಮಾಗಳಿಗೆ ಜನರು ತೋರುವ ಪ್ರತಿಕ್ರಿಯೆ ಆಧಾರದ ಮೇಲೆ ಹೊಸ ಸಿನಿಮಾಗಳ ನಿರ್ಮಾಪಕರು ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ.
also read: ಅಯ್ಯಯ್ಯೋ... ಪ್ರಜ್ವಲ್ ದೇವರಾಜ್ ಸಿನಿಮಾಗೆ ಇಂಥ ಅನ್ಯಾಯ! ಕಾನೂನು ಹೋರಾಟಕ್ಕೆ ಮುಂದಾದ ನಿರ್ಮಾಪಕರು