ಆ್ಯಪ್ನಗರ

ನಿರ್ದೇಶನಕ್ಕಿಳಿದ ಸುದೀಪ್ 'ಮಾಣಿಕ್ಯ' ಸಿನಿಮಾದ ನಟಿ! ಮೊದಲ ಯತ್ನದಲ್ಲೇ ಭರವಸೆ ಮೂಡಿಸಿದ ವರಲಕ್ಷ್ಮೀ

ದಕ್ಷಿಣ ಭಾರತದ ಖ್ಯಾತ ನಟಿ ವರಲಕ್ಷ್ಮೀ ಶರತ್‌ಕುಮಾರ್ ಈಗ ಹೊಸ ಅವತಾರ ಎತ್ತಿದ್ದಾರೆ. ಕೈತುಂಬ ಸಿನಿಮಾಗಳನ್ನು ಇಟ್ಟುಕೊಂಡಿರುವ ಅವರು, ಈಗ ನಿರ್ದೇಶನ ಮಾಡುವುದಕ್ಕೂ ಮುಂದಾಗಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 18 Oct 2020, 6:07 pm
'ಕಿಚ್ಚ' ಸುದೀಪ್ ನಟಿಸಿ, ನಿರ್ದೇಶನ ಮಾಡಿದ್ದ 'ಮಾಣಿಕ್ಯ' ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಆ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದು ನಟಿ ವರಲಕ್ಷ್ಮೀ ಶರತ್‌ಕುಮಾರ್. ಅದು ಅವರಿಗೆ ಕನ್ನಡದಲ್ಲಿ ಮೊದಲನೆಯದು, ವೃತ್ತಿಜೀವನದಲ್ಲಿ 2ನೇ ಸಿನಿಮಾವಾಗಿತ್ತು. ಆನಂತರ ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡರು. ಒಳ್ಳೊಳ್ಳೆಯ ಪಾತ್ರಗಳ ಮೂಲಕ ರಂಜಿಸಿದರು. ಇದೀಗ ವರಲಕ್ಷ್ಮೀ ನಿರ್ದೇಶಕಿಯಾಗಿ ಗಮನಸೆಳೆಯಲಿದ್ದಾರೆ!
Vijaya Karnataka Web Varalaxmi Sarathkumar


ವರಲಕ್ಷ್ಮೀ ಸಿನಿಮಾ ಟೈಟಲ್‌ 'ಕಣ್ಣಮೂಚ್ಚಿ'!
ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳನ್ನು ಇಟ್ಟುಕೊಂಡಿರುವ ವರಲಕ್ಷ್ಮೀ, ಈಗ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದಾರೆ. 'ಕೊನೆಗೂ ನಾನು ನಿರ್ದೇಶಕಿಯಾಗಿ ಹೊಸ ಅವತಾರ ಎತ್ತಿದ್ದೇನೆ. ಎಲ್ಲರಿಂದ ಸಿಗುತ್ತಿರುವ ತುಂಬು ಹೃದಯದ ಹಾರೈಕೆಗಳಿಗೆ ನನ್ನ ಕಡೆಯಿಂದ ಧನ್ಯವಾದಗಳು. ಈ ಸಿನಿಮಾಗಾಗಿ ನಾನು ಕಠಿಣ ಶ್ರಮ ಹಾಕಲಿದ್ದೇನೆ. ನಿಮ್ಮೆಲ್ಲರ ಪ್ರೀತಿಗೆ ಇನ್ನೊಮ್ಮೆ ಧನ್ಯವಾದಗಳು' ಎಂದಿದ್ದಾರೆ. 'ಕಣ್ಣಮೂಚ್ಚಿ' ಸಿನಿಮಾದ ಫಸ್ಟ್‌ಲುಕ್ ಅನ್ನು ಸಹ ರಿಲೀಸ್ ಮಾಡಿರುವ ವರಲಕ್ಷ್ಮೀ, ಆ ಮೂಲಕವೇ ಗಮನಸೆಳೆದಿದ್ದಾರೆ.

ಚಿತ್ರರಂಗದಿಂದ ಹಾರೈಕೆ
ಹಿರಿಯ ನಟ ಶರತ್‌ಕುಮಾರ್ ಅವರ ಪುತ್ರಿಯಾಗಿರುವ ವರಲಕ್ಷ್ಮೀಯ ಈ ಹೊಸ ಸಾಹಸಕ್ಕೆ ದಕ್ಷಿಣ ಭಾರತದ ಸಿನಿಮಾ ಗಣ್ಯರು ಪ್ರೀತಿಯಿಂದ ಮೆಚ್ಚುಗೆ ಸೂಚಿಸಿದ್ದಾರೆ. 'ಜಯಂ' ರವಿ, ಸಂದೀಪ್ ಕಿಶನ್, ಅದ್ವಿ ಶೇಷ್‌, ವಿಘ್ನೇಶ್ ಶಿವನ್, ವಿಕ್ರಮ್‌ ಪ್ರಭು, ಆರ್ಯ, ಸಾಯೇಶಾ, ಸಮಂತಾ ಅಕ್ಕಿನೇನಿ, ರಮ್ಯಾ ನಂಬೀಸನ್, ಶ್ರದ್ಧಾ ಶ್ರೀನಾಥ್‌, ಲಕ್ಷ್ಮೀ ಮಂಚು ಸೇರಿದಂತೆ ಅನೇಕರು ಹಾರೈಸಿದ್ದಾರೆ. ಜೊತೆಗೆ 'ಕಣ್ಣಮೂಚ್ಚಿ' ಫಸ್ಟ್‌ಲುಕ್‌ಗೆ ಉತ್ತಮ ಪ್ರತಿಕ್ರಿಯೆ ನೀಡಿದ್ದಾರೆ.

ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದ 'ಮಾಣಿಕ್ಯ' ಹೀರೋಯಿನ್ ವರಲಕ್ಷ್ಮೀ

ವರಲಕ್ಷ್ಮೀ ಕೈಯಲ್ಲಿ ಸಿಕ್ಕಾಪಟ್ಟೆ ಸಿನಿಮಾಗಳು

ಸದ್ಯ ದಕ್ಷಿಣ ಭಾರತದ ಬ್ಯುಸಿ ನಟಿಯರಲ್ಲಿ ವರಲಕ್ಷ್ಮೀ ಕೂಡ ಒಬ್ಬರಾಗಿದ್ದಾರೆ. ಬರೀ ಹೀರೋಯಿನ್ ಅಂತ ನೋಡದೇ ಎಲ್ಲ ರೀತಿಯ ಪಾತ್ರಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ 'ಮಾಣಿಕ್ಯ' ನಂತರ 'ವಿಸ್ಮಯ' ಸಿನಿಮಾ ಮಾಡಿದ್ದ ವರಲಕ್ಷ್ಮೀ, ಈಗ 'ರಣಂ'ನಲ್ಲಿ ಒಂದು ಮಹತ್ವದ ಪಾತ್ರ ಮಾಡಿದ್ದಾರೆ. ಚಿರಂಜೀವಿ ಸರ್ಜಾ ಮತ್ತು 'ಆ ದಿನಗಳು' ಚೇತನ್‌ ಈ ಸಿನಿಮಾದಲ್ಲಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ, ಅ.23ಕ್ಕೆ ಆ ಸಿನಿಮಾ ರಿಲೀಸ್ ಆಗಲಿದೆ. ಇದರ ಹೊರತಾಗಿ, ತಮಿಳು ಮತ್ತು ತೆಲುಗಿನಲ್ಲಿ ಸುಮಾರು 10ಕ್ಕೂ ಅಧಿಕ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ವರಲಕ್ಷ್ಮೀ. ಅದರ ಮಧ್ಯೆ ಈಗ ನಿರ್ದೇಶನಕ್ಕೂ ಕೈಹಾಕಿದ್ದಾರೆ.

ಸುದೀಪ್ 'ಮಾಣಿಕ್ಯ' ಸಿನಿಮಾದ ನಟಿ ವರಲಕ್ಷ್ಮೀ ಶರತ್‌ಕುಮಾರ್ ವೈಯಕ್ತಿಕ ಲೈಫ್‌ನಲ್ಲಿ ಪದೇ ಪದೇ ಯಾಕೆ ಹೀಗೆ ಆಗತ್ತೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌