ಆ್ಯಪ್ನಗರ

ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬ 'ಕಲಾವಿದ' ಪ್ರತ್ಯಕ್ಷ! ಹೊಸ ತಂಡಕ್ಕೆ ನಟ ಶ್ರೀಮುರಳಿ ಸಾಥ್

23 ವರ್ಷಗಳ ಹಿಂದೆ ತೆರೆಕಂಡಿದ್ದ ರವಿಚಂದ್ರನ್ ಅವರ 'ಕಲಾವಿದ' ಸಿನಿಮಾ ಬರೀ ಹಾಡುಗಳಿಂದಲೇ ದೊಡ್ಡ ಸದ್ದು ಮಾಡಿತ್ತು. ಈಗ ಮತ್ತೊಮ್ಮೆ ಸ್ಯಾಂಡಲ್‌ವುಡ್‌ನಲ್ಲಿ 'ಕಲಾವಿದ' ಅನ್ನೋ ಟೈಟಲ್ ಸದ್ದು ಮಾಡುತ್ತಿದೆ.

Vijaya Karnataka Web 30 Jun 2020, 10:20 pm
1997ರಲ್ಲಿ ತೆರೆಕಂಡ 'ಕಲಾವಿದ' ಚಿತ್ರ ಯಾರಿಗೆ ತಾನೇ ನೆನಪಿಲ್ಲ ಹೇಳಿ? 'ಕ್ರೇಜಿ ಸ್ಟಾರ್' ರವಿಚಂದ್ರನ್ ನಟಿಸಿ, ನಿರ್ದೇಶಿಸಿ, ನಿರ್ಮಿಸಿದ್ದ ಈ ಸಿನಿಮಾದಲ್ಲಿ ನಾಯಕಿಯಾಗಿ ರೋಜಾ, ಹೀರಾ ರಾಜ್‌ಗೋಪಾಲ್ ನಟಿಸಿದ್ದರು. ಚಿತ್ರದ ಹಾಡುಗಳಂತೂ ಸಂಗೀತಪ್ರಿಯರ ಮನಸೂರೆಗೊಂಡಿದ್ದವು. ಹಂಸಲೇಖ ಸಂಗೀತ ನಿರ್ದೇಶನದಲ್ಲಿ ಸಿದ್ಧಗೊಂಡಿದ್ದ ಚಿತ್ರದ ಅಷ್ಟೂ ಹಾಡುಗಳು ಹಿಟ್ ಆಗಿದ್ದವು. ಈಗ್ಯಾಕೆ ಈ ಸಿನಿಮಾ ಮಾತು ಅಂತೀರಾ? ಅದಕ್ಕೂ ಕಾರಣವಿದೆ. ಇದೀಗ ಹೊಸಬರ ತಂಡವೊಂದು ಇದೇ ಹೆಸರಿನಲ್ಲಿ ಸಿನಿಮಾ ಮಾಡಿದೆ. ಇತ್ತೀಚೆಗೆ ಅದರ ಪೋಸ್ಟರ್ 'ರೋರಿಂಗ್ ಸ್ಟಾರ್' ಶ್ರೀಮುರಳಿ ಅವರು ರಿಲೀಸ್ ಮಾಡಿದ್ದಾರೆ.
Vijaya Karnataka Web madagaja actor sriimurali released kalavida movie poster
ಸ್ಯಾಂಡಲ್‌ವುಡ್‌ನಲ್ಲಿ ಮತ್ತೊಬ್ಬ 'ಕಲಾವಿದ' ಪ್ರತ್ಯಕ್ಷ! ಹೊಸ ತಂಡಕ್ಕೆ ನಟ ಶ್ರೀಮುರಳಿ ಸಾಥ್


ಹಲವು ವರ್ಷಗಳಿಂದ ಕನ್ನಡ ಚಿತ್ರಗಳಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಇರುವ ಶಿವಾನಂದ್ 'ಕಲಾವಿದ' ಚಿತ್ರಕ್ಕೆ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ಹಾಸನದ ಪ್ರದೀಪ್ ಈ ಸಿನಿಮಾ ಮೂಲಕ ಹೀರೋ ಆಗಿದ್ದಾರೆ. ವಿಶೇಷವೆಂದರೆ, ಇದರ ನಿರ್ಮಾಪಕರು ಕೂಡ ಇವರೇ. ಬಾಲ್ಯದಲ್ಲೇ ಸಿನಿಮಾರಂಗಕ್ಕೆ ಕಾಲಿಡಬೇಕು ಎಂದುಕೊಂಡಿದ್ದ ಅವರು, ಬೆಂಗಳೂರಿಗೆ ಬಂದರಂತೆ. ಕೆಲ ಸಮಯ ರಂಗಭೂಮಿ ಕೆಲಸ ಮಾಡಿ, ನಂತರ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದಾರಂತೆ ಅವರು. ಈಗ 'ಕಲಾವಿದ' ಮೂಲಕ ಹೀರೋ ಆಗಿದ್ದಾರೆ. ಚಿತ್ರ ತೆರೆಗೆ ಬರಲು ಸಿದ್ಧವಾಗಿದ್ದು, ಸೆನ್ಸಾರ್ ಮಂಡಳಿ ಯು/ಎ ಪ್ರಮಾಣ ಪತ್ರ ಪಡೆದುಕೊಂಡಿದೆ.

ಇನ್ನು, ಫಸ್ಟ್ ಪೋಸ್ಟರ್ ಲಾಂಚ್ ಮಾಡಿರುವ ಶ್ರೀಮುರಳಿ, ಚಿತ್ರತಂಡದ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. 'ಸಿನಿಮಾ ತುಂಬ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಶಿವಾನಂದ್ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ ಎಂದುಕೊಳ್ಳುತ್ತೇನೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ' ಎಂದು ಹಾರೈಸಿದ್ದಾರೆ ಶ್ರೀಮುರಳಿ. ಚಿತ್ರಕ್ಕೆ ನಾಯಕಿಯಾಗಿ ಸಂಭ್ರಮಾ ಕಾಣಿಸಿಕೊಂಡಿದ್ದಾರೆ. ಪೋಷಕ ಪಾತ್ರಗಳಲ್ಲಿ ಮಂಜುನಾಥ್ ಹೆಗ್ಡೆ, ಅರುಣಾ ಬಾಲರಾಜ್, ಮೂಗು ಸುರೇಶ್, ವರ್ಷಾ ಮಲ್ಲೇಶ್, ಶ್ರೀಧರ್, ಜಗದೀಶ್, ಲೋಕೇಶ್ ಮುಂತಾದವರಿದ್ದಾರೆ.

'ಮದಗಜ' ಶ್ರೀಮುರಳಿ ಎದುರು ಖಳನಾಗಿ ನಟಿಸಲಿದ್ದಾರಾ ವಿಜಯ್ ಸೇತುಪತಿ?

ಚಿತ್ರಕ್ಕೆ ಛಾಯಾಗ್ರಹಣವನ್ನು ಚಿದಾನಂದ್ ಮಾಡಿದ್ದು, ವಿವೇಕ್ ಚಕ್ರವರ್ತಿ-ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದಾರೆ. ಚಿತ್ರದ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡಿರುವ ನಟ/ನಿರ್ಮಾಪಕ ಪ್ರದೀಪ್ ಕುಮಾರ್, ಸರ್ಕಾರ ಸಿನಿಮಾ ಬಿಡುಗಡೆಗೆ ಅನುಮತಿ ನೀಡಿದ ಕೂಡಲೇ 'ಕಲಾವಿದ'ನನ್ನು ರಿಲೀಸ್ ಮಾಡೋಕೆ ರೆಡಿ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌