ಆ್ಯಪ್ನಗರ

6.50 ಲಕ್ಷ ರೂ. ತೆರಿಗೆ ಕಟ್ಟುವ ವಿಚಾರಕ್ಕೆ ಹೈಕೋರ್ಟ್ ಮೆಟ್ಟಿಲೇರಿದ ನಟ ರಜನಿಕಾಂತ್! ಮುಂದೇನಾಯ್ತು?

ತೆರಿಗೆ ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ 'ಸೂಪರ್‌ ಸ್ಟಾರ್' ರಜನಿಕಾಂತ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಅವರ ಅರ್ಜಿ ವಜಾ ಆಗಿದೆ. ಜೊತೆಗೆ ನ್ಯಾಯಾಧೀಶರಿಂದ ಎಚ್ಚರಿಕೆಯೂ ಸಿಕ್ಕಿದೆ!

Vijaya Karnataka Web 14 Oct 2020, 9:45 pm
'ಸೂಪರ್‌ ಸ್ಟಾರ್' ರಜನಿಕಾಂತ್ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅದಕ್ಕೆ ಕಾರಣ, ತೆರಿಗೆ ಕಟ್ಟುವ ವಿಚಾರ! ಚೆನ್ನೈನಲ್ಲಿ ರಜನಿಗೆ ಸೇರಿದ ಶ್ರೀ ರಾಘವೇಂದ್ರ ಹೆಸರಿನ ಕಲ್ಯಾಣ ಮಂಟಪವೊಂದು ಇದೆ. ಆದರೆ, ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ ಅದರ ತೆರಿಗೆ 6.50 ಲಕ್ಷ ರೂ.ಗಳನ್ನು ಕಟ್ಟುವಂತೆ ಚೆನ್ನೈ ಪಾಲಿಕೆ ತಿಳಿಸಿತ್ತು. ರಜನಿ ಕಟ್ಟಿರಲಿಲ್ಲ. ಬದಲಿಗೆ, ಅವರು ಆ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ ಮೆಟ್ಟಿಲೇರಿದ್ದರು. ಆದರೆ, ಅಲ್ಲಿ ರಜನಿ ಹಾಕಿದ ಅರ್ಜಿ ವಜಾ ಆಗಿದ್ದು, ನ್ಯಾಯಾಧೀಶರು ಎಚ್ಚರಿಕೆ ನೀಡಿದ್ದಾರೆ!
Vijaya Karnataka Web Rajinikanth


ರಜನಿಕಾಂತ್‌ ಒಡೆತನದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಕಳೆದ ಏಳು ತಿಂಗಳಿನಿಂದ ಯಾವುದೇ ಮದುವೆ ಕಾರ್ಯಗಳು ನಡೆದಿಲ್ಲ. ಆದರೆ, ಚೆನ್ನೈ ಕಾರ್ಪೋರೇಷನ್ ಕಲ್ಯಾಣ ಮಂಟಪಕ್ಕೆ 6.50 ಲಕ್ಷ ಆಸ್ತಿ ತೆರಿಗೆ ವಿಧಿಸಿತ್ತು. ಆದರೆ, ಇದನ್ನು ಪ್ರಶ್ನಿಸಿ, ರಜನಿಕಾಂತ್ ಪರ ವಕೀಲರು ಮದ್ರಾಸ್ ಹೈ ಕೋರ್ಟ್ ಅರ್ಜಿ ಹಾಕಿದ್ದರು. 'ಫೆಬ್ರವರಿಯವರೆಗೆ ಸರಿಯಾಗಿ ತೆರಿಗೆ ಪಾವತಿ ಮಾಡಲಾಗಿದೆ. ಕೊರೊನಾ ವೈರಸ್‌ನಿಂದ ಉಂಟಾದ ಲಾಕ್ ಡೌಡ್‌ನಿಂದಾಗಿ ಮಾ.24ರಿಂದ ಕಲ್ಯಾಣ ಮಂಟಪದಲ್ಲಿ ಯಾವುದೇ ಮದುವೆ ನಡೆದಿಲ್ಲ. ಯಾವುದೇ ರೀತಿಯ ಆದಾಯವಿಲ್ಲ. ಇಷ್ಟು ತೆರೆಗೆ ಕಟ್ಟುವುದು ಹೇಗೆ' ಎಂದು ಅರ್ಜಿಯಲ್ಲಿ ರಜನಿ ಪರ ವಕೀಲರು ತಿಳಿಸಿದ್ದರು.

ಆದರೆ, ಚೆನ್ನೈ ಕಾರ್ಪೋರೇಷನ್ 6.50 ಲಕ್ಷ ತೆರೆಗೆ ಬೇಡಿಕೆ ಪ್ರಶ್ನಿಸಿ ರಜನಿಕಾಂತ್ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದ್ದು, ತೆರಿಗೆ ಕಟ್ಟುವುದರ ವಿರುದ್ಧ ನಾಯ್ಯಾಲಯಕ್ಕೆ ಧಾವಿಸಿರುವುದಕ್ಕೆ, ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕಾಗಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಮಾನಿಗೆ ಧೈರ್ಯ ತುಂಬಿದ 'ತಲೈವಾ' ರಜನಿಕಾಂತ್‌!

ಸದ್ಯ ರಜನಿಕಾಂತ್ 'ಅಣ್ಣಾಥೆ' ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಶೆಡ್ಯೂಲ್‌ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಕೊರೊನಾದಿಂದಾಗಿ ಚಿತ್ರೀಕರಣಕ್ಕೆ ತಡೆ ನೀಡಿದೆ. ಶೀಘ್ರದಲ್ಲೇ ಈ ಸಿನಿಮಾದ ಶೂಟಿಂಗ್ ಆರಂಭಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌