ಆ್ಯಪ್ನಗರ

ಹಿಂದೂಗಳ ಧಾರ್ಮಿಕ ಭಾವನೆಗಳನ್ನು ಕೆಣಕಿ ವಿವಾದಕ್ಕೀಡಾದ ನಟ ವಿಜಯ್ ಸೇತುಪತಿ

ಕಾಲಿವುಡ್ ನಟ ವಿಜಯ್ ಸೇತುಪತಿ ಹಿಂದೂ ದೇವರ ಬಗ್ಗೆ, ಆಚಾರ ಸಂಪ್ರದಾಯದ ಬಗ್ಗೆ ಮಾತನಾಡಿ ವಿವಾದಕ್ಕೆ ಸಿಲುಕಿದ್ದಾರೆ. ಈ ಸಂಬಂಧ ಅಖಿಲ ಭಾರತ ಹಿಂದೂ ಮಹಾಸಭಾ ವಿಜಯ್ ವಿರುದ್ಧ ಪ್ರಕರಣ ದಾಖಲಿಸಿದೆ.

Vijaya Karnataka Web 9 May 2020, 1:22 pm

ಕಾಲಿವುಡ್‍ನಲ್ಲಿ ‘ಮಕ್ಕಳ್ ಸೆಲ್ವನ್’ (ಜನಾನುರಾಗಿ) ಎಂದೇ ಕರೆಸಿಕೊಂಡಿರುವ ನಟ ವಿಜಯ್ ಸೇತುಪತಿ ಇದೀಗ ವಿವಾದಕ್ಕೆ ಗುರಿಯಾಗಿದ್ದಾರೆ. ಟಿವಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ತ್ರಿಚಿಯಲ್ಲಿರುವ ಅಖಿಲ ಭಾರತ ಹಿಂದೂ ಮಹಾಸಭಾ ಪೊಲೀಸ್ ಪ್ರಕರಣ ದಾಖಲಿಸಿದೆ.
Vijaya Karnataka Web ವಿಜಯ್ ಸೇತುಪತಿ


'ನಮ್ಮ ಊರು ಹೀರೋ' ಎಂಬ ಟಿವಿ ಶೋನಲ್ಲಿ ಮಾತನಾಡುತ್ತಿದ್ದ ವಿಜಯ್ ಸೇತುಪತಿ, “ದೇವಾಲಯಗಳಲ್ಲಿ ವಿಗ್ರಹಗಳಿಗೆ ಸ್ನಾನ (ಅಭಿಷೇಕ) ಮಾಡುವುದನ್ನು ತೋರಿಸುತ್ತಾರೆ, ಆದರೆ ಬಟ್ಟೆ ಹಾಕುವಾಗ ಮಾತ್ರ ಪುರೋಹಿತರು ಬಾಗಿಲು ಹಾಕುತ್ತಾರೆ. ಈ ಬಗ್ಗೆ ಪುಟ್ಟ ಹುಡುಗಿಯೊಬ್ಬಳು ತನ್ನ ತಾತನ ಬಳಿ ಕೇಳುತ್ತಿದ್ದಳು. ಯಾಕೆ ತಾತ ದೇವರಿಗೆ ಅಲಂಕಾರ ಮಾಡುವಾಗ ತೋರಿಸಲ್ಲ" ಎಂದು ಕಾರ್ಯಕ್ರಮದಲ್ಲಿ ಹೇಳಿದ್ದಾರೆ.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಜಯ್ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ವಿಜಯ್ ವಿರುದ್ಧ ಕ್ರಮಕ್ಕೆ ಆಗ್ರಹಿಸಿರುವ ಅಖಿಲ ಭಾರತ ಹಿಂದೂ ಮಹಾಸಭಾ, “ಹಿಂದೂ ದೇವಾಲಯಗಳಲ್ಲಿ ಆಗಮಶಾಸ್ತ್ರದ ಪ್ರಕಾರ ಕೈಂಕರ್ಯಗಳನ್ನು ಮಾಡಲಾಗುತ್ತದೆ. ಇದನ್ನು ಅಪಮಾನ ಮಾಡಿ ಮಾತನಾಡುವ ಮೂಲಕ ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ" ಎಂದು ಆರೋಪಿಸಿದೆ.

ವಿಜಯ್ ಹೊಸ ಸಿನಿಮಾ ಟೈಟಲ್ ಫಿಕ್ಸ್ ಆಯ್ತು! ಫಸ್ಟ್‌ಲುಕ್‌ ನೋಡಿ ದಂಗಾದ ಫ್ಯಾನ್ಸ್!!

ವಿಜಯ್ ಆ ರೀತಿ ಮಾತನಾಡಲು ಕಾರಣ ಏನು ಎಂದು ಪ್ರಶ್ನಿಸಿದೆ. ತನ್ನನ್ನು ತಾನು ಪ್ರಚಾರ ಮಾಡಿಕೊಳ್ಳಲು ಇವರಿಗೆ ಹಿಂದೂ ಧರ್ಮವೇ ಬೇಕಾಯಿತಾ? ಎಂದಿದೆ. ವಿಜಯ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡುತ್ತಾ ನಗರ ಪೊಲೀಸ್ ಕಮೀಷನರ್ ಅವರಿಗೂ ಪತ್ರ ಬರೆದಿದೆ. ಇನ್ನೊಂದು ಕಡೆ ವಿಜಯ್ ಸೇತುಪತಿ ಬಗ್ಗೆ ಟ್ರೋಲ್‍ಗಳು, ಮೀಮ್‍ಗಳು ಸಾಮಾಜಿಕ ಮಾಧ್ಯಮದಲ್ಲಿ ಸಖತ್ ಸದ್ದು ಮಾಡುತ್ತಿವೆ.

ಶಿವಮೊಗ್ಗ ಜೈಲು ಸೇರಿಕೊಳ್ಳಲಿದ್ದಾರೆ ವಿಜಯ್ ಆ್ಯಂಡ್‌ ವಿಜಯ್ ಸೇತುಪತಿ!!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌