ಆ್ಯಪ್ನಗರ

ಸಿನಿಮಾ ಶೂಟಿಂಗ್ ವೇಳೆ ದುರಂತ ಸಾವು ಕಂಡ ನಟ ಅನಿಲ್ ನೆಡುಮಂಗದ್!

ಖ್ಯಾತ ಮಲಯಾಳಂ ನಟ ಅನಿಲ್ ನೆಡುಮಂಗದ್ ಅವರು ಇಂದು ನಿಧನರಾಗಿದ್ದಾರೆ. 'ಪೀಸ್' ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾಗ ಅವರು ದುರಂತ ಸಾವಿಗೆ ಈಡಾಗಿದ್ದಾರೆ. ಇಡೀ ಮಲಯಾಳಂ ಚಿತ್ರರಂಗ ಅನಿಲ್ ಸಾವಿಗೆ ಕಂಬನಿ ಮಿಡಿದಿದೆ.

Vijaya Karnataka Web 25 Dec 2020, 9:05 pm
'ಅಯ್ಯಪ್ಪನುಮ್ ಕೋಶಿಯಮ್', 'ಕಮ್ಮಟಿಪಾಡಂ', 'ಪಾವಡ' ಮುಂತಾದ ಸಿನಿಮಾಗಳಲ್ಲಿ ನಟಿಸಿ ಪ್ರಖ್ಯಾತಿ ಪಡೆದಿದ್ದ ಮಲಯಾಳಂ ನಟ ಅನಿಲ್ ನೆಡುಮಂಗದ್ ಅವರು ನಿಧನರಾಗಿದ್ದಾರೆ. ಸ್ನೇಹಿತರ ಜೊತೆ ಈಜಲು ತೆರಳಿದ್ದಾಗ ಈ ದುರಂತ ನಡೆದಿದೆ.
Vijaya Karnataka Web malayalam actor anil nedumangad passed away due to drowned while bathing in kerala malankara dam
ಸಿನಿಮಾ ಶೂಟಿಂಗ್ ವೇಳೆ ದುರಂತ ಸಾವು ಕಂಡ ನಟ ಅನಿಲ್ ನೆಡುಮಂಗದ್!


ಕೇರಳದ ತೊಡಪುಳಾ ಬಳಿಯ ಮಲಂಕರ ಡ್ಯಾಮ್‌ನಲ್ಲಿ ಅನಿಲ್ ಹಾಗೂ ಸ್ನೇಹಿತರು ಈಜಲು ತೆರಳಿದ್ದರು. ನೀರಿನ ಆಳಕ್ಕೆ ಸಿಲುಕಿದ್ದ ಅನಿಲ್ ಸಾವನ್ನಪ್ಪಿದ್ದಾರೆ. ಸ್ನೇಹಿತರೆಲ್ಲರೂ ಅನಿಲ್‌ ಮಿಸ್ ಆಗಿದ್ದಾರೆಂದು ಹುಡುಕಾಟ ನಡೆಸಿದ್ದಾರೆ. ರಕ್ಷಣಾ ದಳದ ಸಹಾಯದಿಂದ ಹುಡುಕಿದಾಗ ಅನಿಲ್ ಪತ್ತೆಯಾಗಿದ್ದರು. 'ಪೀಸ್' ಸಿನಿಮಾದ ಶೂಟಿಂಗ್‌ನಲ್ಲಿ ಅನಿಲ್ ಭಾಗಿಯಾಗಿದ್ದಾಗ ಈ ಘಟನೆ ನಡೆದಿದೆ.

ಜೊಜು ಜಾರ್ಜ್ 'ಪೀಸ್' ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಬ್ರೇಕ್ ವೇಳೆ ಅನಿಲ್ ಅವರು ಸ್ನೇಹಿತರ ಜೊತೆ ಈಜಲು ತೆರಳಿದ್ದರು ಎನ್ನಲಾಗಿದೆ. ನೀರಿನ ಆಳಕ್ಕೆ ಹೋಗಿದ್ದ ಅನಿಲ್ ನದಿಯ ಸೆಳೆತಕ್ಕೆ ಒಳಗಾಗಿ ಕೊನೆಯುಸಿರು ಬಿಟ್ಟಿದ್ದಾರೆ.

Also Read-ಶ್ರೀಮುರಳಿ-ರಮ್ಯಾ ನಟನೆಯ 'ಕಂಠಿ' ಸಿನಿಮಾ ನಿರ್ದೇಶಕ ಭರತ್‌ ನಿಧನ!

ಇಂದು ಸಂಜೆ ಆರು ಗಂಟೆಗೆ ಅನಿಲ್ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಸಮಯ ಮೀರಿ ಹೋಗಿತ್ತು. 'ಅಯ್ಯಪ್ಪನುಮ್ ಕೋಶಿಯಮ್' ಸಿನಿಮಾದ ನಿರ್ದೇಶಕರೂ ಕೂಡ ಇದೇ ವರ್ಷ ತೀರಿಕೊಂಡಿದ್ದರು. ಮಲಯಾಳಂ ಚಿತ್ರರಂಗ ಅನಿಲ್ ಅವರ ನಿಧನಕ್ಕೆ ಸಂತಾಪ ಸೂಚಿಸಿದೆ. ನಟ ದುಲ್ಖರ್ ಸಲ್ಮಾನ್, ಪೃಥ್ವಿರಾಜ್ ಸುಕುಮಾರನ್ ಮುಂತಾದ ಮಲಯಾಳಂ ನಟರು ಅನಿಲ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.
Also Read-'ಕಂಠಿ' ಸಿನಿಮಾ ನಿರ್ದೇಶಕ ಭರತ್ ನಿಧನ: ಭಾವುಕ ಮಾತುಗಳನ್ನಾಡಿದ ಕವಿರಾಜ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌