ಮೂರು ವರ್ಷಗಳ ಹಿಂದೆ.. ಅಂದ್ರೆ 2018ರಲ್ಲಿ ಮೀಟೂ ಅಭಿಯಾನ ನಡೆದಿತ್ತು. ಇದರಲ್ಲಿ ತಮಗಾದ ಲೈಂಗಿಕ ಕಿರುಕುಳದ ಅನುಭವವನ್ನು ನಟಿಯರೂ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಮಹಿಳೆಯರು ಬಿಚ್ಚಿಟ್ಟಿದ್ದರು. ಅಂದು ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಮೀಟೂ ಅಭಿಯಾನದ ಸದ್ದು-ಸುದ್ದಿ ದಿನಗಳು ಉರುಳಿದಂತೆ ಕಡಿಮೆ ಆಗುತ್ತಾ ಹೋಯ್ತು. ಇದೀಗ ಮೀಟೂ ಬಗ್ಗೆ ಎಲ್ಲರೂ ನೆನಪಿಸಿಕೊಳ್ಳುತ್ತಿರುವುದಕ್ಕೆ ಕಾರಣ ಮಲಯಾಳಂ ನಟಿ ರೇವತಿ ಸಂಪತ್. ಮಲಯಾಳಂ ನಟಿ ರೇವತಿ ಸಂಪತ್ ಚಿತ್ರರಂಗಕ್ಕೆ ಬಂದು ಮೂರು ವರ್ಷಗಳಾಗಿವೆ ಅಷ್ಟೇ. 'ಪಟ್ನಾಗರ್' ಎಂಬ ಚಿತ್ರದ ಮೂಲಕ ಮಾಲಿವುಡ್ಗೆ ಕಾಲಿಟ್ಟ ರೇವತಿ ಸಂಪತ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಬಾಂಬ್ ಸಿಡಿಸಿದ್ದಾರೆ. ತಮಗೆ ಕಿರುಕುಳ ನೀಡಿದ 14 ಜನರ ಹೆಸರುಗಳನ್ನು ರೇವತಿ ಸಂಪತ್ ಬಟಾಬಯಲು ಮಾಡಿದ್ದಾರೆ.
ನಿರ್ದೇಶಕನಿಂದ ಹಿಡಿದು ಸಬ್ಇನ್ಸ್ಪೆಕ್ಟರ್ವರೆಗೂ 14 ಜನರು ತಮಗೆ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಮೌಕಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ನಟಿ ರೇವತಿ ಸಂಪತ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ನಟಿ ರೇವತಿ ಸಂಪತ್ ಫೇಸ್ಬುಕ್ ಪೋಸ್ಟ್
''ನನ್ನ ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಜೀವನದಲ್ಲಿ, ಗೊತ್ತು ಗುರಿಯಿಲ್ಲದ ಜಾಗದಲ್ಲಿ ಮತ್ತು ಅಂತರ್ಜಾಲದಲ್ಲಿ ನನಗೆ ಲೈಂಗಿಕವಾಗಿ, ಭಾವನಾತ್ಮಕವಾಗಿ, ಮೌಕಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿರುವವರ ಹೆಸರನ್ನು ಪಟ್ಟಿ ಮಾಡಿದ್ದೇನೆ..!
ರಾಜೇಶ್ (ನಿರ್ದೇಶಕ), ಸಿದ್ದೀಖಿ (ನಟ), ಆಶಿಕ್ ಮಾಹಿ (ಫೋಟೋಗ್ರಾಫರ್), ಶಿಜು.ಎ.ಆರ್ (ನಟ), ಅಭಿಲ್ ದೇವ್ (ಕೇರಳ ಫ್ಯಾಶನ್ ಲೀಗ್, ಫೌಂಡರ್), ಅಜಯ್ ಪ್ರಭಾಕರ್ (ವೈದ್ಯ), ಎಂ.ಎಸ್.ಪದುಶ್, ಸೌರಬ್ ಕೃಷ್ಣನ್, ನಂದು ಅಶೋಕನ್ (ಡಿವೈಎಫ್ಐ ಯೂನಿಟ್ ಕಮಿಟಿ ಸದಸ್ಯ), ಮ್ಯಾಕ್ಸ್ವೆಲ್ ಜೋಸ್ (ಕಿರುಚಿತ್ರ ನಿರ್ದೇಶಕ), ಶಾನೂಬ್ ಕರುವತ್ (ಜಾಹೀರಾತು ನಿರ್ದೇಶಕ), ರಾಕೆಂತ್ ಪೈ (ಕಾಸ್ಟಿಂಗ್ ನಿರ್ದೇಶಕ), ಸಾರುಣ್ ಲಿಯೋ (ಇಎಸ್ಎಎಫ್ ಬ್ಯಾಂಕ್ ಏಜೆಂಟ್), ಸಬ್ ಇನ್ಸ್ಪೆಕ್ಟರ್ ಬಿನು.
ಇದನ್ನು ಮತ್ತೆ ಮತ್ತೆ ಹೇಳುತ್ತೇನೆ'' ಎಂದು ನಟಿ ರೇವತಿ ಸಂಪತ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.
ನಿರ್ದೇಶಕನಿಂದ ಹಿಡಿದು ಸಬ್ಇನ್ಸ್ಪೆಕ್ಟರ್ವರೆಗೂ 14 ಜನರು ತಮಗೆ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ, ಮೌಕಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ನಟಿ ರೇವತಿ ಸಂಪತ್ ತಮ್ಮ ಫೇಸ್ಬುಕ್ ಪೋಸ್ಟ್ನಲ್ಲಿ ಆರೋಪಿಸಿದ್ದಾರೆ.
ನಟಿ ರೇವತಿ ಸಂಪತ್ ಫೇಸ್ಬುಕ್ ಪೋಸ್ಟ್
''ನನ್ನ ವೃತ್ತಿ ಬದುಕಿನಲ್ಲಿ, ವೈಯಕ್ತಿಕ ಜೀವನದಲ್ಲಿ, ಗೊತ್ತು ಗುರಿಯಿಲ್ಲದ ಜಾಗದಲ್ಲಿ ಮತ್ತು ಅಂತರ್ಜಾಲದಲ್ಲಿ ನನಗೆ ಲೈಂಗಿಕವಾಗಿ, ಭಾವನಾತ್ಮಕವಾಗಿ, ಮೌಕಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿರುವವರ ಹೆಸರನ್ನು ಪಟ್ಟಿ ಮಾಡಿದ್ದೇನೆ..!
ರಾಜೇಶ್ (ನಿರ್ದೇಶಕ), ಸಿದ್ದೀಖಿ (ನಟ), ಆಶಿಕ್ ಮಾಹಿ (ಫೋಟೋಗ್ರಾಫರ್), ಶಿಜು.ಎ.ಆರ್ (ನಟ), ಅಭಿಲ್ ದೇವ್ (ಕೇರಳ ಫ್ಯಾಶನ್ ಲೀಗ್, ಫೌಂಡರ್), ಅಜಯ್ ಪ್ರಭಾಕರ್ (ವೈದ್ಯ), ಎಂ.ಎಸ್.ಪದುಶ್, ಸೌರಬ್ ಕೃಷ್ಣನ್, ನಂದು ಅಶೋಕನ್ (ಡಿವೈಎಫ್ಐ ಯೂನಿಟ್ ಕಮಿಟಿ ಸದಸ್ಯ), ಮ್ಯಾಕ್ಸ್ವೆಲ್ ಜೋಸ್ (ಕಿರುಚಿತ್ರ ನಿರ್ದೇಶಕ), ಶಾನೂಬ್ ಕರುವತ್ (ಜಾಹೀರಾತು ನಿರ್ದೇಶಕ), ರಾಕೆಂತ್ ಪೈ (ಕಾಸ್ಟಿಂಗ್ ನಿರ್ದೇಶಕ), ಸಾರುಣ್ ಲಿಯೋ (ಇಎಸ್ಎಎಫ್ ಬ್ಯಾಂಕ್ ಏಜೆಂಟ್), ಸಬ್ ಇನ್ಸ್ಪೆಕ್ಟರ್ ಬಿನು.
ಇದನ್ನು ಮತ್ತೆ ಮತ್ತೆ ಹೇಳುತ್ತೇನೆ'' ಎಂದು ನಟಿ ರೇವತಿ ಸಂಪತ್ ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.