ಆ್ಯಪ್ನಗರ

ವಿಜಯ್‌ ಸೇತುಪತಿ ಪುತ್ರಿಗೆ ರೇಪ್‌ ಬೆದರಿಕೆ ಹಾಕಿದವನಿಂದ ಕ್ಷಮೆ ಯಾಚನೆ; ಆದರೆ ಮುಖ ಕಾಣುತ್ತಿಲ್ಲ ಯಾಕೆ?

ಕಾಲಿವುಡ್‌ ನಟ ವಿಜಯ್‌ ಸೇತುಪತಿ ಪುತ್ರಿಗೆ ಬಹಿರಂಗವಾಗಿ ರೇಪ್‌ ಬೆದರಿಕೆ ಹಾಕುವ ಮೂಲಕ ಎಲ್ಲರ ಆಕ್ರೋಶಕ್ಕೆ ಕಾರಣ ಆಗಿದ್ದ ವ್ಯಕ್ತಿ ಈಗ ಜನರ ಮುಂದೆ ಬಂದಿದ್ದಾನೆ. ಮುಖ ಮುಚ್ಚಿಕೊಂಡು ಕ್ಷಮೆ ಕೇಳಿದ್ದಾನೆ. ಈ ಬಗ್ಗೆ ಇಲ್ಲಿದೆ ವಿವರ...

Vijaya Karnataka Web 27 Oct 2020, 10:26 am
ಖ್ಯಾತ ನಟ ವಿಜಯ್‌ ಸೇತುಪತಿ ಅವರ ಅಪ್ರಾಪ್ತ ಮಗಳಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ ಕಿಡಿಗೇಡಿಗೆ ಈಗ ಬುದ್ಧಿ ಬಂದಂತಿದೆ. ಸೋಶಿಯಲ್‌ ಮೀಡಿಯಾದಲ್ಲಿ ಆತ ಒಂದು ವಿಡಿಯೋ ಪೋಸ್ಟ್‌ ಮಾಡುವ ಮೂಲಕ ವಿಜಯ್‌ ಸೇತುಪತಿಯ ಕ್ಷಮೆ ಕೇಳಿದ್ದಾನೆ. ಆ ವಿಚಾರ ಈಗ ಮತ್ತೆ ಚರ್ಚೆ ಆಗುತ್ತಿದೆ. ಈ ವಿಡಿಯೋದಲ್ಲಿ ಆತ ಮುಖ ತೋರಿಸಿಲ್ಲ!
Vijaya Karnataka Web ವಿಜಯ್‌ ಸೇತುಪತಿ


ಕ್ಷಮೆ ಕೇಳುವ ಉದ್ದೇಶದಿಂದ ಮಾಡಿರುವ ವಿಡಿಯೋದಲ್ಲಿ ಆತ ಕೆಲವು ವಿಚಾರಗಳನ್ನು ವಿವರಿಸಿದ್ದಾನೆ. 'ವಿಜಯ್‌ ಸೇತುಪತಿ ಮತ್ತು ಅವರ ಮಗಳ ಬಗ್ಗೆ ಅಕ್ಷೇಪಾರ್ಹ ಕಾಮೆಂಟ್‌ ಮಾಡಿದ್ದ ಟ್ವಿಟರ್‌ ಬಳಕೆದಾರ ನಾನೇ. ಅಂಥ ಕೆಲಸ ಮಾಡಿದ್ದಕ್ಕಾಗಿ ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತೇನೆ. ನಾನು ಕ್ಷಮೆಗೆ ಅರ್ಹನಾದ ವ್ಯಕ್ತಿ ಅಲ್ಲ ಎಂಬುದು ಗೊತ್ತು. ಆದರೆ ಈವರೆಗೂ ನಾನು ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿರಲಿಲ್ಲ. ಕೊರೊನಾ ಕಾಲದಲ್ಲಿ ಕೆಲಸ ಕಳೆದುಕೊಂಡ ನಾನು ಅದರಿಂದ ಈ ರೀತಿ ವರ್ತಿಸಿದ್ದೇನೆ' ಎಂದು ಹೇಳಿದ್ದಾನೆ.

'ವಿಜಯ್‌ ಸೇತುಪತಿಯವರು ಸಿವಿಲ್‌ ವಾರ್‌ ಕುರಿತ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಗೊತ್ತಾದಾಗ ನಾನು ಆಕ್ರೋಶಗೊಂಡು ಆ ರೀತಿ ಕೆಟ್ಟ ಕಾಮೆಂಟ್‌ ಮಾಡಿದೆ. ಆದರೆ ಭವಿಷ್ಯದಲ್ಲಿ ಎಂದಿಗೂ ನಾನು ಅಂಥ ಟ್ವೀಟ್‌ ಮಾಡುವುದಿಲ್ಲ. ನಾನು ಕಠಿಣ ಶಿಕ್ಷೆಗೆ ಅರ್ಹನಾದವನು ಎಂಬುದು ನನಗೆ ಗೊತ್ತಿದೆ. ಹಾಗಿದ್ದರೂ ವಿಜಯ್‌ ಸೇತುಪತಿ, ಅವರ ಪತ್ನಿ, ಮಗಳು ಮತ್ತು ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ' ಎಂದು ಆತ ವಿವರಿಸಿದ್ದಾನೆ.

also read: ವಿಜಯ್‌ ಸೇತುಪತಿಯ ಸಿನಿಮಾದಿಂದ ಹೊರಬಂದಿದ್ದಕ್ಕೆ ಕಾರಣ ತಿಳಿಸಿದ ನಟಿ ಅದಿತಿ ರಾವ್‌ ಹೈದರಿ!

ಈ ಎಲ್ಲ ವಿಚಾರಗಳನ್ನು ಆತ ಮುಖ ಮುಚ್ಚಿಕೊಂಡು ಹೇಳಿದ್ದಾನೆ. ಅಂದರೆ, ವಿಡಿಯೋದಲ್ಲಿ ಆತನ ಮುಖವನ್ನು ಬ್ಲರ್‌ ಮಾಡಲಾಗಿದೆ. ತನ್ನ ಕುಟುಂಬದ ಭದ್ರತೆ ದೃಷ್ಟಿಯಿಂದ ಮುಖ ತೋರಿಸುತ್ತಿಲ್ಲ ಎಂದು ಅವನು ಸಮಜಾಯಿಷಿ ನೀಡಿದ್ದಾನೆ. 'ನನ್ನನ್ನು ನಿಮ್ಮ ಸಹೋದರ ಎಂದುಕೊಂಡು ದಯವಿಟ್ಟು ಕ್ಷಮಿಸಿ. ಎಲ್ಲ ತಮಿಳಿಗರಲ್ಲಿ ನಾನು ಕ್ಷಮೆ ಕೇಳುತ್ತೇನೆ. ನನ್ನ ಕುಟುಂಬದವರ ಭವಿಷ್ಯ ಹಾಳಾಗಬಾರದು ಎಂಬ ಉದ್ದೇಶದಿಂದ ನನ್ನ ಮುಖ ಬ್ಲರ್‌ ಮಾಡಿದ್ದೇನೆ. ನನಗಾಗಿ ಅಲ್ಲದಿದ್ದರೂ, ನನ್ನ ಮೇಲೆ ಅವಲಂಬಿತ ಆಗಿರುವ ಕುಟುಂಬದ ಸಲುವಾಗಿಯಾದರೂ ನನ್ನನ್ನು ಕ್ಷಮಿಸಿ' ಎಂದು ಆತ ಮನವಿ ಮಾಡಿಕೊಂಡಿದ್ದಾನೆ.

also read: ಮುತ್ತಯ್ಯ ಮುರಳೀಧರನ್ ಬಯೋಪಿಕ್: ನಟ ವಿಜಯ್ ಸೇತುಪತಿ ಲುಕ್ ನೋಡಿ ಫ್ಯಾನ್ಸ್ ಫಿದಾ!

ಮುತ್ತಯ್ಯ ಮುರಳೀಧರನ್‌ ಅವರ ಬಯೋಪಿಕ್‌ ಆಗಿ ಮೂಡಿಬರಬೇಕಿದ್ದ '800' ಸಿನಿಮಾದಲ್ಲಿ ಮುತ್ತಯ್ಯ ಅವರ ಪಾತ್ರವನ್ನು ವಿಜಯ್‌ ಸೇತುಪತಿ ಮಾಡಬೇಕಿತ್ತು. ದಶಕಗಳ ಹಿಂದೆ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ನಡೆದಿದ್ದ ದೌರ್ಜನ್ಯಕ್ಕೆ ಮುತ್ತಯ್ಯ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂಬ ಕಾರಣಕ್ಕೆ ಈ ಬಯೋಪಿಕ್‌ ಆಗಕೂಡದು ಎಂದು ತಮಿಳರು ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಭರದಲ್ಲಿ ಕೆಲವರು ಕೆಟ್ಟ ಕಾಮೆಂಟ್‌ ಮಾಡಿದ್ದರು. ತೀವ್ರ ವಿರೋಧ ವ್ಯಕ್ತವಾದ ಬಳಿಕ ವಿಜಯ್‌ ಸೇತುಪತಿ ಈ ಸಿನಿಮಾದಿಂದ ಹಿಂದೆ ಸರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌