ಆ್ಯಪ್ನಗರ

ವಿಷ್ಣುವರ್ಧನ್‌ ಸ್ಮಾರಕದ ಬಗ್ಗೆ ಸುಮಲತಾ ಅಂಬರೀಷ್‌ ಹೇಳಿದ ಮಾತನ್ನು ವಿಷ್ಣು ಫ್ಯಾನ್ಸ್‌ ಒಪ್ಪುತ್ತಾರಾ?

'ಸಾಹಸ ಸಿಂಹ' ವಿಷ್ಣುವರ್ಧನ್‌ ಅವರ ಸ್ಮಾರಕದ ವಿಚಾರಕ್ಕೆ ಸಂಬಂಧಪಟ್ಟಂತೆ ಸಂಸದೆ ಸುಮಲತಾ ಅಂಬರೀಷ್‌ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅವರ ಮಾತಿನ ಬಗ್ಗೆ ಪರ-ವಿರೋಧ ಚರ್ಚೆ ಆಗುತ್ತಿದೆ.

Vijaya Karnataka Web 30 Jun 2020, 12:30 pm
'ರೆಬಲ್‌ ಸ್ಟಾರ್‌' ಅಂಬರೀಷ್‌ ಅವರ ಸ್ಮಾರಕದ ಬಗ್ಗೆ ಸೋಮವಾರ (ಜೂ.29) ಒಂದು ಗುಡ್‌ ನ್ಯೂಸ್‌ ಕೇಳಿಬಂದಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರ ಜೊತೆ ಚಿತ್ರರಂಗದ ಗಣ್ಯರು ಸಭೆ ನಡೆಸಿದ್ದರು. ಅಂಬಿ ಸ್ಮಾರಕ ನಿರ್ಮಾಣಕ್ಕೆ ಕೂಡಲೇ ಯೋಜನೆ ರೂಪಿಸುವಂತೆ ಸಿಎಂ ಸೂಚಿಸಿದರು. ಇದು ಅಂಬರೀಷ್‌ ಅಭಿಮಾನಿಗಳಿಗೆ ಖುಷಿ ನೀಡಿತು.
Vijaya Karnataka Web mandya mp sumalatha ambareesh tweets about vishnuvardhan memorial
ವಿಷ್ಣುವರ್ಧನ್‌ ಸ್ಮಾರಕದ ಬಗ್ಗೆ ಸುಮಲತಾ ಅಂಬರೀಷ್‌ ಹೇಳಿದ ಮಾತನ್ನು ವಿಷ್ಣು ಫ್ಯಾನ್ಸ್‌ ಒಪ್ಪುತ್ತಾರಾ?


ಅಂಬಿ ಸ್ಮಾರಕ ನಿರ್ಮಾಣಕ್ಕಾಗಿ ಕಂಠೀರವ ಸ್ಟುಡಿಯೋ ಆವರಣದಲ್ಲಿ 1 ಎಕರೆ 34 ಗುಂಟೆ ಜಾಗವನ್ನು ಗುರುತಿಸಲಾಗಿದೆ. ಅಲ್ಲದೆ, 5 ಕೋಟಿ ರೂ. ಅನುದಾನ ನೀಡಲು ಸಹ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗಕ್ಕೆ ಅಪಾರ ಸೇವೆ ಸಲ್ಲಿಸಿದ ನಟನಿಗೆ ಗೌರವ ಸೂಚಿಸುವ ಸಲುವಾಗಿ ರಾಜ್ಯ ಸರ್ಕಾರ ಈ ಕಾರ್ಯ ಕೈಗೊಳ್ಳುತ್ತಿದೆ. ಆದರೆ ಈ ಬೆಳವಣಿಗೆಯ ಬೆನ್ನಲ್ಲೇ ವಿಷ್ಣುವರ್ಧನ್‌ ಅಭಿಮಾನಿಗಳು ಕೊಂಚ ಬೇಸರ ವ್ಯಕ್ತಪಡಿಸಿದರು.

ಕನ್ನಡ ಚಿತ್ರರಂಗದಲ್ಲಿ ಅಂಬಿ ಮತ್ತು ವಿಷ್ಣು ಆಪ್ತ ಸ್ನೇಹಿತರಾಗಿದ್ದರು. 'ಸಾಹಸ ಸಿಂಹ' ವಿಷ್ಣುವರ್ಧನ್‌ ನಿಧನರಾಗಿ ಒಂದು ದಶಕವೇ ಕಳೆದಿದೆ. ಅವರ ಸ್ಮಾರಕ ನಿರ್ಮಾಣಕ್ಕಾಗಿ ವಿಷ್ಣು ಕುಟುಂಬ ತುಂಬ ಹೋರಾಟ ನಡೆಸುತ್ತ ಬಂದಿದೆ. ಹಾಗಿದ್ದರೂ ಇಂದಿಗೂ ವಿಷ್ಣು ಸ್ಮಾರಕ ನಿರ್ಮಾಣ ಆಗಿಲ್ಲ. ಈ ಕಾರ್ಯ ವಿಳಂಬ ಆಗಿರುವುದು 'ಸಾಹಸ ಸಿಂಹ'ನ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗಿದ್ದು, ಈ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ. ಅದಕ್ಕೆ ಟ್ವಿಟರ್‌ ಮೂಲಕ ಸುಮಲತಾ ಅಂಬರೀಷ್‌ ಪ್ರತಿಕ್ರಿಯೆ ನೀಡಿದ್ದಾರೆ.

also read: ಅಂಬರೀಷ್‌ ಸ್ಮಾರಕ ನಿರ್ಮಾಣಕ್ಕೆ 1 ಎಕರೆ 34 ಗುಂಟೆ ಜಾಗ ನೀಡಿದ ಸರ್ಕಾರ! ಸಿಗಲಿದೆ 5 ಕೋಟಿ ರೂ. ಅನುದಾನ!

'ನಮ್ಮ ಪ್ರೀತಿಯ ವಿಷ್ಣುವರ್ಧನ್ ಅವರ ಸ್ಮಾರಕದ ಕೆಲಸ ಅವರ ಮನೆಯವರ ಅಪೇಕ್ಷೆಯಂತೆ ಮೈಸೂರಿನಲ್ಲೇ 1 ವರ್ಷದ ಹಿಂದೆಯೇ ಶುರು ಆಗಿರುವುದು ಕೆಲವು ಅಭಿಮಾನಿಗಳಿಗೆ ತಿಳಿದುಬಂದಿಲ್ಲ. ನನಗೆ ತಿಳಿದಿರುವಂತೆ ಸರಕಾರ ಘೋಷಿಸಿದ್ದ 10 ಕೋಟಿಯಲ್ಲಿ 5 ಕೋಟಿ ಬಿಡುಗಡೆ ಮಾಡಿದೆ. ಅನಗತ್ಯ ಮಾತುಗಳಿಂದ ಅಂಬಿ-ವಿಷ್ಣು ಸ್ನೇಹ ಬಾಂಧವ್ಯಕ್ಕೆ ಮಸಿ ಬಳಿಯೋದು ಬೇಡ' ಎಂದು ಸುಮಲತಾ ಅಂಬರೀಷ್‌ ಟ್ವೀಟ್‌ ಮಾಡಿದ್ದಾರೆ.

also read: ಡಾ. ವಿಷ್ಣುವರ್ಧನ್‌ ಪುಣ್ಯತಿಥಿಯಂದು ಜಗ್ಗೇಶ್‌ ಮತ್ತು 'ಕಿಚ್ಚ' ಸುದೀಪ್‌ ಹೇಳಿದ್ದೇನು?

ಸುಮಲತಾ ಅಂಬರೀಷ್‌ ಅವರ ಈ ಮಾತಿಗೆ ಅನೇಕರು ಕಾಮೆಂಟ್‌ ಮಾಡಿದ್ದಾರೆ. ವಿಷ್ಣು ನಿಧನರಾಗಿ 10 ವರ್ಷ ಕಳೆದರೂ ಸ್ಮಾರಕ ನಿರ್ಮಾಣ ಆಗಿಲ್ಲ ಎಂಬ ಬೇಸರ ತಮಗಿದೆ ಎಂದು ಅಭಿಮಾನಿಗಳು ತಿಳಿಸಿದ್ದಾರೆ. ನಟರ ಸ್ಮಾರಕಕ್ಕೆ ಇಷ್ಟೊಂದು ಖರ್ಚು ಮಾಡುವ ಅಗತ್ಯ ಇದೆಯೇ ಎಂಬ ಪ್ರಶ್ನೆಯನ್ನೂ ಹಲವರು ಎತ್ತಿದ್ದಾರೆ.

also read: ವಿಷ್ಣುವರ್ಧನ್‌ ಜೀವನದ ಕಷ್ಟದ ದಿನಗಳನ್ನು ನೆನಪಿಸಿಕೊಂಡ 'ಜೊತೆ ಜೊತೆಯಲಿ' ಅನಿರುದ್ಧ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌