ಆ್ಯಪ್ನಗರ

ಸಂದರ್ಶನದಲ್ಲಿ ನಟ ದರ್ಶನ್ ಹೆಸರು ಪ್ರಸ್ತಾಪಿಸಿದ್ದೇಕೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗವಿದೆ. ಇವರ ಬಗ್ಗೆ ಬಾಲಿವುಡ್ ನಟಿಯೋರ್ವರು ಸಂದರ್ಶನದಲ್ಲಿ ಮಾತನಾಡಿರುವ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Vijaya Karnataka Web 19 Jul 2020, 7:34 pm
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕರ್ನಾಟಕದಲ್ಲಂತೂ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳಿದ್ದಾರೆ. ಯುವ ಕಲಾವಿದರಿಗೆ ದರ್ಶನ್ ತುಂಬ ಸಹಾಯ ಮಾಡುತ್ತಾರೆ, ಪ್ರೋತ್ಸಾಹ ನೀಡುತ್ತಾರೆ. ಸಿನಿಮಾ ಜೊತೆ ಜೊತೆಗೆ ಸಾಮಾಜಿಕ ಕೆಲಸದಿಂದಲೂ ದರ್ಶನ್ ಹೆಸರು ಮಾಡಿದ್ದಾರೆ. ಈಗ ಇವರ ಬಗ್ಗೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
Vijaya Karnataka Web mr airavata movie heroine urvashi rautela speaks about challenging star darshan
ಸಂದರ್ಶನದಲ್ಲಿ ನಟ ದರ್ಶನ್ ಹೆಸರು ಪ್ರಸ್ತಾಪಿಸಿದ್ದೇಕೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ?


ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಊರ್ವಶಿ ರೌಟೇಲಾ ಹೇಳಿದ್ದೇನು?

ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ದರ್ಶನ್ ನಟನೆಯ 'ಐರಾವತ' ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. 'ಐರಾವತ' ಸಿನಿಮಾ ಸುದ್ದಿಗೋಷ್ಠಿ ಮೈಸೂರಿನಲ್ಲಿ ನಡೆದಿದ್ದಾಗ ಅವರು 'ದರ್ಶನ್ ಜೊತೆ ಕೆಲಸ ಮಾಡಿದ್ದಕ್ಕೆ ತುಂಬ ಖುಷಿಯಾಗುತ್ತಿದೆ, ನನ್ನ ಸಂತಸವನ್ನು ಪದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ' ಎಂದು ಹೇಳಿರುವ ವಿಡಿಯೋವೊಂದು ಈಗ ವೈರಲ್ ಆಗುತ್ತಿದೆ.

ದರ್ಶನ್ ಅಭಿಮಾನಿ ಬಳಗ ನೋಡಿ ಕಂಗಾಲಾಗಿದ್ದ ಊರ್ವಶಿ ರೌಟೇಲಾ

ಊರ್ವಶಿ ರೌಟೇಲಾ ಅವರು ಬಾಲಿವುಡ್ ಸಂದರ್ಶನದಲ್ಲಿ ಸಿನಿಮಾ ಬಗ್ಗೆ ಕೇಳುವಾಗ 'ಐರಾವತ' ಸಿನಿಮಾದಲ್ಲಿ ನಟಿಸಿದ ಖುಷಿಯನ್ನು ಹೊರಹಾಕಿದ್ದರು. ಆಗ ನಿರೂಪಕರು ಮೊದಲ ಸಿನಿಮಾ ಬಾಲಿವುಡ್‌ನಲ್ಲಿ ಮಾಡಿ ಆಮೇಲೆ ದಕ್ಷಿಣ ಭಾರತದ ಪ್ರಾದೇಶಿಕ ಭಾಷೆ ಕನ್ನಡದಲ್ಲಿ ಯಾಕೆ ನಟಿಸಿದ್ರಿ? ಎಂದು ಪ್ರಶ್ನಿಸಿದ್ದರು. ಆಗ ಊರ್ವಶಿ ರೌಟೇಲಾ, 'ಐರಾವತ ಸಿನಿಮಾ ಒಪ್ಪಿಕೊಳ್ಳುವ ಮುನ್ನ ನಾನು ಕರ್ನಾಟಕದ ಸೂಪರ್ ಸ್ಟಾರ್ ಜೊತೆ ನಟಿಸುತ್ತಿದ್ದೇನೆ ಎಂಬ ಅರಿವು ಇರಲಿಲ್ಲ. ಸಿನಿಮಾ ಶೂಟಿಂಗ್ ಮಾಡುತ್ತಿರುವ ಸೂಪರ್ ಸ್ಟಾರ್ ದರ್ಶನ್ ಅಭಿಮಾನಿ ಬಳಗ, ಫ್ಯಾನ್ಸ್ ಕ್ರೇಜ್ ನೋಡಿ ನಿಜಕ್ಕೂ ನನಗೆ ಆಶ್ಚರ್ಯವಾಯಿತು. ಇಂತಹ ಫ್ಯಾನ್ಸ್ ಸಂಪಾದನೆ ಮಾಡಿರುವ ನಟನ ಜೊತೆ ನಟಿಸಿದ್ದು ನನಗೆ ಹೆಮ್ಮೆಯ ವಿಷಯ' ಎಂದು ಉತ್ತರಿಸಿದ್ದರು. ಈಗ ಈ ವಿಡಿಯೋವನ್ನು ದರ್ಶನ್ ಅಭಿಮಾನಿಗಳು ಶೇರ್ ಮಾಡುತ್ತಿದ್ದಾರೆ.

ದರ್ಶನ್ ಬಗ್ಗೆ ಬಾಲಿವುಡ್ ನಿರ್ದೇಶಕ ಮೆಚ್ಚುಗೆ

'ಐರಾವತ' ಸಿನಿಮಾವನ್ನು ಎಪಿ ಅರ್ಜುನ್ ನಿರ್ದೇಶನ ಮಾಡಿದ್ದರು. ಸಂದೇಶ್ ನಾಗರಾಜ್ ಈ ಚಿತ್ರ ನಿರ್ಮಾಣ ಮಾಡಿದ್ದರು. 2015ರಲ್ಲಿ ಈ ಚಿತ್ರ ರಿಲೀಸ್ ಆಗಿತ್ತು. ಕೆಲ ತಿಂಗಳುಗಳ ಹಿಂದೆ ಬಾಲಿವುಡ್‌ನ ಪ್ರಖ್ಯಾತ ನಿರ್ದೇಶಕ ರೋಹಿತ್ ಶೆಟ್ಟಿ ಅವರು ಹುಟ್ಟುಹಬ್ಬದ ದಿನ ದರ್ಶನ್ ಮನೆ ಮುಂದೆ ಸೇರಿದ್ದ ಜನರನ್ನು ನೋಡಿ ದಂಗಾಗಿದ್ದರಂತೆ. ಪ್ರಾದೇಶಿಕ ಭಾಷೆಗಳು ಸಿನಿಮಾ ವಿಚಾರದಲ್ಲಿ ಎಷ್ಟು ಸುಧಾರಿಸಿವೆ, ಇದರ ರೀಚ್ ಎಷ್ಟಿದೆ ಎಂಬುದು ಅರ್ಥವಾಯಿತು ಎಂದು ರೋಹಿತ್ ಸಂದರ್ಶನವೊಂದರಲ್ಲಿ ಹೇಳಿದ್ದರು.

Also Read-ನಾಡದೇವತೆಯ ದರ್ಶನ ಪಡೆದ 'ಚಾಲೆಂಜಿಂಗ್ ಸ್ಟಾರ್‌'; ಚಾಮುಂಡಿ ಬೆಟ್ಟದಲ್ಲಿ 'ಡಿ ಬಾಸ್‌'

ದರ್ಶನ್ ಕೈಯಲ್ಲೀಗ ಎಷ್ಟು ಸಿನಿಮಾಗಳಿವೆ?

ದರ್ಶನ್ ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಇಷ್ಟೊತ್ತಿಗಾಗಲೇ ದರ್ಶನ್ ನಟನೆಯ 'ರಾಬರ್ಟ್' ಸಿನಿಮಾ ರಿಲೀಸ್ ಆಗುತ್ತಿತ್ತು. 'ರಾಜವೀರ ಮದಕರಿನಾಯಕ' ಸಿನಿಮಾದಲ್ಲಿ ದರ್ಶನ್ ನಟಿಸುತ್ತಿದ್ದಾರೆ. ಅದರ ಜೊತೆಗೆ ಮಿಲನ ಪ್ರಕಾಶ್ ಜೊತೆಗೆ ಒಂದು ಸಿನಿಮಾ, ತರುಣ್ ಸುಧೀರ್ ಜೊತೆಗೆ ಇನ್ನೊಂದು ಸಿನಿಮಾವನ್ನು ದರ್ಶನ್ ಮಾಡುತ್ತಿದ್ದಾರೆ. ಆದರೆ ಇವುಗಳಿಗೆ ಶೀರ್ಷಿಕೆ ಯಾವುದು ಫೈನಲ್ ಆಗಿಲ್ಲ.
Also Read-ಟ್ರ್ಯಾಕ್ಟರ್‌ ಚಲಾಯಿಸುತ್ತ ರಸ್ತೆಗಿಳಿದ 'ಡಿ ಬಾಸ್‌' ದರ್ಶನ್! ವೈರಲ್ ಆಯ್ತು ಫೋಟೋ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌