ಆ್ಯಪ್ನಗರ

ಉಪೇಂದ್ರ ಜೊತೆ ಕೈ ಜೋಡಿಸಿದ ರಾಜಕಾರಣಿ ಎಂಟಿಬಿ ನಾಗರಾಜ್‌!

ಹೊಸ ಪ್ರಾಜೆಕ್ಟ್‌ಗಾಗಿ ಉಪೇಂದ್ರ ಮತ್ತು ಎಂಟಿಬಿ ನಾಗರಾಜ್‌ ಪರಸ್ಪರ ಕೈ ಜೋಡಿಸುತ್ತಿದ್ದಾರೆ. ಯಾಕೆ ಏನು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...

Vijaya Karnataka Web 14 Jan 2020, 1:03 pm
ಪ್ರಜಾಕೀಯದ ನಿಯಮಗಳನ್ನು ಬಲವಾಗಿ ನಂಬಿರುವ ಉಪೇಂದ್ರ ಒಂದು ಕಡೆಯಾದರೆ, ರಾಜಕೀಯ ಮಾಡುವ ವ್ಯಕ್ತಿಗಳು ಇನ್ನೊಂದು ಕಡೆ. ಇಬ್ಬರ ನಡುವೆ ಅನೇಕ ವಿಚಾರಗಳಲ್ಲಿ ವ್ಯತ್ಯಾಸ ಇದೆ. ಅವರಿಬ್ಬರು ಒಂದಾಗುತ್ತಾರೆ ಎಂದಾಗ ಅಚ್ಚರಿ ಆಗುವುದು ಸಹಜ. ಅಚ್ಚರಿ ಎನಿಸಿದರೂ ಇದು ಸತ್ಯ. ಹೊಸ ಪ್ರಾಜೆಕ್ಟ್‌ಗಾಗಿ ಉಪೇಂದ್ರ ಮತ್ತು ಎಂಟಿಬಿ ನಾಗರಾಜ್‌ ಪರಸ್ಪರ ಕೈ ಜೋಡಿಸುತ್ತಿದ್ದಾರೆ. ಯಾಕೆ ಏನು ಎಂಬ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ...
Vijaya Karnataka Web mtb nagaraj joins hands with upendra for kabza movie
ಉಪೇಂದ್ರ ಜೊತೆ ಕೈ ಜೋಡಿಸಿದ ರಾಜಕಾರಣಿ ಎಂಟಿಬಿ ನಾಗರಾಜ್‌!


ಶ್ರೀಮಂತ ರಾಜಕಾರಣಿಯ ಹೊಸ ಹಾದಿ

ಕರ್ನಾಟಕದ ಅತ್ಯಂತ ಶ್ರೀಮಂತ ರಾಜಕಾರಣಿ ಎಂದೇ ಖ್ಯಾತಿ ಆಗಿರುವ ಎಂಟಿಬಿ ನಾಗರಾಜ್‌ ದೊಡ್ಡ ಉದ್ಯಮಿ ಕೂಡ ಹೌದು. ಆದರೆ ಈವರೆಗೂ ಸಿನಿಮಾ ಕ್ಷೇತ್ರಕ್ಕೆ ಅವರು ಕಾಲಿಟ್ಟಿರಲಿಲ್ಲ. ಈಗ ಉಪೇಂದ್ರ ಸಲುವಾಗಿ ಅವರು ಬಣ್ಣದ ಲೋಕಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಈ ಬೆಳವಣಿಗೆ ಅನೇಕರಲ್ಲಿ ಅಚ್ಚರಿ ಮೂಡಿಸಿದೆ. ಇಷ್ಟಕ್ಕೆಲ್ಲ ಕಾರಣ ಆಗಿರುವ ಅಂಶ ಏನು ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

'ಕಬ್ಜ' ಸಿನಿಮಾಗೆ ಎಂಟಿಬಿ ನಾಗರಾಜ್‌ ಬಂಡವಾಳ

ಉಪೇಂದ್ರ ನಾಯಕನಾಗಿ ನಟಿಸುತ್ತಿರುವ 'ಕಬ್ಜ' ಚಿತ್ರದ ಬಗ್ಗೆ ಈಗಾಗಲೇ ಸಿನಿಪ್ರಿಯರ ವಲಯದಲ್ಲಿ ದೊಡ್ಡಮಟ್ಟದ ನಿರೀಕ್ಷೆ ಇದೆ. ಕನ್ನಡದ ಜೊತೆಗೆ ಬಹುಭಾಷೆಯಲ್ಲಿ ಮೂಡಿಬರುತ್ತಿರುವ ಸಿನಿಮಾ ಎಂಬ ಕಾರಣಕ್ಕಾಗಿ ಆರಂಭದಲ್ಲೇ ಹೈಪ್‌ ಸೃಷ್ಟಿಯಾಗಿದೆ. ವಿಶೇಷ ಎಂದರೆ, ಈ ಚಿತ್ರ ಸೆಟ್ಟೇರಿದಾಗ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಆರ್‌. ಚಂದ್ರು ವಹಿಸಿಕೊಂಡಿದ್ದರು. ಈಗ ನಿರ್ಮಾಣದಲ್ಲಿ ಎಂಟಿಬಿ ನಾಗರಾಜ್‌ ಕೂಡ ಪಾಲುದಾರಿಕೆ ಹೊಂದುತ್ತಿದ್ದಾರಂತೆ.

ಕಥೆ ಕೇಳಿ ಇಂಪ್ರೆಸ್‌ ಆದ ನಾಗರಾಜ್‌

ಸಿನಿಮಾದ ಲಾಂಚ್‌ ವೇಳೆ ಒಂದು ಅದ್ದೂರಿ ಫೋಟೋಶೂಟ್‌ ಮೂಲಕ 'ಕಬ್ಜ' ಗಮನ ಸೆಳೆದಿತ್ತು. ಎ.ಜೆ. ಶೆಟ್ಟಿ ಕ್ಯಾಮರಾದಲ್ಲಿ ಮೂಡಿಬಂದ ಫೋಟೋಗಳನ್ನು ಉಪೇಂದ್ರ ಅಭಿಮಾನಿಗಳಿಗೆ ಮಾತ್ರವಲ್ಲದೆ ಚಿತ್ರರಂಗದ ಅನೇಕರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಫೋಟೋಗಳು ಎಂಟಿಬಿ ನಾಗ್‌ರಾಜ್‌ ಅವರನ್ನೂ ಸೆಳೆದಿವೆ. ಅವುಗಳನ್ನು ಕಂಡ ಅವರು ನಿರ್ದೇಶಕರ ಬಳಿಕ ಕಥೆ ಕೇಳಿ ತಿಳಿದುಕೊಂಡರಂತೆ. ಇಷ್ಟ ಆಗಿದ್ದರಿಂದ ಬಂಡವಾಳ ಹೂಡಲು ಮುಂದಾದರು ಎಂಬುದು ಚಂದ್ರು ಹೇಳಿಕೆ.

ಹೆಚ್ಚಾಗಲಿದೆ 'ಕಬ್ಜ' ಶ್ರೀಮಂತಿಕೆ

ಈ ಸಿನಿಮಾ ಬಹುಕೋಟಿ ರೂ. ವೆಚ್ಚದಲ್ಲಿ ಮೂಡಿಬರುತ್ತಿದೆ. ಈಗ ಎಂಟಿಬಿ ನಾಗರಾಜ್‌ ಕೂಡ ಕೈ ಜೋಡಿಸುತ್ತಿರುವುದರಿಂದ ಚಿತ್ರದ ಅದ್ದೂರಿತನ ಜಾಸ್ತಿ ಆಗುವುದರಲ್ಲಿ ಅನುಮಾನವೇ ಇಲ್ಲ. ಈಗಾಗಲೇ ಬೆಂಗಳೂರಿನಲ್ಲಿ ಕೆಲವು ಸೆಟ್‌ಗಳನ್ನು ಹಾಕಲಾಗಿದೆ. 'ಕೆಜಿಎಫ್‌' ಖ್ಯಾತಿಯ ಕಲಾ ನಿರ್ದೇಶಕ ಶಿವಕುಮಾರ್‌ ಸೆಟ್‌ಗಳ ಉಸ್ತುವಾರಿ ವಹಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌