ಆ್ಯಪ್ನಗರ

Pooja Gandhi: ಪೂಜಾ ಗಾಂಧಿ ಬರಹ ಭಾರೀ ವೈರಲ್; ಮಳೆ ಹುಡುಗಿ ಬದ್ಧತೆಗೆ ಮೆಚ್ಚಿದ ಕನ್ನಡಿಗರು

Actress Pooja Gandhi: 'ಗೋಲ್ಡನ್ ಸ್ಟಾರ್ ಗಣೇಶ್' ನಟನೆಯ 'ಮುಂಗಾರು ಮಳೆ' ಸಿನಿಮಾ ಮೂಲಕ ಚಿತ್ರರಂಗದಲ್ಲಿ ಹೊಸ ಅಲೆ ಎಬ್ಬಿಸಿದ ಪೂಜಾ ಗಾಂಧಿ ಅವರು ಕನ್ನಡವನ್ನು ಈಗ ಮಾತನಾಡುತ್ತಿರುವುದು, ಓದುವುದು, ಬರೆಯುವುದು ಕೆಲವರಿಗೆ ಗೊತ್ತಾಗಿರಬಹುದು. ಈಗ ಅವರು ಇನ್ನೊಂದು ಖುಷಿಯ ಸುದ್ದಿ ನೀಡಿ ಕನ್ನಡದ ಪ್ರೀತಿ ಮೆರೆದಿದ್ದಾರೆ. ಏನದು?

Authored byಪದ್ಮಶ್ರೀ ಭಟ್ | Vijaya Karnataka Web 28 Feb 2023, 8:03 am

ಹೈಲೈಟ್ಸ್‌:


  • ಕನ್ನಡ ಕಲಿಯುತ್ತಿರುವ ಮಳೆ ಹುಡುಗಿ ಪೂಜಾ ಗಾಂಧಿ
  • ವಚನ, ದಾಸರ ಪದ್ಯ, ಕನ್ನಡದ ಕವಿತೆ ಬರೆಯುವ 'ಮುಂಗಾರು ಮಳೆ' ನಾಯಕಿ
  • ಚಿತ್ರರಂಗದಲ್ಲಿ ಮತ್ತೆ ಸಕ್ರಿಯರಾಗ್ತಾರೆ ಬೆಂಗಾಳಿ ಬೆಡಗಿ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web pooja gandhi
'ಮುಂಗಾರುಮಳೆ' ಬೆಡಗಿ ಪೂಜಾ ಗಾಂಧಿ ಅವರ ( Pooja Gandhi ) ಕನ್ನಡದ ಪ್ರೇಮ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕುವೆಂಪು ವಿಮಾನ ನಿಲ್ದಾಣದ ಉದ್ಘಾಟನೆ ಸಂದಭ೯ದಲ್ಲಿ ಶಿವಮೊಗ್ಗೆಯ ಕನ್ನಡಿಗರೆಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದ ಪೂಜಾ ಗಾಂಧಿ ಅವರು ಕನ್ನಡಿಗರಿಗೆ ಖುಷಿ ನೀಡುವ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ.

ಪೂಜಾ ಗಾಂಧಿ ಪೋಸ್ಟ್ ಏನು?

"ಕುವೆಂಪು ವಿಮಾನ ನಿಲ್ದಾಣದ ಉದ್ಘಾಟನೆ ಸಂದಭ೯ದಲ್ಲಿ ಶಿವಮೊಗ್ಗೆಯ ಕನ್ನಡಿಗರೆಲ್ಲರಿಗೂ ಅಭಿನಂದನೆಗಳು.
ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ...." ಎಂದು ಬರಹ ಬರೆದುಕೊಂಡು, "ಬಾರಿಸು ಕನ್ನಡ ಡಿಂಡಿಮವ" ಹಾಡನ್ನು ಪೂಜಾ ಅವರೇ ಬರೆದಿರುವ ಹಾಳೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಾಳಿ ಹುಡುಗಿ ಪೂಜಾ ಅವರು ಕನ್ನಡದಲ್ಲಿ ಬರೆದ ಕವಿತೆ ಕನ್ನಡಿಗರ ಮನಸ್ಸು ಗೆದ್ದಿದೆ.

ವಚನ, ದಾಸಪದ್ಯ ಬರೆಯುತ್ತಿರುವ ಪೂಜಾ

ಕೆಲ ದಿನಗಳ ಹಿಂದೆ ಡಾ ರಾಜ್‌ಕುಮಾರ್ ಅವರು ಹಾಡಿದ್ದ ಜೇನಿನ ಹೊಳೆಯೋ ಹಾಲಿನ ಮಳೆಯೋ ಸುಧೆಯೋ ಕನ್ನಡ ಸವಿನುಡಿಯೋ ಹಾಡನ್ನು ಹಾಡಿದ್ದರು. ಅಷ್ಟೇ ಅಲ್ಲದೆ ಬಸವಣ್ಣನವರ 'ಉಳ್ಳವರು ಶಿವಾಲಯ ಮಾಡುವರು' ವಚನವನ್ನು ಕೂಡ ಕನ್ನಡದಲ್ಲಿ ಬರೆದುಕೊಂಡಿದ್ದರು.
ಪೂಜಾ ಗಾಂಧಿ ಹೊಸ ಸಿನಿಮಾ ಬಗ್ಗೆ ಮಾಹಿತಿ ಇಲ್ಲಿದೆ

ಹೊಸ ವರ್ಷಕ್ಕೆ ಹೊಸ ಸುದ್ದಿ

"ಮುಂಗಾರು ಮಳೆ ಸಿನಿಮಾ 17 ವರ್ಷ ಪೂರೈಸಿದೆ. ಮುಂಗಾರು ಮಳೆ ಸಿನಿಮಾ ಶೂಟಿಂಗ್‌ಗೆ ಹೋದಾಗ ನನಗೆ ಕನ್ನಡದ ಬಗ್ಗೆ ಗೊತ್ತಿರಲಿಲ್ಲ. ಆದರೆ ಇಂದು ನಾನು ಕನ್ನಡವನ್ನು ಬರೆಯಬಲ್ಲೆ, ಓದಬಲ್ಲೆ, ನನ್ನ ಬಗ್ಗೆ ನನಗೆ ಹೆಮ್ಮೆಯಾಗುತ್ತಿದೆ" ಎಂದು ಪೂಜಾ ಗಾಂಧಿ ಅವರು ಹೊಸವರ್ಷಕ್ಕೆ ಪೋಸ್ಟ್ ಹಂಚಿಕೊಂಡಿದ್ದರು.

ಕನ್ನಡಿಗರಿಂದ ಮೆಚ್ಚುಗೆ

ಪೂಜಾ ಗಾಂಧಿ ಅವರ ಕನ್ನಡ ಪ್ರೇಮ ನೋಡಿ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ.
"ನಟಿ ಪೂಜಾ ಅವರು ಬರೆದಿರುವ ಕನ್ನಡ ನೋಡಿ ಎಷ್ಟು ಮುದ್ದಾಗಿ, ಸ್ಪಷ್ಟವಾಗಿದೆ. ಇಲ್ಲೇ ನೂರಾರು ವರ್ಷ ನೆಲೆಸಿರುವ ಸಾಕಷ್ಟು ಜನರು ಕನ್ನಡವನ್ನು ಕಡೆಗೆಣಿಸಿದ್ದಾರೆ. ಅದರಲ್ಲಿ ಈ ನಟಿ ವಿಶೇಷ. ಅವರ ಕನ್ನಡದ ಬಗ್ಗೆ ಬೆಳೆಸಿಕೊಂಡಿರುವ ಬದ್ಧತೆ ಮೆಚ್ಚುವಂತದ್ದು. ಅಭಿಮಾನ ಬೇರೆ, ಕಲಿಕೆ ಮತ್ತು ಬಳಕೆ ಮುಖ್ಯ. ಅಭಿಮಾನ ಆಮೇಲೆ. ಪೂಜಾ ಗಾಂಧಿ ಅವರನ್ನು ವಲಸಿಗರು ಮತ್ತು ಇಲ್ಲೇ ಇರುವ ಎಡಬಿಡಂಗಿಗಳು ನೋಡಿ ನಾಗರೀಕತೆ ಬೆಳೆಸಿಕೊಳ್ಳಬೇಕು. ಕನ್ನಡತಿ ಪೂಜಾ ಗಾಂಧಿ ಅವರೇ ನೀವು ಕನ್ನಡಿಗರ ಮನಸ್ಸು ಹಿಂದೇನೂ ಗೆದ್ದಿದ್ದೀರಿ.. ಈಗಲೂ ಹೆಚ್ಚು ಗೆಲ್ಲುತ್ತಿದ್ದೀರಿ" ಎಂದು ಜ್ಞಾನ್ ಮಧು ಕಲ್ಲಹಳ್ಳಿ ಅವರು ಫೇಸ್‌ಬುಕ್‌ನಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಂಹಾರಿಣಿ ಸಿನಿಮಾದಲ್ಲಿ ಮುಂಗಾರು ಮಳೆ ಹುಡುಗಿ ಪೂಜಾ ಗಾಂಧಿ

ರಿಲೀಸ್ ಆಗಬೇಕಿರುವ ಸಿನಿಮಾಗಳು

2001ರಿಂದ ಚಿತ್ರರಂಗದಲ್ಲಿ ಒಂದಾದ ಮೇಲೆ ಒಂದರಂತೆ ಸಿನಿಮಾಗಳನ್ನು ಮಾಡಿರುವ ಪೂಜಾ ಗಾಂಧಿ ಅವರು ಕೊನೆಯದಾಗಿ 'ದಂಡುಪಾಳ್ಯ 3' ಸಿನಿಮಾದಲ್ಲಿ ನಟಿಸಿದ್ದರು. ಇನ್ನು ಪೂಜಾ ನಟನೆಯ 'ಸಂಹಾರಿಣಿ', 'ತಗ್ಗೆದೆ ಲೆ' ಸಿನಿಮಾ ರಿಲೀಸ್ ಆಗಬೇಕಿದೆ.

ಬಿಗ್ ಬಾಸ್ ಕನ್ನಡ ಸೀಸನ್ 3 ಶೋನಲ್ಲಿಯೂ ಭಾಗವಹಿಸಿದ್ದ ಪೂಜಾ ಅವರು ರಾಜಕೀಯದಲ್ಲಿಯೂ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಮತ್ತೆ ಮಳೆ ಹುಡುಗಿ ಯಾವಾಗ ಪರರಿಪೂರ್ಣವಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಲಿದ್ದಾರೆ ಎಂದು ಕಾದು ನೋಡಬೇಕಿದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌