ಮ್ಯೂಸಿಕ್ ವಿಚಾರದಲ್ಲಿ ಅವರೀಗ ಫುಲ್ ಬ್ಯುಸಿಯಂತೆ. ಲಾಕ್ಡೌನ್ ಅವರಿಗೆ ತುಂಬ ಪ್ರಯೋಜನ ಮಾಡಿಕೊಡುತ್ತಿದೆಯಂತೆ. ಈಗಾಗಲೇ ಇವರ ಕೈಯಲ್ಲಿ ಸಿಕ್ಕಾಪಟ್ಟೆ ಪ್ರಾಜೆಕ್ಟ್ಗಳಿವೆ. ಇವರ ಬೆಂಗಳೂರಿನ ಮನೆಗೂ-ಸ್ಟುಡಿಯೋಕ್ಕೂ ಹೆಚ್ಚಿನ ದೂರ ಇಲ್ಲ. ಹೀಗಾಗಿ ಅವರು ಸಂಗೀತದ ಕೆಲಸಗಳಲ್ಲಿ ಬ್ಯುಸಿಯಾಗಿರೋದಂತೂ ನಿಜ. ಅಷ್ಟೇ ಅಲ್ಲದೆ ಅವರು ಒತ್ತಡದ ಬಗ್ಗೆ ಮಾತನಾಡಿದ್ದಾರೆ. ಒಟ್ಟಾರೆಯಾಗಿ ಅವರು ಎಷ್ಟು ಸಿನಿಮಾಗಳಿಗೆ ಪ್ರಸ್ತುತ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ? ಈಗಾಗಲೇ ಈ ಕೆಲಸ ಯಾವ ಹಂತದಲ್ಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಸಿನಿಮಾ ಹಾಡಿನ ರಿಲೀಸ್ ಡೇಟ್ ಟಾರ್ಗೆಟ್ ರೀಚ್ ಆಗೋಕೆ 15 ದಿನ ಟೈಮ್ ಸಿಗತ್ತೆ
'ಸಂಗೀತ ನನ್ನನ್ನು ಬ್ಯುಸಿಯಾಗಿರಿಸಿದೆ, ಇದೆಲ್ಲ ಸಾಧ್ಯವಾಗಿದ್ದು ಇಷ್ಟೆಲ್ಲ ಶಾಂತತೆಯಿಂದಾಗಿ' ಎನ್ನುತ್ತಾರೆ ಅರ್ಜುನ್ ಜನ್ಯ. ಸಿನಿಮಾ ತಂಡ ಹಾಡು ರಿಲೀಸ್ ಮಾಡಲು ಪ್ಲ್ಯಾನ್ ಮಾಡುತ್ತದೆಯೋ, ಆಗ ಒಮ್ಮೊಮ್ಮೆ ನನಗೆ ತುಂಬ ಪ್ರೆಶರ್ ಆಗುತ್ತದೆ, ತಡರಾತ್ರಿವರೆಗೂ ಕೆಲಸ ಮಾಡಬೇಕಾಗಿ ಬರೋದುಂಟು. ರಿಲೀಸ್ ಡೇಟ್ ಟಾರ್ಗೆಟ್ ರೀಚ್ ಆಗೋದಿಕ್ಕೆ ಕೇವಲ 15 ದಿನ ಸಿಗುತ್ತದೆ ಅಷ್ಟೇ. ಆದರೆ ಈಗ ಹಾಗಿಲ್ಲ. ಈಗ ಯಾವುದೇ ಒತ್ತಡವಿಲ್ಲದೆ ನನ್ನ ಸೃಜನಶೀಲತೆ ಬಳಸಿ ಕೆಲಸ ಮಾಡಬಹುದು ಎನ್ನುತ್ತಾರೆ' ಅರ್ಜುನ್ ಜನ್ಯ. ಈಗಾಗಲೇ ಶೂಟಿಂಗ್ ಮುಗಿದಿರುವ ಸಿನಿಮಾಗಳ ಹಾಡನ್ನು ಕಂಪೋಸ್ ಮಾಡುವ, ರಿರೆಕಾರ್ಡಿಂಗ್ ಮಾಡುವಲ್ಲಿ ಅರ್ಜುನ್ ಸದ್ಯ ಅವರನ್ನು ತೊಡಗಿಸಿಕೊಂಡಿದ್ದಾರೆ.
ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಅರ್ಜುನ್ ಜನ್ಯಾ; ರಿಯಾಲಿಟಿ ಶೋಗಳಲ್ಲಿ ಇನ್ಮುಂದೆ ಭಾಗವಹಿಸುತ್ತಾರಾ?
ಸುಮಾರಷ್ಟು ಸಿನಿಮಾ ಕೆಲಸ ಮುಗಿಸಿದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ
ದರ್ಶನ್ ಅಭಿನಯದ, ತರುಣ್ ಸುಧೀರ್ ನಿರ್ದೇಶನದ 'ರಾಬರ್ಟ್' ಸಿನಿಮಾ, ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ', ಶಿವ ಕಾರ್ತೀಕ್ ನಿರ್ದೇಶನದ, ಸುದೀಪ್ ಅಭಿನಯದ 'ಕೋಟಿಗೊಬ್ಬ 3', ಯೋಗರಾಜ್ ಭಟ್ ಅಭಿನಯದ 'ಗಾಳಿಪಟ 2', ವಿಕ್ರಮ್ ರವಿಚಂದ್ರನ್ ನಟನೆಯ 'ತ್ರಿವಿಕ್ರಮ', ಶರಣ್ ಅವರ 'ಅವತಾರ ಪುರುಷ', ಶೀತಲ್ ಶೆಟ್ಟಿ ನಿರ್ದೇಶನದ 'ವಿಂಡೋ ಸೀಟ್' ಮರಾಠಿಯಲ್ಲಿ ಮಾಡಿದ 'ರಾಜಸ್ಥಾನ ಡೈರೀಸ್' ಸಿನಿಮಾಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ ಅರ್ಜುನ್ ಜನ್ಯ. 'ನನ್ನ ಸ್ಟುಡಿಯೋದಲ್ಲಿ ಕುಳಿತು ಶ್ರೇಯಾ ಘೋಷಾಲ್, ಶಂಕರ್ ಮಹಾದೇವನ್, ವಿಜಯ್ ಪ್ರಕಾಶ್ ಅವರೊಂದಿಗೆ ಹಾಡುಗಳನ್ನು ರೆಕಾರ್ಡ್ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಇನ್ನು ಒಂದೆರೆಡು ಸಿನಿಮಾಗಳಿಗೆ ಹಿನ್ನಲೆ ಸ್ಕೋರ್ ಮತ್ತು ಎಡಿಟಿಂಗ್ ಕೂಡ ಕಂಪ್ಲೀಟ್ ಮಾಡುತ್ತಿದ್ದೇನೆ. ನನ್ನ ಕೈಯಲ್ಲಿರುವ ಎಲ್ಲ ಸಮಯವೂ ವಿಭಿನ್ನ ವಾದ್ಯಗಳನ್ನು ಬಳಸಿಕೊಂಡು ಸಂಗೀತ ಪ್ರಯೋಗಿಸಲು ನನಗೆ ಅವಕಾಶ ಮಾಡಿಕೊಡುತ್ತದೆ' ಎಂದು ಅರ್ಜುನ್ ಜನ್ಯಾ ಹೇಳುತ್ತಾರೆ.
ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಹೃದಯಾಘಾತಕ್ಕೆ ಅಸಲಿ ಕಾರಣ ತಿಳಿಸಿದ ವೈದ್ಯರು!