ಆ್ಯಪ್ನಗರ

'ಲವ್‌ ಮಾಕ್‌ಟೇಲ್‌ 2' ಚಿತ್ರದಿಂದ ಹೊರಬಂದ ಸಂಗೀತ ನಿರ್ದೇಶಕ ರಘು ದೀಕ್ಷಿತ್‌! ಕಾರಣ ಏನು?

ಭಾರಿ ನಿರೀಕ್ಷೆ ಮೂಡಿಸಿರುವ 'ಲವ್‌ ಮಾಕ್‌ಟೇಲ್‌ 2' ಚಿತ್ರೀಕರಣದಲ್ಲಿ 'ಡಾರ್ಲಿಂಗ್‌' ಕೃಷ್ಣ ಬ್ಯುಸಿ ಆಗಿದ್ದಾರೆ. ಈ ನಡುವೆ ಸಿನಿಮಾ ಬಗ್ಗೆ ಒಂದು ಗುಸುಗುಸು ಕೇಳಿಬಂದಿದೆ. ಚಿತ್ರತಂಡದಿಂದ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಹೊರಬಂದಿದ್ದಾರೆ ಎನ್ನಲಾಗಿದೆ.

Vijaya Karnataka Web 9 Nov 2020, 5:19 pm
2020ರ ಕೆಲವೇ ಕೆಲವು ಸೂಪರ್‌ ಹಿಟ್‌ ಸಿನಿಮಾಗಳಲ್ಲಿ 'ಲವ್‌ ಮಾಕ್‌ಟೇಲ್‌' ಕೂಡ ಒಂದು. ಆ ಗೆಲುವಿನಲ್ಲಿ ರಘು ದೀಕ್ಷಿತ್‌ ಸಂಗೀತ ಸಂಯೋಜನೆಯ ಹಾಡುಗಳದ್ದೂ ಪಾಲಿದೆ ಎಂದರೆ ತಪ್ಪೇನಿಲ್ಲ. ಈಗ ಆ ಚಿತ್ರದ ಸೀಕ್ವೆಲ್‌ ಸಿದ್ಧವಾಗುತ್ತಿದೆ. ಆದರೆ ಅದರಲ್ಲಿ ಸಂಗೀತ ನಿರ್ದೇಶಕ ರಘು ದೀಕ್ಷಿತ್‌ ಇರುವುದಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಆ ಮೂಲಕ ಚಿತ್ರತಂಡದಲ್ಲಿ ದೊಡ್ಡ ಬದಲಾವಣೆ ಆಗಿದೆ.
Vijaya Karnataka Web ರಘು ದೀಕ್ಷಿತ್‌, ಡಾರ್ಲಿಂಗ್‌ ಕೃಷ್ಣ


ಡಾರ್ಲಿಂಗ್‌ ಕೃಷ್ಣ ನಿರ್ದೇಶಿಸುತ್ತಿರುವ ಈ 'ಲವ್‌ ಮಾಕ್‌ಟೇಲ್‌ 2' ಚಿತ್ರದ ಕಥೆ ಕೇಳಿ ಎಗ್ಸೈಟ್‌ ಆದ ಮೊದಲಿಗರಲ್ಲಿ ರಘು ದೀಕ್ಷಿತ್ ಕೂಡ ಒಬ್ಬರು. ಆ ಬಗ್ಗೆ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದರು ಕೂಡ. ಹಾಗಾಗಿ ಈ ಚಿತ್ರಕ್ಕೆ ಅವರೇ ಸಂಗೀತ ನೀಡಲಿದ್ದಾರೆ ಎಂಬುದು ಖಚಿತ ಆಗಿತ್ತು. ಆದರೆ ಈಗ ಅವರು 'ಲವ್‌ ಮಾಕ್‌ಟೇಲ್‌ 2'ನಿಂದ ಹೊರನಡೆದಿದ್ದಾರೆ ಎಂಬ ಮಾಹಿತಿ ಬಲವಾಗಿ ಕೇಳಿಬಂದಿದೆ. ಇದು ರಘು ದೀಕ್ಷಿತ್‌ ಅಭಿಮಾನಿಗಳಲ್ಲಿ ಸಹಜವಾಗಿಯೇ ಬೇಸರ ಮೂಡಿಸಲಿದೆ.

ಹಾಗಾದರೆ 'ಲವ್‌ ಮಾಕ್‌ಟೇಲ್‌ 2' ತಂಡದ ಜೊತೆ ರಘು ದೀಕ್ಷಿತ್‌ ಏನಾದರೂ ಕಿರಿಕ್‌ ಮಾಡಿಕೊಂಡ್ರಾ? ಹಾಗೇನೂ ಇಲ್ಲ. ಮೂಲಗಳ ಪ್ರಕಾರ ಸಂಭಾವನೆ ವಿಚಾರವಾಗಿ ಕೃಷ್ಣ ಮತ್ತು ರಘು ದೀಕ್ಷಿತ್‌ ನಡುವೆ ಹೊಂದಾಣಿಕೆ ಆಗಿಲ್ಲವಂತೆ. ಹಾಗಾಗಿ, ರಘು ದೀಕ್ಷಿತ್‌ ಬದಲಿಗೆ ಬೇರೆ ಸಂಗೀತ ನಿರ್ದೇಶಕರನ್ನು ಆಯ್ಕೆ ಮಾಡಿಕೊಳ್ಳುವುದು ಅನಿವಾರ್ಯ ಆಗಿದೆ. ಗಾಯಕ ನಕುಲ್‌ ಅಭ್ಯಂಕರ್‌ ಜೊತೆ ಕೃಷ್ಣ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

also read: 'ಡಾರ್ಲಿಂಗ್' ಕೃಷ್ಣ-ಮಿಲನಾ ಮದುವೆಗೆ ದಿನಾಂಕ ಫಿಕ್ಸ್! ಪ್ರೇಮಿಗಳ ದಿನದಂದು ನಡೆಯಲಿದೆ ಕಲ್ಯಾಣ

ಕೃಷ್ಣ ಅವರ ಜೊತೆ ಮಿಲನಾ ನಾಗರಾಜ್‌ ಕೂಡ ಈ ಚಿತ್ರಕ್ಕೆ ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ರಿಯಲ್‌ ಲೈಫ್‌ನಲ್ಲಿ ಪರಸ್ಪರ ಪ್ರೀತಿಸುತ್ತಿರುವ ಈ ಜೋಡಿ ಇತ್ತೀಚೆಗೆ ಮದುವೆ ದಿನಾಂಕದ ಬಗ್ಗೆಯೂ ಮಾಹಿತಿ ನೀಡಿದೆ. 2021ರ ಫೆ.14ರಂದು ಹಸೆಮಣೆ ಏರಲು ಕೃಷ್ಣ-ಮಿಲನಾ ನಿರ್ಧರಿಸಿದ್ದಾರೆ. 'ಲವ್‌ ಮಾಕ್‌ಟೇಲ್‌ 2' ಚಿತ್ರಕ್ಕೆ ಈಗಾಗಲೇ ಶೇ. 70 ಭಾಗ ಚಿತ್ರೀಕರಣ ಮುಕ್ತಾಯ ಆಗಿದ್ದು, ರೇಚಲ್‌ ಡೇವಿಡ್‌ ನಾಯಕಿಯಾಗಿ ನಟಿಸುತ್ತಿದ್ದಾರೆ.

also read: ಪ್ರೇಮಿಗಳ ದಿನದಂದೇ ಹಸೆಮಣೆ ಏರಲಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌