ಆ್ಯಪ್ನಗರ

ಶಾಕಿಂಗ್‌..! ವಿಜಯ್‌ ಸೇತುಪತಿ ಮಗಳಿಗೆ ರೇಪ್‌ ಬೆದರಿಕೆ; ಇದಕ್ಕೆಲ್ಲ ಕಾರಣ '800' ವಿವಾದ!

ನೀಚ ವ್ಯಕ್ತಿತ್ವದ ನೆಟ್ಟಿಗರು ಸೋಶಿಯಲ್‌ ಮೀಡಿಯಾದಲ್ಲಿ ತಮ್ಮ ಕೊಳಕು ಮನಸ್ಥಿತಿಯನ್ನು ಆಗಾಗ ಪ್ರದರ್ಶನಕ್ಕೆ ಇಡುತ್ತಾರೆ. ವಿಜಯ್‌ ಸೇತುಪತಿ ಪುತ್ರಿಗೆ ಬಹಿರಂಗವಾಗಿ ರೇಪ್‌ ಬೆದರಿಕೆ ಹಾಕುವ ಮೂಲಕ ವ್ಯಕ್ತಿಯೊಬ್ಬ ಈಗ ಎಲ್ಲರ ಆಕ್ರೋಶಕ್ಕೆ ಕಾರಣ ಆಗಿದ್ದಾನೆ.

Vijaya Karnataka Web 20 Oct 2020, 11:16 am
ನಟ ವಿಜಯ್ ಸೇತುಪತಿ ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ಅವರು ನಟಿಸಬೇಕು ಎಂದುಕೊಂಡಿದ್ದ '800' ಸಿನಿಮಾ ಕೂಡ ವಿವಾದಕ್ಕೆ ಗುರಿ ಆಯಿತು. ತಮಿಳರ ಭಾವನೆಗಳಿಗೆ ಧಕ್ಕೆ ಉಂಟುಮಾಡಬಾರದು ಎಂಬ ಕಾರಣಕ್ಕೆ ಆ ಚಿತ್ರದಿಂದ ವಿಜಯ್‌ ಸೇತಿಪತಿ ಹೊರನಡೆದರು. ಆದರೂ ಕೆಲವು ಕಿಡಿಗೇಡಿಗಳು ಅವರನ್ನು ಟಾರ್ಗೆಟ್‌ ಮಾಡುವುದು ನಿಲ್ಲಿಸಿಲ್ಲ. ಈಗ ಅವರ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಲಾಗಿದೆ!
Vijaya Karnataka Web ವಿಜಯ್‌ ಸೇತುಪತಿ


ಏನಿದು 800 ಕಿರಿಕ್‌?
ಮುತ್ತಯ್ಯ ಮುರಳೀಧರನ್‌ ಅವರ ಬಯೋಪಿಕ್‌ ಆಗಿ ಮೂಡಿಬರಬೇಕಿದ್ದ '800' ಸಿನಿಮಾದಲ್ಲಿ ಮುತ್ತಯ್ಯ ಅವರ ಪಾತ್ರವನ್ನು ವಿಜಯ್‌ ಸೇತುಪತಿ ಮಾಡಬೇಕಿತ್ತು. ದಶಕಗಳ ಹಿಂದೆ ಶ್ರೀಲಂಕಾದಲ್ಲಿ ತಮಿಳರ ವಿರುದ್ಧ ನಡೆದಿದ್ದ ದೌರ್ಜನ್ಯಕ್ಕೆ ಮುತ್ತಯ್ಯ ಯಾವುದೇ ರೀತಿಯಲ್ಲೂ ವಿರೋಧ ವ್ಯಕ್ತಪಡಿಸಿರಲಿಲ್ಲ ಎಂಬ ಕಾರಣಕ್ಕೆ ಈ ಬಯೋಪಿಕ್‌ ಆಗಕೂಡದ ಎಂದು ತಮಿಳರು ಆಕ್ಷೇಪ ವ್ಯಕ್ತಪಡಿಸಿದ್ದರು. ಕೊನೆಗೆ ಮುತ್ತಯ್ಯ ಮುರಳೀಧರನ್‌ ಅವರ ಒತ್ತಾಯಕ್ಕೆ ಮಣಿದ ವಿಜಯ್‌ ಸೇತುಪತಿ ಆ ಚಿತ್ರದಿಂದ ಹೊರನಡೆದರು.

ಅಪ್ರಾಪ್ತ ಮಗಳಿಗೆ ರೇಪ್‌ ಬೆದರಿಕೆ!
'ತಮಿಳರಿಗೆ ಆದ ನೋವು ಏನು ಎಂಬುದು ವಿಜಯ್‌ ಸೇತುಪತಿಗೆ ಮನವರಿಕೆ ಆಗಬೇಕು ಎಂದಾದರೆ ಅವರ ಮಗಳನ್ನು ಲೈಂಗಿಕವಾಗಿ ಶೋಷಣೆ ಮಾಡಬೇಕು' ಎಂದು ಟ್ವಿಟರ್‌ ಬಳಕೆದಾರನೊಬ್ಬ ಪೋಸ್ಟ್‌ ಮಾಡಿದ್ದಾನೆ. ಹೀಗೆ ವಿಜಯ್‌ ಸೇತುಪತಿಯವರ ಅಪ್ರಾಪ್ತ ಮಗಳಿಗೆ ಬಹಿರಂಗವಾಗಿ ರೇಪ್‌ ಬೆದರಿಕೆ ಹಾಕಿದ್ದಕ್ಕಾಗಿ ಎಲ್ಲರೂ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಾಲಕಿಗೆ ಈ ರೀತಿ ಬೆದರಿಕೆ ಹಾಕಿರುವ ವ್ಯಕ್ತಿಯನ್ನು ಕೂಡಲೇ ಬಂಧಿಸಬೇಕು ಎಂದು ಸೋಶಿಯಲ್‌ ಮೀಡಿಯಾದಲ್ಲಿ ಒತ್ತಾಯಿಸಲಾಗುತ್ತಿದೆ.

also read: ShameOnVijaySethupathi: ಮುತ್ತಯ್ಯ ಮುರಳೀಧರನ್‌ ಬಯೋಪಿಕ್‌ ಮಾಡುತ್ತಿರುವುದಕ್ಕೆ ತಮಿಳರ ವಿರೋಧ!

ನೆಟ್ಟಿಗರಿಂದ ಭಾರಿ ಆಕ್ರೋಶ
ಗಾಯಕಿ ಚಿನ್ಮಯಿ ಶ್ರೀಪಾದ್‌, ರಾಜಕಾರಣಿ ಎಸ್‌. ಸೇಂಥಿಲ್‌ ಕುಮಾರ್‌ ಸೇರಿದಂತೆ ಅನೇಕರು ಈ ಟ್ವಿಟರ್‌ ಬಳಕೆದಾರನನ್ನು ಬಂಧಿಸಿ ಶಿಕ್ಷೆ ಕೊಡಬೇಕು ಎಂದು ಪೊಲೀಸರಿಗೆ ಒತ್ತಾಯಿಸಿದ್ದಾರೆ. 'ಇವರೆಲ್ಲ ಮನುಷ್ಯರಾ? ಈ ವ್ಯಕ್ತಿಯನ್ನು ಬೇಗ ಪತ್ತೆ ಹಚ್ಚಿ ಜೈಲಿಗೆ ಕಳಿಸಿ' ಎಂದು ಸೇಂಥಿಲ್‌ ಕುಮಾರ್‌ ಟ್ವೀಟ್‌ ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಕ್ರಿಕೆಟಿಗ ಮಹೇಂದ್ರ ಸಿಂಗ್‌ ಧೋನಿ ಅವರ ಪುತ್ರಿಗೂ ಇದೇ ರೀತಿ ರೇಪ್‌ ಬೆದರಿಕೆ ಹಾಕಲಾಗಿತ್ತು. ನಂತರ ಆ ವ್ಯಕ್ತಿಯನ್ನು ಪೊಲೀಸರು ಬಂಧಿಸಿದರು.

also read: ಮುತ್ತಯ್ಯ ಮುರಳೀಧರನ್ ಬಯೋಪಿಕ್‌ಗೆ 'Good Bye' ಹೇಳಿದ ನಟ ವಿಜಯ್ ಸೇತುಪತಿ! ಕಾರಣವೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌