ವಿಕ ಸುದ್ದಿಲೋಕ ಬೆಂಗಳೂರು
''ರಂಗಭೂಮಿಯ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದು ಪ್ರಬುದ್ಧತೆ ಗಳಿಸಿದ್ದ ಸಂಚಾರಿ ವಿಜಯ್ ಜತೆ ಸಿನಿಮಾ ಮಾಡುವ ಅವಕಾಶ ನನಗೆ ಕೂಡಿ ಬರಲಿಲ್ಲ. ಚರ್ಚೆ ಹಂತದಲ್ಲೇ ಇತ್ತು. ಆ ವೇಳೆಗಾಗಲೇ ವಿಧಿ ಆತನನ್ನು ಬಲಿ ಪಡೆಯಿತು'' ಎಂದು ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು. ರಂಗ ಚಂದಿರ ತಂಡದ ಕಲಾವಿದರಿಂದ ಟೌನ್ಹಾಲ್ ಮುಂಭಾಗದಲ್ಲಿ ಹಮ್ಮಿಕೊಂಡಿದ್ದ ನಟ ಸಂಚಾರಿ ವಿಜಯ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
''ಒಳ್ಳೆಯ ಮರಗಳಿಗೇ ಆ ದೇವರು ಕೊಡಲಿ ಬೀಸುತ್ತಾನೆ ಎಂಬರ್ಥದ ಜನಪದ ಗೀತೆಯೊಂದಿದೆ. ದೇವರಿದ್ದಾನೋ ಇಲ್ಲವೋ ತಿಳಿಯೆನು. ಆದರೆ, ಆ ಗೀತೆಯ ಸಾಲು ಸಂಚಾರಿ ವಿಜಯ್ ಸಾವಿನ ಸಂದರ್ಭದಲ್ಲಿ ನಿಜವೆನ್ನಿಸುತ್ತಿದೆ. ಇದು ಚಿಮ್ಮುವ ಕಾರಂಜಿಯೊಂದು ಥಟ್ಟನೆ ಬತ್ತಿದಂತೆ, ಅರಳುವ ಕುಸುಮವನ್ನು ಕಿತ್ತು ಹೊಸಕಿದಂತೆ'' ಎಂದು ವಿಷಾದ ವ್ಯಕ್ತಪಡಿಸಿದರು.
''ಸುರಕ್ಷತೆ ಬಗ್ಗೆ ಎಲ್ಲರೂ ಅತಿ ಎಚ್ಚರಿಕೆಯಿಂದಿರಬೇಕಾದ ಕಾಲವಿದು. ನಂದಿ ಹೋದ ನನ್ನ ಕಿರಿಯ ಸಹೋದರನ ನೆನಪಿನ ಸಂಕೇತವಾಗಿ ಇಂದು ರಂಗಭೂಮಿಯ ಗೆಳೆಯರೆಲ್ಲ ಕೂಡಿ ದೀಪ ಬೆಳಗಿದ್ದೇವೆ. ಸಂಚಾರಿ ವಿಜಯ್ ನೆನಪು ನಮ್ಮಲ್ಲಿ ಸದಾ ಬೆಳಗುತ್ತಿರಲಿ. ಆತನ ಸಾಮಾಜಿಕ ಕಾಳಜಿ ಕಲಾವಿದರಿಗೆ ಮಾದರಿಯಾಗಲಿ'' ಎಂದು ನುಡಿದರು.
'ಸಂಚಾರಿ' ವಿಜಯ್ ನಟನೆಯ ಆ ಸಿನಿಮಾ ನೋಡಿ ಫಿದಾ ಆಗಿದ್ದ ಸುದೀಪ್! ವಿಜಯ್ ನಟನೆ ಬಗ್ಗೆ 'ಕಿಚ್ಚ' ಹೇಳಿದ್ದೇನು?
ರಂಗ ಚಂದಿರ ಸಂಸ್ಥಾಪಕ ಕಾರ್ಯದರ್ಶಿ ಜಿಪಿಒ ಚಂದ್ರು, ರಂಗ ನಿರ್ದೇಶಕರಾದ ಶಶಿಧರ ಅಡಪ, ಶಶಿಧರ್ ಬಾರಿಘಾಟ್ ಮತ್ತಿತರರು ಪಾಲ್ಗೊಂಡಿದ್ದರು.
ಜೂನ್ 12ರಂದು ನಡೆದ ಅಪಘಾತದಲ್ಲಿ ಸಂಚಾರಿ ವಿಜಯ್ ಅವರ ತಲೆ ಹಾಗೂ ತೊಡೆಗೆ ಭಾರೀ ಪೆಟ್ಟು ಬಿದ್ದಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರಿ ಕಚೇರಿ
''ರಂಗಭೂಮಿಯ ಹಿನ್ನೆಲೆಯಿಂದ ಸಿನಿಮಾಕ್ಕೆ ಬಂದು ಪ್ರಬುದ್ಧತೆ ಗಳಿಸಿದ್ದ ಸಂಚಾರಿ ವಿಜಯ್ ಜತೆ ಸಿನಿಮಾ ಮಾಡುವ ಅವಕಾಶ ನನಗೆ ಕೂಡಿ ಬರಲಿಲ್ಲ. ಚರ್ಚೆ ಹಂತದಲ್ಲೇ ಇತ್ತು. ಆ ವೇಳೆಗಾಗಲೇ ವಿಧಿ ಆತನನ್ನು ಬಲಿ ಪಡೆಯಿತು'' ಎಂದು ಹಿರಿಯ ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
''ಒಳ್ಳೆಯ ಮರಗಳಿಗೇ ಆ ದೇವರು ಕೊಡಲಿ ಬೀಸುತ್ತಾನೆ ಎಂಬರ್ಥದ ಜನಪದ ಗೀತೆಯೊಂದಿದೆ. ದೇವರಿದ್ದಾನೋ ಇಲ್ಲವೋ ತಿಳಿಯೆನು. ಆದರೆ, ಆ ಗೀತೆಯ ಸಾಲು ಸಂಚಾರಿ ವಿಜಯ್ ಸಾವಿನ ಸಂದರ್ಭದಲ್ಲಿ ನಿಜವೆನ್ನಿಸುತ್ತಿದೆ. ಇದು ಚಿಮ್ಮುವ ಕಾರಂಜಿಯೊಂದು ಥಟ್ಟನೆ ಬತ್ತಿದಂತೆ, ಅರಳುವ ಕುಸುಮವನ್ನು ಕಿತ್ತು ಹೊಸಕಿದಂತೆ'' ಎಂದು ವಿಷಾದ ವ್ಯಕ್ತಪಡಿಸಿದರು.
''ಸುರಕ್ಷತೆ ಬಗ್ಗೆ ಎಲ್ಲರೂ ಅತಿ ಎಚ್ಚರಿಕೆಯಿಂದಿರಬೇಕಾದ ಕಾಲವಿದು. ನಂದಿ ಹೋದ ನನ್ನ ಕಿರಿಯ ಸಹೋದರನ ನೆನಪಿನ ಸಂಕೇತವಾಗಿ ಇಂದು ರಂಗಭೂಮಿಯ ಗೆಳೆಯರೆಲ್ಲ ಕೂಡಿ ದೀಪ ಬೆಳಗಿದ್ದೇವೆ. ಸಂಚಾರಿ ವಿಜಯ್ ನೆನಪು ನಮ್ಮಲ್ಲಿ ಸದಾ ಬೆಳಗುತ್ತಿರಲಿ. ಆತನ ಸಾಮಾಜಿಕ ಕಾಳಜಿ ಕಲಾವಿದರಿಗೆ ಮಾದರಿಯಾಗಲಿ'' ಎಂದು ನುಡಿದರು.
'ಸಂಚಾರಿ' ವಿಜಯ್ ನಟನೆಯ ಆ ಸಿನಿಮಾ ನೋಡಿ ಫಿದಾ ಆಗಿದ್ದ ಸುದೀಪ್! ವಿಜಯ್ ನಟನೆ ಬಗ್ಗೆ 'ಕಿಚ್ಚ' ಹೇಳಿದ್ದೇನು?
ರಂಗ ಚಂದಿರ ಸಂಸ್ಥಾಪಕ ಕಾರ್ಯದರ್ಶಿ ಜಿಪಿಒ ಚಂದ್ರು, ರಂಗ ನಿರ್ದೇಶಕರಾದ ಶಶಿಧರ ಅಡಪ, ಶಶಿಧರ್ ಬಾರಿಘಾಟ್ ಮತ್ತಿತರರು ಪಾಲ್ಗೊಂಡಿದ್ದರು.
ಜೂನ್ 12ರಂದು ನಡೆದ ಅಪಘಾತದಲ್ಲಿ ಸಂಚಾರಿ ವಿಜಯ್ ಅವರ ತಲೆ ಹಾಗೂ ತೊಡೆಗೆ ಭಾರೀ ಪೆಟ್ಟು ಬಿದ್ದಿತ್ತು. ತಕ್ಷಣ ಆಸ್ಪತ್ರೆಗೆ ಸೇರಿಸಿದ್ದರೂ ಕೂಡ ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ.
ಸಂಚಾರಿ ವಿಜಯ್ ನಿಧನಕ್ಕೆ ಕನ್ನಡದಲ್ಲಿಯೇ ಸಂತಾಪ ಸೂಚಿಸಿದ ಅಮೆರಿಕ ರಾಯಭಾರಿ ಕಚೇರಿ