ಆ್ಯಪ್ನಗರ

ಎಂಎಲ್‌ಎ ಆಗಲಿದ್ದಾರೆ 'ಕ್ರೇಜಿ ಸ್ಟಾರ್‌' ರವಿಚಂದ್ರನ್‌ ಸಿನಿಮಾಗಳ ನಟಿ ನಮಿತಾ!

ಗ್ಲಾಮರಸ್ ಪಾತ್ರಗಳಿಂದಲೇ ದಕ್ಷಿಣ ಭಾರತದಲ್ಲಿ ಗುರುತಿಸಿಕೊಂಡಿರುವ ನಟಿ ನಮಿತಾ, ಈಚೆಗೆ ಬಿಜೆಪಿ ಪಕ್ಷ ಸೇರ್ಪಡೆಗೊಂಡಿದ್ದರು. ಇದೀಗ ಅವರು ಶೀಘ್ರದಲ್ಲೇ ಶಾಸಕಿ ಕೂಡ ಆಗಲಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 9 Nov 2020, 4:40 pm
ಗ್ಲಾಮರಸ್ ಪಾತ್ರಗಳಿಂದಲೇ ಗಮನಸೆಳೆದ ನಟಿ ನಮಿತಾ. 2002ರಲ್ಲಿ ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ನಟಿ ಕನ್ನಡದಲ್ಲಿ ರವಿಚಂದ್ರನ್ ಜೊತೆ 'ನೀಲಕಂಠ', 'ಹೂ' ಸಿನಿಮಾಗಳಲ್ಲಿಯೂ ನಟಿಸಿದ್ದರು. ಸದ್ಯ ಬಿಜೆಪಿ ಪಕ್ಷ ಸೇರ್ಪಡೆ ಆಗಿರುವ ನಮಿತಾ, ರಾಜಕೀಯಕ್ಕೂ ಧುಮುಕಿದ್ದಾರೆ. ಈ ಮಧ್ಯೆ ಅವರು ಶೀಘ್ರದಲ್ಲೇ ಶಾಸಕಿ ಕೂಡ ಆಗಲಿದ್ದಾರೆ! ಯಾವ ಕ್ಷೇತ್ರದಿಂದ? 'ಅಯ್ಯೋ, ನಿಜವಾಗಿ ಎಂಎಲ್‌ಎ ಅಲ್ಲ, ಬದಲಿಗೆ ಸಿನಿಮಾದಲ್ಲಿ ಅವರು ಶಾಸಕಿ ಪಾತ್ರ ಮಾಡಲಿದ್ದಾರೆ!
Vijaya Karnataka Web Namitha


ಬಾಲಯ್ಯ ಸಿನಿಮಾದಲ್ಲಿ ನಮಿತಾ!

ತೆಲುಗಿನಲ್ಲಿ ನಟ ನಂದಮೂರಿ ಬಾಲಕೃಷ್ಣ ಮತ್ತು ಬೊಯಪಟಿ ಶ್ರೀನು ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರಿದೆ. ಶೀಘ್ರದಲ್ಲೇ ಶೂಟಿಂಗ್ ಕೂಡ ಆರಂಭಗೊಳ್ಳಲಿದೆ. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಈ ಹಿಂದೆ 'ಸಿಂಹ', 'ಲೆಜೆಂಡ್' ಸಿನಿಮಾಗಳು ತೆರೆಕಂಡು ಸೂಪರ್ ಹಿಟ್ ಆಗಿವೆ. ಈಗ ಈ ಜೋಡಿಯ ಮೂರನೇ ಸಿನಿಮಾದ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ. ವಿಶೇಷವೆಂದರೆ, 'ಸಿಂಹ' ಮತ್ತು 'ಲೆಜೆಂಡ್‌' ಸಿನಿಮಾಗಳಲ್ಲಿ ಬಾಲಯ್ಯ ದ್ವಿಪಾತ್ರ ಮಾಡಿದ್ದರು. ಈಗ ಮಾಡಲಿರುವ ಹೊಸ ಸಿನಿಮಾದಲ್ಲೂ ದ್ವಿಪಾತ್ರ ಮಾಡಲಿದ್ದಾರೆ. ಸದ್ಯ ಸಿನಿಮಾದ ಎಂಎಲ್‌ಎ ಪಾತ್ರಕ್ಕೆ ನಮಿತಾರನ್ನು ಆಯ್ಕೆ ಮಾಡಲಾಗಿದೆ.

10 ವರ್ಷಗಳ ನಂತರ ಒಂದಾದ ಬಾಲಯ್ಯ-ನಮಿತಾ
2010ರಲ್ಲಿ ತೆರೆಕಂಡ 'ಸಿಂಹ' ಚಿತ್ರದಲ್ಲಿ ಬಾಲಯ್ಯ ಜೊತೆಗೆ ನಮಿತಾ ನಟಿಸಿದ್ದರು. ಆ ಸಿನಿಮಾ ದೊಡ್ಡ ಹಿಟ್ ಆಗಿದ್ದರಿಂದ ನಮಿತಾಗೂ ಬಿಗ್ ಬ್ರೇಕ್ ಸಿಕ್ಕಿತ್ತು. ಆದರೆ, ಆ ಯಶಸ್ಸನ್ನು ತೆಲುಗು ಇಂಡಸ್ಟ್ರೀಯಲ್ಲಿ ಸರಿಯಾಗಿ ಬಳಕೆ ಮಾಡಿಕೊಳ್ಳುವಲ್ಲಿ ನಮಿತಾ ಸೋತಿದ್ದರು. ಇದೀಗ ಇನ್ನೊಮ್ಮೆ ಈ ಹೊಸ ಚಿತ್ರದಲ್ಲಿ ಬಾಲಯ್ಯ ಜೊತೆ ನಟಿಸುವ ಅವಕಾಶ ಅವರಿಗೆ ಸಿಕ್ಕಿದೆ. ಇನ್ನು, ಇದೇ ಸಿನಿಮಾದಲ್ಲಿ ಪ್ರಗ್ಯಾ ಜೈಸ್ವಾಲ್ ಕೂಡ ಪ್ರಮುಖ ಪಾತ್ರ ಮಾಡುವ ಸಾಧ್ಯತೆ ಇದೆ. ಎಸ್‌ಎಸ್ ಥಮನ್ ಸಂಗೀತ ನೀಡುತ್ತಿದ್ದು, ಮಿರ್ಯಾಲ ರವೀಂದರ್ ಹಣ ಹಾಕುತ್ತಿದ್ದಾರೆ.

ಅಶ್ಲೀಲ ವಿಡಿಯೋ ಬೆದರಿಕೆ ಬಗ್ಗೆ ಎಳೆ ಎಳೆಯಾಗಿ ಸತ್ಯ ಬಿಚ್ಚಿಟ್ಟ ದರ್ಶನ್, ರವಿಚಂದ್ರನ್ ಸಿನಿಮಾಗಳ ನಾಯಕಿ ನಮಿತಾ

ಇನ್ನು, 2017ರಲ್ಲಿ ವೀರೇಂದ್ರ ಚೌಧರಿ ಎಂಬುವವರ ಜೊತೆ ಮದುವೆಯಾದ ನಮಿತಾ, ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಿದ್ದಾರೆ. ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದಾರೆ. ಇನ್ನು, ಬಿಜೆಪಿ ಪಕ್ಷ ಸೇರ್ಪಡೆಯಾಗಿರುವ ಅವರು, ತಮಿಳುನಾಡಿನಲ್ಲಿ ಪಕ್ಷದ ಪರ ಕೆಲಸ ಮಾಡುತ್ತಿದ್ದಾರೆ. ಅವರು ಕನ್ನಡದಲ್ಲಿ ಕೊನೆಯದಾಗಿ ಕಾಣಿಸಿಕೊಂಡ ಸಿನಿಮಾ 2013ರಲ್ಲಿ ತೆರೆಕಂಡ 'ಬೆಂಕಿ ಬಿರುಗಾಳಿ'!

ಬಳುಕುವ ಬಳ್ಳಿಯಂತಾದ ನಟಿ ನಮಿತಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌