ಆ್ಯಪ್ನಗರ

ಉಪೇಂದ್ರ 'ಕಬ್ಜಾ' ಸಿನಿಮಾದಲ್ಲಿ ನಾನಾ ಪಾಟೇಕರ್‌, ಮನೋಜ್‌ ಬಾಜಪೈ

ಭಾರತೀಯ ಸಿನಿಮಾ ರಂಗದ ಖ್ಯಾತ ಖಳನಟರು ಈ ಸಿನಿಮಾದಲ್ಲಿ ಒಂದಾಗುತ್ತಿದ್ದಾರೆ. ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಯೋಗ ಮಾಡುತ್ತಿದ್ದೇನೆ ಎಂದಿದ್ದಾರೆ ರಿಯಲ್ ಸ್ಟಾರ್ ಉಪೇಂದ್ರ ನಾಯಕನಟನಾಗಿರುವ 'ಕಬ್ಜಾ' ಚಿತ್ರದ ನಿರ್ದೇಶಕರಾದ ಆರ್ ಚಂದ್ರು.

Vijaya Karnataka 4 Nov 2019, 8:31 pm

* ಶರಣು ಹುಲ್ಲೂರು
Vijaya Karnataka Web nana patekar manoj bajpai among half dozen villans in upendra movie kabza
ಉಪೇಂದ್ರ 'ಕಬ್ಜಾ' ಸಿನಿಮಾದಲ್ಲಿ ನಾನಾ ಪಾಟೇಕರ್‌, ಮನೋಜ್‌ ಬಾಜಪೈ


ಉಪೇಂದ್ರ ನಟನೆಯ 'ಕಬ್ಜ' ಸಿನಿಮಾದಲ್ಲಿಬರೋಬ್ಬರಿ ಏಳು ಭಾಷೆಯ ವಿಲನ್‌ಗಳು ನಟಿಸಲಿದ್ದಾರೆ. ಏಳಕ್ಕೂ ಹೆಚ್ಚು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು, ಆಯಾ ಭಾಷೆಯ ಪಾಪ್ಯುಲರ್‌ ಖಳನಟರನ್ನು ಈ ಸಿನಿಮಾಗಾಗಿ ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕ ಆರ್‌.ಚಂದ್ರು.

ಬಾಲಿವುಡ್‌ನಿಂದ ನಾನಾ ಪಾಟೇಕರ್‌ ಮತ್ತು ಮನೋಜ್‌ ಬಾಜಪೈ, ಕನ್ನಡ, ತೆಲುಗು ಮತ್ತು ತಮಿಳು ಸಿನಿಮಾ ರಂಗದ ಖ್ಯಾತ ನಟ ಪ್ರಕಾಶ್‌ ರಾಜ್‌, ತೆಲುಗಿನ ಜಗಪತಿಬಾಬು ಮತ್ತು ಜಯ ಪ್ರಕಾಶ್‌ ರೆಡ್ಡಿ ಈ ಸಿನಿಮಾದಲ್ಲಿ ವಿಲನ್‌ಗಳಾಗಿ ನಟಿಸಲಿದ್ದಾರೆ. ಅಲ್ಲದೇ. ಪ್ರದೀಪ್‌ ರಾವತ್‌ ಮತ್ತು ಸಮುದ್ರ ಖಣಿ ಕೂಡ ಈ ಸಿನಿಮಾದಲ್ಲಿ ನಟಿಸಲಿದ್ದಾರೆ.

ಚೀನಾದಲ್ಲಿ 'ಕಬ್ಜ'ನಾಗಿ ರೌಡಿಸಂ ಮಾಡಲು ಹೊರಟ ಉಪೇಂದ್ರ

'ಏಳು ಭಾಷೆಗೆ ಒಪ್ಪುವಂಥ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಇದೊಂದು ಪ್ಯಾನ್‌ ಇಂಡಿಯಾ ಕಲ್ಪನೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಹಾಗಾಗಿ ಆಯಾ ಸಿನಿಮಾ ಇಂಡಸ್ಟ್ರಿಯಲ್ಲಿ ಪಾಪ್ಯುಲರ್‌ ಆಗಿರುವಂಥ ನಟರೇ ಸಿನಿಮಾದಲ್ಲಿ ಇರಲಿದ್ದಾರೆ. ನ.15ರಿಂದ ಈ ಸಿನಿಮಾಗೆ ಚಾಲನೆ ಸಿಗಲಿದೆ' ಎಂದರು ನಿರ್ದೇಶಕ ಚಂದ್ರು.

ಐನೂರು ಜನ ಗ್ಯಾಂಗ್‌ಸ್ಟರ್‌ :
ಈ ಸಿನಿಮಾದ ಮತ್ತೊಂದು ವಿಶೇಷ ಅಂದರೆ, ಬರೋಬ್ಬರಿ ಐನೂರು ಜನ ಗ್ಯಾಂಗ್‌ಸ್ಟರ್‌ ಈ ಸಿನಿಮಾದಲ್ಲಿ ನಟಿಸಲಿದ್ದಾರೆ. ಇದೇ ಮೊದಲ ಬಾರಿಗೆ ಈ ಪ್ರಮಾಣದಲ್ಲಿ ಕಲಾವಿದರನ್ನು ಆಯ್ಕೆ ಮಾಡಿಕೊಂಡಿದ್ದಾರೆ ನಿರ್ದೇಶಕರು.

ಐ ಲವ್ ಯು ಅರ್ಧಶತಕ ಸಂಭ್ರಮ: ರಚಿತಾ ರಾಮ್ ಯಾಕೆ ಬರಲಿಲ್ಲ?

'ಗ್ಯಾಂಗ್‌ಸ್ಟರ್‌ ಈ ಸಿನಿಮಾದಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರೆ. ಅದಕ್ಕಾಗಿ ನಾನಾ ಸಿನಿಮಾ ರಂಗದ ಹಲವು ಕಲಾವಿದರ ಆಡಿಷನ್‌ ಮಾಡಿದೆವು. ಹತ್ತು ಸಾವಿರಕ್ಕೂ ಹೆಚ್ಚು ಕಲಾವಿದರು ಈ ಆಡಿಷನ್‌ನಲ್ಲಿ ಭಾಗಿಯಾಗಿದ್ದರು. ಅವರಲ್ಲಿ ಐನೂರು ಜನರನ್ನು ಆಯ್ಕೆ ಮಾಡಿಕೊಂಡೆವು. ಪ್ರತಿ ಫ್ರೇಮ್‌ನಲ್ಲೂ ಅವರು ಇರಲಿದ್ದಾರೆ' ಎನ್ನುತ್ತಾರೆ ಚಂದ್ರು.

ಇದೊಂದು ಬಹುಕೋಟಿ ಬಜೆಟ್‌ ಸಿನಿಮಾ. ಐ ಲವ್‌ ಯೂ ಸಿನಿಮಾದ ನಂತರ ಆರ್‌.ಚಂದ್ರು ಮತ್ತು ಉಪೇಂದ್ರ ಮತ್ತೆ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಕ್ಕಾಗಿ ಉಪೇಂದ್ರ ಸಖತ್ತಾಗಿ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದಾರೆ.

ಉಗ್ರರನ್ನು ಹೊಡೆದುರುಳಿಸಲು 'ತಂತ್ರ' ಹೇಳಿಕೊಟ್ಟ ಉಪೇಂದ್ರ
'ಐ ಲವ್‌ ಯೂ ಸಿನಿಮಾದ ನಂತರ ಮತ್ತೆ ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಳ್ಳುತ್ತೀರಿ ಎಂದು ಹಲವರು ಕೇಳಿದ್ದರು. ಈ ಬಾರಿ ಭೂಗತ ಜಗತ್ತಿನ ಅಪರೂಪದ ಕಥೆಯನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಮೊದಲ ಬಾರಿಗೆ ಉಪೇಂದ್ರ ಇಂಥದ್ದೊಂದು ಪಾತ್ರ ಮಾಡುತ್ತಿದ್ದಾರೆ. ಭಾರತೀಯ ಸಿನಿಮಾ ರಂಗಕ್ಕೆ ಒಪ್ಪುವಂಥ ಚಿತ್ರ ಇದಾಗಲಿದೆ' ಎಂದರು ಚಂದ್ರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌