ಆ್ಯಪ್ನಗರ

'ಕೊರೊನಾ ಗುಣಪಡಿಸುವ ಯಾವ ಔಷಧಿಯೂ ಸೃಷ್ಟಿಯಾಗಲ್ಲ'- ಬಾಲಯ್ಯ ಶಾಕಿಂಗ್ ಹೇಳಿಕೆ!

ಕೊರೊನಾ ವೈರಸ್ ಇರುವುದರಿಂದ ನಟ ನಂದಮೂರಿ ಬಾಲಕೃಷ್ಣ, ಈಚೆಗೆ ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಂಡಿರಲಿಲ್ಲ. ಆದರೆ, ಈಗ ಅವರು ಸಿನಿಮಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ, ಕೊರೊನಾ ಬಗ್ಗೆಯೇ ಶಾಕಿಂಗ್ ಹೇಳಿಕೆ ನೀಡಿದ್ದಾರೆ.

Vijaya Karnataka Web 16 Nov 2020, 7:44 pm
ಕೊರೊನಾ ವೈರಸ್‌ನಿಂದಾಗಿ ಇಡೀ ಜಗತ್ತೇ ತತ್ತರಿಸಿ ಹೋಗಿದೆ. ಇದುವರೆಗೂ ವಿಶ್ವದಲ್ಲಿ ಲಕ್ಷಾಂತರ ಮಂದಿ ಈ ಮಹಾಮಾರಿ ವೈರಸ್‌ಗೆ ಬಲಿಯಾಗಿದ್ದಾರೆ. ಮೊದಲಿಗೆ ಹೋಲಿಕೆ ಮಾಡಿದರೆ, ಈಗ ಸೋಂಕಿತರ ಪ್ರಮಾಣ ಕೊಂಚ ತಗ್ಗಿರಬಹುದು. ಆದರೆ, ಪೂರ್ಣವಾಗಿ ಅಂತೂ ಕೊರೊನಾ ನಿವಾರಣೆ ಆಗಿಲ್ಲ! ಇದಕ್ಕೆ ವ್ಯಾಕ್ಸಿನ್ ಕಂಡುಹಿಡಿಯಲು ಸಾಕಷ್ಟು ವಿಜ್ಞಾನಿಗಳು ಪ್ರಯತ್ನ ಪಡುತ್ತಿದ್ದಾರೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹಾಗಾದರೆ, ಕೊರೊನಾ ಔ‍ಷಧಿ ಸೃಷ್ಟಿಯಾಗುವುದಿಲ್ಲವೇ? ಇಲ್ಲ ಅಂತ ಕಡ್ಡಿಮುರಿದಂತೆ ಹೇಳಿದ್ದಾರೆ ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ!
Vijaya Karnataka Web nandamuri balakrishna


ಕೊರೊನಾಗೆ ವ್ಯಾಕ್ಸಿನ್ ಇಲ್ಲ!

ಈಚೆಗೆ ಹೊಸ ಸಿನಿಮಾವೊಂದರ ಪ್ರೆಸ್‌ಮೀಟ್‌ನಲ್ಲಿ ಭಾಗವಹಿಸಿದ್ದ ಅವರು, ಈ ಬಗ್ಗೆ ಮಾತನಾಡಿದ್ದಾರೆ. 'ಸದ್ಯಕ್ಕಂತೂ ಕೊರೊನಾವನ್ನು ಗುಣಪಡಿಸುವ ಯಾವುದೇ ವ್ಯಾಕ್ಸಿನ್‌ ಸೃಷ್ಟಿಯಾಗಿಲ್ಲ, ಆಗುವುದು ಇಲ್ಲ! ವೈರಸ್ ನಮ್ಮಿಂದ ದೂರ ಹೋಗಿಲ್ಲ. ನಾವೀಗ ಅದರೊಂದಿಗೆ ಬದುಕುವುದನ್ನು ಕಲಿಯಬೇಕಿದೆ. ಜನರು ಈಗ ತುಂಬ ಎಚ್ಚರಿಕೆಯಿಂದ ಇರಬೇಕಿದೆ' ಎಂದು ಹೇಳಿದ್ದಾರೆ ಬಾಲಯ್ಯ.

ಬಾಲಯ್ಯ ನೀಡಿದ ಸಲಹೆಗಳೇನು?
ಕೊರೊನಾ ಇನ್ನೂ ಇರುವುದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿರುವ ಅವರು, ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ. 'ಯಾವುದೇ ಕಾರಣಕ್ಕೂ ತಣ್ಣೀರಿನಲ್ಲಿ ಸ್ನಾನ ಮಾಡಬೇಡಿ. ಎಲ್ಲ ಕಡೆ ಈ ಕೊರೊನಾ ಮಹಾಮಾರಿ ವೈರಸ್ ಇನ್ನೂ ಇದೆ. ಸಾಧ್ಯವಾದಷ್ಟು ಬಿಸಿನೀರಿನಲ್ಲಿ ಸ್ನಾನ ಮಾಡಿ, ದಿನಕ್ಕೆರಡು ಬಾರಿ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಿ' ಎಂದು ಬಾಲಯ್ಯ ಹೇಳಿದ್ದಾರೆ. ಆಂಧ್ರ ಪ್ರದೇಶದ ಮಾಜಿ ಸಿಎಂ ಕಿರಣ್‌ಕುಮಾರ್ ರೆಡ್ಡಿ ಅವರ ಕುಟುಂಬದವರು 'ಸೆಹರಿ' ಸಿನಿಮಾದ ಮೂಲಕ ನಿರ್ಮಾಣಕ್ಕೆ ಇಳಿದಿದ್ದಾರೆ. ಕಿರಣ್‌ಕುಮಾರ್ ಅವರಿಗೆ ಆಪ್ತರಾಗಿರುವ ಬಾಲಯ್ಯ ಈ ಸಿನಿಮಾದ ಫಸ್ಟ್ ಲುಕ್ ಲಾಂಚ್ ಮಾಡಿದರು.

ನಟಿ ಸೌಂದರ್ಯಾ 16 ವರ್ಷಗಳ ಹಿಂದೆ 'ದ್ರೌಪದಿ' ಪಾತ್ರ ಮಾಡಿದ್ದ ಸಿನಿಮಾ ಈಗ ರಿಲೀಸ್!

ಇನ್ನು, ಬಾಲಯ್ಯ ಅಭಿನಯದ 'ರೂಲರ್‌' ಸಿನಿಮಾ ಕಳೆದ ವರ್ಷ ತೆರೆಕಂಡಿತ್ತು. ಈ ವರ್ಷ ಕೊರೊನಾದಿಂದಾಗಿ ಯಾವುದೇ ಸಿನಿಮಾ ಆರಂಭಗೊಂಡಿಲ್ಲ. ನಿರ್ದೇಶಕ ಬೊಯಪಟಿ ಶ್ರೀನು ಜೊತೆ ಒಂದು ಸಿನಿಮಾ ಘೋಷಣೆ ಆಗಿದೆ. ಅದರಲ್ಲಿ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಾಯಕಿಯಾಗಿ 'ಯುವರತ್ನ' ಖ್ಯಾತಿಯ ಸಾಯೇಶಾ ಕಾಣಿಸಿಕೊಳ್ಳಲಿದ್ದಾರೆ. ನಟಿ ನಮಿತಾ ಶಾಸಕಿ ಪಾತ್ರದಲ್ಲಿ ನಟಿಸಲಿದ್ದಾರೆ!

Sayyeshaa: ಬಾಲಯ್ಯ ಸಿನಿಮಾಗೆ ನಾಯಕಿಯಾದ 'ಯುವರತ್ನ' ನಟಿ ಸಾಯೇಶಾ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌