ಆ್ಯಪ್ನಗರ

ಕನ್ನಡ ನಟಿ ಸೌಂದರ್ಯಾ ಅಭಿನಯಿಸಿದ್ದ ಕೊನೇ ಸಿನಿಮಾದ ಟ್ರೇಲರ್ ರಿಲೀಸ್! ದಸರಾ ಹಬ್ಬಕ್ಕೆ ಸಿನಿಮಾ ಬಿಡುಗಡೆ!

ಬಹುಭಾಷಾ ನಟಿ ಸೌಂದರ್ಯಾ ಅವರು ನಟಿಸಿದ್ದ ಕೊನೆಯ ಸಿನಿಮಾದ ಟ್ರೇಲರ್ ಈಗ ರಿಲೀಸ್ ಆಗಿದೆ. ಆ ಸಿನಿಮಾ ದಸರಾ ಹಬ್ಬದ ಕೊಡುಗೆಯಾಗಿ ರಿಲೀಸ್‌ ಆಗುತ್ತಿದೆ. ಆ ಕುರಿತ ಪೂರ್ಣ ವಿವರ ಇಲ್ಲಿದೆ.

Vijaya Karnataka Web 22 Oct 2020, 9:07 pm
ಕನ್ನಡದ ಜೊತೆ ಜೊತೆಗೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಗುರುತಿಸಿಕೊಂಡವರು ನಟಿ ಸೌಂದರ್ಯಾ. ಅದ್ಭುತ ನಟಿ ಎಂದು ಹೆಸರು ಪಡೆದಿದ್ದ ಅವರು, ಕಡಿಮೆ ಅವಧಿಯಲ್ಲಿಯೇ ದಕ್ಷಿಣ ಭಾರತದ ಬಹುಬೇಡಿಕೆಯ ಕಲಾವಿದೆಯಾಗಿ ಜನಪ್ರಿಯರಾಗಿದ್ದರು. ಆದರೆ, ದುರದೃಷ್ಟವಶಾತ್ ಅವರು ಚಿಕ್ಕ ವಯಸ್ಸಿನಲ್ಲೇ ಸಾವನ್ನಪ್ಪಿದ್ದರು. ಅಂದು ಅವರ ಸಾವಿನಿಂದಾಗಿ ನಿಂತುಹೋದ ಸಿನಿಮಾವೊಂದು ಈಗ ರಿಲೀಸ್ ಆಗುವುದಕ್ಕೆ ಸಿದ್ಧತೆ ನಡೆಸಿದೆ. ಅದಕ್ಕೂ ಮೊದಲು ಆ ಸಿನಿಮಾದ ಟ್ರೇಲರ್ ಅನ್ನು ಈಗ ರಿಲೀಸ್ ಮಾಡಲಾಗಿದೆ.
Vijaya Karnataka Web Narthanasala


ದಸರಾ ಹಬ್ಬಕ್ಕೆ 'ನರ್ತನಶಾಲಾ'
ತೆಲುಗಿನ ಎನ್‌.ಟಿ. ರಾಮಾರಾವ್‌ ಅವರು ಪೌರಾಣಿಕ ಸಿನಿಮಾಗಳನ್ನು ಮಾಡುವುದರಲ್ಲಿ ಫೇಮಸ್ ಆಗಿದ್ದವರು. ತಂದೆಯ ದಾರಿಯನ್ನೇ ಅನುಸರಿಸಿದ ನಟ ನಂದಮೂರಿ ಬಾಲಕೃಷ್ಣ, ಎನ್‌ಟಿಆರ್ ಅವರ 'ನರ್ತನಶಾಲಾ' ಸಿನಿಮಾವನ್ನೇ ರಿಮೇಕ್ ಮಾಡುವುದಕ್ಕೆ ಮುಂದಾಗಿದ್ದರು. ಅದರಲ್ಲಿ ದ್ರೌಪದಿ ಪಾತ್ರವನ್ನು ಮಾಡಿದ್ದವರು ನಟಿ ಸೌಂದರ್ಯಾ. ನಿರ್ದೇಶನ ಮಾಡುವುದರ ಜೊತೆಗೆ ಅರ್ಜುನ ಮತ್ತು ಕೀಚಕ ಪಾತ್ರಗಳನ್ನು ಬಾಲಯ್ಯ ಮಾಡುತ್ತಿದ್ದರು. ಉದಯ್ ಕಿರಣ್, ಶ್ರೀಹರಿ, ಶರತ್ ಬಾಬು, ಸಾಯಿಕುಮಾರ್‌, ಆಸೀನ್ ಉಳಿದ ಪಾತ್ರಗಳಲ್ಲಿ ನಟಿಸುತ್ತಿದ್ದರು.

2004ರ ಮಾರ್ಚ್‌ 1ರಂದು 'ನರ್ತನಶಾಲಾ'ಗೆ ಚಿತ್ರೀಕರಣ ಆರಂಭವಾಗಿತ್ತು. ಆದರೆ, 2004ರ ಏಪ್ರಿಲ್‌ 17ರಂದು ಸೌಂದರ್ಯಾ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದರು. ಅವರಿಲ್ಲದ ಕಾರಣದಿಂದ 'ನರ್ತನಶಾಲಾ' ನಿಂತುಹೋಯಿತು. ಆನಂತರ ಬಾಲಯ್ಯ ಕೂಡ, ಸೌಂದರ್ಯಾ ಇಲ್ಲದೇ ಆ ಸಿನಿಮಾ ಮಾಡುವುದಿಲ್ಲ ಎಂದು ನಿರ್ಧಾರ ಮಾಡಿದರು. ಅಲ್ಲಿಗೆ ಅವರ ಮೊದಲ ನಿರ್ದೇಶನದ ಕನಸು ಕೂಡ ಕೊನೆಯಾಯಿತು. ಇದೀಗ ದಸರಾ ಹಬ್ಬದ ಪ್ರಯುಕ್ತ ಅಂದು ಚಿತ್ರೀಕರಿಸಿದ 17 ನಿಮಿಷಗಳಷ್ಟು ಫೂಟೇಜ್‌ ಅನ್ನು ರಿಲೀಸ್ ಮಾಡೋಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.

ನಟಿ ಸೌಂದರ್ಯಾ 16 ವರ್ಷಗಳ ಹಿಂದೆ 'ದ್ರೌಪದಿ' ಪಾತ್ರ ಮಾಡಿದ್ದ ಸಿನಿಮಾ ಈಗ ರಿಲೀಸ್!

'ನರ್ತನಶಾಲಾ'ದ 17 ನಿಮಿಷಗಳಷ್ಟು ಫೂಟೇಜ್‌ ಅನ್ನು ಎಡಿಟ್ ಮಾಡಿ, ಅದನ್ನು ಆನ್‌ಲೈನ್‌ನಲ್ಲಿ ಅ.24ರಂದು ರಿಲೀಸ್ ಮಾಡಲಾಗುತ್ತಿದೆ. ಅದರಿಂದ ಬರುವ ಹಣವನ್ನು ಚಾರಿಟಿಗೆ ನೀಡುವುದಕ್ಕೆ ಬಾಲಯ್ಯ ನಿರ್ಧಾರ ಮಾಡಿದ್ದಾರೆ. ಸದ್ಯ ರಿಲೀಸ್ ಆಗಿರುವ ಟ್ರೇಲರ್‌ ನೋಡುಗರಿಗೆ ಸಖತ್ ಇಷ್ಟವಾಗಿದೆ. ಆ ಸಿನಿಮಾದಲ್ಲಿ ನಟಿಸಿದ್ದ ಸೌಂದರ್ಯಾ, ಶ್ರೀಹರಿ, ಉದಯ್‌ ಕಿರಣ್ ಈಗ ನಮ್ಮೊಂದಿಗಿಲ್ಲ. ಹಾಗಾಗಿ, ಅವರೆಲ್ಲರ ಅಭಿಮಾನಿಗಳಿಗೆ ಈ ಸಿನಿಮಾ ವಿಶೇಷವಾಗಿರಲಿದೆ ಅನ್ನೋದು ಸುಳ್ಳಲ್ಲ!

ಸಿನಿಮಾವಾಗಲಿದೆಯೇ ನಟಿ ಸೌಂದರ್ಯಾ ಬದುಕು? ಈ ಕನ್ನಡತಿಯ ಪಾತ್ರ ಮಾಡುವುದು ಯಾರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌