ಆ್ಯಪ್ನಗರ

ರಾಷ್ಟ್ರ ಪ್ರಶಸ್ತಿ ನಟ ಸಂಚಾರಿ ವಿಜಯ್‌ಗೆ ಅಪಘಾತ; ಐಸಿಯುನಲ್ಲಿ ಚಿಕಿತ್ಸೆ!

'ರಾಷ್ಟ್ರ ಪ್ರಶಸ್ತಿ' ನಟ ಸಂಚಾರಿ ವಿಜಯ್ ಅವರಿಗೆ ರಸ್ತೆ ಅಪಘಾತವಾಗಿದ್ದು, ಮೆದುಳು ಹಾಗೂ ಬಲ ತೊಡೆಗೆ ಭಾರೀ ಗಾಯವಾಗಿದೆ ಎನ್ನಲಾಗಿದೆ. ಈ ಕುರಿತು ವೈದ್ಯರು ಮಾಹಿತಿ ನೀಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Vijaya Karnataka Web 13 Jun 2021, 5:15 pm

ಹೈಲೈಟ್ಸ್‌:

  • ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟ ಸಂಚಾರಿ ವಿಜಯ್
  • ಸ್ನೇಹಿತರ ಜೊತೆ ಬೈಕ್‌ನಲ್ಲಿ ತೆರಳುತ್ತಿರುವಾಗ ಅಪಘಾತವಾಗಿದೆ
  • ಅಪಘಾತವಾದಕೂಡಲೇ ವಿಜಯ್‌ರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ
  • ಸಂಚಾರಿ ವಿಜಯ್ ಅವರ ತೊಡೆ, ತಲೆಗೆ ಪೆಟ್ಟಾಗಿದ್ದು, ಆಪರೇಶನ್ ಕೂಡ ನಡೆದಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಬೆಂಗಳೂರು: 'ರಾಷ್ಟ್ರ ಪ್ರಶಸ್ತಿ' ನಟ ಸಂಚಾರಿ ವಿಜಯ್ ಅವರಿಗೆ ರಸ್ತೆ ಅಪಘಾತವಾಗಿದೆ. ಸದ್ಯ ಅವರು ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೊ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ನೇಹಿತರ ಜೊತೆ ಬೈಕ್‌ನಲ್ಲಿ ಹಿಂದೆ ಕುಳಿತು ಹೋಗುವಾಗ ಅಪಘಾತ ನಡೆದಿದೆ ಎನ್ನಲಾಗಿದೆ.
ವಿಜಯ್ ಅವರ ಮೆದುಳಿನ ಬಲಭಾಗದಲ್ಲಿ ಹಾಗೂ ತೊಡೆಗೆ ತೀವ್ರ ಗಾಯವಾಗಿದೆ. ನಿನ್ನೆ ರಾತ್ರಿಯೇ ಈ ಅಪಘಾತ ನಡೆದಿದ್ದು ನಿನ್ನೆ ರಾತ್ರಿಯೇ ಆಪರೇಶನ್ ಕೂಡ ಮಾಡಲಾಗಿದೆ. ಮೆದುಳಿನಲ್ಲಿ ರಕ್ತಸ್ರಾವವಾಗಿದೆ. ಅಪಘಾತವಾದಕೂಡಲೇ ಅವರನ್ನು ಆಸ್ಪತ್ರೆಗೆ ಕರೆತರೆಲಾಗಿತ್ತು. ಆದರೆ ಆಸ್ಪತ್ರೆಗೆ ವಿಜಯ್‌ರನ್ನು ಕರೆತಂದಾಗಲೇ ಅವರ ಸ್ಥಿತಿ ಗಂಭೀರವಾಗಿತ್ತು.

ಸಂಚಾರಿ ವಿಜಯ್ ಧ್ವನಿಯಲ್ಲಿ ಕೇಳಿ ಗಿರೀಶ್ ಕಾರ್ನಾಡ್‌ರ ಆತ್ಮಚರಿತ್ರೆ 'ಆಡಾಡತ ಆಯುಷ್ಯ'

"ಮೆದುಳಿನ ಆಪರೇಶನ್ ಮಾಡಲಾಗಿದೆಯಂತೆ. ತೊಡೆ ಮೂಳೆಯ ಶಸ್ತ್ರಚಿಕಿತ್ಸೆ ಕೂಡ ಮಾಡಬೇಕಿದೆ. ಇನ್ನು 48 ಗಂಟೆಗಳ ಕಾಲ ಏನೂ ಹೇಳಲಾಗದು. ಮೆದುಳಿಗೆ ಹೊಡೆತ ಬಿದ್ದಿದೆ. ಇನ್ನೂ ವಿಜಯ್ ಅವರಿಗೆ ಪ್ರಜ್ಞೆ ಬಂದಿಲ್ಲ. ವೆಂಟಿಲೇಟರ್‌ ಸಪೋರ್ಟ್‌ನಲ್ಲಿದ್ದಾರೆ. ಉಸಿರಾಟ, ಹೃದಯ ಬಡಿತ ಎಲ್ಲವೂ ಸರಿಯಾಗಿದೆ, ಮೆದುಳಿಗೆ ಮೇಜರ್ ತೊಂದರೆಯಾಗಿದೆ" ಎಂದು ವೈದ್ಯ ಡಾ ಅರುಣ್ ನಾಯಕ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.


ಸಂಚಾರಿ ವಿಜಯ್ ಅವರು ಕೊರೊನಾ ವೈರಸ್‌ನಿಂದ ಬಳಲುತ್ತಿರುವವರಿಗೆ ಕೈಲಾದಷ್ಟು ಸಹಾಯ ಕೂಡ ಮಾಡಿದ್ದರು. ಇನ್ನು ವ್ಯಾಕ್ಸಿನ್, ಸಿಟಿ ಸ್ಕ್ಯಾನ್ ಕುರಿತಾಗಿ ಜನರಿಗೆ ಆಗುತ್ತಿರುವ ಸಮಸ್ಯೆಗಳ ಕುರಿತು ಹೇಳಿಕೊಂಡಿದ್ದರು. ಕೊರೊನಾದಿಂದ ನಿಧನರಾದ ಆತ್ಮೀಯರನ್ನು ನೆನಪಿಸಿಕೊಂಡು ದುಃಖಿಸಿದ್ದರು. ಕಳೆದ ಎರಡು ದಿನಗಳ ಹಿಂದೆ ಬೆಂಗಳೂರಿನ ಮೆಜೆಸ್ಟಿಕ್ ಕುರಿತು ಸುದೀರ್ಘವಾದ ಲೇಖನ ಕೂಡ ಬರೆದಿದ್ದರು.



ನಟ ಸಂಚಾರಿ ವಿಜಯ್ ಹೇಳಿದ ಕಥೆಯಲ್ಲಿ ಅಡಗಿತ್ತೊಂದು ಅರಗಿಸಿಕೊಳ್ಳಲಾಗದ ಸತ್ಯ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌