ಆ್ಯಪ್ನಗರ

ಎರಡು ವರ್ಷಗಳ ನಂತರ ನಿರ್ದೇಶನಕ್ಕೆ ಮರಳಿದ ನಟ ಜಗ್ಗೇಶ್

ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ನಕ್ಕು ನಕ್ಕು ಸುಸ್ತಾಗುವಂತಹ ಅನೇಕ ಸನ್ನಿವೇಶಗಳು ಈ ಸಿನಿಮಾದಲ್ಲಿ ಇರಲಿವೆ. ಅದರ ಜತೆಗೆ ಥ್ರಿಲ್‌ ಕೂಡ ನೀಡಲಿದೆ ಈ ಸಿನಿಮಾ' ಎಂದಿದ್ದಾರೆ ಜಗ್ಗೇಶ್‌. ನಿರ್ದೇಶನದ ಜತೆಜತೆಗೆ ಸಿನಿಮಾ ನಟನೆಯಲ್ಲೂ ಅವರು ಬಿಝಿ ಆಗಿದ್ದಾರೆ.

Sharanu Hullur | Vijaya Karnataka 5 Dec 2019, 8:00 am
Vijaya Karnataka Web ಜಗ್ಗೇಶ್

ಎರಡು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ ನಟ ಜಗ್ಗೇಶ್‌. ಈ ಬಾರಿ ಅವರು ಸಹೋದರ ಕೋಮಲ್‌ ಮತ್ತು ಪುತ್ರ ಗುರುರಾಜ್‌ ನಾಯಕರಾಗಿ ನಟಿಸಲಿರುವ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಲಿದ್ದಾರೆ. ಗುರು ಸಿನಿಮಾದ ಮೂಲಕ ನಿರ್ದೇಶಕರಾಗಿದ್ದ ಇವರು, ನಂತರ 'ಮೇಲುಕೋಟೆ ಮಂಜ' ಚಿತ್ರಕ್ಕೂ ನಿರ್ದೇಶನ ಮಾಡಿದ್ದರು. ಇದು ಅವರ ಮೂರನೇ ಸಿನಿಮಾವಾಗಿದೆ.

'ಇದೊಂದು ಭಯಾನಕ ಮತ್ತು ಹಾಸ್ಯ ಪ್ರಧಾನ ಸಿನಿಮಾ. ಒಂದು ರಾತ್ರಿಯಲ್ಲಿ ನಡೆಯುವ ಕಥೆಯನ್ನು ಸಿನಿಮಾ ಮಾಡುತ್ತಿದ್ದೇನೆ. ಇಬ್ಬರು ನಡುವಿನ ಜುಗಲ್‌ಬಂದಿಯೇ ಸಿನಿಮಾದ ವಿಶೇಷ' ಎಂದಿದ್ದಾರೆ ಜಗ್ಗೇಶ್‌. ಫೆಬ್ರವರಿಯಲ್ಲಿ ಈ ಸಿನಿಮಾದ ಶೂಟಿಂಗ್‌ ನಡೆಯಲಿದ್ದು, ಜಗ್ಗೇಶ್‌ ತಮ್ಮ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಕೊಡುತ್ತಿರುವ ಉಡುಗೊರೆ ಇದಾಗಲಿದೆ. 'ಇಬ್ಬರು ಅಪರಿಚಿತರು ಭೇಟಿ ಆಗುತ್ತಾರೆ.

ದೂರ ದೂರ ಆಗಿದ್ದ ಜಗ್ಗೇಶ್ ಮತ್ತು 'ಮಠ' ಖ್ಯಾತಿಯ ಗುರುಪ್ರಸಾದ್ ಈಗ ಒಂದಾಗಿದ್ದೇಕೆ? ಜಗ್ಗೇಶ್ ಹೇಳಿದ್ದೇನು?

ಆಕಸ್ಮಿಕ ಭೇಟಿಯ ನಂತರ ಅವರ ಬದುಕಿನ ಒಳನೋಟ ಬಿಚ್ಚುತ್ತಾ ಹೋಗುತ್ತವೆ. ಒಬ್ಬೊಬ್ಬರದ್ದು ಒಂದೊಂದು ಮನಸ್ಥಿತಿ. ಆದರೆ, ಒಟ್ಟಿಗೆ ಇರುವಂಥ ಅನಿವಾರ‍್ಯತೆ ಸೃಷ್ಟಿ ಆಗುತ್ತದೆ. ಆ ಅನಿವಾರ‍್ಯತೆಯೇ ರೋಚಕ' ಎಂದಿದ್ದಾರೆ ಜಗ್ಗೇಶ್‌. ಈ ಕುರಿತು ವಿಜಯ ಕರ್ನಾಟಕ ಜತೆ ಮಾತನಾಡಿದ ಕೋಮಲ್‌, 'ಅಣ್ಣನ ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿರುವುದು ಖುಷಿ ಆಗಿದೆ. ತುಂಬಾ ಚೆನ್ನಾಗಿ ಕಥೆ ಬರೆದುಕೊಂಡಿದ್ದಾರೆ. ಸಿನಿಮಾ ಕುರಿತಂತೆ ಪ್ಲಾನಿಂಗ್‌ ನಡೆಯುತ್ತಿದೆ' ಎಂದಿದ್ದಾರೆ.

ಸಿನಿಮಾ ಶುರುವಿಗೂ ಮುನ್ನ ಟೀಸರ್‌ ಶೂಟ್‌ ಮಾಡುವ ಪ್ಲಾನ್‌ ಕೂಡ ಮಾಡಿದ್ದಾರಂತೆ ಜಗ್ಗೇಶ್‌. ಅದಕ್ಕೊಂದು ಥೀಮ್‌ ಕೂಡ ರೆಡಿ ಮಾಡಿಕೊಂಡಿದ್ದಾರಂತೆ. ಈ ಟೀಸರ್‌ನಲ್ಲಿ ಸಿನಿಮಾದ ಝಲಕ್‌ ಇರಲಿದೆಯಂತೆ. ನೋಡುಗರಿಗೆ ಥ್ರಿಲ್‌ ನೀಡುವಂತಹ ಟೀಸರ್‌ ಮಾಡಲಿದ್ದು, ಪಾತ್ರಗಳ ಹಿನ್ನೆಲೆ ಮತ್ತು ಸಿನಿಮಾದ ಕೇಂದ್ರ ವಸ್ತುವನ್ನು ಅದರಲ್ಲಿ ಬಳಸಿಕೊಳ್ಳಲಿದ್ದಾರಂತೆ.

ಆ ನಟಿ ಆಧುನಿಕ ಮದರ್ ತೆರೇಸಾ ಅಲ್ಲ ಅಂತ ಜಗ್ಗೇಶ್ ಅಂದದ್ದು ಯಾರಿಗೆ

'ಇದೊಂದು ಪಕ್ಕಾ ಮನರಂಜನೆಯ ಸಿನಿಮಾ. ನಕ್ಕು ನಕ್ಕು ಸುಸ್ತಾಗುವಂತಹ ಅನೇಕ ಸನ್ನಿವೇಶಗಳು ಈ ಸಿನಿಮಾದಲ್ಲಿ ಇರಲಿವೆ. ಅದರ ಜತೆಗೆ ಥ್ರಿಲ್‌ ಕೂಡ ನೀಡಲಿದೆ ಈ ಸಿನಿಮಾ' ಎಂದಿದ್ದಾರೆ ಜಗ್ಗೇಶ್‌. ನಿರ್ದೇಶನದ ಜತೆಜತೆಗೆ ಸಿನಿಮಾ ನಟನೆಯಲ್ಲೂ ಅವರು ಬಿಝಿ ಆಗಿದ್ದಾರೆ.

ಸದ್ಯ ವಿಜಯ್‌ ಪ್ರಸಾದ್‌ ನಿರ್ದೇಶನದ ತೋತಾಪುರಿಯಲ್ಲಿನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗವಾಗಿ ಮೂಡಿ ಬರುತ್ತಿದೆ. ಸಿನಿಮಾ ರಿಲೀಸ್‌ಗೂ ಮುನ್ನ ಎರಡು ಭಾಗವಾಗಿ ಮೂಡಿ ಬರುತ್ತಿರುವ ಮೊದಲ ಸಿನಿಮಾ ಇದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌