ಆ್ಯಪ್ನಗರ

ರೈತರ ವಿಷಯಕ್ಕೆ ಕೈಹಾಕಿ ಕೋಟ್ಯಂತರ ರೂ. ಪಂಗನಾಮ ಹಾಕಿಸಿಕೊಂಡ ನಯನತಾರಾ, ರಮ್ಯಾ ಕೃಷ್ಣ?

ಸ್ಟಾರ್‌ ನಟಿಯರಾದ ನಯನತಾರಾ, ರಮ್ಯಾ ಕೃಷ್ಣ ಮುಂತಾದವರು ರೈತರ ವಿಚಾರದಲ್ಲಿ ತಪ್ಪು ಮಾಡಿದ್ದಾರೆ. ಅದರಿಂದ ಅವರು ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿಸಿಕೊಳ್ಳುವ ಪರಿಸ್ಥಿತಿ ಬಂದಿದೆ. ಏನಿದು ಪ್ರಕರಣ?

Vijaya Karnataka Web 29 Jul 2020, 6:38 pm
ಸಿನಿಮಾ, ಜಾಹೀರಾತುಗಳಲ್ಲಿ ನಟಿಸಿ ಕೋಟಿಗಟ್ಟಲೆ ಹಣ ಸಂಪಾದನೆ ಮಾಡುವ ನಟಿಯರು ಆ ದುಡ್ಡನ್ನು ಏನು ಮಾಡುತ್ತಾರೆ? ಈ ಪ್ರಶ್ನೆ ಸಾಮಾನ್ಯ ಜನರಿಗೆ ಇದ್ದೇ ಇರುತ್ತದೆ. ಸೆಲೆಬ್ರಿಟಿಗಳು ಹೇಗೆ ಹೂಡಿಕೆ ಮಾಡುತ್ತಾರೆ ಎಂಬ ಕೌತುಕವೂ ಸಹಜ. ಅದೇನೇ ಇರಲಿ... ಎಷ್ಟೇ ದೊಡ್ಡ ಸೆಲೆಬ್ರಿಟಿ ಆದರೂ ಸ್ವಲ್ಪವೇ ಯಾಮಾರಿದರೂ ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿಸಿಕೊಳ್ಳಬೇಕಾಗುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.
Vijaya Karnataka Web nayanthara ramya krishnan likely to lose huge amount in real estate scam
ರೈತರ ವಿಷಯಕ್ಕೆ ಕೈಹಾಕಿ ಕೋಟ್ಯಂತರ ರೂ. ಪಂಗನಾಮ ಹಾಕಿಸಿಕೊಂಡ ನಯನತಾರಾ, ರಮ್ಯಾ ಕೃಷ್ಣ?


ರೈತರ ಜಮೀನಿನ ವಿಚಾರದಲ್ಲಿ ತಪ್ಪು ಮಾಡಿರುವ ಕಾರಣಕ್ಕೆ ನಟಿಯರಾದ ನಯನತರಾ, ರಮ್ಯಾ ಕೃಷ್ಣ, ಸಚಿನ್‌ ತೆಂಡುಲ್ಕರ್‌ ಪತ್ನಿ ಅಂಜಲಿ ಮುಂತಾದವರು ದೊಡ್ಡ ಮೊತ್ತದ ಹಣವನ್ನೇ ಕಳೆದುಕೊಂಡಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಒಂದು ರಿಯಲ್‌ ಎಸ್ಟೇಟ್‌ ಕಂಪನಿ ಮೂಲಕ ಈ ಸೆಲೆಬ್ರಿಟಿಗಳು ಎಕರೆಗಟ್ಟಲೆ ಜಮೀನು ಖರೀದಿಸಿದ್ದರು. ಆದರೆ ಆ ಕಂಪನಿ ಕಡೆಯಿಂದ ದೊಡ್ಡ ಮೋಸ ಆಗಿರುವುದು ಈಗ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಸೂಕ್ತ ನೀರಿನ ಸೌಕರ್ಯ ಇದ್ದ ಆ ಜಮೀನಿನಲ್ಲಿ ದೊಡ್ಡ ದೊಡ್ಡ ಅಪಾರ್ಟ್‌ಮೆಂಟ್‌ಗಳನ್ನು ಕಟ್ಟಿಸಬೇಕು ಎಂದು ಈ ನಟಿಯರು ಸ್ಕೆಚ್‌ ಹಾಕಿದ್ದರಂತೆ. ಅವರ ರೀತಿಯೇ ಇನ್ನೂ ಅನೇಕ ಶ್ರೀಮಂತ ಮಹಿಳೆಯರು ಅಲ್ಲಿ ಸೈಟ್‌ ಖರೀದಿಸಿದ್ದರು. ಆದರೆ ಅದು ಕೃಷಿ ಭೂಮಿ ಆಗಿದ್ದು, ರಿಯಲ್‌ ಎಸ್ಟೇಟ್‌ ಕಂಪನಿಯು ಅಕ್ರಮವಾಗಿ ಆ ಜಾಗವನ್ನು ಮಾರಾಟ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಒಂದು ವೇಳೆ ಹೀಗೆ ಆಗಿದ್ದೇ ಹೌದಾದರೆ ನಯನತಾರಾ, ರಮ್ಯಾ ಕೃಷ್ಣ, ಅಂಜಲಿ ತೆಂಡುಲ್ಕರ್‌ ಸೇರಿದಂತೆ ಅನೇಕರು ಕೋಟ್ಯಂತರ ರೂಪಾಯಿ ಪಂಗನಾಮ ಹಾಕಿಸಿಕೊಂಡಂತೆ ಆಗುವುದು ಗ್ಯಾರಂಟಿ.

also read: ಭವಿಷ್ಯದಲ್ಲಿ ಈ ತಮಿಳು ನಿರ್ದೇಶಕನ ಮಕ್ಕಳಿಗೆ ತಾಯಿ ಆಗಲಿದ್ದಾರೆ ನಟಿ ನಯನತಾರಾ!

ಕೃಷಿ ಉದ್ದೇಶವನ್ನು ಮುಂದಿಟ್ಟುಕೊಂಡು ಪ್ರತಿ ಎಕರೆ ಜಮೀನಿಗೆ 1 ಲಕ್ಷ ರೂ. ನೀಡಿದ್ದ ಆ ರಿಯಲ್‌ ಎಸ್ಟೇಟ್‌ ಕಂಪನಿಯು ಅದೇ ಜಾಗವನ್ನು ಸೆಲೆಬ್ರಿಟಿಗಳಿಗೆ ಮಾರಿ, ಪ್ರತಿ ಎಕರೆಗೆ 10 ಕೋಟಿ ರೂ. ಸಂಪಾದನೆ ಮಾಡಿಕೊಂಡಿದೆ. ಈ ವ್ಯವಹಾರದಲ್ಲಿ ತೊಡಗಿಕೊಂಡಿದ್ದ ಪಾರ್ಟ್ನರ್‌ಗಳ ಮಧ್ಯೆ ಭಿನ್ನಾಭಿಪ್ರಾಯ ಮೂಡಿದ ಬಳಿಕ ಈ ಅಕ್ರಮ ಬಯಲಿಗೆ ಬಂದಿದೆಯಂತೆ. ಈಗ ಆದಾಯ ಇಲಾಖೆಯಿಂದ ನೋಟಿಸ್‌ ಜಾರಿ ಆಗಿದ್ದು ನಯನತಾರಾ, ರಮ್ಯಾ ಕೃಷ್ಣ ಹಣ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಈ ಸಂಬಂಧ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

also read: ನಟಿ ನಯನತಾರಾಗೆ ಕೊರೊನಾ ಬಂದಿದೆಯೇ? ಹಬ್ಬಿದ್ದ ಸುದ್ದಿಗಳಿಗೆ ಸ್ಟಷ್ಟನೆ ಕೊಟ್ಟ ಪ್ರಿಯಕರ ವಿಘ್ನೇಶ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌