ಆ್ಯಪ್ನಗರ

ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆಗೆ ಕಾರಣವಾದ ಚಂದನ್ ಶೆಟ್ಟಿ-ನಿವೇದಿತಾ ಗೌಡ ಲವ್ ಮ್ಯಾಟರ್

'ಯುವ ದಸರಾ' ವೇದಿಕೆ ಮೇಲೆ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿದ ಚಂದನ್, ಸದ್ಯ ಸಂಕಷ್ಟಗೀಡಾಗಿದ್ದಾರೆ. ಇವರ ಪ್ರೇಮ ನಿವೇದನೆ ಬಗ್ಗೆ ಟ್ವಿಟ್ಟರ್‌ನಲ್ಲಿ ಭಾರಿ ಚರ್ಚೆ ಆಗುತ್ತಿದ್ದು, ಪರ-ವಿರೋಧದ ಹೇಳಿಕೆಗಳು ಕೇಳಿ ಬರುತ್ತಿವೆ.

Vijaya Karnataka Web 5 Oct 2019, 5:37 pm
'ಬಿಗ್‌ ಬಾಸ್' ಕಾರ್ಯಕ್ರಮ ಅನ್ನೋದು ಸಾಮಾನ್ಯರನ್ನೂ ಸೆಲಬ್ರಿಟಿಗಳನ್ನಾಗಿ ಮಾಡುತ್ತೆ. ಈ ಮಾತಿಗೆ ಪರ್ಫೆಕ್ಟ್ ಉದಾಹರಣೆಯಂದ್ರೆ, ಮೈಸೂರಿನ ನಿವೇದಿತಾ ಗೌಡ. ಹೌದು. ಕೆಲವೇ ವರ್ಷಗಳ ಹಿಂದೆ ನಿವೇದಿತಾ ಗೌಡ ಅಂದ್ರೆ ಯಾರು ಅನ್ನೋದು ಹೆಚ್ಚಿನವರಿಗೆ ಗೊತ್ತಿರ್ಲಿಲ್ಲ. ಆದ್ರೆ ಯಾವಾಗ ಕನ್ನಡದ 'ಬಿಗ್‌ ಬಾಸ್-5' ಪ್ರಾರಂಭವಾಯ್ತೋ ಅಂದಿನಿಂದ ಕನ್ನಡಿಗರ ಮನೆಮನಕ್ಕೆ ಪರಿಚಯಗೊಂಡವರು ನಿವಿ ಅಲಿಯಾಸ್ ನಿವೇದಿತಾ ಗೌಡ.
Vijaya Karnataka Web CK NIVEDITHA.

ದಸರಾದಲ್ಲಿ ಚಂದನ್‌ ಶೆಟ್ಟಿ - ನಿವೇದಿತಾ ಗೌಡ ನಡೆ ವಿರುದ್ಧ

ನೋಡೋದಕ್ಕೆ ಥೇಟ್ ಬಾರ್ಬಿ ಗೊಂಬೆಯಂತಿರೋ ನಿವೇದಿತಾ ಗೌಡ ಅವರ ಕನ್ನಡ, ಇವರನ್ನು ಇನ್ನಷ್ಟು ಫೇಮಸ್ ಮಾಡ್ತು. ಹೀಗೆ ರಾತ್ರೋರಾತ್ರಿ ಪ್ರಖ್ಯಾತಿ ಗಳಿಸಿದ ನಿವೇದಿತಾ ಗೌಡ ಅವರಿಗೂ, ವಿವಾದಕ್ಕೂ ಎಲ್ಲಿಲ್ಲದ ನಂಟು ಅನ್ಸುತ್ತೆ. ನಿವೇದಿತಾ ಏನೇ ಮಾಡಿದ್ರೂ ಇವರು ಟ್ರೋಲ್‌ಗೆ ಒಳಗಾಗೋದು ತುಂಬಾ ಸಾಮಾನ್ಯವಾಗ್ಬಿಟ್ಟಿದೆ. ಇದಕ್ಕೆ ಇವರ ಲವ್‌ ಕೂಡ ಹೊರತಾಗಿಲ್ಲಾ ಅನ್ನೋದು ಸತ್ಯ.

ನಿವೇದಿತಾ ಮತ್ತು ಚಂದನ್‌ ಶೆಟ್ಟಿ ಬಿಗ್‌ ಬಾಸ್‌ ಮನೆಯಲ್ಲೇ ಪರಿಚಯಗೊಂಡವರು. ಮುಂದೆ ಇವರಿಬ್ಬರ ನಡುವೆ ಸ್ನೇಹ ಪ್ರಾರಂಭವಾಗಿ, ನಂತರ ಪ್ರೀತಿ ಚಿಗುರೊಡೆದಿದೆ. ಕೆಲ ದಿನಗಳಿಂದ ಈ ಬಗ್ಗೆ ಎಲ್ಲೆಡೆ ಗಾಸಿಪ್ ಹರಿದಾಡ್ತಿದ್ರೂ ಅಂತಿಮವಾಗಿ ಚಂದನ್ 'ಯುವ ದಸರಾ' ವೇದಿಕೆ ಮೇಲೆ ಪ್ರಪೋಸ್ ಮಾಡುವ ಮೂಲಕ ತಮ್ಮ ಪ್ರೇಮವನ್ನು ಅಧಿಕೃತಗೊಳಿಸಿದ್ದಾರೆ. ಆದ್ರೆ ಈ ಸಂಗತಿ ಸದ್ಯ ಬಿಸಿಬಿಸಿ ಚರ್ಚೆಯ ವಿಚಾರವಾಗಿ ಮಾರ್ಪಾಡಾಗಿದೆ.
ಚಂದನ್ ಶೆಟ್ಟಿ- ನಿವೇದಿತಾ ಗೌಡ ಪ್ರೇಮ ನಿವೇದನೆ : ಯುವ

ಚಂದನ್ ವರ್ತನೆಗೆ ಆಕ್ರೋಶಗೊಂಡ ನೆಟ್ಟಿಗರು

ನಿವೇದಿತಾಗೆ ಚಂದನ್ 'ಯುವ ದಸರಾ' ವೇದಿಕೆ ಮೇಲೆ ಪ್ರಪೋಸ್ ಮಾಡಿದ್ದು ಸರಿಯಲ್ಲಾ. ದಸರಾ ಅನ್ನೋದು ನಮ್ಮ ನಾಡಹಬ್ಬ. ಈ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯನ್ನು ದುರುಪಯೋಗ ಪಡಿಸಿಕೊಳ್ಳೋದು ತಪ್ಪು ಅಂತಾ ಕೆಲ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.


"ಇದೇನು ಖಾಸಗೀ ಕಾರ್ಯಕ್ರಮಾನಾ?" ಅಂತಾ ಪ್ರಶ್ನೆ ಮಾಡಿ ಟ್ವೀಟ್ ಮಾಡಿದ್ದಾರೆ.


ಇದಲ್ಲದೇ ಪಾವಿತ್ರ್ಯತೆಯನ್ನು ಹಾಳು ಮಾಡಬೇಡಿ ಅಂತಾ ಟ್ವೀಟಾಸ್ತ್ರವನ್ನು ಪ್ರಯೋಗಿಸಿದ್ದಾರೆ.


ಚಂದನ್ ಪರ ನಿಂತ ಕೆಲ ಟ್ವಿಟ್ಟರ್ ಅಭಿಮಾನಿಗಳು
ಈ ರೀತಿ ಸಾಕಷ್ಟು ವಿರೋಧಗಳ ನಡುವೆಯೂ, ಮತ್ತೊಂದಷ್ಟು ಮಂದಿ ಚಂದನ್ ಪರ ನಿಂತಿದ್ದಾರೆ. ವೇದಿಕೆ ಮೇಲೆ ಚಂದನ್‌ ಶೆಟ್ಟಿ ಪ್ರಪೋಸ್ ಮಾಡಿದ್ದಾರೆ. ಹಾಗೂ ಈ ಯುವ ಜೋಡಿ ಮದುವೆಯಾಗಲಿದೆ. ಇದರಲ್ಲಿ ತಪ್ಪೇನಿದೆ? ಅಂತಾ ಟ್ವೀಟ್ ಮಾಡಿದ್ದಾರೆ ಹಲವರು.


ಇನ್ನು ಕೆಲವರು 'ಯುವ ದಸರಾ'ದಲ್ಲಿ ಪ್ರಪೋಸ್ ಮಾಡಿದ್ರೆ ಸಂಸ್ಕೃತಿ ಹೇಗೆ ಹಾಳಾಗುತ್ತೆ? ಇಬ್ಬರೂ ಚೆನ್ನಾಗಿರಲಿ ಬಿಡಿ ಅಂತಾ ಯುವ ಜೋಡಿಯ ಪರ ನಿಂತಿದ್ದಾರೆ.

ಒಟ್ಟಾರೆಯಾಗಿ 'ಯುವ ದಸರಾ' ವೇದಿಕೆ ಮೇಲೆ ರಿಯಾಲಿಟಿ ಶೋ ಜೋಡಿ ಒಂದಾಗಿದೆ. ಆದ್ರೆ ಇದೇ ಸಂಗತಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡಿಂಗ್‌ನಲ್ಲಿದ್ದು, ಪರ-ವಿರೋಧದ ಹೇಳಿಕೆಗಳು ಹೆಚ್ಚಾಗುತ್ತಲೇ ಇರೋದು ವಿಪರ್ಯಾಸ.
ಮದುವೆ ನಿರ್ಧಾರ ಪ್ರಕಟಿಸಿದ ಚಂದನ್‌ -ನಿವೇದಿತಾ ಜೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌