ಆ್ಯಪ್ನಗರ

ಹೈದರಾಬಾದ್‌ ಪ್ರವಾಹಕ್ಕೆ ಮರುಗಿದ ರಶ್ಮಿಕಾ ಮಂದಣ್ಣ ಉತ್ತರ ಕರ್ನಾಟಕವನ್ನು ಮರೆತೇ ಬಿಟ್ರಾ?

ನಟಿ ರಶ್ಮಿಕಾ ಮಂದಣ್ಣ ಅವರಿಗೆ ವಿವಾದಗಳು ಹೊಸದೇನೂ ಅಲ್ಲ. ಸೋಶಿಯಲ್‌ ಮೀಡಿಯಾದಲ್ಲಿ ಅವರು ಆಗಾಗ ಟ್ರೋಲ್‌ಗೆ ಒಳಗಾಗುತ್ತಾರೆ. ಈಗ ಅವರು ಮತ್ತೊಂದು ಕಾರಣಕ್ಕಾಗಿ ನೆಟ್ಟಿಗರ ಅಸಮಾಧಾನಕ್ಕೆ ಗುರಿ ಆಗಿದ್ದಾರೆ.

Vijaya Karnataka Web 21 Oct 2020, 6:33 pm
ನಟಿ ರಶ್ಮಿಕಾ ಮಂದಣ್ಣ ಕನ್ನಡಕ್ಕಿಂತಲೂ ಹೆಚ್ಚಾಗಿ ತೆಲುಗಿನಲ್ಲಿ ಜನಪ್ರಿಯ ಆಗಿದ್ದಾರೆ. ಅದೇ ಕಾರಣಕ್ಕೋ ಏನೋ ಅವರಿಗೆ ಹೈದರಾಬಾದ್‌ ಎಂದರೆ ಹೆಚ್ಚು ಪ್ರೀತಿ. ಸಿನಿಮಾ ಕೆಲಸಗಳ ಸಲುವಾಗಿ ಹೆಚ್ಚಾಗಿ ಹೈದರಾಬಾದ್‌ನಲ್ಲಿಯೇ ಇರುವ ಅವರು ಇತ್ತೀಚೆಗೆ ಅಲ್ಲಿ ಉಂಟಾದ ಪ್ರವಾಹದ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ. ಆದರೆ ಇದು ಉತ್ತರ ಕರ್ನಾಟಕದ ಜನರ ಅಸಮಾಧಾನಕ್ಕೆ ಕಾರಣ ಆಗಿದೆ!
Vijaya Karnataka Web ರಶ್ಮಿಕಾ ಮಂದಣ್ಣ


ರಶ್ಮಿಕಾ ಟಾಲಿವುಡ್‌ಗೆ ಹೋಗುವುದಕ್ಕೂ ಮನ್ನ ಫೇಮಸ್‌ ಆಗಿದ್ದು ಕನ್ನಡ ಚಿತ್ರರಂಗದಲ್ಲಿ. ನಂತರ ಅವರನ್ನು ಟಾಲಿವುಡ್‌ ಕೈ ಬೀಸಿ ಕರೆಯಿತು. ಈಗ ತಮಿಳು ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ ಈ ಕಿರಿಕ್‌ ಬ್ಯೂಟಿ. ಹಾಗಂತ ಕರ್ನಾಟಕವನ್ನು ಅವರು ಮರೆತರೇ? ಇಂಥದ್ದೊಂದು ಪ್ರಶ್ನೆ ನೆಟ್ಟಿಗರ ಮನದಲ್ಲಿ ಮೂಡಿದೆ. ಹೈದರಾಬಾದ್‌ ಪ್ರವಾಹಕ್ಕೆ ಮರುಕ ವ್ಯಕ್ತಪಡಿಸಿರುವ ಅವರು ಉತ್ತರ ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯ ಬಗ್ಗೆ ಸಂಪೂರ್ಣ ಮೌನಕ್ಕೆ ಶರಣಾಗಿರುವುದು ಅನೇಕರಿಗೆ ಬೇಸರ ಉಂಟುಮಾಡಿದೆ.

'ಹೈದರಾಬಾದ್‌... ದಯವಿಟ್ಟು ಎಲ್ಲರೂ ನಿಮ್ಮ ಕಾಳಜಿವಹಿಸಿಕೊಳ್ಳಿ. ಅಲ್ಲಿನ ಪರಿಸ್ಥಿತಿ ಚಿಂತಾಜನಕ ಆಗಿದೆ ಎಂಬುದನ್ನು ಈಗ ಕೇಳಲ್ಪಟ್ಟೆ. ಎಚ್ಚರಿಕೆಯಿಂದಿರಿ. ಸರಿನಾ? ಅಪಾರ ಪ್ರೀತಿ. ಚೆನ್ನಾಗಿರಿ' ಎಂದು ರಶ್ಮಿಕಾ ಮಂದಣ್ಣ ಟ್ವೀಟ್‌ ಮಾಡಿದ್ದಾರೆ. ಇದಕ್ಕೆ ಹಲವು ಬಗೆಯ ಕಾಮೆಂಟ್‌ಗಳು ಬಂದಿವೆ. 'ಮೇಡಂ ನೀವು ಹೈದರಾಬಾದ್‌ನಲ್ಲಿಯೇ ಹೋಗಿ ಸೆಟ್ಲ್‌ ಆಗಿ' ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ. 'ಬರೀ ಹೈದರಾಬಾದ್ ಅಷ್ಟೇ ಕಾಣಿಸ್ತಾ? ನಮ್ಮ ಉತ್ತರ ಕರ್ನಾಟಕದ ಪರಿಸ್ಥಿತಿ ಕಾಣಿಸಲ್ವೇ? ಮತ್ತೆ ಹೆಮ್ಮೆಯಿಂದ ಕನ್ನಡತಿ ಅಂತ ಹೇಳ್ಕೊಳೋದು ಯಾಕೆ?' ಎಂದು ಜನರು ಪ್ರಶ್ನಿಸಿದ್ದಾರೆ.

also read: 'ನನ್ನನ್ನು ಸಹಿಸಿಕೊಂಡಿದ್ದಕ್ಕೆ ಧನ್ಯವಾದಗಳು' ಎಂದು ರಶ್ಮಿಕಾ ಮಂದಣ್ಣ ಹೇಳಿದ್ದು ಯಾರಿಗೆ?

ಈ ಹಿಂದೆಯೂ 'ನನಗೆ ಕನ್ನಡ ಕಷ್ಟ' ಎಂದು ಸಂದರ್ಶನವೊಂದರಲ್ಲಿ ಹೇಳುವ ಮೂಲಕ ರಶ್ಮಿಕಾ ಕನ್ನಡಿಗರ ಅಸಮಾಧಾನಕ್ಕೆ ಗುರಿ ಆಗಿದ್ದರು. ಸದ್ಯ ಅವರು ಹೈದರಾಬಾದ್‌ನಲ್ಲಿಯೇ ಹೊಸ ಮನೆ ಖರೀದಿಸಿದ್ದಾರೆ ಎಂಬ ಸುದ್ದಿ ಕೂಡ ಕೇಳಿಬರುತ್ತಿದೆ. ಕನ್ನಡದಲ್ಲಿ ರಶ್ಮಿಕಾ ನಟನೆಯ 'ಪೊಗರು' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಅಲ್ಲು ಅರ್ಜುನ್‌ ಜೊತೆ 'ಪುಷ್ಪ' ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. ಕಾರ್ತಿ ಜೊತೆಗಿನ 'ಸುಲ್ತಾನ್‌' ಚಿತ್ರಕ್ಕೆ ಇತ್ತೀಚೆಗಷ್ಟೇ ಶೂಟಿಂಗ್‌ ಮುಗಿಸಿದ್ದಾರೆ.

also read: ಸಮುದ್ರ ತೀರದಲ್ಲಿ ವರ್ಕೌಟ್ ಮಾಡಿ ಗಮನಸೆಳೆದ ನಟಿ ರಶ್ಮಿಕಾ ಮಂದಣ್ಣ! ವಿಡಿಯೋ ವೈರಲ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌