ಆ್ಯಪ್ನಗರ

ಜನ್ಮದಿನದಂದೇ ಸ್ಯಾಂಡಲ್‌ವುಡ್‌ಗೆ 'ಬ್ರೇಕಿಂಗ್ ನ್ಯೂಸ್‌' ಕೊಟ್ಟ ನಿಖಿಲ್ ಕುಮಾರಸ್ವಾಮಿ!

ನಟ, ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿಗೆ ಇಂದು (ಜ.22) ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಬ್ರೇಕಿಂಗ್ ನ್ಯೂಸ್‌ಗಳನ್ನು ನೀಡಿದ್ದಾರೆ. ಕಳೆದ ವರ್ಷ ಸಿನಿಮಾರಂಗ ಮತ್ತು ರಾಜಕೀಯರಂಗ ಎರಡರಲ್ಲೂ ಅವರು ಸಕ್ರೀಯವಾಗಿದ್ದರು.

Vijaya Karnataka Web 22 Jan 2020, 11:09 am
ನಟ, ರಾಜಕಾರಣಿ ನಿಖಿಲ್‌ ಕುಮಾರಸ್ವಾಮಿಗೆ ಇಂದು (ಜ.22) ಜನ್ಮದಿನ. ಈ ಹಿನ್ನೆಲೆಯಲ್ಲಿ ಅವರು ಬ್ಯಾಕ್ ಟು ಬ್ಯಾಕ್ ಬ್ರೇಕಿಂಗ್ ನ್ಯೂಸ್‌ಗಳನ್ನು ನೀಡಿದ್ದಾರೆ. ಕಳೆದ ವರ್ಷ ಸಿನಿಮಾರಂಗ ಮತ್ತು ರಾಜಕೀಯರಂಗ ಎರಡರಲ್ಲೂ ಅವರು ಸಕ್ರೀಯವಾಗಿದ್ದರು. ಚುನಾವಣೆಗೂ ಸ್ಪರ್ಧಿಸಿದ್ದರಿಂದ ಚಿತ್ರರಂಗದಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತಾರೋ, ಇಲ್ಲವೋ ಎಂಬ ಅನುಮಾನ ಮೂಡಿದ್ದು ಸಹಜ. ಆದರೆ, ಇಂಥ ಅನುಮಾನಗಳಿಗೆ ಕೆಲಸದ ಮೂಲಕ ಉತ್ತರ ಕೊಡುವ ಸಿದ್ಧತೆಯಲ್ಲಿದ್ದಾರೆ ಈ ಸ್ಯಾಂಡಲ್‌ವುಡ್‌ ಯುವರಾಜ. ಹೌದು, ಜನ್ಮದಿನದ ಹಿನ್ನೆಲೆಯಲ್ಲಿ ನಿಖಿಲ್‌ ಹೊಸ ಸಿನಿಮಾಗಳ ಘೋಷಣೆ ಮಾಡಿಕೊಂಡಿದ್ದಾರೆ. ಅದು ಒಂದಲ್ಲಾ, ಎರಡಲ್ಲಾ, ಬರೋಬ್ಬರಿ ನಾಲ್ಕು ಸಿನಿಮಾಗಳ ಘೋಷಣೆ ಆಗಿದೆ. ಅಷ್ಟಕ್ಕೂ ಈ ಸಿನಿಮಾಗಳು ಯಾವುವು? ಯಾವಾಗ ಶುರುವಾಗಲಿವೆ? ಆ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
Vijaya Karnataka Web nikhil kumar announced upcoming movies
ಜನ್ಮದಿನದಂದೇ ಸ್ಯಾಂಡಲ್‌ವುಡ್‌ಗೆ 'ಬ್ರೇಕಿಂಗ್ ನ್ಯೂಸ್‌' ಕೊಟ್ಟ ನಿಖಿಲ್ ಕುಮಾರಸ್ವಾಮಿ!


​ಜ.30ಕ್ಕೆ ಲಹರಿ ಸಂಸ್ಥೆಯ ಸಿನಿಮಾ

ಲಹರಿ ಸಂಸ್ಥೆ ನಿರ್ಮಾಣ ಮಾಡಲಿರುವ ನಿಖಿಲ್‌ ಸಿನಿಮಾದ ತಾಂತ್ರಿಕ ತಂಡ ಕನ್ಫರ್ಮ್ ಆಗಿದೆ. ಅಲ್ಲದೆ, ಚಿತ್ರದ ಕೆಲಸಗಳು ಯಾವಾಗ ಶುರುವಾಗಲಿವೆ ಎಂಬುದಕ್ಕೆ ಕಾರಣ ಕೂಡ ಸಿಕ್ಕಿದೆ. ಜನವರಿ 30ರಿಂದ ಈ ಸಿನಿಮಾದ ಶೂಟಿಂಗ್ ಶುರುವಾಗಲಿದ್ದು, ವಿಜಯ್ ಕುಮಾರ್ ಕೊಂಡ ನಿರ್ದೇಶನ ಚಿತ್ರಕ್ಕಿರಲಿದೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಜೊತೆಗೆ ಛಾಯಾಗ್ರಹಣದ ಹೊಣೆ ಶ್ರೀಶಾ ಕುದುವಳ್ಳಿ ಅವರದ್ದು. ಶೇಖರ್ ನೃತ್ಯ ನಿರ್ದೇಶನ ಮಾಡಲಿದ್ದು, ಪ್ರವೀಣ್‌ ಪುಡಿ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಇನ್ನು, ಇದೊಂದು ಸ್ಪೋರ್ಟ್ಸ್ ಕುರಿತ ಸಿನಿಮಾ ಇರಬಹುದು ಎಂಬ ಸುಳಿವು ಫಸ್ಟ್‌ಲುಕ್‌ನಿಂದ ಸಿಕ್ಕಿದೆ.

Twitter-Wishing Yuvaraja #NikhilKumar, a very Happy Birthd...

​ಲೈಕಾ ಜೊತೆ ನಿಖಿಲ್ ಸಿನಿಮಾ ಕನ್ಫರ್ಮ್

ಈಗಾಗಲೇ ದಕ್ಷಿಣ ಭಾರತದಲ್ಲಿ ರಜನಿಕಾಂತ್‌, ಕಮಲ್‌ ಹಾಸನ್‌, ಚಿರಂಜೀವಿ, ವಿಜಯ್, ಸೂರ್ಯ ಅವರಂತಹ ಸ್ಟಾರ್ ನಟರ ಬಿಗ್‌ ಬಜೆಟ್ ಸಿನಿಮಾಗಳಿಗೆ ಬಂಡವಾಳ ಹೂಡಿ ಖ್ಯಾತರಾಗಿರುವ ಲೈಕಾ ಪ್ರೊಡಕ್ಷನ್ಸ್ ಸಂಸ್ಥೆಯೂ ನಿಖಿಲ್‌ ಜೊತೆ ಸಿನಿಮಾ ಮಾಡಲಿದೆ ಎಂಬ ಮಾತು ಬಹಳ ಹಿಂದೆಯೇ ಕೇಳಿಬಂದಿತ್ತು. ಇದೀಗ ಅದು ಕಾರ್ಯರೂಪಕ್ಕೆ ಬರುವ ಸೂಚನೆ ಸಿಕ್ಕಿದೆ. ಆ ಸಂಸ್ಥೆಯ 20ನೇ ಸಿನಿಮಾದಲ್ಲಿ ನಿಖಿಲ್‌ ನಟಿಸುವುದು ಖಚಿತವಾಗಿದೆ.

​ಮೊದಲ ಬಾರಿಗೆ ಎ.ಪಿ. ಅರ್ಜುನ್‌ ಜೊತೆ ನಿಖಿಲ್‌ ಕೆಲಸ

'ಅಂಬಾರಿ', 'ಅದ್ದೂರಿ', 'ರಾಟೆ', 'ಐರಾವತ' ಖ್ಯಾತಿಯ ನಿರ್ದೇಶಕ ಎ.ಪಿ. ಅರ್ಜುನ್‌, ಈಗ ನಿಖಿಲ್‌ಗೆ ಸಿನಿಮಾ ಮಾಡಲಿದ್ದಾರೆ. ಎನ್‌ಕೆ ಎಂಟರ್‌ಟೇನ್‌ಮೆಂಟ್ಸ್ ಬ್ಯಾನರ್‌ನಡಿಯಲ್ಲಿ ಈ ಸಿನಿಮಾ ಶುರುವಾಗಲಿದ್ದು, ಜೂನ್‌ನಿಂದ ಚಿತ್ರೀಕರಣ ಆರಂಭಗೊಳ್ಳಲಿದೆ. 'ಕಿಸ್‌' ನಂತರ ಅರ್ಜುನ್‌ ಸದ್ದಿಲ್ಲದೆ, ನಿಖಿಲ್‌ ಜೊತೆ ಕೈಜೋಡಿಸಿದ್ದಾರೆ.

​'ಕುರುಕ್ಷೇತ್ರ' ನಿರ್ಮಾಪಕರ ಸಿನಿಮಾದಲ್ಲಿ ನಟನೆ

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಸಿನಿಮಾದಲ್ಲಿ ಅಭಿಮನ್ಯು ಪಾತ್ರ ಮಾಡಿದ್ದ ನಿಖಿಲ್‌, ಈ ಬಾರಿ ಅವರ ನಿರ್ಮಾಣದ ಮತ್ತೊಂದು ಸಿನಿಮಾದಲ್ಲಿ ನಟಿಸಲಿದ್ದಾರೆ. 'ಧನುಷ್‌ ಐಪಿಎಸ್‌' ಎಂಬುದು ಸಿನಿಮಾದ ಶೀರ್ಷಿಕೆ. ಹಾಗಾದರೆ, ಈ ಬಾರಿ ನಿಖಿಲ್ ಪೊಲೀಸ್‌ ಅವತಾರದಲ್ಲಿ ಕಾಣಿಸಿಕೊಳ್ಳುವುದು ಪಕ್ಕಾ ಎನ್ನಲಾಗಿದೆ. ಆದರೆ, 'ಧನುಷ್‌..'ಗೆ ನಿರ್ದೇಶಕರು ಯಾರು ಎಂಬುದು ಇನ್ನೂ ಬಹಿರಂಗಗೊಂಡಿಲ್ಲ.

​'ಪೈಲ್ವಾನ್‌' ಕೃಷ್ಣ ಜೊತೆ ಸಿನಿಮಾ ಯಾವಾಗ?

ಈ ಹಿಂದೆ ಸುದ್ದಿಯಾದಂತೆ ನಿರ್ದೇಶಕ 'ಪೈಲ್ವಾನ್‌' ಕೃಷ್ಣ ಜೊತೆ ನಿಖಿಲ್ ಒಂದು ಸಿನಿಮಾ ಮಾಡಬೇಕಿತ್ತು. ಆದರೆ, ಬರ್ತ್‌ಡೇಗೆ ಘೋಷಣೆ ಆಗಿರುವ ಸಿನಿಮಾಗಳ ಪಟ್ಟಿಯಲ್ಲಿ ಈ ಸಿನಿಮಾದ ಬಗ್ಗೆ ಮಾಹಿತಿ ಇಲ್ಲ. ಹಾಗಾದರೆ, ನಿಖಿಲ್‌-ಕೃಷ್ಣ ಕಾಂಬಿನೇಷನ್‌ನ ಸಿನಿಮಾ ಯಾವಾಗ ಶುರುವಾಗಲಿದೆ ಎಂಬುದಕ್ಕೆ ಸದ್ಯಕ್ಕೆ ಉತ್ತರವಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌