ಆ್ಯಪ್ನಗರ

ನಟನೆ, ರಾಜಕಾರಣದ ನಂತರ ಈಗ ಸಿನಿಮಾ ನಿರ್ಮಾಣಕ್ಕಿಳಿದ ನಿಖಿಲ್‌ ಕುಮಾರಸ್ವಾಮಿ!

ಈಗಾಗಲೇ 'ಜಾಗ್ವಾರ್‌', 'ಸೀತಾರಾಮ ಕಲ್ಯಾಣ' ಮತ್ತು 'ಕುರುಕ್ಷೇತ್ರ' ಸಿನಿಮಾಗಳಲ್ಲಿ ನಟನಾಗಿ ಗುರುತಿಸಿಕೊಂಡಿದ್ದಾರೆ ನಿಖಿಲ್‌. ಅದರ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟಿದ್ದಾರೆ. ಈ ಮಧ್ಯೆ ಅವರು ನಿರ್ಮಾಣದ ಹೊಣೆ ಹೊತ್ತುಕೊಂಡಿದ್ದಾರೆ.

Vijaya Karnataka Web 20 Jul 2020, 10:07 pm
ನಿಖಿಲ್ ಕುಮಾರಸ್ವಾಮಿ ಈಗಾಗಲೇ ನಟನಾಗಿ ಗುರುತಿಸಿಕೊಂಡಿದ್ದಾರೆ. ರಾಜಕಾರಣಿಯಾಗಿಯೂ ಕೆಲಸ ಮಾಡುತ್ತಿದ್ದಾರೆ. ಸದ್ಯ ಅವರೀಗ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ಈ ಹಿಂದೆ ತಮ್ಮ ಚೆನ್ನಾಂಬಿಕಾ ಫಿಲ್ಮ್ಸ್‌ ಬ್ಯಾನರ್ ಮೂಲಕ ಸಾಕಷ್ಟು ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಈಗ ಅವರ ಹಾದಿಯಲ್ಲಿ ನಿಖಿಲ್ ಕೂಡ ಸಾಗುತ್ತಿದ್ದಾರೆ. ಅಂದಹಾಗೆ, ಅವರ ನಿರ್ಮಾಣದ ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ಸಾದ್ ಖಾನ್‌.
Vijaya Karnataka Web nikhil kumaraswamy will produce to saad khans directorial sangeet movie
ನಟನೆ, ರಾಜಕಾರಣದ ನಂತರ ಈಗ ಸಿನಿಮಾ ನಿರ್ಮಾಣಕ್ಕಿಳಿದ ನಿಖಿಲ್‌ ಕುಮಾರಸ್ವಾಮಿ!


ಈ ಹಿಂದೆ 'ಹಂಬಲ್ ಪೊಲಿಟಿಷಿಯನ್ ನಾಗರಾಜ್' ಸಿನಿಮಾವನ್ನು ನಿರ್ದೇಶನ ಮಾಡಿದ್ದ ಸಾದ್ ಖಾನ್‌, ಈಗ ನಿಖಿಲ್ ನಿರ್ಮಾಣದಲ್ಲಿ 'ಸಂಗೀತ್' ಅನ್ನೋ ಸಿನಿಮಾಕ್ಕೆ ನಿರ್ದೇಶನ ಮಾಡಲಿದ್ದಾರೆ. ಇದೊಂದು ರೊಮ್ಯಾಂಟಿಕ್‌ ಕಾಮಿಡಿ ಡ್ರಾಮಾ ಆಗಿರಲಿದೆ. ನಿರ್ಮಾಣದಲ್ಲಿ ನಿಖಿಲ್‌ಗೆ ಲಹರಿ ಸಂಸ್ಥೆಯ ಚಂದ್ರು ಮನೋಹರ್‌ ಸಾಥ್ ನೀಡಲಿದ್ದಾರೆ. ಇನ್ನು, ನಿಖಿಲ್ ಹೊಸದಾಗಿ ಎನ್‌ಕೆ ಎಂಟರ್‌ಟೈನ್‌ಮೆಂಟ್ಸ್ ಎಂಬ ಬ್ಯಾನರ್ ಶುರು ಮಾಡಿದ್ದಾರೆ.

'ಈ ಸಿನಿಮಾದ ಕಥೆ ಕಳೆದ ಎರಡು ವರ್ಷಗಳಿಂದ ನನ್ನ ತಲೆಯಲ್ಲಿತ್ತು. ಸದ್ಯಕ್ಕೆ ನಾನು 'ಹಂಬಲ್‌ ಪೊಲಿಟಿಷಿಯನ್ ನಾಗರಾಜ್‌' ವೆಬ್ ಸಿರೀಸ್‌ನ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಕೊಂಡಿದ್ದೇನೆ. ಅದರ ಜೊತೆಗೆ 'ಸಂಗೀತ್' ಸ್ಕ್ರಿಪ್ಟ್‌ಗೂ ಕೆಲಸ ಮಾಡುತ್ತಿದ್ದೇನೆ. ಕೊರೊನಾ ಸಮಸ್ಯೆ ಎಲ್ಲ ಬಗೆಹರಿದರೆ, ನವೆಂಬರ್‌ನಿಂದ ಶೂಟಿಂಗ್ ಮಾಡಲಿದ್ದೇವೆ' ಎನ್ನುತ್ತಾರೆ ಸಾದ್ ಖಾನ್‌. ಈ ಚಿತ್ರಕ್ಕಾಗಿ ಹೊಸ ಮುಖಗಳ ಅನ್ವೇಷಣೆಯಲ್ಲಿದ್ದಾರೆ ನಿರ್ದೇಶಕರು. ಕೊಡಗು ಸುತ್ತಮುತ್ತ ಚಿತ್ರೀಕರಣ ಮಾಡುವುದಕ್ಕೆ ಯೋಜನೆ ಹಾಕಿಕೊಳ್ಳಲಾಗಿದೆ.

3 ತಿಂಗಳು ಆಗಿದ್ದಕ್ಕೆ ಪತ್ನಿ ಫೋಟೋ ಜೊತೆ ಮನದ ಮಾತು ಹಂಚಿಕೊಂಡ ನಟ ನಿಖಿಲ್‌ ಕುಮಾರಸ್ವಾಮಿ!

ಇನ್ನು, ನಿಖಿಲ್‌ ಅಭಿನಯದಲ್ಲಿ ಸಾಲು ಸಾಲು ಸಿನಿಮಾಗಳು ಘೋಷಣೆ ಆಗಿದ್ದವು. ಚಂದ್ರು ಮನೋಹರ್‌ ಅವರ 'ಲಹರಿ' ಸಂಸ್ಥೆಯಡಿ ನಿಖಿಲ್ ಒಂದು ಸಿನಿಮಾ ಮಾಡಲಿದ್ದಾರೆ. ಅದಕ್ಕೆ ವಿಜಯ್ ಕುಮಾರ್‌ ಕೊಂಡ ನಿರ್ದೇಶನ ಮಾಡಲಿದ್ದಾರೆ. ಅಲ್ಲದೆ, ಎ.ಪಿ. ಅರ್ಜುನ್‌ ಜೊತೆಗೂ ಒಂದು ಸಿನಿಮಾವನ್ನು ನಿಖಿಲ್ ಮಾಡಲಿದ್ದಾರೆ.

ಪತ್ನಿ ರೇವತಿ ಜೊತೆ ಸೇರಿ ವರ್ಕೌಟ್ ಮಾಡುತ್ತಿರುವ ನಟ ನಿಖಿಲ್ ಕುಮಾರಸ್ವಾಮಿ! ವಿಡಿಯೋ ನೋಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌