ಆ್ಯಪ್ನಗರ

Madhavan: ತಮ್ಮ ಬಗ್ಗೆ ಹಬ್ಬಿದ್ದ ವದಂತಿಗೆ ಕೊನೆಗೂ ಸ್ಪಷ್ಟನೆ ನೀಡಿದ ನಟ ಮಾಧವನ್!

ನಟ ಆರ್‌. ಮಾಧವನ್‌ ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ, ಹಿಂದಿಯಲ್ಲೂ ಪರಿಚಿತರು. ಸದ್ಯ ಅವರ ಬಗ್ಗೆ ಒಂದು ವದಂತಿ ಟಾಲಿವುಡ್‌ನಲ್ಲಿ ಹಬ್ಬಿತ್ತು. ಆ ಬಗ್ಗೆ ಮಾಧವನ್ ಸ್ಪಷ್ಟನೆ ನೀಡಿದ್ದಾರೆ. ಆ ಕುರಿತು ಇಲ್ಲಿದೆ ಮಾಹಿತಿ.

Vijaya Karnataka Web 30 Sep 2020, 8:57 am
ನಟ ಅರ್‌. ಮಾಧವನ್‌ ಅವರು ಕೊನೆಯದಾಗಿ ಕಾಣಿಸಿಕೊಂಡಿದ್ದು ಶಾರುಖ್ ಖಾನ್‌ ಅವರ 'ಜೀರೋ' ಸಿನಿಮಾದಲ್ಲಿ. ಆನಂತರ ಅವರ ಯಾವುದೇ ಸಿನಿಮಾ ತೆರೆಕಂಡಿಲ್ಲ. ಹಾಗಂತ, ಅವರ ಕೈಯಲ್ಲಿ ಸಿನಿಮಾಗಳಿಲ್ಲ ಎಂದಲ್ಲ. ಸದ್ಯ ಮೂರ್ನಾಲ್ಕು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಪ್ಯಾನ್ ಇಂಡಿಯಾ ರೇಂಜ್‌ನಲ್ಲಿ ಸಿದ್ಧವಾಗುತ್ತಿರುವ ಆ ಸಿನಿಮಾಗಳ ಬಿಡುಗಡೆ ತಡವಾಗಿದೆ ಅಷ್ಟೇ. ಈ ಮಧ್ಯೆ ಮಾಧವನ್ ಕುರಿತಾಗಿ ಒಂದು ಗಾಸಿಪ್ ಕೇಳಿಬಂದಿತ್ತು. ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದಲ್ಲಿ ಮಾಧವನ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ವದಂತಿ ಹಬ್ಬಿತ್ತು. ಅದಕ್ಕೆ ಮಾಧವನ್ ಸ್ಪಷ್ಟನೆ ನೀಡಿದ್ದಾರೆ!
Vijaya Karnataka Web r madhavan


'ಪುಷ್ಪ'ದಲ್ಲಿ ಒಂದು ಮುಖ್ಯ ವಿಲನ್ ಪಾತ್ರವನ್ನು ತಮಿಳು ನಟ ವಿಜಯ್ ಸೇತುಪತಿ ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಕೊರೊನಾದಿಂದಾಗಿ ಸಿನಿಮಾ ಚಿತ್ರೀಕರಣ ಶುರುವಾಗುವುದು ತಡವಾಯ್ತು. ಆ ಹಿನ್ನೆಲೆಯಲ್ಲಿ ಅವರು ಸಿನಿಮಾದಿಂದ ಹೊರನಡೆದರು. ಆ ಜಾಗಕ್ಕೆ ಯಾರನ್ನು ಆಯ್ಕೆ ಮಾಡುವುದು ಎಂಬ ಚರ್ಚೆಯಲ್ಲಿತ್ತು ಚಿತ್ರತಂಡ. ಆದರೆ, ಇದೀಗ ಆ ಪಾತ್ರಕ್ಕೆ ಮಾಧವನ್‌ ಅವರನ್ನು ಅಂತಿಮ ಮಾಡಲಾಗಿದೆ ಎಂಬ ಮಾಹಿತಿಯೂ ಕೇಳಿಬಂತು. ಆ ಸುದ್ದಿ ಹೊರಬೀಳುತ್ತಲೇ ಸಾಕಷ್ಟು ವೈರಲ್ ಆಗಿಬಿಟ್ಟಿತ್ತು. ಇದನ್ನು ಗಮನಿಸಿದ ಆರ್‌. ಮಾಧವನ್‌, ಇದೆಲ್ಲ ಶುದ್ಧ ಸುಳ್ಳು ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲಿಗೆ, ತೆರೆಮೇಲೆ ಅಲ್ಲು ಅರ್ಜುನ್ ಮತ್ತು ಮಾಧವನ್‌ ಕಾಂಬಿನೇಷನ್‌ ನೋಡಬಹುದು ಎಂದುಕೊಂಡಿದ್ದ ಸಿನಿಪ್ರಿಯರಿಗೆ ನಿರಾಸೆ ಆಗಿದೆ.

ಈ ಹಿಂದೆ ತೆರೆಕಂಡಿದ್ದ ನಾಗಚೈತನ್ಯ ನಟನೆಯ 'ಸವ್ಯಸಾಚಿ' ಸಿನಿಮಾದಲ್ಲಿ ಮಾಧವನ್ ವಿಲನ್ ಆಗಿ ಕಾಣಿಸಿಕೊಂಡಿದ್ದರು. ಆ ಸಿನಿಮಾ ಅಷ್ಟೇನೂ ಯಶಸ್ಸು ಕಂಡಿರಲಿಲ್ಲ. ಈಗ ಮತ್ತೊಮ್ಮೆ 'ಪುಷ್ಪ' ಮೂಲಕ ಅವರು ತೆಲುಗು ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಾರೆ ಎಂಬ ವದಂತಿಗೆ ಆರಂಭದಲ್ಲೇ ಬ್ರೇಕ್ ಬಿದ್ದಿದೆ. ಮತ್ತೊಂದು ಗಾಸಿಪ್ ಪ್ರಕಾರ, ಕನ್ನಡದ ನಟ 'ಡಾಲಿ' ಧನಂಜಯ್ ಕೂಡ ಈ ಸಿನಿಮಾದಲ್ಲಿ ನಟಿಸುವ ಸಾಧ್ಯತೆಗಳಿವೆಯಂತೆ.

ನಟಿ ರಶ್ಮಿಕಾ ಮಂದಣ್ಣಗೆ ಈಗ ಆನ್‌ಲೈನ್‌ ಕ್ಲಾಸ್‌! ಇದರಲ್ಲಿ ಅಲ್ಲು ಅರ್ಜುನ್ ಕೂಡ ಇರ್ತಾರೆ

ಆರ್‌. ಮಾಧವನ್ ನಟಿಸಿರುವ ಬಹುನಿರೀಕ್ಷಿತ 'ನಿಶ್ಯಬ್ದಂ' ಸಿನಿಮಾ ಅ.2ರಂದು ಓಟಿಟಿಯಲ್ಲಿ ತೆರೆಗೆ ಬರಲಿದೆ. ವಿಶೇಷವೆಂದರೆ, ಈ ಸಿನಿಮಾದಲ್ಲಿ ನಾಯಕಿಯಾಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದಾರೆ. 14 ವರ್ಷಗಳ ಹಿಂದೆ ಈ ಜೋಡಿ ತಮಿಳಿನ 'ರೆಂಡು' ಸಿನಿಮಾದಲ್ಲಿ ಒಟ್ಟಿಗೆ ನಟಿಸಿತ್ತು. ಇದೀಗ 'ನಿಶ್ಯಬ್ದಂ' ಮೂಲಕ ಮತ್ತೆ ಒಂದಾಗಿದೆ. ಇನ್ನು, 'ರಾಕೆಟ್ರಿ: ದ ನಂಬಿ ಎಫೆಕ್ಟ್' ಸಿನಿಮಾವನ್ನು ಮಾಧವನ್‌ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾ ಕೂಡ ಶೀಘ್ರದಲ್ಲೇ ತೆರೆಗೆ ಬರಲಿದೆ.

'ಪುಷ್ಪ' ಚಿತ್ರಕ್ಕಾಗಿ ದುಬಾರಿ ಸಂಭಾವನೆ ಪಡೆದ ಅಲ್ಲು ಅರ್ಜುನ್! ವೃತ್ತಿಜೀವನದಲ್ಲೇ ಇದು ದೊಡ್ಡ ದಾಖಲೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌