ಆ್ಯಪ್ನಗರ

ಯುವ ದಸರಾ ವೇದಿಕೆಯಲ್ಲಿ ಚಂದನ್ ಪ್ರೇಮ ನಿವೇದನೆ, "ಇದು ಎಂಗೇಜ್‌ಮೆಂಟ್ ಅಲ್ಲ" ಅಂತಾ ಸ್ಪಷ್ಟನೆ ನೀಡಿದ ನಿವೇದಿತಾ ಪೋಷಕರು

ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ನಡುವಿನ ಪ್ರೇಮದ ಮೊದಲ ಹೆಜ್ಜೆಯೇ ಭಾರೀ ಚರ್ಚೆಗೆ ಕಾರಣವಾಗಿದೆ. ಯುವ ದಸರಾ ವೇದಿಕೆ ಮೇಲೆ ಚಂದನ್ ಶೆಟ್ಟಿ ಪ್ರಪೋಸ್ ಮಾಡಿದ್ದು ತಪ್ಪು ಅಂತಾ ಸಾಕಷ್ಟು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿರುವ ಬೆನ್ನಲ್ಲೇ, ನಿವೇದಿತಾ ಗೌಡ ಅವರ ಪೋಷಕರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

Vijaya Karnataka Web 5 Oct 2019, 7:42 pm
ನೆನ್ನೆ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಚಂದನ್ ಶೆಟ್ಟಿ, ಅದೇ ವೇದಿಕೆ ಮೇಲೆ ನಿವೇದಿತಾ ಗೌಡ ಅವರಿಗೆ ಪ್ರಪೋಸ್ ಮಾಡಿ ಸುದ್ದಿಯಾಗಿದ್ರು. ಆದ್ರೆ ದಸರಾ ಅನ್ನೋದು ನಮ್ಮ ನಾಡಹಬ್ಬ. ಹೀಗಾಗಿ ವೇದಿಕೆಯನ್ನು ದುರುಪಯೋಗ ಪಡಿಸಿಕೊಂಡಿರುವ ಚಂದನ್ ತಪ್ಪು ಮಾಡಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪರ-ವಿರೋಧದ ಚರ್ಚೆ ಬಿರುಸಿನಿಂದ ಸಾಗಿದೆ.
Vijaya Karnataka Web chandan niveditha

ಚಂದನ್ ಶೆಟ್ಟಿ- ನಿವೇದಿತಾ ಗೌಡ ಪ್ರೇಮ ನಿವೇದನೆ : ಯುವ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ನಿವೇದಿತಾ ಗೌಡ ಅವರ ಪೋಷಕರು, "ಇದು ಸರ್‌ಪ್ರೈಸ್ ಅಷ್ಟೇ, ಎಂಗೇಜ್‌ಮೆಂಟ್ ಅಲ್ಲಾ. ನಮಗೂ ಕೂಡ ಈ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಸ್ಟೇಜ್ ಮೇಲೆ ಚಂದನ್ ಪ್ರಪೋಸ್ ಮಾಡಿದಾಗಲೇ ನಮಗೆ ತಿಳಿಯಿತು" ಎಂದಿದ್ದಾರೆ.
ಮದುವೆ ನಿರ್ಧಾರ ಪ್ರಕಟಿಸಿದ ಚಂದನ್‌ -ನಿವೇದಿತಾ ಜೋಡಿ
ಅಷ್ಟೇ ಅಲ್ಲಾ, "ಯುವ ದಸರಾ ಅನ್ನೋದು ಸಂಭ್ರಮ ಪಡುವ ವೇದಿಕೆ. ಅಲ್ಲಿ ಚಂದನ್ ಪ್ರಪೋಸ್ ಮಾಡಿದ್ದು ನಮಗೂ ಖುಷಿ ಇದೆ. ಈ ಬಗ್ಗೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಸಂತೋಷವಾಗಿತ್ತು. ಆದ್ರೆ ಎಂಗೇಜ್‌ಮೆಂಟ್ ಮತ್ತು ಮದುವೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಮುಂದೆ ಎಲ್ಲವನ್ನೂ ತಿಳಿಸುತ್ತೇವೆ" ಎಂದು ನಿವೇದಿತಾ ಗೌಡ ಅವರ ತಾಯಿ ವಿವರಿಸಿದ್ದಾರೆ.

ವಿದೇಶದಲ್ಲಿ ಪ್ರಪೋಸ್ ಮಾಡೋ ಯೋಜನೆಯಲ್ಲಿದ್ದ ಚಂದನ್‌ ಶೆಟ್ಟಿ

ಅಂದ್ಹಾಗೇ ಚಂದನ್‌ ಶೆಟ್ಟಿ ಮತ್ತು ನಿವೇದಿತಾ ಕನ್ನಡದ 'ಬಿಗ್‌ ಬಾಸ್-5'ರ ಸ್ಪರ್ಧಿಗಳು. ಈ ಕಾರ್ಯಕ್ರಮದಲ್ಲಿ ಜೊತೆಯಾದ ಇಬ್ಬರ ಪರಿಚಯ ನಂತರ ಸ್ನೇಹ ಹಾಗೂ ಪ್ರೀತಿಯಾಗಿ ಬದಲಾಗಿದೆ. ಹೀಗಾಗಿ ನಿವೇದಿತಾ ಗೌಡ ಅವರಿಗೆ ಪ್ರಪೋಸ್‌ ಮಾಡಲು ಅಣಿಯಾದ ಚಂದನ್, ಮೊದಲು ಫಾರಿನ್ ಲೊಕೇಷನ್‌ ಅನ್ನು ಆರಿಸಿಕೊಂಡಿದ್ರಂತೆ. ಆದ್ರೆ ಆ ನಂತರ ದೇವಿ ಚಾಮುಂಡೇಶ್ವರಿ ಆಶೀರ್ವಾದದೊಂದಿಗೆ ಮೈಸೂರು ಯುವ ದಸರಾ ವೇದಿಕೆ ಮೇಲೆ ಪ್ರೇಮ ನಿವೇದನೆ ಮಾಡಲು ಮುಂದಾದ್ರು ಕನ್ನಡ ರ್ಯಾಪರ್ ಚಂದನ್. ಇದೀಗ ಈ ಲವ್ ಪ್ರಪೋಸ್ ವಿವಾದವಾಗಿ ಬದಲಾಗಿದ್ದು, ಬಿಸಿಬಿಸಿ ಚರ್ಚೆಯ ವಿಷಯವಾಗಿದೆ.
ದಸರಾದಲ್ಲಿ ಚಂದನ್‌ ಶೆಟ್ಟಿ - ನಿವೇದಿತಾ ಗೌಡ ನಡೆ ವಿರುದ್ಧ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ
ಟ್ರೆಂಡಿಂಗ್‌